ಕಂಬನಿಯ ಮಿಡಿತ ಸೇರಲು
ನನ್ನ ಒಡಲಲ್ಲಿ
ಅಯ್ಯೋ ಏನೋ ತಳಮಳ
ಒಳಗೆ ಓಡಿದೆ ಆಗ
ಬೀಳಲು ಹಲ್ಲಿ ರಾಯ
ಅಪಶಕುನ ಎಂದು
ಬಾಗಿಲ ಮುಚ್ಚಿದೆ .
ಬಾಗಿಲಲ್ಲೇ ನನ್ನ ವಿಧಿ ಯ
ಅಲಿಸೆದಂತೆ ಎನಿಸಿ ಒಳ ಓಡಿದೆ
ಹೊರಗೆ ಏನೋ ಶಬ್ದ
ಜೋರಾಗಿ ಹಾಡು ಹಾಡಿದೆ ಭಯದಿಂದ
ಮುಂಜಾವು ಹುಂಜದ ಕೂಗು
ಕೇಳಿದ ನನ್ನ ಕಿವಿ
ತೆರೆಯಲು ಬಾಗಿಲು
ಬಾಗಿಲಲ್ಲಿ ಬಿದ್ದಿದೆ ನನ್ನ ಶ್ವಾನದ
ಸುಂದರ ಪ್ರೀತಿಯ ಶವ
ಅಪಶಕುನವೇ ನನ್ನ ಕಣ ಕಣದಲ್ಲೂ
ಮನದಲ್ಲೂ ಮನೆ ಮಾಡಿ
ಕೊಂಡಿದೆ ನನ್ನ ಪ್ರೀತಿಯ....!
ಉಳಿದು ಹೋದವರು ನಾವು ಕಳೆದು ಹೋದವರು
ಅವರ್ ಬಿಟ್ ಇವರ್ ಬಿಟ್
ಮಧ್ಯೆ ತುಳಿದು ಅಳಿದು ಹೋದವರು
ಒಹೋ ದೊಂಬರಾಟ ಇದೆ ರಾಜತಂತ್ರದಾಟ ಬಿತ್ತಿ ಕುಳಿತಿಹರು ಹತ್ತಿ ಇಳಿಯುವರು ಇಳಿಸಿದವರ್ ಹತ್ತುವರು
ಕುರುಡು ಕಣ್ಣು ನೋಟ ಆಟ ನೊಡ್ ಆಟ
ನೋಟ ನೋಡುವವರ ನಾವು ನೋಡುವವರ ಇದು ಯುದ್ಧವಲ್ಲ ಮನುಜ ಇದರ ಅಸ್ತ್ರ ಕುರುಕ್ಷೇತ್ರವಲ್ಲ ರಂಗಸ್ಥಳವಾಯ್ತ್
ರಾಜಕೀಯದ್ ಆಟ
ಬಲದಲಿ ಎಡದಲಿ ಬಿಲದಲಿ ಪಣದಳಿ ರಾಜಕೀಯದಾಟ ಮೂರು ಬಿಟ್ಟವರ ನೋಡು ಏಣಿಯಾಟ
ಗುಲಾಮಗಿರಿಯು ಅಲ್ಲ ಆದರಿಲ್ಲಿ ಗುಲಾಮರೇ ಎಲ್ಲ ಇದು ಮುಗಿಯದ ನೋಟ ಬಗೆಯದ ಆಟ
ಬಡಿಸುವ ಮುನ್ನ ಎಲೆಯು ಎಂಜಲಲ್ಲ
ಆದರಿಲ್ಲಿ ಎಲೆಯೆ ಎಂಜಲಯ್ಯ
ಎಂಜಲು ನುಂಗಿದ ನುಂಗುವ ರಕ್ಕಸರೆ ಏಲ್ಲಾ..
ಶೂನ್ಯವೆಲ್ಲ ...
ಈ ರಾಜಕೀಯದ್ ಆಟ...ನೋಡ್ ದೊಂಬರಾಟ
ರಾಜಕೀಯದಾಟ
ಕವನ ಹುಟ್ಟುಹಬ್ಬ.
ಸುಜ್ಞಾನದಿ ಹೊಳೆಯುತ್ತಿರುವ ನಕ್ಷತ್ರವು ನೀವು,
ನಿಮ್ಮ ಅನುಭೂತಿಯ ಸಹಕಾರವು ಬೇಕೆನಿಸಿದೆ ನನ್ನ ಕೊನೆಯವರೆಗೆ.
ಕಾಠಿಣ್ಯಕೆ ಉದ್ಗರಿಸದೆ ಮೌನಕ್ಕೆ ಶರಣಾಗೋ ನಿಮ್ಮ ಮನವು,
ಮುದುಡಿದ ಹಕ್ಕಿಗಳ ಸಂತೈಸುತ ಅವರ ಕೆಂದುಟಿಯಲಿ ಮೂಡಿಸುವುದು ಚಂದದೊಂದು ನಗುವ.
ನೊಂದ ಹೃದಯಕ್ಕೆ ಗೂಡಾಗಿದೆ ನಿಮ್ಮೆದೆಯ ಮಹಲು,
ಅಲ್ಲಿ ನಾ ಕಾಣದ ಪ್ರೀತಿಯ ಆಹ್ಲಾದಿಸುತ್ತ ನಿರಾಳ ಭಾವದಿ ನಾ ನಮಿಸುವೆ ದೇವರೇ ನನಗೆ ನಿಮಗಿಂತ ಯಾರಿಲ್ಲ ಮಿಗಿಲು.
ನಿಮ್ಮ ಅರಿವಿನ ಸಿಡಿಲು ಮನುಜರೆದೆಯಲಿ ಸಿಡಿದು,
ಸನ್ಮಾರ್ಗ ಚಿಗುರೊಡೆಯಲಿ ನವಿಲಂತೆ ನರ್ತಿಸುತ
ಗಗನದಿಕ್ತರಕ್ಕೆ ನಿಮ್ಹೆಸರ ಬರೆದು.
ನೋಟದಲೇ ನನ್ನ ನಿವೇದನೆಗೆ ಸ್ಪಂದಿಸೋ ನಿಮ್ಮ ಔದಾರಿಯ,
ವಸಂತ ಮಾಸದ ಕೋಗಿಲೆಯ ಮಾರ್ಧ್ವನಿಯೊಳಗೆ ಮೆರೆಯಬೇಕೆಂಬ ಆಸೆ ಮಹಾಶಯ.
ಕಳೆದ ಸಮಯವ ನೆನೆಯದೆ ಜೊತೆಗಿರುವ ಗಳಿಗೆಯ ತೋರೆಯದೆ,
ಸಂತಸದ ದಿನದಂದು ಸಂಭ್ರಮದ ಸಿಹಿಯಾಗಿ ನೀವ್ ಪೋರೆಯಿರಿ ನಿಮ್ಮವರ ಕೈತುತ್ತ ಮರೆಯದೆ.
ತಂಗಾಳಿ ಹೊತ್ತು ತರಲಿ ಶ್ರೀ ತಂಧದಂತ ನಿಮ್ಮ ವ್ಯಕ್ತಿತ್ವದ ಸಾರವ,
ಮಹತ್ವದ ಕನಸೊಂದ ನನಸಾಗಿಸೊ ಸಂಕಲ್ಪಕ್ಕೆ ಸಾಕ್ಷಿಯಾಗಲಿ
ಇಂದಿನ ನಿಮ್ಮ ಹುಟ್ಟು ಹಬ್ಬದ ಮಹೋತ್ಸವ.