Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವಿಪರ್ಯಾಸ..

"ತತ್ವಜ್ಞಾನಿ ವಿಧೂಷಕನಂತೆಯೂ,
ವಿಧೂಷಕ ಮಾದರಿಯಾಗಿಯೂ,
ಈ ದೇಶದ ಮಕ್ಕಳಿಗೆ ಪರಿಚಯವಾಗುವುದು,
ಈ ದೇಶದ ಘೋರ ವಿಪರ್ಯಾಸ"




ಪ್ರವೀಣ್ ವಿಪ್ರ

- ವಿಪ್ರ

18 Nov 2016, 08:32 pm

ಇಬ್ಬನಿ

ಮುಂಜಾವಿನ ಎಲೆ ಮೇಲಿನ
ಸಂಜೀವಿನಿ ಈ ಇಬ್ಬನಿ!!
ಹೊಂಬೆಳಕಿಗೆ ಮರು ಜನ್ಮವ
ನೀಡಿರುವುದು ಈ ಇಬ್ಬನಿ!!

ಆ ಬಾನಿನ ನಕ್ಷತ್ರದಿ
ಜಾರಿದ ಮಣಿ ಈ ಇಬ್ಬನಿ!!
ಇಳೆಯಲ್ಲಿ ಕಳೆ ತಂದ
ಹಿಮ ಮಣಿ ಈ ಇಬ್ಬನಿ!!

ಹಸಿರೆಲೆಗಳ ನಡುವಲ್ಲಿ
ಹೊಳೆದಿರುವುದು ಈ ಇಬ್ಬನಿ!!
ಮುಂಜಾನೆಗೆ ಮಂದಹಾಸ
ತಂದಿರುವುದು ಈ ಇಬ್ಬನಿ!!

- ಪಿ.ಜಿ.ಜ್ಯೋತಿ

18 Nov 2016, 09:29 am

ಪಾಪದ ಹೂವು

ಪಾಪದ ಹೂವದು
ಗಿಡದಲಿ ಒಂಟಿ!!
ದೂರಕೆ ಸರಿದಿವೆ
ಎಲೆಗಳ ಗುಂಪು!!

ಮದುವನು ಹೀರಲು
ದುಂಬಿಯು ಬಾರದು!!
ಪಾಪದ ಹೂವದು
ಮುಡಿಯನು ಸೇರದು!!

ಅರಳುವ ಮುಂಚೆನೆ
ಮುದುಡಿದ ರೂಪ!!
ಬಾಡುವ ಮುಂಚೆನೆ
ಉದುರಿತು ಪಾಪ!!

ಶಾಪವ ನೀಡಿದ
ದೇವರ ದೂರದು!!
ಪಾಪದ ಹೂವದು
ಮಣ್ಣನು ಸೇರಿತು!!

- ಪಿ.ಜಿ.ಜ್ಯೋತಿ

17 Nov 2016, 11:06 pm

ಬೆಟ್ಟದಾ ಸಿರಿ

ಹಚ್ಚ ಹಸಿರಿನ ಬೆಟ್ಟದಾ ಸಿರಿ
ಸ್ವಚ್ಚ ಗಾಳಿಯ ತಂಪಿನಾ ಸಿರಿ!!
ನಿತ್ಯ ಅರಳುವ ಹೂಗಳಾ ಪರಿ
ನಿತ್ಯಹರಿದ್ವರ್ಣದಾ ಗಿರಿ!!

ಬಳುಕಿ ಹರಿಯುವ ನೀರಿನ ಜರಿ
ಜೀವರಾಶಿಗೆ ದೊರೆತ ಐಸಿರಿ!!
ದಟ್ಟ ಕಾನನ ಇರುಳ ಮಾದರಿ
ಬೆಳಕ ಸುರಿವನು ಇಣುಕಿ ಆ ರವಿ!!

ಸೃಷ್ಟಿಯಾಗಿಹ ಇಂತಹ ವೈಖರಿ
ದೇವ ನೀಡಿದ ವರವೆಂಬುದೇ ಸರಿ!!
ತಾಳ್ಮೆಯಲ್ಲಿ ಹೊತ್ತು ಸಲಹುವ
ಭೂಮಿ ತಾಯಿಗೆ ನಿತ್ಯ ನಮಿಸಿರಿ!!

- ಪಿ.ಜಿ.ಜ್ಯೋತಿ

17 Nov 2016, 11:06 pm

ಕವಿಗಾರ ಕೆತ್ತನೆ.

ಕವಿಗಾರನ ಕೆತ್ತನೆಯಲ್ಲಿ ,
ಮೂಡಿತು ಒಂದು ಕವನ;
ಅದೇ ಪ್ರೀತಿಯ ಸಂಕಲನ.

ಜೀವನ ಒಂದು ವ್ಯವಕಲನ;
ಪ್ರಪಂಚವೆಂಬುದು ಸೊಗಸಾದ ರೋಮಾಂಚನ ,
ಪ್ರೀತಿಯೆಂಬುದು ಮನಸ್ಸಿಗೆ ನೋವಿನ ಆಸನ.

- ವೇಣು ಆರ್ ಚಿನ್ನದೂರು

17 Nov 2016, 09:43 pm

ಕನಸು

ಕಣ್ಣೊಳಗಿನ ಆ ಕನಸು
ಮರೆಯಾಗಿ ಮರೆತಾಗ
ಮೌನವಾಯಿತು ಮನಸು

- adarsh

17 Nov 2016, 07:53 pm

ನಾ

ನಾ ಬಂಜರೆಂದುಕೊಂಡ ಎದೆಯೊಳಗೆ
ಕೈತೋಟವಾದರೂ ಮಾಡಬಹುದಿತ್ತು…
ಅರ್ಥವಿಲ್ಲದ ಪದಗಳ ಪೊಣಿಸುತ್ತ ಕುಳಿತೆ
ವಿಚಾರವಾದಿಯಂತೆ ಬಣ್ಣ ಬಳಿದುಕೊಂಡು…

ಅವಳು ಇವಳೆಂದು ಕನಸು ಕಾಣಲು
ನಾನು ಪ್ರೇಮಕವಿಯಾಗಿ ಉಳಿದಿರಲಿಲ್ಲ,
ಮಾಯಾಮೃಗಮಾನಸಿಯೊಬ್ಬಳ ಬೆನ್ನು ಬೀಳಲು
ನಾನೊಬ್ಬ ನುರಿತ ಬೇಟೆಗಾರನೂ ಅಲ್ಲ…

ಕಾಲು ಹಾದಿಯಲಿ ಹಳೆಯದೊಂದು ಉಗ್ಗ ಹಿಡಿದು
ಹಾಲೋಯ್ಯುವ ಹುಡುಗ
ದಾರಿಯುದ್ದಕ್ಕೂ ಹಾಡು ಗುನುಗಿದಂತೆ ನಾನು…
ಮಣ್ಣಿಗೆ ಮುತ್ತಿಕ್ಕಿದ ಚಪ್ಪಲಿಗೆ ನೀರಡಿಕೆಯಾಗಿತ್ತು,
ನಳದ ಕೆಳಗೆ ತೊಯಿಸಿಬಿಟ್ಟೆ…
ತೊರೆಯೊಂದರ ಬಳಿ ಕಲ್ಲು ತೇಲಿಸಲು ಯತ್ನಿಸುವಾಗ
ಜೊತೆಗೂಡಲು ಯಾರೂ ಇರಲಿಲ್ಲ,
ಹುಚ್ಚುಹುಡುಗನ ಮೂರ್ಖತನ ಕಂಡು
ಝರಿಯ ನೀರು ಆಗಾಗ ಗೊಣಗುತ್ತಿತ್ತು…

ನಾ ಕಂಡ ಒರತೆಯ ಸೆಲೆಗೆ ಆಗಾಗ ಬೊಗಸೆವೊಡ್ಡಿ
ಮೀನುಗಳನೆಲ್ಲ ಹೌಹಾರಿಸಿದ್ದೆ,
ಖಾಲೀ ಮನದ ತುಂಬ ಮೌನದ ಚಿಲಿಪಿಲಿ
ಮತ್ತೆ ಮತ್ತೆ ನೀರನ್ನು ಕದಡುತ್ತಿತ್ತು……
- ಪರಮೇಶ್ವರ

- ಒಂಟಿತೋಳ

17 Nov 2016, 12:47 am

ಲಬ್-ಡಬ್ ಎನ್ನುವ ಹೃದಯವಿದು..

ಹೇಳದೆ ಸುಳಿದ
ಮೋಹಕ ಕನಸೊಂದು
ಕಾಡಿದೆ ಮನವ
ಅನುಕ್ಷಣವು ಅವಳ ನೆನಪ
ಅಲೆಯ ಮೇಲೆ ತೇಲುತ...

ಲಬ್-ಡಬ್ ಎನ್ನುವ
ಹೃದಯವಿದು..
ಗಪ್-ಚಿಪ್ ಹಾಗಿದೆ
ಅವಳೆದುರಲಿ...
ಕ್ಷಣ ಕ್ಷಣವು ಮನವು ಕನವರಿಸಿದೆ ಅವಳೇಸರ....!!

- ಬಾನು ಅಡಿಗಾರ್

17 Nov 2016, 12:19 am

ಸಾರ್ಥಕ್ಯ..

ನನ್ನ ಕವನಗಳ ಸಾರ್ಥಕತೆ,
ಕೇಳಿದ ಹುಂಬನಿಗೆ.
"ನಾನು ಬದುಕಿದ್ದೆ ಎನ್ನುವುದರ ಸಾಕ್ಷ್ಯವಾಗುವುದು"
ಎಂದು ನನ್ನ ಅಕ್ಷರಗಳು
ಧೀರೋದ್ದಾತವಾಗಿ ಉತ್ತರಿಸುವವು.

ಪ್ರವೀಣ್ ವಿಪ್ರ

- ವಿಪ್ರ

16 Nov 2016, 04:42 pm

ಅಖಂಡ ಕರ್ನಾಟಕ

ಕರುಣಿಸು ಕರುನಾಡ ಬನಶಂಕರಿ,
ಕರಗಳಲಿ ಕನ್ನಡದ ಬಾವುಟವ,
ಕಾರ್ಯಗಳಲಿ ಕನ್ನಡದ ಪ್ರೇಮವ,
ಕಾಲಿಡುವೆಡೆಯಲಿ ಕನ್ನಡದ ಧೀರತನವ,
ನುಡಿಗಳಲಿ ಶಾರದೆಯ ಗಾನಾಮೃತವ.


ಹುಟ್ಟುವೆನು ನಾನ್ .
ಎರೆಹುಳುವಾದರೆ ನಿನ್ನ ಕಲ್ಪವೃಕ್ಷದಡಿಯಲ್ಲಿ.
ಸಲಗವಾದರೆ ನಿನ್ನ ಅಂಬಾರಿ ಹೊರುವೆನು..
ಏನಾದರೆನು ನಾನ್ ಕನ್ನಡಕ್ಕೆ ದುಡಿವುದು ,
ಎನ್ನ ನಕಶಿಕಾಂತದೊಳಡಗಿದ ಅಣು-ಅಣುವು ಕನ್ನಡಕೆ ಮಡಿವುದು...


ಸಾವಿರ ಸುದರ್ಶನರ ಚಕ್ರಕ್ಕಿಂತಧಿಕ
ವೇಗದಲಿ ನುಗ್ಗಿ..
ತಾಯ್ಗಂಡರ ತಲೆಗಳ ತರಿದು ಬಿಡುವೆನಮ್ಮ....
ಅಖಂಡ ಕರ್ನಾಟಕವನು ಉಳಿಸುವೆನು,
ನಿನ್ನ ಸಹ್ಯಾದ್ರಿ ಸೆರಗಿನ ಮೇಲಾಣೆ.


ಮರೆಯನು ನಾನ್
*ಅಖಂಡ ಕರ್ನಾಟಕ,ಭವ್ಯ ಭಾರತ*ವೆಂಬ ಘೋಷವಾಕ್ಯವ.
ವೀರಾಟ್ಟಹಾಸದಲಿ ಬಾನು-ಭುವಿ ಬೆಳಗಲಿದೆ *ಅಖಂಡ ಕರ್ನಾಟಕವು ಭವ್ಯಭಾರತದಲ್ಲಿ*.
ಇದನ್ನೇ ಮಾಡ್ವೆ.ಇಲ್ಲದ್ದಿದ್ದರೆ ಸಾಯ್ವೆ.



ಪ್ರವೀಣ್ ವಿಪ್ರ

- ವಿಪ್ರ

16 Nov 2016, 08:08 am