Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ ಗೆಳತಿ

ನೊಂದ ಹೃದಯ

ನಿನ್ನ ವರಿಸಲೆಂದು ನಾನು
ಹಲವು ವರುಷ ನರಳಿ ಬೆಂದು
ಇಂದು ತಡೆಯಲಾರೆ ನನ್ನ
ಮನದ ದುಃಖವ.....

ನನ್ನ ಒಡಲಪಾಡ ಕೇಳದೇನೆ
ನಿನ್ನ ಪ್ರೀತಿ ಮಾಡಿ ಇಂದು
ಟಾಟಾ ಹೇಳಿ ಹೋಗಲೆಂದು
ಬಂದೆಯಾ.....

ಮನದಲೊಂದು ಮಾತಲೊಂದು
ಎಂಬ ಮಾತಿನಂತೆ ನೀನು
ನನ್ನ ಹೃದಯದಿಂದ ಎಲ್ಲೋ
ಓಡಿ ಬಿಟ್ಟೆಯಾ.....

ಏನೇ ಬರಲಿ ಯಾರೇ ಇರಲಿ
ನಿನ್ನ ಮಾತಿನಂತೆ ಕೇಳಿ
ನಡೆದ ನನ್ನ ಇಂದು ನೀನು
ಬೇಡವೆಂದೆಯಾ.....

ಪ್ರೀತಿಯೆಂದರೇನು ಎಂದು
ತಿಳಿಯದಾದೆ ಇಂದು ನಾನು
ಹಣದ ಆಸೆಗಾಗಿ ನನ್ನ
ಒಲ್ಲೆ ಎಂದೆಯಾ.....

ಏನೇ ಕೇಳು ನೀನು ನನಗೆ
ತಂದು ಕೊಡುವ ನನ್ನ ಇಂದು
ಹೆತ್ತ ಕರುಳಿನೆದುರಿನಲ್ಲಿ
ಬಿಕಾರಿ ಎಂದೆಯಾ.....

ಬಡವನೆಂದು ತಿಳಿದೂ ನೀನು
ನನ್ನ ಪ್ರೀತಿ ಮಾಡಿ ಈಗ
ನೀನು ಬಡವನೆಂದು ಹೇಳಿ
ಮುದುಡಿ ಕುಳಿತೆಯಾ.....

ಬಡವನಾದರೇನು ನಮ್ಮ
ಪ್ರೀತಿಗೆಲ್ಲಿ ಬಡತನ
ಧನಿಕನಲ್ಲಿ ಮಾತ್ರವೇನು
ಇರುವುದೀ ಗೆಳೆತನ.....

ಕರುಳು ಕಿತ್ತು ಕೊಟ್ಟರೂನು
ಅರ್ಥ ಮಾಡದಂಥ ನೀನು
ಪ್ರೀತಿ ಅಂದರೇನು ಒಂದು
ಚೂರು ಹೇಳ್ವೆಯಾ.....

Nagaraj Mudool Rock'S

- Nagaraj Mudool

05 Dec 2016, 12:41 am

ಮಿಡಿದ ಹ್ರದಯ

ಸ್ನೇಹವೆಂದು ಪರಿಚಿತನಾದೆ
ಪ್ರೀತಿಯೆಂದು ಸನಿಹವಾದೆ,
ಮನಸಿನಲ್ಲಿರುವ ಭಾವನೆ
ಹೇಳಲಾಗದೆ , ಬಚ್ಚಿಡಲು
ಆಗದೆ ಹೃದಯ ವಿಲ್ಲವಿಲ್ಲ
ಅಂತ ಗೋಳಾಡುತಿದೇ
ನೀ ನನಗಾಗಿ ಕಾಯದ್ದಿಯರು
ನಾ ನಿನಗಾಗಿ ಕಾಯುತಿರುವೆ
ಪ್ರೀತಿಯ ಚಂದ್ರಕೇ

- ಪ್ರದೀಪರಾಜ್

05 Dec 2016, 12:03 am

ಮೌನ

ಮದುವೆ ಮನೆಯಲ್ಲಿ ಎಷ್ಟು ಕಂಗೊಳಿಸುತ್ತೀರುವೇ
ನನ್ನ ಮನವ ಕಂಗೆಡಿಸಿ
ತುಸು ದೂರ ನಿಲ್ಲಲಾರೆ
ನಿನ್ನ ಬಳಿ ಅರೆಕ್ಷಣ
ಹರಸಲು ಬಂದಾ ನಾನು ಮೌನದ ಕಾರ್ಮೋಡವನ್ನು ಹೊತ್ತು
ಹೊರಟಿರುವೆ
ಕೇಳದಿರು ಎಲ್ಲಿಗೆ ?

ಎ ಜಿ ಶರಣ್

- ಎ ಜಿ ಶರಣ್

04 Dec 2016, 07:43 pm

ಲೈಫು ಇಷ್ಟೇನೇ

ಕಾಣದೇ ಇರೋದಕ್ಕೇನೇ ಮನಸು ಬಯಸೋದು,ಯಾಕೀ ಮನಸಿಗೆ ಯೋಚನೆಗಳು ಕಾಡುತ್ತವೆ ನೂರಾರು ನೆನಪುಗಳು ಮನಸಲ್ಲಿ,ನೆಮ್ಮದಿಯೇ ಇಲ್ಲವೇ ಈ ಜೀವನ.
ಲೈಫು ಇಷ್ಟೇನೇ?

- Mahesh Malkiwadeyar

04 Dec 2016, 04:25 pm

*ರೋಮಾಂಚನ*

ೱೱೱೱೱೱೱೱೱೱೱೱೱೱೱೱೱೱೱ
ಬಾಲಭಾನು ಕಿರಣ ಸೋಕಿ
ಇಳೆಯು ಪುಳಕಗೊಂಡು ತನ್ನ
ನಗೆಯನೆಲ್ಲ ಸುಮದಿ ತಂದು
ಮುಗಿಲನೊಮ್ಮೆ ನೋಡಲು,
ಇದನು ಕಂಡ ಹಕ್ಕಿಹಿಂಡು
ಹರ್ಷಗೊಂಡು ಗಗನಕೆರಗಿ
ಚಿಲಿಪಿಲಿಯುಲಿ ಮಾಡಲು,
ದೂರದ ಮಾಮರದೊಳಗಣ
ಕೋಗಿಲೆ ತಾ ಹಾಡುತಿರಲು,
ಚಂಗನೆಂದು ಜಿಗಿದ ಕರುವು
ಅಂಬಾ ಎಂದೆನ್ನುತಿರಲು,
ಅಪರೂಪಕೆ ಬೇಗನೆದ್ದ
ಮಲ್ಲಿಭಾಗವತನಿವನಿಗೆ
ರೋಮಾಂಚನವಾಯಿತು,
ಕವನವೊಂದು ಮಿಂಚಿತು.
ೱೱೱೱೱೱೱೱೱೱೱೱೱೱೱೱೱೱೱ
✍ಮಲ್ಲಿಭಾಗವತ✍

- ಮಲ್ಲಿಭಾಗವತ್ ಗುಡಿಬಂಡೆ

03 Dec 2016, 08:45 pm

ಅನಾಮಿಕ

ಪರಿಚಯವೇತಕೆ
ನನ್ನ ಭಾವನೆಗಳ  ಬಿಂಬಿಸಲು....
ಪದಗಳು ಸಾಕಲ್ಲವೇ
ನಿಮ್ಮ ಸ್ನೇಹವ ಗೆಲ್ಲಲು....
ಈ ಹೆಸರಲ್ಲಿ ಅಡಗಿದೆ
ಕನಸುಗಳ ಕನ್ನಡಿ....
ನಿಮ್ಮೆಲ್ಲರ ಹೃದಯದಲ್ಲಿ
ಬರೆಯುವೆ ಪ್ರೀತಿಯ ಮುನ್ನುಡಿ...

- ಆರ್.ವಿಶ್ವನಾಥ್

03 Dec 2016, 06:35 pm

ಚೆಲುವೆ

ಮುತ್ತಿನಂಥಹ ಒಡವೆ
ಮುತ್ತುಹಳ್ಳಿಯ ಚೆಲುವೆ
ಬಾಳ ಸುಗ್ಗಿಯಲಿ
ಹಿಗ್ಗಿ ಮಿಂಚುತಾಳೆ
ಮುತ್ತುಹಳ್ಳಿಯ ಚೆಲುವೆ.

ಮುಗಿಲಂಥ ಬದುಕಿಗೆ
ತುಂಬು ಚಂದಿರನಂತೆ

ನಲುಮೆ ನಂಬುಗೆಯ
ಬೆಳಕ ಬೀರುತಾಳೆ
ಮುತ್ತುಹಳ್ಳಿಯ ಚೆಲುವೆ.

ಹೆಸರು ಸಿರಿಗೌರಿ
ನವಿಲಂತೆ ಗರಿಗೆದರಿ
ನನ್ನೆದೆಯ ಬನದಲ್ಲಿ
ಕುಣಿಯುತಾಳೆ.

ಹತ್ತು ಕಟ್ಟುವ ಕಡೆ
ಮುತ್ತು ಕಟ್ಟುವ ಬಾರಾ
ಎನುತ ನನಗೊಂದು
ಕವನವೇ ಆಗುತಾಳೆ
ಮುತ್ತುಹಳ್ಳಿಯ ಚೆಲುವೆ.

- harsha

02 Dec 2016, 07:04 am

ಪ್ರೀತಿ

ನಮ್ಮನ್ನ ಇಷ್ಟಪಡುವವರ ಚಿಕ್ಕ ಪುಟ್ಟ
ಆಸೆಗಳನ್ನ ಪೂರೈಸಿದರೆ ಸಾಕು
ಅವರು ಬೆಟ್ಟದಷ್ಟು ಪ್ರೀತಿಸುತ್ತಾರೆ
ಆ ಪ್ರೀತಿಯ ಭಾರವನ್ನ ಹೊರುವ
ತಾಕತ್ತು ಯೋಗ್ಯತೆ ನಮಗಿರಬೇಕಷ್ಟೇ.

- keshavappu

01 Dec 2016, 06:22 pm

♡ನಿನಗಾಗೆ ನಾನು♡

ನಿನಗಾಗೆ ನಾನು, ಇಷ್ಟು ವರ್ಷ
ಯಾರನ್ನು ಮೆಚ್ಚದೆ ಕಾದಿದ್ದು
ನನಗಾಗೆ ನಿನ್ನನ್ನು ಆ ಬ್ರಹ್ಮನು ಭೂಮಿಗೆ ತಂದದ್ದು
ನಮ್ಮಿಬ್ಬರ ಜೋಡಿಯ ನೋಡಿಯೇ
ಈ ಭೂಮಿ ಮೇಲೆ ಪ್ರೀತಿಗೆ ಅರ್ಥವು ಬಂದದ್ದು
ನಿನಗಾಗೆ ನಾನು, ಇಷ್ಟು ವರ್ಷ ಕಾದಿದ್ದು.

ನಿನಗಾಗೆ ನಾನು, ಇಷ್ಟು ವರ್ಷ
ಯಾರನ್ನು ಮೆಚ್ಚದೆ ಕಾದಿದ್ದು
ನಿನ್ನ ಇಂಪಾದ ದನಿಯ ಕೇಳಿದ ಮೇಲೆ
ಕೋಗಿಲೆ ಹಾಡಲು ಕಲಿತದ್ದು
ನಿನ್ನ ಕಾಲ ಗೆಜ್ಜೆಯ ನಾದವ ಕೇಳಿದ ಮೇಲೆ
ಈ ಭೂಮಿ ಮೇಲೆ ಸಂಗೀತದ
ಸಪ್ತಸ್ವರಗಳು ಜನಿಸಿದ್ದು,
ನಿನ್ನ ನಡಿಗೆಯನ್ನು ನೋಡಿಯೇ
ಶಾಂತಲೆಯು ನಾಟ್ಯವ ಕಲಿತದ್ದು
ನಿನ್ನ ನೋಡಿದ ಮೇಲೆ ಈ ಜಗಕ್ಕೇ
ಸೃಷ್ಟಿ ಅದ್ಭುತವೆನಿಸಿದ್ದು
ನಿನಗಾಗೆ ನಾನು, ಇಷ್ಟು ವರ್ಷ ಕಾದಿದ್ದು.

ನಿನಗಾಗೆ ನಾನು, ಇಷ್ಟು ವರ್ಷ
ಯಾರನ್ನು ಮೆಚ್ಚದೆ ಕಾದಿದ್ದು
ನಿನ್ನ ನೋಡಿದ ಮೇಲೆ ಈ ಜಗಕ್ಕೇ
ಸೌಂದರ್ಯ ಎಂದರೆ ಏನೆಂಬುದು ತಿಳಿದದ್ದು,
ಕವಿಪುಂಗವರು ಕವನಗಳ ರಚಿಸಲು
ಕಲಿತದ್ದು, ಶಿಲ್ಪ ಕಲಾಕೃತಿಗಳು ಕೆತ್ತಲುಪಟ್ಟಿದ್ದು,
ಇದೆನೆಲ್ಲಾ ಕಂಡ ಇಂದ್ರನು ನಿನ್ನನ್ನು ತನಗೆ ನೀಡಬೇಕೆಂದು ಬ್ರಹ್ಮನನ್ನು ಕಾಡಿಸಿ ಬೇಡಿದ್ದು,
ನಿನ್ನ ಬದಲಾಗಿ ರಂಬೆ, ಊವ೯ಷಿ, ಮೇನಕೆ
ಚಿಲೋತ್ತಮೆಯರನ್ನು ಆ ಬ್ರಹ್ಮನು ಇಂದ್ರನಿಗಾಗಿ ಸೃಷ್ಟಿಸಿದ್ದು, ನಿನ್ನನ್ನು ನನಗೆ ವರವಾಗಿ ನೀಡಿದ್ದು
ಆ ವರಕ್ಕಾಗಿಯೇ ನಾನು ಇಷ್ಟು ಜನ್ಮ ಪಡೆದಿದ್ದು.

ನಿನಗಾಗೆ ನಾನು, ಇಷ್ಟು ಜನುಮ
ಯಾರನ್ನು ಮೆಚ್ಚದೆ ಕಾದಿದ್ದು
ನಿನ್ನ ನಗುವಿನ ಮೋಡಿಗೆ ಮುದುಡಿದ
ತಾವರೆಯೇ ಅರಳಿದ್ದು, ನಿನ್ನ ಧ್ವನಿಯ ಕೇಳಿ
ಒಂದು ಕ್ಷಣ ನನ್ನನ್ನೇ ನಾ ಮರೆತದ್ದು
ನಿನ್ನ Sparshaದಿಂದಲೇ ತರುಲತೆಗಳು
ಫಲಬರಿತವಾಗಿ ತೊನೆದದ್ದು,
ನದಿಗಳು ಮೈದುಂಬಿ ಹರಿದದ್ದು
ನಿನಗಾಗೆ ನಾನು, ಸಾವಿರ ಜನುಮವೇ ಬರಲಿ
ಆ ದೇವರನ್ನು ಬೇಡುವುದೊಂದೆ ನನ್ನವಳಾಗಿರು ನೀನು ಎನ್ನುವುದೊಂದೆ.
ನಿನಗಾಗೆ ನಾನು, ನನಗಾಗಿಯೇ ನೀನು.

- ಕೃಷ್ಣ

30 Nov 2016, 05:58 pm

ಕನ್ನಡ ಕವಿ ಕವನ

ಕನ್ನಡ ಕವಿಗಳ ಮನ
ಹರುಷದಿ ನುಯಡಿದಿಹ ಗಾನ
ಬರೆದಿಹ ಕವನ ನವೀನ
ಬಣ್ಣಿಸುತಿಹರು ಈ ಜನ!!

ಕಲಿತಿರೊ ಅಕ್ಷರ ಮಾಲೆ
ಕೂಡಿದರೆ ಪದ ಮಾಲೆ
ಬರೆದರೆ ಮನದ ಭಾವನ
ದೊರೆಯುವುದು ನವ ಕವನ!!

ಕನ್ನಡ ಪದಗಳ ಸಾಲು
ಬರೆಯುವ ಬಗೆ ನೀ ಕೇಳು
ಬರೆದರೆ ಮನಸಿನ ಮನನ
ಆಗುವುದು ಕನ್ನಡ ಕವಿ ಕವನ!!

- ಪಿ.ಜಿ.ಜ್ಯೋತಿ

30 Nov 2016, 02:38 pm