Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರಾರ್ಥನೆ

ಮನನೊಂದು ಬೇಡುವ
ಕೆಲವೊಂದು ಹೃದಯಗಳು
ಉತ್ತರವ ನಿರೀಕ್ಷಿಸುವ
ಕೆಲವೊಂದು ಮನಸ್ಸುಗಳು
ಫಲಿತಾಂಶ ವೀಕ್ಷಿಸುವ
ಕೆಲವೊಂದು ನಯನಗಳು
ಅದಕ್ಕಾಗಿಯೇ ಆಯ್ಕೆ ಮಾಡಲ್ಪಟ್ಟ
ಕೆಲವೊಂದು ವನಗಳು
ದೇವ ಸ್ಮರಣೆಯಲ್ಲೇ ಕಳೆದ
ಕೆಲವೊಂದು ಮುನಿಗಳು
ಅವರಿಗೆ ಆಹಾರವನ್ನಿತ್ತ
ಕೆಲವೊಂದು ದನಗಳು
ಸಮಾಜದ ಕ್ಷೇಮಕ್ಕೆ
ಎತ್ತಲ್ಪಟ್ಟ ಹಸ್ತಗಳು
ಎಲ್ಲವನ್ನೂ ಸ್ಪಷ್ಟಿಸಿದ
ದೇವನಿಗೆ ಸ್ತೋತ್ರಗಳು...

- ಶಾಹಿದ್ ಉಪ್ಪಿನಂಗಡಿ

26 Aug 2016, 04:45 pm

ರುಮಾಲು

ನೋಡಲು ಬಾರೀ ಚಂದ
ಕೆಲವೊಂದು ರುಮಾಲು
ನಾವೂ ಧರಿಸಿದರೇನಂತೆ ?
ನಮ್ಮೊಳಗೆ ಸವಾಲು

ಕಟ್ಟುವರು ಸುಂದರವಾಗಿ
ಕಾಣಲು ರಿಂಗು - ರಿಂಗು
ಎಲ್ಲಿಂದ ಕೊಂಡರೋ
ಬಣ್ಣಗಳು ರಂಗು - ರಂಗು

ಪರಂಪರೆ ಇರುವ
ಕೆಲವೊಂದು ರುಮಾಲು
ನೋಡುಗರ ಕಣ್ಣಿಗೆ
ಎಷ್ಟೊಂದು ಜಮಾಲು (1)

ಕಟ್ಟಲು ಕೆಲವರು
ಪಟ್ಟಿದ್ದರಂತೆ ಕಷ್ಟ
ಕಷ್ಟಪಟ್ಟರೇನಂತೆ
ಜನರಿಗದೇ ಇಷ್ಟ

ಪದದ ಅರ್ಥ
(1) ಜಮಾಲು = ಚಂದವಾದ

- ಶಾಹಿದ್ ಉಪ್ಪಿನಂಗಡಿ

26 Aug 2016, 04:30 pm

ರಾಜಕಾರಣಿಗಳು



ನೇತಾರರೆಂದರೆ
ಬಲಿಷ್ಟರು..
ಸಂದಿಗ್ಧ ಪರಿಸರವನ್ನೂ
ನಿಯಂತ್ರಿಸುವವರು,
ಹತೋಟಿಯಲ್ಲಿಡುವವರು
ಜನರ ಬೇಡಿಕೆಗಳಿಗೆ
ಸ್ಪಂದಿಸಬೇಕಾದವರು
ಸಮಾಜ ಸೇವಕರವರು,
ಸ್ವಯಂ ಸೇವಕರು..
ಅಂಡಲೆಯುವರು,,,,,
ವೋಟಿಗಾಗಿ
ಶಿರಬಾಗುವರು
ಕೆಲವೊಮ್ಮೆ
ಕಾಲನ್ನೂ ಹಿಡಿಯುವರು.
ಜೇಬು ತುಂಬುವುದರಲ್ಲೇ
ಮಗ್ನರಾದವರು
ಲಕ್ಮಿಯನ್ನೊಲಿಸುವ
ತಂತ್ರಜ್ಞರವರು
ಕೋಟಿಗಳ ಬಜೆಟ್ಟು
ಪಾಸು ಮಾಡುವರು,
ಯಾರಿಗೂ ಅಂಜದೆ
ಗೋಣಿ ತುಂಬುವರು..

- ಶಾಹಿದ್ ಉಪ್ಪಿನಂಗಡಿ

26 Aug 2016, 04:09 pm

ಅನಿಸಿಕೆ

ಮರದಲ್ಲಿಯ ಟಿಸಿಲುಗಳು
ಮರದ ಒಲವಿಗೆ
ಸಾಕ್ಷಿಯಾದಂತೆ
ನನ್ನಯ ಕನವರಿಕೆಗಳು
ನಿನ್ನಯ ಸೇರುವಿಕೆಗೆ
ವೇದಿಕೆಯಂತೆ.

- ಸಾ.ರಾ.ಜ್ಞಾ

26 Aug 2016, 09:16 pm

ಭರವಸೆ.

ನಿನ್ನ ಇರುವಿಕೆಯ ಸುಳಿವೊಂದು
ಸಾಕೆನಗೆ
ಬದುಕಲು ಭರವಸೆ
ನಿನ್ನ ನಗುವಿನ ಸೆಲೆಯೊಂದು ಸಾಕು
ಸಾಧಿಸಲು ಎಲ್ಲ ಗುರಿ...

- ಶಿಖರಸೂರ್ಯ

26 Aug 2016, 07:32 pm

ತಳ-ಮಳ


ಮನಸ್ಸೆಂದರೆ ಹಾಗೇನೇ..
ಒಂದನ್ನು ಬಯಸುತ್ತೆ,
ಕೆಲವೊಮ್ಮೆ ತೊರೆಯುತ್ತೆ.
ಬಯಸಿದ್ದು ಸಿಗದಿದ್ದರೆ...
ಮರುಗುತ್ತಿರುತ್ತೆ.
ಬಯಸದ್ದು ಬಂದು
ಸಂತೋಷವೆನಿಸಿದರೂ
ಬಯಸಿದ್ದು ಬಂದಷ್ಟು
ಸಂತೋಷಪಡಲಾರದು.
ಇನ್ನೊಂದು ಮನದಿಂದ
ಲಭಿಸಿದ ಮೆಸೇಜು
ಕರಗತವಾಗದಾಗ
ಅಷ್ಟೊಂದು ಮರುಗದಿದ್ದರೂ
ಸ್ವತಃ ಬಯಸಿದ್ದು
ಸಿಕ್ಕೇ ಸಿಗಬೇಕೆಂಬ
ಹಠವಿರುವುದು
ಒಮ್ಮೆ ಆ ಕಡೆ
ಇನ್ನೊಮ್ಮೆ ಈ ಕಡೆ
ವಾಲುತಿರುವುದು
ಸಂತೋಷಕ್ಕಂತೂ
ಹಂಬಲಿಸುತಿರುವುದು...

- ಶಾಹಿದ್ ಉಪ್ಪಿನಂಗಡಿ

26 Aug 2016, 11:14 am

ಮುಂಜಾನೆ ಕವನ

ಇರುಳು ತುಂಬಿದ ಲೋಕದಲ್ಲಿ
ಆ ರವಿಯ ಆಗಮನ!!
ಮುಂಜಾವಿನ ಉಷೆ ಕಿರಣ
ಬೆಳ್ಳಕ್ಕಿ ಬರೆದ ಕವನ!!

ಉದಯಿಸುವ ರವಿಯ
ಉದರದಲಿ ಉರಿವ
ಆ ಜ್ವಾಲೆ ತಂದ ಕಿರಣ
ಪ್ರಕೃತಿಯು ಅಂದ ನಮನ!!

ನಾಚುತ್ತ ನಿಂತ ಆ ಸೂರ್ಯಕಾಂತಿ
ಸ್ಪರ್ಶಿಸಿದ ಸೂರ್ಯ ಕಿರಣ!!
ಹೊಳೆಯುತ್ತ ನಿಂತ ಇಬ್ಬನಿಯ ಸಾಲು
ಸೆಳೆದಿತ್ತು ನನ್ನ ಗಮನ!!

ಕೆರೆ ಏರಿ ಮೇಲೆ ಎಳೆ ಹುಲ್ಲು ಹಾಸಿ
ಚಿಗುರೊಡೆದ ಹಸಿರು ಪ್ರೀತಿ!!
ಓದುತ್ತ ಕುಳಿತೆ ನೀ ನನ್ನ ಪಯಣ
ಮುಗಿದೋಯ್ತು ಈ ಕವನ!!

- ಪಿ.ಜಿ.ಜ್ಯೋತಿ

26 Aug 2016, 08:26 am

ಹಬ್ಬ


ಎಲ್ಲೆಲ್ಲೂ ರಂಗು-ರಂಗು
ಬಟ್ಟೆ-ಬರೆಗಳು
ಉಡುಗೆ-ತೊಡುಗೆಗಳು
ಆಹಾರ-ಪದಾರ್ಥಗಳು
ಪಾಯಸ-ಪಾನೀಯಗಳು
ರಂಗು-ರಂಗಿಗೆ (ಜನ)
ಮಂಕು-ಮರುಳಾಗಿ
ಮನವ ಕೆರೆಯುವದು
ಕಣ್ಣ ಮೆರೆಯುವದು
ತಂಪನ್ನೀಯುವುದು

- ಶಾಹಿದ್ ಉಪ್ಪಿನಂಗಡಿ

25 Aug 2016, 05:22 pm

ಆಧುನಿಕ ಜಗತ್ತು



ನೈಸರ್ಗಿಕ ಪ್ರೀತಿಯಿತ್ತು
ಅಂದು
ಶಾಂತಿಯೂ ಮನೆ ಮಾಡಿತ್ತು
ಮನೆಗಳು ದೂರವಿದ್ದರೂ
ಮನಗಳು ಹತ್ತಿರವಾಗಿತ್ತು
ಸಂದರ್ಶಿಸಲು ಸಮಯವಿತ್ತು..
ಸೌಕರ್ಯಗಳು ಮಿತಿಮೀರಿದ್ದರೂ
ಇಂದು
ಕೃತಕ ನಗೆ ದರ್ಶನವಾಗುತಿದೆ.
ಅಶಾಂತಿ ತಲೆದೋರುತ್ತಿದೆ.
ಮೊಬೈಲ್ ಹತ್ತಿರವಿದ್ದರೂ
ಸಮಯ ಪೋಲಾಗುತ್ತಿದೆ
ಪ್ರಿಯರ, ಕುಟುಂಬಿಕರ ಸಂದರ್ಶನವೂ‌ ಅಸಾಧ್ಯವಾಗುತಿದೆ...

- ಶಾಹಿದ್ ಉಪ್ಪಿನಂಗಡಿ

25 Aug 2016, 05:00 pm

ಕಲ್ಲು ಹೃದಯ

ಹಲ್ಲೆಯಂತೆ
ತೀರಿ ಹೋದರಂತೆ !
ಕೊಲೆಯಂತೆ
ಸತ್ತು ಹೋದರಂತೆ !
ಭೂಕಂಪವಂತೆ
ಅಸು ನೀಗಿದರಂತೆ !
ಜ್ವಾಲಾಮುಖಿಯಂತೆ
ಇಹಲೋಕ ತ್ಯಜಿಸಿದರಂತೆ !
ಮುಖಾಮುಖಿ ಡಿಕ್ಕಿಯಂತೆ
ಹಲವರು ಗುಡ್ ಬೈ ಹೇಳಿದರಂತೆ !
ಹಲವಾರು ವಾರ್ತೆಗಳು ಕೇಳುತ್ತವಂತೆ
ಆದರೂ
ನನ್ನ ಮನ ಕರಗಲ್ಲವಂತೆ (!)

- ಶಾಹಿದ್ ಉಪ್ಪಿನಂಗಡಿ

25 Aug 2016, 04:48 pm