Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಾನಂಗಳದಲ್ಲಿ ಹಾರುತ್ತಿದೆ ಹಕ್ಕಿ
ಬಾನಂಗಳದಲ್ಲಿ ಹಾರುತ್ತಿದೆ ಹಕ್ಕಿ,
ಹಕ್ಕಿಯಲ್ಲ ಅದು ಚುಕ್ಕಿ
ಹಾರುತ್ತಿದೆ ಮೈ ಮರೆತು ನಕ್ಕಿ.
- ಅಚ್ಚು
09 Dec 2016, 10:52 am
ಊರ ಕೆರೆಯಿಂದ ನೀರ ತರುವ
ನೀರೆ ನೀನಾದರೆ
ನಿನ್ನ ಬೆವರ ಒರೆಸುವ ಸೀರೆ
ನಾನಾಗುವಾಸೆ
ಆ ವೈಯ್ಯಾರದ ನಡುವಿನ ಮೇಲಿನ ಬಿಂದಿಗೆ
ನಾನಾಗುವಾಸೆ
ಅದರೊಳಗಿನ ನೀರ ಹನಿ
ನಾನಾಗುವಾಸೆ
ಸೊಂಟದಿಂದ ಇಳಿದ ನೀರ ಬಿಂದು
ಅಲ್ಲಲ್ಲಿ ಜಾರಿ ಹಾದಿಯಲಿ ಬಿದ್ದಾಗ
ಅವರ ಮೇಲೂ ನಿನ್ನ ಪಾದ ಸ್ವರ್ಶ
ನೀ ನಡೆವ ಹಾದಿಯ ದೂಳು
ನಾನಾಗುವಾಸೆ
ಪ್ರಭಾಕರ್ ಎಂ.ಎಲ್.
ಮೈಸೂರು
- ಪ್ರಭಾಕರ್ ಎಂ.ಎಲ್.
09 Dec 2016, 10:50 am
ಬಾನಿಗೊಂದು ಏಣಿ ಹಚ್ಚಿ
ಚಂದ್ರನನ್ನೆ ಮುಟ್ಟಿದೆ!
ಸುತ್ತ ಮುತ್ತ ಆಡುತಿರುವ
ಚುಕ್ಕೆ ಬಳಗ ತಟ್ಟಿದೆ !
ಬಿಸಿಲ ಧಗೆಗೆ ಬೆಂದ ಧರೆಗೆ
ತಂಪು ತರಲು ಕೇಳಿದೆ !
" ನಿನ್ನ ಹಿಂದೆ ಬಂದು ಬಿಡುವೆ
ಹೊರಡು ತಿರುಗಿ ನೋಡದೆ !
- ಎಂದ ಚಂದ್ರ ಬರಲೆ ಇಲ್ಲ
ಎಷ್ಟು ಕಾದ್ರು ಭೂಮಿಗೆ !
ಮತ್ತೆ ಏಣಿ ಹತ್ತಿ ಹೊರಟೆ
ಕರೆದು ತರಲು ಲಗುಬಗೆ !
ಕಾಲು ಜಾರಿ ಆಯ ತಪ್ಪಿ
ಕೆಳಗೆ ನಾನು ಬೀಳಲು !
ಏಕೆ ಚೀರಿಕೊಂಡೆ ಎಂದು
ಅಮ್ಮ ಬಂದು ಕೇಳಲು !
ಕನಸು ಕಂಡೆನೆಂದು ಹೇಳೆ
ಅಪ್ಪಿ ಮುತ್ತು ಕೊಟ್ಟಳು !
ಎಲ್ಲರೆದರು ಹೇಳಿ ಹೇಳಿ
ಹಾಸ್ಯ ಮಾಡಿ ನಕ್ಕಳು!
- ಚಂದ್ರಗೌಡ ಕುಲಕರ್ಣಿ
09 Dec 2016, 09:52 am
ಡೊಳ್ಳು ಹೊಟ್ಟೆ ಕುಳ್ಳ ಮೂರ್ತಿ
ಬಂದ ನೋಡಿರೊ !
ಒಂಟಿ ಕೋರೆ ಆನೆ ಮೊಗದ
ಚಂದ ನೋಡಿರೊ!
ಹರಿದ ಹೊಟ್ಟೆಗಾವು ಬಿಗಿದ
ಗಂಟು ನೋಡಿರೊ!
ಇಲಿಯ ಹತ್ತಿ ಸಾಗುತಿರುವ
ಕುಂಟು ನೋಡಿರೊ!
ಗೌರಿ ಮೈಯ ಬೆವರ ಮಗನ
ಸಿರಿಯ ನೋಡಿರೊ!
ದುಡಿದು ತಿಂಬ ರೈತ ಜನರ
ಸ್ವರವ ಕೇಳಿರೊ!
ಬಿತ್ತಿ ಬೆಳೆದ ಮೊದಲ ಜೀವಿ
ಚಲುವ ತಿಳಿಯಿರೊ !
ಸಕಲ ವಿದ್ಯೆಗಾದಿ ಪುರುಷ
ಒಲವ ಗಳಿಸಿರೊ!
ಮಣ್ಣ ಗುಣಕೆ ಬಣ್ಣ ಬಳೆದು
ಕಾಡಬೇಡಿರೊ!
ಕರಕಿ ಪತ್ರಿ ಕಡುಬು ಪ್ರಿಯನ
ಜಾಡನರಿಯಿರೊ!
ಗಣಕ ಮೀರೊ ವೇಗದೊಡೆಯ
ಗಣಪ ನೋಡಿರೊ!
ಬೆಡಗ ರೂಪ ತೊಟ್ಟುಕೊಂಡ
ಟೊಣಪ ಕಾಣಿರೊ !
ಚಂದ್ರಗೌಡ ಕುಲಕರ್ಣಿ
- ಚಂದ್ರಗೌಡ ಕುಲಕರ್ಣಿ
09 Dec 2016, 09:50 am
ಮುಟ್ಟಾದಳೆಂದು ಹಟ್ಟಿಯ ಆಚೆ ಇರಿಸಿದರಿ
ಮುಟ್ಟು ನೈಸರ್ಗಿಕ ನಿಯಮವೆಂಬದು ಮರೆತು
ಗುಟ್ಟಾಗಿ ನೆಡೆಯುವ ನಿಯಮಕೆ ಸೂತಕದ ಛಾಯವೇತಕೆ
ಮುಟ್ಟಲ್ಲಿ ಮಲಿನಗೋಂಡು ಹುಟ್ಟಿ ಬಂದರು
ಮುಟ್ಟು ಮುಟ್ಟು ಎಂದು ನಟ್ಟು ನಡವಲ್ಲಿ ಇಟ್ಟರಿ
ಸಂಪನ್ನಳಾದವಳನ್ನು ಮೆಟ್ಟಿ ನಿಲ್ಲಲು ಸಾಧ್ಯವೆ
ಓ ಅಜ್ಜಿ ಅಮ್ಮನವರೆ ನೀವು ಮುಟ್ಟಾದರಲ್ಲ
ಅದೆ ಕಜ್ಜಿಯ ತುರಿಕೆ ನಿನ್ನ ಕರಳು ಕುಡಿಗಳಿಗೇತಕೆ
ಓ ನಿಮ್ಮ ಅಂದಿನ ನೋವುಗಳಿಗೆ ಪ್ರತಿಕಾರವೆ?
ಅಕ್ಕ ಮುಟ್ಟಾದಳು ತಂಗಿ ಮುಟ್ಟಾದಳು
ನಕ್ಕು ನಗಾಡುತ್ತಿದ್ದಿದ್ದಾರೆ ನನ್ನವರು
ನನ್ನ ಹಣೆಗೆ ಹಚ್ಚಿದ ಮುಟ್ಟಿನ ತಿಲಕವ ಕಂಡೂ
ಮುಟ್ಟು ಎಂದರೆಯೇ ಅಪ್ಪಿಕೋ ಎಂದರ್ಥವಲ್ಲವೆ
ಗುಟ್ಟಾಗಿ ಏಕೆ ಅದನ್ನು ಮರೆಮಾಚುತಿರುವೆ
ಕರಿಯ ನಿಷಾದ.
- ka
09 Dec 2016, 09:13 am
ತಿಳಿಗೊಳಂ
ಮೀನಿರ್ಪ ಬಾನು..!
ಒಳಸುಳಿಯಿಂ
ನೀನಿರ್ಪ ನಾನು.!!!
- ಸಿಹಿಗಲ್ ಪ್ರಶಾಂತ
09 Dec 2016, 08:44 am
ದಿನದ ಕೊನೆಗೀವೆ
ನೀನಿತ್ತ ಖುಷಿ ನಿನಗೆ
ಹಂಚು ಅದನೀನು
ಅದರಗತ್ಯವಿರುವವಗೆ
ಮರಳಿಸೆನು ದುಃಖ
ಬೇಗುದಿ ಬೇಸರವ ಮರಳಿ
ಕೊನೆಯಾಗಲದರ
ಮರುಕಳಿಪ ಸರಪಳಿ
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
09 Dec 2016, 04:11 am
ಅಪ್ಪುವಮೊದಲೇ
ಮುಪ್ಪಡರಿ
ಮೌನ ಬಂಗಾರವಾಗಿ
ಮಾತು ಬೆಳ್ಳಿಯಾಗಿ
ಸಿಂಗಾರವೆಲ್ಲ
ಸಂತಾನವಾಗಿ
ಕಾಲನ ಕುಚೋದ್ಯದ
ವಸ್ತುವಾಗಿತ್ತೋ
ನವ ಯೌವ್ವನ
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
09 Dec 2016, 04:04 am
ಎಷ್ಟೊಂದು ಕರಾರುವಾಕ್ಕು
ಗಣಿತವೋ ಭೂಭ್ರಮಣೆಯೋ
ಪಂಚಾಂಗದ ಸಮಯಕ್ಕೇ ಸೂರ್ಯೋದಯ
ಗ್ರಹಣಗಳೂ ಮಾತುತಪ್ಪವು
ಯಾಕೆಂದರೆ ಅಲ್ಲಿ ಸಾಲವಿಲ್ಲ
ಬಡ್ಡಿಯಿಲ್ಲ ಆದರೂ ಶ್ಯೂರಿಟಿ ಖಂಡಿತವಿದೆ
ಯಾರಕಡೆಇದೆ ಲೆಡ್ಜರುಗಳು
ಸಾಂಕೇತಿಕವಾಗಿ ಚಿತ್ರಗುಪ್ತ
ಆದರೆ ರಾಮನದೋ ಕೃಷ್ಣನದೋ ಲೆಕ್ಕ?
ಆಗಿತ್ತೇ ಸೂಪರ್ ಕಂಪ್ಯೂಟ್ರು
ಆದ್ರೆ ಖರೇ ಕರೆಂಟೆಲ್ಲಿತ್ತೋ
ಎಷ್ಟೊಂದು ಕರಾರುವಾಕ್ಕು ಅಗಣಿತಂದು
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
08 Dec 2016, 10:52 pm
ಆತ್ಮವಂತರ್ಗತವು
ಕೋಶ ಕೋಶಗಳಲ್ಲು
ಅಣು ರೇಣು ತೃಣ ಕಾಷ್ಟ
ಪರಿಪೂರ್ಣವು
ಜೀವ ನಿರ್ಜೀವದಲು
ಭವಭಾವರೂಪದೊಲು
ಅವಿಭಾಜ್ಯವಾಗಿತಾ
ಪ್ರಕಟಗೊಂಡಿಹುದು
ಕಂಡರೂ ತೋರ್ಗೊಡದೆ
ತೋರಿದರು ತಿಳಿಯದೇ
ಅರಿವಿನಾಳದೆ ಅವಿತ
ಅನುಭೂತಿಯಹುದು
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
08 Dec 2016, 10:50 pm