Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೋಗುಮೆ

ಹೊಗುಮೆ ಎಂಗಾರ ಹೊಗುಮೆ...
ನೊಡ್ಬೀಡು ವಯ್ಸ್ ನಮ್ಮದು...
ಕಾಡ್ಬುಡೊ ನ್ವಾಟ ನಿಮೊದ್....
ಪರಪಂಚ ಎಲಾ ನಿಂದಿ ಕಣಮ...

- Gopalsrushtiarts

06 Sep 2016, 06:45 pm

ಮೊದಲ ಪೂಜೆ

ಮೊದಲ ಪೂಜೆಯು ನಿನಗೆ ಗಣನಾಯಕ
ನಮ್ಮನ್ನು ಕಾಪಾಡುವ ನಿಜ ಪಾಲಕ
ವಿದ್ಯೆ ಬುದ್ದಿಯನು ಕೊಡುವ ಸಿದ್ಧಿ ವಿನಾಯಕ
ಅಂಧರ ಕಣ್ಣಲಿ ಬೆಳಕು ಮೂಡಿಸೋ
ದೃಷ್ಠಿ ವಿನಾಯಕ

ಗೌರಿಶಂಕರರ ಪ್ರೇಮದ ಪುತ್ರ
ಜಪಿಸಿದರು ಭಕುತರು ನಿನ್ನ ಸಾವಿರ ಮಂತ್ರ
ಗಣನಾಯಕ ಗಣನಾಯಕ
ಮಾತಪಿತರೇ ದೇವರೆಂದು
ಸುತ್ತಿದೆ ಅವರನು ನೀ ಅಂದು
ಗಣನಾಯಕ ಗಣನಾಯಕ

ವೇಗದಲಿ ನೀ ಬರೆದೆ ಮಹಾಭಾರತ
ರಾಗಗಳ ಗುನುಗಿದ ಮಹಾಮಾಂತ್ರಿಕ
ಗಣನಾಯಕ ಗಣನಾಯಕ
ದೇವಗಣಗಳ ನಾಯಕನಾಗಿ
ಸಲಹಿದೆ ಸರ್ವರ ಪಾಲಕನಾಗಿ
ಗಣನಾಯಕ ಗಣನಾಯಕ

- ಆನಂದ್

05 Sep 2016, 09:40 am

ನನ್ನವಳು

ಚಂದ್ರನ ‌‌‌ಸೋದರಿ ನನ್ನವಳು
ಹುಣ್ಣಿಮೆ ಬೆಳಕಿನ ಕಣ್ಣವಳು
ಹೇಗೆ ಹೋಗಳಲಿ ಅವಳ ಮುಂಗುರುಳು
ಸರಿಸುತಲಿ ಮನವ ಕದ್ದಿಹಳು

- CHETHAN S KUMAR

05 Sep 2016, 07:28 am

ನಿಧಿಯತ್ತ

ಹುದುಗಿಟ್ಟ ನಿಧಿಯು ನೀನು
ಅಗೆಯುತ್ತಿರುವ ಹಾರೆ ನಾನು

ಸಿಕ್ಕರೆ ನನಗೆ ಪ್ರೇಮಗಂಟು
ಸಿಗದಿರೆ ನನ್ನ ಪ್ರೇಮಸಮಾಧಿ

- ಶೋಧನ

04 Sep 2016, 11:05 pm

ಪ್ರೀತಿಯ ಮುಲಾಮು ಪಾಲಿಸಿ

ಓ ಪ್ರೀತಿಯೇ
ನಿನಗೆ ಅನಂತ ಸಲಾಮು

ಚುಚ್ಚದಿರು
ದೇವರಾಣೆ ಕಂಡಿಲ್ಲ ಮುಲಾಮು

- ಶೋಧನ

04 Sep 2016, 10:17 pm

ಮನೆ-ಮನ

ಏಕಾಂಗಿ ನಾನಾದೆ
ನಿ ತೊರೆದ ಆ ಸಂಜೆ
ಎಂದಿನಂತೆ ನಾ ಸರಿದಿದ್ದೆ ನನ್ನ ಮನೆಯ ಬಿಟ್ಟು ತುಸು ಹಿಂದೆ
ಭರವಸೆಯ ಅಲೆಗಳು ತೀರಕ್ಕೆ ಬಡಿದು ಬಡಿದು
ಒದ್ದೆಮರಳ ಮೇಲೆ ನಡೆದೆ ದಿಕ್ಕುತೋಚದೆ
ಹೆಜ್ಜೆ ಹೆಜ್ಜೆಯೂ ಭಾರ ನಿನ್ನ ಹುಸಿಕರೆಯೋಲೆಗಳು ಜಾಸ್ತಿಯಾದಂತೆ
ಹಿಂದಿರುಗಿ ನೋಡಿದೆ...ನೀನಿಲ್ಲ
ಅಲೆಗಳು ಬಡಿದರೂ ಮಾಸದೆ ಹೋದ ಹೆಜ್ಜೆಗಳ ಅಚ್ಚೆಯಷ್ಟೆ ಅಲ್ಲಿ
ಬೇಕುಬೇಡವೆನ್ನುತ ತ್ಯಜಿಸಿದೆ ನಿನ್ನ ನನ್ನ ಮನ
ತ್ಸುನಾಮಿ ನಂತರದ ನೀರಸ ಮೌನ
ನಿನ್ನ ಜೊತೆ ಕಳೆದ ಸಿಹಿಕ್ಷಣಗಳು ನೀನಿತ್ತ ಕಿತ್ತುಬಿಸಾಕುವ ಹುಸಿಗನಸುಗಳು
ಮೆಲುಕುಹಾಕುತ್ತ ಮುಂದೆ ನಡೆದೆ...ಐದೇ ನಿಮಿಷ
ಅಚ್ಚರಿ ಎಂಬಂತೆ ನಾ ನಿಂತಿದ್ದೆ ನಿನ್ನ ಮನೆಯ ಮುಂದೆ
ಈ ಪ್ರೀತಿ ಎಂಥಾ ಹುಚ್ಚು ರೀ...

- ಶೋಧನ

04 Sep 2016, 09:20 pm

ಉಪದೇಶ

ಬಹುಶಃ ಎಲ್ಲರಿಗೂ
ಪುಕ್ಕಟೆ ಸಿಗುವ
ಆ-ದೇಶ,ಅದುವೇ
ಉಪದೇಶ.

- ಸಾ.ರಾ.ಜ್ಞಾ

04 Sep 2016, 09:40 am

ವಾಸ್ತವ

ಸಾಯುತ್ತಿದ್ದಾನೆ
ನೇಗಿಲು ಯೋಗಿ
ಅದರಲ್ಲೇ ಬಿಲ
ಮಾಡುತ್ತಿದ್ದಾನೆ
ಇನ್ನೊಬ್ಬ ಹೋಗಿ.

- ಸಾ.ರಾ.ಜ್ಞಾ

04 Sep 2016, 09:39 am

ಶಿಕ್ಷಕ

ಶಿಕ್ಷಕ,ಇವನು ಲೋಕ ರಕ್ಷಕ.
ಮಕ್ಕಳನು ಸರಿದಾರಿಗೆ ತರುವ ಆರಕ್ಷಕ.
ಪುಸ್ತಕ ಸಂಗ್ರಹವಿರುವ ಗ್ರಂಥಾಲಯದ ವ್ಯವಸ್ಥಾಪಕ.
ಮೌಲ್ಯಗಳ ಮಹತ್ವ ಬೆಳೆಸುವ ನಾಯಕ.


ಹಣವನ್ನು ಸಂಗ್ರಹಮಾಡುವಾಗ ಇವನೊಬ್ಬ ಬ್ಯಾಂಕರ್.
ನ್ಯಾಯದ ಪರವಾಗಿ ಮಾತಡುತ ಕೆಲವೊಮ್ಮೆ ಆಗುವ ಲಾಯರ್.
ಈತ ಮಕ್ಕಳಿಗೆ ಪ್ರಥಮ ಚಿಕಿತ್ಸೆ ವದಗಿಸುವ ಡಾಕ್ಟರ್.
ತಂತ್ರಜ್ಞಾನಗಳ ಬಗ್ಗೆ ಪ್ರಯೋಗ ಮಾಡಿ ತೋರಿಸುವ ಎಂಜಿನೀಯರ್.



ರಜೆಯಲು ಕೂಡ ಇವನಿಗುಂಟು ನೂರೆಂಟು ವಿದ್ಯಾರ್ಥಿಗಳ ನಂಟು.
ಜನರ ಅಭಿಪ್ರಾಯದಲಿ ಶಿಕ್ಷಕನು ಮಾಡುವನು ದುಡ್ದಿನ ಗಂಟು.
ನೈಜವಾಗಿ ಜೀವನದಲ್ಲಿ ಅವನಿಗಿರುವ ಆಸ್ತಿ ಅದುವೆ ನಿಘಂಟು.
ಇದರ ಮಧ್ಯ ಸರ್ಕಾರ ಹಾಗೂ ಅಧಿಕಾರಿಗಳ ವತ್ತಡ ನೂರೆಂಟು.



ಮನದಲ್ಲಿ ಸಾವಿರರು
ಚಿಂತೆಗಳಿದ್ದರೂ ಬದಿಗೊತ್ತಿ ನೀಡುವನು ಪಾಠದ ಮೂಲಕ ಹಾಸ್ಯ.
ಇದುವೆ ಶಿಕ್ಷಕರ ಬದುಕಿನ ಯಾರೂ ಅರಿಯದ ದೊಡ್ದ ಸಾಮರಸ್ಯ.
ಸುಧಾರಿಸುವನು ಈತ ಒಂದು ದೇಶದ ಪ್ರತಿನಿಧಿಗಳ ಭವಿಷ್ಯ
ತಿಳಿದಲ್ಲ ನಿಮಗೆ ಶಿಕ್ಷಕ ಬದುಕಿನ ನಿಗೂಢ ರಹಸ್ಯ..

ಜಗತ್ತಿನ ಎಲ್ಲ ವೃತ್ತಿಗಳ ಸಂಸ್ಥಾಪಕ ಈ ಶಿಕ್ಷಕ
ಲೋಕದ ಹಿತವನ್ನು ಬಯಸುವ ನಿಜವಾದ ನಿರೀಕ್ಷಕ.
ಒಳ್ಲೆಯ ಜನರನ್ನು ದುಶ್ಟರಿಂದ ಬೇರ್ಪಡಿಸುವ ಸಂಶ್ಲೇಷಕ
ಹೆಮ್ಮೆಯಿಂದ ಹೇಳುವೆ ನಾನೊಬ್ಬ ಶಿಕ್ಷಕ.

- Rahul marali

03 Sep 2016, 10:07 pm

ನಾನು ಮತ್ತು ನನ್ನವಳ ಪ್ರೀತಿ

ನನ್ನಯ ಪ್ರೀತಿಯು ಈಗೆ,
ಬಾನಲಿ ಹಾರುವ ಹಕ್ಕಿಯ ಹಾಗೆ,
ನನ್ನವಳ ಪ್ರೀತಿಯು ಈಗೆ,
ನೀರೊಳಗೆ ನೆಡೆವ ಮೀನಿನ ಹೆಜ್ಜೆಯ ಆಗೆ.

ನನ್ನಯ ಪ್ರೀತಿಯು ಈಗೆ,
ಉರಿದಾದರು ಬೆಳಕು ಆರಿಸುವ ಹಣತೆಯಂತೆ,
ನನ್ನವಳ ಪ್ರೀತಿಯು ಈಗೆ,
ಹಣತೆಯ ಬೆಳಕೆ ಕಾಣದ ಕತ್ತಲು ಕೋಣೆಯಂತೆ.

ನನ್ನಯ ಪ್ರೀತಿಯು ಈಗೆ,
ಹೊಳೆವ ಸೂರ್ಯ ಚಂದ್ರ ನಕ್ಷತ್ರದಂತೆ,
ನನ್ನವಳ ಪ್ರೀತಿಯು ಈಗೆ,
ಹೊಳೆವ ನನ್ನ ಕಾಡುವ ಕವಿದ ಕಾರ್ಮೋಡದಂತೆ.

ನನ್ನವಳ ಪ್ರೀತಿಯು ಈಗೆ,
ಪ್ರೀತಿಸದೇ ದೂರ ಉಳಿಯುವಂತೆ,
ನನ್ನಯ ಪ್ರೀತಿಯು ಈಗೆ,
ಉಸಿರಲಿ ಉಸಿರಗುವoತೆ,
ಮೋಡ ಕರಗಿ ಮಳೆಯಾಗುವಂತೆ,
ಉಸಿರು ಹೋದರು ಹೆಸರಾಗಿ ಉಳಿಯುವOತೆ

- Arun HE

03 Sep 2016, 05:12 pm