Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಕ್ಕಾ ಅಕ್ಕಾ ಕೆಂಪಕ್ಕಾ
ಬ್ಯಾಂಕಿಗೆ ಇವಳೇ ದೊಡ್ಡಕ್ಕಾ
..
ಮಾತಿಗೆ ಇವಳೇ ಮಲ್ಲಕ್ಕಾ
ವಾದಕ್ಕ ನಿಂತ್ರೇ ಜಂಬಕ್ಕಾ
ಮನಸಿಲಿ ಇಕಿ ಚಂದಪ್ಪ
ವ್ಯವಹಾರಕ್ಕ ಇಕಿ ಬಲು ಪಕ್ಕಾ
ಅದಕ ಇಕಿ ಬೇಕಪ್ಪ
ಗೆಳತನಕ್ಕ ಇಕಿ ಶತ ಸಿದ್ದಕ್ಕ
ಅದಕ ಇಕಿ ನನ್ನಕ್ಕಾ
ನಗುವಿಗೆ ಇನ್ನೊಂದ್ ಹೆಸರೇ
(ಅನು)ವಕ್ಕಾ
ಹಠ್ಕ ಬಿದ್ರೆ ಓಬಕ್ಕಾ
ಅದಕೆ ಇವಳ್ ಬೇಕಪ್ಪ
ಬಿಟ್ಟ ಹೋಂಟ್ಟೀದಕ ದುಃಖಪ್ಪ
ಇದರಾಗ ಯೆನಾದ್ರೇ ತಪ್ಪೇನಿದ್ರು
ಕ್ಷಮಿಸಕ್ಕ
P4L
- ಪ್ರದೀಪ.ಮ.ಪಾಡಮುಖೆ
22 Nov 2016, 07:25 am
ಸೋಮವಾರ ಸಂತೆಯಲ್ಲಿ ಸಿಕ್ಕ ಸುಂದರಿ
ನೀನೆ ನನ್ನ ಅಂಬಾರಿ
ನಿನಗಿಂತ ಸುಂದರಿಯರು ತುಂಬಾ ಇದ್ರು
ಆಗ ನೀನೆ ನನಗೆ ಚಂದ್ರ ಚಕೋರಿ
ನಿನ್ನ ನೋಡಿ ಆ ಕ್ಷಣದಲ್ಲಿ ಮೈಮರೆತರು
ಮತ್ತೆ ಸಾವರಿಸಿ ಸುಧಾರಿಸಿ ಕೊಂಡೆ ರೀ
ನಿನಗೆ ರೀ ಎನಬೇಕೊ ನನ್ನೊಲವಿನ ಚಲುವೆ
ಎನ್ನಬೇಕೊ ತಿಳಿಯುತ್ತಿಲ್ಲವೆ ಬಂಗಾರಿ...
- ರನ್ನ ಮಹಾದೇವ
21 Nov 2016, 06:50 pm
ಅರಳಿಕಟ್ಟೆಯ ಮೇಲೆ
ನಗುವ ಲಲನೆಯರ ಗುಂಪು
ಮಕ್ಕಳಾಗಲು ವ್ರತವ ಹಿಡಿದು
ಸುತ್ತುಹಾಕಿದ್ದಾರೆ ಮರವ
ದಾರವ ಸುತ್ತಿ ನಡೆದಿದ್ದಾರೆ
ಏಳೊ ಒಂಬತ್ತೋ ಹನ್ನೋಂದೋ?
ದೇವ ನಾಗರಕಲ್ಲು ನಗಲು
ಬಗ್ಗಿ ಕೈ ಜೋಡಿಸಿ ನಮಸ್ಕರಿಸಿರಲು
ನಡುವೇಕೋ ಹಿಡಿದುಕೊಂಡಂತಾಗಿ
ರಾತ್ರಿನಲ್ಲನ ನೆನಪಾಗಿ ನಸುನಕ್ಕಿದ್ದಾಳೆ......
#ಚೌಕ್ರಿ
- Ravi Chowcri
21 Nov 2016, 01:28 pm
ಜನಾರಣ್ಯದ ದಟ್ಟ ಅಡವಿ
ಬಿಕೋ ಎಂದಿಹುದು
ದುಮ್ಮಾನಗಳ ಕೊಡವಿ
ನಟ್ಟ ನಡುವಿನ ದಾರಿ
ಸುತ್ತಲೂ ಕಲ್ಮುಳ್ಳು ತೂರಿ||
ಇಟ್ಟ ಹೆಜ್ಜೆ ಹೆಬ್ಬಾವಾಗಿ
ನಂಬಿದ ಕನಸು ನುಚ್ಚು ನುರಾಗಿ
ಬೆಂದ ಮನಸು ಬಳಲಿ ಏಗಿ
ಮಮ್ಮಲ ಮರುಗಿ, ತಿರುಗಿ
ಹೊರಟಿಹುದೆತ್ತಲೋ ಬಡ ಜೋಗಿ ||
ಸಿಡಿಲು ಬಡಿದರೂ ಹೃದಯ
ಬದುಕುಳಿದ ದುರಂತ,
ಕಾಡಿ ತಿವಿದು ರಸ ಬಸಿವ
ರುದ್ರ ಏಕಾಂತ,
ಪುಡಿಗಾಸು ಜೀವನದಾಸೆ
ತೊರೆದರೂ ತೊರೆಯಲಾರದೆ
ಇನ್ನೆತ್ತಲೋ ಹೊರಟ ಬಡ ಜೀವಕೆ
ಆರಂಭವಿಲ್ಲವೇನೋ
ಆನಂದದ ಶಕೆ ||
- ಶ್ರೀಗೋ.
20 Nov 2016, 04:48 am
ಹೊರಟು ಬಿಟ್ಟೆಯಾ ಮಗಳೇ!
ಹೆತ್ತವರನಗಲಿ?
ಅತ್ತೆ-ಮಾವರ ಮನೆಗೆ,
ಗಂಡನೊಡಗೂಡಿ!
×××××××××××××
ಮರೆತು ಬಿಡ ಬೇಡವ್ವ,
ನಾ ಪೇಳ್ದ ಮಾತ,
ಬೆರೆತು ನೀನೆಲ್ಲರೊಳು
ಅರಿತು ನಡೆ... ಚಿತ್ತಾ!
××××××××××××××
ಸಹ ಜೀವನದ ಗುಟ್ಟು,
ಸಹನೆ ಕಾಣವ್ವಾ ,
ಬಿಟ್ಟ ಮನೆ-ಕೊಟ್ಟ ಮನೆ,
ಎರಡೂ ಬೆಳಗವ್ವಾ !!
- ಮಲ್ಲಿಭಾಗವತ್ ಗುಡಿಬಂಡೆ
19 Nov 2016, 02:43 pm
ಬಂಧನವೆಂಬ ಸಂಕೋಲೆಯಲ್ಲಿ
ಕಣ್ಣತುಂಬಾ ಕಣ್ಣೀರು ಸುರಿಸಿದರು
ಕೊಡ(ಬಿಂದಿಗೆ ) ತುಂಬಾಲಿಲ್ಲ ಎನ್ನುವ ಜನರ ಮಧ್ಯೆ
ನಂಬಿಕೆಯೇ ನಿರೀಕ್ಷಿತಾ
ಸರಿದೂಗದಿದ್ದಾಗ
ಮೌನ ಅನಿರೀಕ್ಷಿತ.
ಎ ಜಿ ಶರಣ್
- ಎ ಜಿ ಶರಣ್
19 Nov 2016, 07:14 am
ನನ್ನ ನಿನ್ನ ಜೋಡಿ
ಕೂಡಿದ ಹಕ್ಕಿಗಳಂತೇ
ನೀಲ ಬಾನಿನಲ್ಲಿ ಮುಕ್ತ
ಹಾರಾಡುತಾ ಇರಬೇಕು
ಪ್ರೇಮ ಪಕ್ಷಿಗಳ ತಾವು
ಪ್ರೇಮವೆ ಗುರಿ ತಮ್ಮನ
ಜಗ ಮಾತ ಮನದಲ್ಲಿ
ಏಕೆ ತೆಗೆದುಕೊಳ್ಳಬೇಕು
ಬಂಡೂಪಂತ ಕೂಲಕರ್ಣಿ
- Bandopant Kulkarni Solapur
19 Nov 2016, 06:37 am
ನಾನೇರಿದೆತ್ತರವನೇರಲಾರೆ
ನೀನೇರಿದೆತ್ತರವನೇರಿದರೂ
ನಾನೇರಿದೆತ್ತರವನೇರಲಾರೆ
ನಾನೇರಿದೆತ್ತೆತ್ತರದಡಿಯನೇರು ಬಾರೋ
ಏರಿದೆತ್ತರದಾಚಾಚೆಗೂ ಕಾಣು ಬಾರೋ
ಊದುವೇನು ಕೇಳಿಲ್ಲಿ ನಾನೇ
ಕೊಳಲು
ನಿಜವಲ್ಲ ನೀನು ಬರೀ ಕೊಳಲ
ನೆಳಲು
ಹುಲ್ಲುಹಾಸಿನ ಮೇಲೆ ತೆರೆದು
ಅಂಗಾತ ಮಲಗಿರುವೆ
ಹಿಡಿದು ಸಂಭೋಗಿಸಲು ನಿನಗೂ
ನೀಗದೇನೋ ?
ಸದಾ ಈ ಕಗ್ಗು ಮೊಲೆಗಳದೇ
ಕಾರುಣ್ಯ ನಿನಗೂ
ತಿಕ್ಕಿ ಹಾಲುಕ್ಕಿಸಲು ಉಕ್ಕಿಸಿದ
ಹಾಲೇ ಮುಕ್ಕಲು
ಮೊಲೆಮುಡಿ ಮುಟ್ಟಿ ಮುತ್ತಿಡದೇ
ಸ್ವಾದ ಹುಟ್ಟುವುದೇ ನಿನ್ನಲಿ
ಸವಿ ಮನಸೇ ಕನಲಿದರೆ ಸಿಹಿ ನಾದ
ಹೊರಡುವುದೇ ನನ್ನಲಿ
ಒತ್ತಿ ಬಾಯ್ತುಂಬಿ ಮೊಲೆ ಹಿಡಿದು
ಹಸಿ ಹಾಲು ಬೇಕೆಂದರೂ ಬಂದುಣ್ಣು
ಉಣ್ಣೆಗಳ ತೆರದಿ ಹರಿದಾಡುತಿಲ್ಲೆ
ಬಿಸಿ ರುಧಿರದ ಮೇಲೂ ಕಣ್ಣೇ ?
ರಸ ಋಷಿಯ ಬುದ್ಧಿ ಭಾವಗಳು
ಕಲೆತ ಸಿದ್ಧಿ ಕಾಣಿಲ್ಲಿ
ಬಿಸಿ ರುಧಿರ ನೆದರ ಚುಕ್ಕಿಗಳಿಗೆ
ರಾಕೆ ಸುಖಿಸುವಳೊ ಇಲ್ಲಿ ?
ಬಾ ತಪಸಿ ರಸ್ಯೆ ಬಂದುಣ್ಣು
ಎಲ್ಲ ಮರೆಸುವುದು ಹರಡಿ ನನ್ನೆದೆಯ ಹೊನ್ನು
ತೆರೆಸುವುದು ನಿನ್ನೆದೆಯ ಕಣ್ಣು
ಮೊಳಕೆಯೊಡೆಸುವುದು ಊರಿ ಹೊಸ ಬೀಜವನ್ನು
- ದುರ್ಯೋಧನ್
- raveendrakatti
18 Nov 2016, 10:04 pm
ಇಳಿ ಸಂಜೆ ಕವಿದಂತೆ
ಮನಸು ಜಾರುತಿದೆ
ಅವಳ ನೆನಪುಗಳ ನೆಪದಿಂದೆ
ಭಾರವಾದ ಮನಸ್ಸು
ಕಣ್ಣೀರ ಅಗಮನದಿ
ಹಗುರಾಗಿದೆ..
ನಗು ಮೂಡಿದೆ
ಅವಳೊಂದಿಗೆ ಕಳೆದ
ಸವಿಘಳಿಗೆಯ ನೆನೆದು..
ಮರುಕ್ಷಣವೇ ಮನಸು
ಜಾರುವುದು
ಭಾವುಕ ಚಿಂತನೆಗಳೆಡೆಗೆ..
ಆದರು ಉಳಿಯಬೇಕಿದೆ
ಉಳಿಸಿಕೊಳ್ಳಲು
ಅವಳ ನೆನಪುಗಳ ಸಲುವಾಗಿ..
- ಬಾನು ಅಡಿಗಾರ್
18 Nov 2016, 09:18 pm
ಪೋಲಿ ಪಡ್ಡೆಗಳ ಔತಣಕೂಟಕೆ
ಇರುಳು ಚಂದ್ರನ ಬೆಳಕಿನ ವ್ಯವಸ್ತೆ…
ಕುರುಚಲು ಚಾಪೆಗೆ ಅಂಡೂರಿದ
ಯುವಕರ ಸಹಿಸಲೇ ಬೇಕು,
ಇದು ಹಳೆಯ ಬುರುಜಿನ ವ್ಯಥೆ……
ಹಿಂದೊಬ್ಬ ರಾಜ ಇದ್ದಿರಬಹುದು,
ಸುಲ್ತಾನ ಆಳಿರಬಹುದು,
ಅಳಿದ ಮೇಲೆ ಉಳಿದದ್ದು
ಅಳುವು ಬುರುಜು…
ಪಾರಿವಾಳಗಳ ತಲೆಮಾರೊಂದಕ್ಕೆ
ಬೇಗಂ ಒಬ್ಬಳು ಕಾಳುಣಿಸಿದ್ದಿರಬಹುದು…
ಶೇಂಗಾಪೊಟ್ಟಣಕೆ ಕೈಹಾಕುವ
ಹುಡುಗರ ಕೈಲೊಂದು ಸಾರಾಯಿ ಶೀಷೆ,
ದರಬಾರಿನ ಅಂಕಣದಲ್ಲಿ
ತುಂಬಿತುಳುಕುತಿದೆ ನಶೆ…
ಜಾಲಂಧ್ರದ ಕಿಡಕಿಯಲಿ
ರಾಜಕನ್ಯೆ ಇಣುಕಿ ನಕ್ಕಿದ್ದಳು,
ಈಗ ಅಲ್ಲೊಬ್ಬ ಬೀಡಿ ಸುಟ್ಟು
ಕಡ್ಡಿ ಹೊರಗೆಸೆದು ಹೊಗೆ ಬಿಟ್ಟ…
ರಾಜಭಟ ನಿಂತಿದ್ದ ಗೋಡೆಗೆ
ಎಣ್ಣೆಗುಂಗಿನಲೊಬ್ಬ ಉಚ್ಚೆ ಹಾರಿಸಿದ…
ಕಬಾಬು ಕಡಿದು ಲೋಕಾರೂಢಿ
ಮಾತನಾಡಿದವರೆಲ್ಲ
ಆಸ್ತಾನದ ಜವಾಬ್ದಾರಿಯುತ ಸತ್ಪ್ರಜೆಗಳು…
ಹಳೆ ಪ್ರೇಮಿಕೆಯ ಹೆಸರು ಕೆತ್ತುತ್ತಿದ್ದವ
ದರಬಾರಿನ ಚಿತ್ರಗಾರನಾಗಿದ್ದಿರಬೇಕು……
ಹುಚ್ಚಾಗಿ ಕುಣಿದವರೆಷ್ಟೋ…
ಹೆಚ್ಚಾಗಿ ಕಕ್ಕಿದವರೆಷ್ಟೋ…
ಬುರುಜೆಂದು ತಲೆಕೆಡಿಸಕೊಂಡಿಲ್ಲ,
ರಾಜನೂ ಉಳಿದಿಲ್ಲ
ಯುವಕರೂ ಉಳಿದುಕೊಳ್ಳಲು ಬಂದಿಲ್ಲ…
ಬುರುಜು ಒಂಟಿ…
ಅಳಲು ಕೇಳಲುಇರುವುದು
ಕೆಲವು ಗಾಜಿನ ಬಾಟಲಿಗಳು ಮಾತ್ರ……
- ಒಂಟಿತೋಳ
18 Nov 2016, 09:00 pm