Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶ್ರೀ ಕೃಷ್ಣನ ಹೆಜ್ಜೆ ಗುರುತು

ರಂಗವಲ್ಲಿಯ ನಡುವೆ
ರಂಗ ನಿನ್ನ ಹೆಜ್ಜೆ ಗುರುತು
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ!!

ಲಾಲಿಸಿದಾ ತಾಯಿ
ಪೋಷಿಸಿದಾ ತಾಯಿ
ಕಂದಾ ಎಂದಾಗ
ನೀನೋಡಿ ಬರುವಾಗ
ನೀನಿಟ್ಟ ಹೆಜ್ಜೆ ಗುರುತು
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ!!

ನಿನ್ನ ಪಾದ ಸ್ಪರ್ಷದಿಂದ
ಭೂ ತಾಯ ಆನಂದ
ಹೇಳಲಾಗದು ಕೃಷ್ಣ
ಹೇಳಲಾಗದು!!

ಪಾದದ ರೇಖೆಯೇ
ಪಾಪ ಕಳೆವ ಮೋಕ್ಷದಂತೆ
ಪಾದದಡಿಯ ಧೂಳೆಲ್ಲ
ಮುಕ್ತಿ ಕೊಡುವ ಭಸ್ಮದಂತೆ!!

ರಂಗವಲ್ಲಿಯ ನಡುವೆ
ರಂಗ ನಿನ್ನ ಹೆಜ್ಜೆ ಗುರುತು
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ!!

- ಪಿ.ಜಿ.ಜ್ಯೋತಿ

25 Nov 2016, 03:53 pm

ರುಕ್ಮಿಣಿ ಕಲ್ಯಾಣ

ಹರಿ ಕೃಷ್ಣ ನಿನ್ನ
ಮನಗೆದ್ದ ಅರಸಿಯ
ಕದ್ದೋಡಿ ನೀನು
ಬಂದೆಯೇನು!!

ಸುಕುಮಾರಿ ಚೆಲುವೆಯ
ಮುದ್ದಾದ ಮೊಗದಲ್ಲಿ
ಸುಕುಮಾರ ನಿನ್ನ
ಲೀಲೆಯೇನು!!

ಮನಗೆದ್ದ ಅರಸಿಯು
ಸುಂದರಿಯು ರುಕ್ಮಿಣಿಯು
ಸತಿಯಾದಳೇನು
ನಿನಗೀಗ!!

ಲೋಕವ ಕಾಯುವ
ಲೋಕನಾಥನು ನೀನು
ಶ್ರೀ ಮಹಾಲಕ್ಷ್ಮಿ
ನಿನ್ನ ಸತಿಯಲ್ಲವೇನು!!

ನೀಲನು ಮೇಘನು
ಶ್ಯಾಮ ಸುಂದರ ನೀನು
ಚೆಂದೊಳ್ಳಿ ಚೆಲುವೆಯ
ಕೈ ಹಿಡಿದೆಯೇನು!!

- ಪಿ.ಜಿ.ಜ್ಯೋತಿ

25 Nov 2016, 03:33 pm

ಕಣ್ಣು

ಕಣ್ಣು ಕೊಡುವ ಮೊದಲು
ನೀನು ತಪ್ಪು ಮಾಡಿದೆ!!
ಯೋಚನೆಯನು ಮಾಡದೇ
ನೀ ಕಣ್ಣು ನೀಡಿದೆ!!

ಲೋಕದ ಪಾಪವೆಲ್ಲ
ಕಣ್ಣಿಗೆ ಕಾಣುವಂತೆ!!
ಕಂಡ ನನ್ನ ಈ ಕಣ್ಣು ಪಾಪ ಮಾಡಿದೆ
ನನ್ನ ಪಾಪಿ ಮಾಡಿದೆ!!

ಕಣ್ಣಿನಲ್ಲಿ ನಾನು ಕಂಡ
ನಿನ್ನ ಭಾವ ಮೆಚ್ಚಿಕೊಂಡೆ!!
ಕಣ್ಣಿನಲ್ಲೇ ನಾನು ಇಂದು
ಜಗದಿ ನಡೆವ ಭಾವ ಕಂಡೆ!!

ಕಣ್ಣಿನಲ್ಲೇ ನೋಡಬೇಕು
ನೋಟದಿಂದ ಅರಿಯಬೇಕು!!
ಅರಿತ ಜಗದ ವೇದನೆಗಳು
ಮನದಿ ಮೂಡಿ ಮರುಗಬೇಕು!!

- ಪಿ.ಜಿ.ಜ್ಯೋತಿ

25 Nov 2016, 03:20 pm

ನಾಟ್ಯ....

ಆಕಾಶದಲ್ಲೊಮ್ಮೆ ಮಿಂಚು ಗುಡುಗುಗಳಿತ್ತು ಸೋನೆ ಮಳೆ ಹಾಗೇ...ತಾ ಸುರಿಯುತಿತ್ತು ಸುತ್ತ ಮುದತರುವಂತೆ ಪ್ರಕೃತಿಯ ಸೊಬಗಿತ್ತು ಜೊತೆಗೆ ಬಕುಲವೃಕ್ಷದ ಹೊವ ಕಂಪೂ ಕೂಡ .......................................................................
ತಿಳಿ ನೀಲಿ ಆಕಾಶ ಕಾಮರ್ೋಡ ಹೊದ್ದಿತ್ತು ಮತ್ತೆ ಮರಿಗುಡುಗು ತಾ ಮೊಳಗುತ್ತಿತ್ತು ಆ ದನಿಗೆ ತೊಟ್ಟಿಲಲಿ ಮಗುವೊಂದು ಅಳುತಿತ್ತು; ಮತ್ತೊಂದು ಮನದೊಗಿ ಕೇಳುತಿತ್ತು .........................................................................
ಒಂದೇ ಗುಡುಗಿನ ದನಿಗೆ ಎಷ್ಟೆಲ್ಲಾ ಆಕಾರ ಹೆದರುವವರದೊಂದಷ್ಟು ಹಾಹಾಕಾರ ಯಾರೋ ಕಿವಿ ಮುಚ್ಚುವರು ಇನ್ಯಾರೋ ಮನ ಬಿಚ್ಚುವರು ಗುಡುಗಿಗಂತೂ ಇಲ್ಲ ಯಾರದೂ ಋಣಭಾರ .......................................................................
ಒಬ್ಬ ಕವಿ ಹೊಗಳುವನು ಮತ್ತೊಬ್ಬ ತೆಗಳುವನು ಇನ್ನೊಬ್ಬ ನದನು ಏನೇನಕೋ ಹೋಲಿಪನು ಮಗದೊಬ್ಬನದಕೆ ಹೊಸಬಾಲ ಸೇರಿಪನು ...........................................................................
ಯಾರು ಏನೇ ಅನಲಿ ಗುಡುಗು ಗುಡುಗುತಿತ್ತು ಮತ್ತೆ ಹೊಸ ಮುಂಗಾರಿನ ಮುನ್ಸೂಚನೆಯಂತೆ ಹೀಗೆಲ್ಲಾ ನಡೆದಿರಲು ಗುಡುಗು ತುಸು ನೊಂದಿರಲು ಹೀಗೆಲ್ಲೋ ಮಿಂಚಂತೆ ಹೊಳೆಯಿತಾ ದೃಷ್ಯ ...............................................................................
ಗುಡುಗಿನ ಕಡುದನಿಗೆ ಕುಣಿಯುತಿಹ ನವಿಲೊಂದು ನಕ್ಕಿತು ಗುಡುಗಿಗೆ ಧನ್ಯತೆಯ ಕೋರಿ ಚಕಿತಗೊಂಡಿತು ಗುಡುಗು ಬೇಸರವ ತೂರಿ ..............................................................................
ನವಿಲು ಹೀಗೆಂದಿತ್ತು ನಿನ್ನ ದನಿಯೇ ಚಂದ ಮನತುಂಬಿ ಬೇಡಿತ್ತು ಇರಲಿ ಹೀಗೆಯೇ ಬಂಧ ..............................................................................
ನಿನ್ನ ದನಿಯಿಂದಲೇ ಇಳೆಗೆಮಳೆಯೂ ನಿನ್ನಿಂದಲೇ ನನ್ನ ನಾಟ್ಯ ಸೊಬಗು ಮೊಳಗುತಿರು ಎಂದಿಗೂ ಅನಂತವಾಗಿ ನೀ ಕುನಿಯುತಿರುವೆ ನಾ ನಿನ್ನ ದನಿಗೆ ..............................................................................
ಗುಡುಗು ನಕ್ಕಿತು. ಮುಗ್ದೆ, ನಾಟ್ಯ ನಿನ್ನದೆ ನಾನು ಬರಿಯ ಶಬ್ಧವಾಗಿಹೆನು ಅಷ್ಟೇ ಗೆಳತಿ ನಿನ್ನ ಕುಷಿ ನನ್ನ ದನಿಯಲ್ಲಿ ಹನಿಸಿದರೆ ಮೊಳಗುತಿರುವೆ ಅನತ ನಾಟ್ಯವಾಡು .................................................................................
ನಗುತಲಿರು ಮನವೆ ನೀ ನನ್ನ ಮುದ್ದಿನಶಿಶುವೆ ನನ್ನ ದನಿಯೆ ನಿನ್ನ ಕಾವಲಾಗಿ ಚಿರಕಾಲ ಕಾಯಲಿ, ಕುಣಿಯುತಿರು ಕುಷಿಯಿಂದ ನೂಕರ್ಾಲ ನಗುನಗುತಾ ಮಗುವಿನಂತೆ ................................................................................. ......................................... ಮಧುಕುಮಾರ್.ಕೆ.ಆರ್

- ಮಧುಕುಮಾರ್.ಕೆ.ಆರ್

25 Nov 2016, 09:04 am

ಕವಲು ದಾರಿ ಪಯಣ

ಒಂಟಿ ಜೀವಕೆ
ಕವಲು ದಾರಿ ಪಯಣ!!
ದೇವ ತೋರಿದ
ದಾರಿಯೆಡೆಗೆ ಚರಣ!!

ನಡೆವ ದಾರಿಯಲ್ಲಿ
ಕಲ್ಲು ಮುಳ್ಳ ಕತನ!!
ಗುರಿಯ ಸೇರಲೆಂದು
ಸಾಗುತಿರುವ ಚಲನ!!

ವನವಾಸದಲ್ಲಿ
ನವ ಆಸೆ ಚೆಲ್ಲಿ
ದೊರೆತಿರುವ ಕಾಲು ದಾರಿ!!
ಬಲು ಆಸೆಯಿಂದ
ಸಾಗಿ ಬರುತಿರಲು
ಆಗಿಹುದು ಕವಲುದಾರಿ!!

ಒಂಟಿ ಜೀವಕೆ
ಕವಲು ದಾರಿ ಪಯಣ!!
ನಿಂತು ಮರುಗಿದೆ ಸಾಗಿ
ನಡೆಯದೆ ಚರಣ!!

ಆಗುವುದು ಎಂದೂ
ಗೊಂದಲದ ಗೂಡ ಪತನ!!
ಕವಲು ದಾತಿಯಲಿ ಸಾಗಿ
ಮುಗಿಯುವುದೇ ಪಯಣ

- ಪಿ.ಜಿ.ಜ್ಯೋತಿ

24 Nov 2016, 10:32 pm

ಬಾ ನನ್ನ ಬಳಲ್ಲಿ

ಏನೆಂದು ಬರಿಯಲಿ ನಾನು , ನಿನೊಂದಿಗೆ ಕಳೆದ ಕ್ಷಣವ .. ಕಾಣಲಿಲ್ಲ ನಾ ಕನಸುಗಳ ನಿನೊಂದಿಗೆ ಹೆಣೆದೆ ನಾ ಅವುಗಳುನೂ ಭಾವನೆಯ ಬಿಂಬದಲಿ ಸುಳ್ಳಾಯಿತೆ ನಾ ಹೆಣೆದ ಕನುಸುಗಳು..... ಹೇ ಗೆಳತಿ ಹೇಗೆ ಮಾರಿಯಲಿ ನಾ ನಿನ್ನೊಂದಿಗೆ ಕಳೆದ ಕ್ಷಣ ಗಳ ಒಂದೊಂದು ಕ್ಷಣವೂ ಒಂದೊಂದು ಯುಗದ ನೆನಪು ಹೇಗೆ ಮರಿಯಲಿ ನನ್ನ ನೆನಪುಗಳ , ಸಾವಿರಾರು ಮೈಲಿಗಳ ನಿನೊಂದಿನ ಪಯಣ ಹೇಗೆ ಮರಿಯಲಿ ಗೆಳತಿ .... ಪ್ರೀತಿ ಇಂದ ನೀಡಿದ ಆ ಮೊದಲ ತುತ಼ ನಾ ಹೇಗೆ ಮರಿಯಲಿ ಹೇಳು ಗೆಳತಿ..... ನಿನೊಂದಿಗೆ ಕಳೆದ ಆ ಮಧುರ ಕ್ಷಣಗಳು ಮತೊಮ್ಮೆ ಬರಬರದೆ ಕ್ಷಮಿಸಿಬಿಡು ಒಮ್ಮೆ ನನ್ನ ಪ್ರೀತಿಯ ನೋಡೇ ಯುಗಳ ಗೀತೆ ಯಂತೆ ಸದಾ ಕಾಯುತಿರುವ ದಿಲೀಪ

- ದಿಲೀಪ

24 Nov 2016, 12:13 pm

ಸ್ನೇಹ

ಕಣ್ಣಿಗೆ ಕಾಣುವ ದೇವರುಗಳು ಅಪ್ಪ-ಅಮ್ಮ
ಕನಸಲ್ಲಿ ಕಾಣುವವರು ಪ್ರೇಯಸಿ ಹೆಂಡತಿ
ಕಣ್ಣಿಗೆ ಕಂಡರು ಕಾಣದವರಂತೆ ಎಲ್ಲೋ ಮರೆಯಲ್ಲಿ ನಿಂತ್ಕೊಂಡು ಸಹಾಯ ಹಸ್ತ ಚಾಚುವವರು ಸ್ನೇಹಿತರು

ಸ್ನೇಹ ಜೀವಿ...

- ರನ್ನ ಮಹಾದೇವ

24 Nov 2016, 11:54 am

ನಲ್ಲೆ

ಮಿಂಚು ಹುಳದಿಂದ ಹುಡುಕುತಿರುವೆ ಮಿಂಚಾಗಿ ಬಂದವಳ
ಗುಡುಗಿನ ಆರ್ಭಟಕ್ಕೆ ಎಲ್ಲಿ ಅಡಗಿರುವೆ
ಓ ನನ್ನ ನಲ್ಲೆ
ಕ್ಷಣವೂ ಕಾಯುತ್ತಿದೆ ಕಾತುರದಿಂದ
ಸಾಗರದ ಅಲೆಯ ಮುಂದೆ
ಗೋಚರಿಸು ಓ ನನ್ನ ನಲ್ಲೆ
ಎ ಜಿ ಶರಣ್

- ಎ ಜಿ ಶರಣ್

23 Nov 2016, 10:25 pm

ಸಮಾಧಿ

ಮರದ ತೊಗಟೆಯ ನಾರು,
ತೊಗಲು ಬಟ್ಟೆಯ ಉಡುವವರಾರು?
ಉಳಿದದ್ದು
ಪಂಜರ ಸೇರಿದ ಮನುಜರು ಮತ್ತು
ಕೋಟು ಟೋಪಿಯವರ ಹಡಗು…

ಮುಗ್ಧ ಕಪ್ಪುಜನರು ಮಾರುಕಟ್ಟೆಯಲಿ
ಸರಕಿನಂತೆ ಹರಾಜಾದರು…
ಬಿಳಿಯನ ಮನೆಯ ಹಜಾರದಲ್ಲಿ
ನಾಯಿಗಳಂತೆ ಬದುಕಿದರು…

ಶಾಂತಿದೂತನ ಕ್ರುಸೇಡಿಗೆ
ಗುಂಡುಗಳು ಹಾರಿದ್ದವು,
ನಾಗರಿಕತೆಯ ನೆಪಕ್ಕೆ
ಮಾನವೀಯತೆ ಮೂಲೆ ಸೇರಿತ್ತು…

ಕಪ್ಪು ಹೆಣಗಳ ನಡುವೆ
ಬಿಳಿಯ ಪಾದ್ರಿ
ಬೈಬಲ್ ಹಿಡಿದು ಓಡಾಡುತ್ತಿದ್ದ……
ಕಾಡದೇವರ ಕಲ್ಲಿಗೊಂದು ಚರ್ಚು ಕಟ್ಟಿ
ಕರಿಯ ಸಂಸ್ಕೃತಿಗೆ
ಮಿಷನರಿಗಳು ಮಣ್ಣುಮುಚ್ಚುತ್ತಿದ್ದವು………

- ಪರಮೇಶ್ವರ

- ಒಂಟಿತೋಳ

23 Nov 2016, 10:24 am

ಕಮಲ ಸಂದೇಶ

ಕಮಲ ಸಂದೇಶ
*****************
ಕೆಸರಲ್ಲೇ ಹುಟ್ಟಿದರೂ,
ಕಮಲ ಕುಸುರಿಯ ಮೊಗವು,
ಬೇಸರವ ತಾ ತೊರೆದು
ಕೊಸರುವುದು......‌‌.. ನಗುವು,
ನೇಸರನಿಗೂ ಇಷ್ಟ
ಈ ಸುಮದ ಗುಣವು.....‌‌.......
ಕಷ್ಟದಲ್ಲೂ ಮೆರೆವ ದಿಟ್ಟತನವು!

✍ಮಲ್ಲಿಭಾಗವತ✍

- ಮಲ್ಲಿಭಾಗವತ್ ಗುಡಿಬಂಡೆ

22 Nov 2016, 06:39 pm