ಮಧುರ ಕಾವ್ಯ ದ
ಸು೦ದರಿ ಅವಳು...
ಚ೦ದಿರನ ಬೆಳದಿ೦ಗಳು
ಅವಳ ಮೊಗದ ಮು೦ಗುರಳು...
ಇನ್ನೂ ಅವಳನ್ನು ಪ್ರತಕ್ಷ ಕ೦ಡ
ನನಗೆ ಆಗಾದಿರುವುದೇ ಅರಳು ಮರಳು...
ಸಾಗದಿರುವುದೇ ಅವಳ ಜೋತೆ
ನನ್ನ ಜೀವನದ ಉರಳು?...
ನೀನು ನನ್ನ ಬಿಟ್ಟು ಹೋದ ದಿನವೇ ನಿ ಕೊಟ್ಟ ನವಿಲುಗರಿ,
ಶುಭಾಶಯದ ಕಾಗದ ,ಒಲವಿನ ಪತ್ರ ,ಉಡುಗೊರೆಗಳನ್ನೆಲ್ಲ ಹೂತು ಹಾಕಿ ಬಂದೆ
ನಮ್ಮ ಪ್ರೀತಿ ಸಮಾಧಿಯ ಹತ್ತಿರ...!!
ಗೆಳತಿ...ನೆನಪು ಮತ್ತು ಕಣ್ಣಿರು ಬಿಟ್ಟರೆ ನಮ್ಮ ಸತ್ತು ಹೋದ ಪ್ರೀತಿ ಸಂಬಂದಕ್ಕೆ
ಉಳಿದಿಲ್ಲ ಯಾವುದೇ ಲೆಕ್ಕಪತ್ರ ...!! ಆದರೂ...
ನಿನ್ನ ನೆನಪಲ್ಲಿ ಅಳೋದು ನಂಗೆ ತುಂಬಾ ಇಷ್ಟ ಕಣೇ ಹುಡುಗೀ...!
ಮನವು ನೋಯುತಿದೆ
ಮನಸ್ಸನ್ನೇ ಯಾರೋ
ಮುಷ್ಟಿಯೊಳಗಾಗಿಸಿದ ಅನುಭವ
ಬಯಸಿದ್ದು ಸಿಗದಾಗಲೂ
ಸಿಗುವಂತದ್ದು ವಿರಳವಾದರೂ
ಮನಸ್ಸಿಗೆ ಅರ್ಥವಾಗುವುದೇ ಇಲ್ಲ
ಹಂಬಲಿಸುತ್ತಿದೆ
ಹಾತೊರೆಯುತ್ತಿದೆ
ತನ್ನ ನೋವನ್ನು ಯಾರೊಂದಿಗೆ
ಹಂಚಲಿ ?
ಮರುಗುವ ಮನವ
ಸಂತೈಸಿ
ತಂಗಾಳಿಯ ಸಂದೇಶ ಹರಡಿ ಸಾಂತ್ವವನ್ನೀಯಲು ಯಾರಿಗೆಲ್ಲ ಸಾಧ್ಯವಿದೆ ?
ದುಃಖಗಳ ಸಾಮ್ರಾಜ್ಯವ
ಭೇದಿಸಿ
ಸಂತೋಷರಾಜ್ಯ ನಿರ್ಮಾಣ ಮಾಡಿ
ಜಯಗಳಿಸುವವರೇ ನೈಜ
ಜಯಶಾಲಿಗಳು
ಅದಕ್ಕೆ ದೊರಕುವ ಪರಿಸರವೇ "ವರ"
ವರವಿಲ್ಲದ ಪಯಣದ
ಕಾರ್ಯ ಸಾಧನೆಯು ಅಸಾಧ್ಯ...
ದಿನದ ಪ್ರತಿ ಕ್ಷಣವು
ಒಂದಲ್ಲ ಒಂದು ರೀತಿಯ ಕದನ
ಸಮಯವ ಕಳೆಯಲು
ಚಟುವಟಿಕೆಗಳ ಚಲನ ವಲನ
ಭೂತ ವರ್ತಮಾನ ಭವಿಷ್ಯತ್ಗಳ
ಚಿಂತನ ಮಂಥನ
ಸಿರಿತನದ ಸೋಗಿನಲಿ ಮೆರೆದ
ಬಡತನದ ಬೇಗೆಯಲಿ ಬೆಂದ
ಮನಸುಗಳ ಕಥನ
ಜೀವನದ ಉದ್ದಕೂ ನಾನು ನಾನೆಂಬ ಅಹಂಕಾರಗಳ ಕದನ
ಅರ್ಥವಿಲ್ಲದ ಕನಸು ಕಾಣುವ
ಮನಸ್ಸು ನನ್ನದು
ಆ ಕನಸುಗಳಿಗೆ ಅರ್ಥ ತುಂಬಲು ಬಂದ
ಮನಸ್ಸು ನಿನ್ನದು
ಕನಸು ನನಸಾಗುವ ವೇಳೆ ತಂದೇ ನೀ
ಮುನಿಸುಗಳ ಸಾಲು
ಅಂದೇ ಶುರುವಾಹಿತು ನನ್ನ
ಕನಸುಗಳ ಸೋಲು