ಇಂದು
ನೀ ನನ್ನ
ಅಗಲಿ ಹೋದರೂ..
ನಿನ್ನ
ನೆನಪುಗಳಿಂದ
ಮಾಸಿ ಹೋದರೂ..
ಎಂದಾದರೂ
ನಾ ನಿನ್ನ
ನೆನಪುಗಳಲ್ಲಿ
ಮೂಡಿದರೆ
ಹುಡುಕದಿರು ನೀನನ್ನ..
ಮತ್ತೆಲ್ಲಿಯೂ..
ನಾನಿನ್ನ
ಕಣ್ಣಲ್ಲೇ ಇರುವೆ;
ಒಂದು ಹನಿ ಕಣ್ಣೀರಾಗಿ…!
ನೊಂದ ಜೀವ
ಹೇ...ಗೆಳತಿ...ಹೇಗಿದ್ದೀಯಾ...?
ಎಷ್ಟೊಂದು ದಿನ ಆಯ್ತು ನಿನ್ನನ್ನ ನೋಡಿ....? ಎಲ್ಲಿದ್ದೀಯ....? ಏನು ಮಾಡ್ತಿದ್ದೀಯಾ...?
ನಿನಗೆ ಹೀಗೆಲ್ಲ ನಾನು ಪ್ರಶ್ನೆ ಕೇಳಿ...ನಿನ್ನ ಉತ್ತರ ಕೇಳಿ....ನನಗೆ ತುಂಬಾ ಸಮಾಧಾನ ಆಯ್ತು...!
ನನ್ನ ಮನಸ್ಸಲ್ಲಿ ಆದ ಸಮಾಧಾನ ಸಂತೋಷ ...
ನಿನ್ನೆದುರಿಗೆ ವ್ಯಕ್ತಪಡಿಸೋದು...? ಹೆಗೇ...
ಎಷ್ಟು ಕಷ್ಟ ಅಂತ ನಿನಗೂ ಗೊತ್ತಾಗಬಹುದು ಅಂದ್ಕೋತೀನಿ...!!
ನಮ್ಮ ಹಿಂದಿನ ಸವಿ....ಪ್ರೀತೀನ ಯಾವತ್ತೂ ನೆನಪು ಮಾಡ್ಕೋಬೇಡ...!!
ಅವತ್ತು ಸವಿಯಾಗಿದ್ದ ....ಪ್ರೀತಿ ಇಂದಿಗೂ ನನಗೆ ಸವಿಯೇ...!!
ಆದರೆ ಅದೆ ಸಮಾಜಕ್ಕೆ ಹುಳಿಯ ವಾಸನೆ ಬರುತ್ತೆ....!!
ಅದು ಅವರ ಮೂಗಿನ ನೇರದ ನ್ಯಾಯಕ್ಕೆ ಅರ್ಥ ಆಗಲ್ಲ...!! ಹೋಗಲಿ ಬಿಡು..ಗೆಳತಿ...!!
ನೀನು ನನಗಿಂತ ಚೆನ್ನಾಗಿ ಬದುಕು ಕಟ್ಟಿಕೊಂಡದ್ದು ನಿಜವಾಗಿಯೂ ಒಂದು ಸಾಹಸವೇ ಹೌದು...!!
ಇನ್ನು ಏನು ಹೇಳೋಕು ಮನಸ್ಸು ತಡವರಿಸುತ್ತಿದೆ...ತೊದಲುತ್ತಿದೆ...!!
ನೀನು ಚೆನ್ನಾಗಿದ್ದೀಯಾ ಅನ್ನೋ ಒಂದು ಸಿಹಿ ಸತ್ಯ ಸಾಕು....!!
ನಾವೇನು ಪ್ರೀತಿಗಾಗಿ ತಾಜ್ ಮಹಲ್ ಕಟ್ಟಬೇಕಾಗಿರಲಿಲ್ಲ...ನಮ್ಮ ಬದುಕು ಕಟ್ಟಿಕೊಂಡರೆ ಸಾಕಿತ್ತು..!!
ಈ... ದಿನ ನಿನ್ನ ಬದುಕು ಹಸನಾಗಿದೆ....ಪರವಾಗಿಲ್ಲ...!!
ಸಾವಿನ ಹಾದಿಯಲಿ ಉಸಿರು ಹುಡುಕುವವನು ನಾನು...!!
ನಿನ್ನ ಬದುಕು ...ಹೀಗೆ...ಸುಂದರವಾಗಿರಲೆಂದೆ ನನ್ನ ಹಾರೈಕೆ....!!
ಈ ಜೀವನ ಪೂರ್ತಿ ನಾ ನಿನೊಂದಿಗಿರುವೆ
ತುಸು ಪ್ರೀತಿಯ ನೀ ನೀಡುವೆಯ ..........
ಕಡಲಾಳದ ಮುತ್ತಿನಂತೆ ನಾ ನಿನ್ನ ಜೋಪಾನ ಮಾಡುವೆ
ಈ ಹ್ರದಯದ ಗೂಡಿನಲ್ಲಿ ನೀ ಮುತ್ತಿನಂತಿರುವೆಯ......
ನನ್ನ ಈ ಸರ್ವಸ್ವವನೇ ನಾ ನಿನಗೆ ನೀಡುವೆ
ನೀ ನನ್ನಯ ಉಸಿರಾಗಿರುವೆಯ........
ಈ ಉಸಿರು ನಿಂತರೂ ನಾ ನಿನ್ನ ಪ್ರೀತಿಸುವೆ
ಈ ಹ್ರದಯಕೆ ವಡತಿ ನೀ ನಾಗುವೆಯ.....!!!!!
ಮಹೇಶ್
ಚುಮು ಚುಮು ಬೆಳ್ಳಂಬೆಳಗ್ಗಿನ ಸಮಯದಲ್ಲಿ
ಹಚ್ಚ ಹಸಿರ ಸೀರೆಯುಟ್ಟು ಕೆಂಪು ತಿಲಕವಿಟ್ಟು
ಮುತ್ತಿನ ಮಣಿಯನ್ನುಟ್ಟ ಮಹಾರಾಣಿ ನಮ್ಮನೆಲ್ಲ ಕ್ಷಮಿಸಿ ನಾವು ಮಾಡುವ ತಪ್ಪನ್ನು ತಿದ್ದವ್ವ ನನ್ನಡೆದವ್ವ
ಈಗ ಬದಲಾಯಿತೆಂಬುದೆ ಕಾಲವು
ಹಿಡಿಯುತಿದೆ ದೂಳು ಈ ನುಡಿಗೆ
ಹರಿವ ಜರಿಯಿಂದಿಳಿದು ಬರಬೇಕೆಂದು,
ರಬಸದಿಂದಿಳಿದು ತೋಳೆಯಬೇಕಿಂದು,
ಈ ನಾಡನು.ಆ ನೀರಿನ ರಬಸದಿಂ ನೋಡುತ.ಬೇರೆ ಭಾಷೆ ಕಲುಕೀಳುವುದು ಖಚಿತ ವಾಯಿತು....
ನುಡಿಯಲು ಪದಗಳ ಕೊರತೆ.,
ಆಲಿಸಲು ಸಂಪರ್ಕದ ನ್ಯೂನತೆ.,
ಸಂಧಿಸಲು ಸಮಯದ ಸಮಸ್ಯೆ.,
ತೊಡಕುಗಳೇ ತುಂಬಿದ ಸಂಬಂಧ.,
ಹೊಸ ತರಹದ ಆದರ್ಶದ ಅನುಬಂಧ.,
ನುಡಿಯದಿದ್ದರೂ, ಆಲಿಸದಿದ್ದರೂ,
ಸಂಧಿಸದಿದ್ದರೂ, ಅಳಿಸದ ಆತ್ಮಬಂಧ..