Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸ್ಸಿಗೆ ತುಂಬಾ ನೋವಾದಾಗ

ಮನಸ್ಸಿಗೆ ತುಂಬಾ ನೋವಾದಾಗ ಹೇಳಿಕಳ್ಳುವುದಕ್ಕೆ ಒಂದೊಳ್ಳೇ ಸ್ನೇಹಿತರಿರಬೇಕು ಆಗ ಸಾಯುವಂತ ನೋವಿದ್ದರೂ ಅದು ನೋವು ಎನಿಸುವುದಿಲ್ಲ

ನಾವು ಒಂಟಿ ಇದ್ದಾಗ ನಮ್ಮ ದುಖಃವನ್ನು ಯಾರು ನಮ್ಮ ನೋವನ್ನು ಹಂಚಿಕೊಳ್ಳದೇ ಇದ್ದಾಗ ಆಗುವ ನೋವು ದುಖಃ ಸಂಕಟ ಸಾವಿನ ಮನೆ ಬಾಗಿಲು ತಟ್ಟಿಸುತ್ತದೆ.
(ಮನುಷ್ಯನಿಗೆ ತುಂಬಾ ಮನಸಿಗೆ ನೋವು.ದುಖಃ.ಸಂಕಟ. ಆದಾಗ ಜೀವನವೇ ನಶ್ವರ ಎಂಬುದು ನೆನಪಾಗುವುದು).

{ಸ್ನೇಹಜೀವಿ ಮಾಣಿಕ್ಯ ನಾಗೇಶ್}

- ಸ್ನೇಹಜೀವಿಮಾಣಿಕ್ಯ

01 Nov 2016, 09:46 pm

ಬಿಕ್ಷುಕ

ಬಿಸಿಲ ಬೇಗೆಯಲ್ಲಿ
ಬೆಂದು ಊರೂರು ಅಲೆದಾಡಿ
ಅರ್ದ ಹೊಟ್ಟೆ ತುಂಬಿಸಲು
ಹರಹಸ ಪಡೆವ ನಿನಲ್ಲ ಬಿಕ್ಷುಕ...!

ಮೌಲ್ಯವಿಲ್ಲದಷ್ಟು ಇದ್ದರೂ
ಇನ್ನೂ ಬೇಕು ಬೇಕು ಎನ್ನುವ
ರಾಶಿ ಹಾಕಿ ಹೆಸರುಗಿಟ್ಟಿಸಿ
-ಕೊಳ್ಳುವ ನೀನು ಬಿಕ್ಷುಕ...!

ಹೆಣ್ಣು ಹೆತ್ತ ಎಂಬ ಕಾರಣಕ್ಕೆ
ತನ್ನ ಕೂಸಿಗೆ ಕಂಕಣ ಬಾಗ್ಯ ಕೊಡಿಸಲು
ಮಸೀದಿ,ಮಂದಿರಗಳ ಮುಂದೆ
ಕೈ ಚಾಚುವ ನೀನಲ್ಲ ಬಿಕ್ಷುಕ...!

ದುಡಿವ ಶಕ್ತಿ ಇದ್ದರೂ
ಕರುಣೆ,ಕಾರ್ಪಣ್ಯ ಇಲ್ಲದೆ
ಪತ್ನಿ ಮನೆಯಿಂದ ಲಕ್ಷ ಲಕ್ಷ ಕೇಳಿ
ಪಡೆವ ನೀನು ಬಿಕ್ಷುಕ....!

-

- ಸಲ್ಮಾನ್ ಸಜೀಪ

01 Nov 2016, 05:20 pm

ಮಿಸ್ಟರ್ ಅಕ್ಕರಂಗಡಿ

ಜಗತ್ತು ವಿಶಾಲವಾಗಿದೆ. ಹೃದಯವನ್ನೂ
ವಿಶಾಲವಾಗಿಸಿಕೊಂಡರೆ, ಇಡೀ
ಜಗತ್ತನ್ನೇ ಹೃದಯದಲ್ಲಿ ತುಂಬಿಕೊಳ್ಳಬಹುದು.
*ನಾ ಒಲ್ಲೆ!* ಎಂದರೆ ಏನು ಮಾಡುವುದು?
ನಮ್ಮ ಹೃದಯಗಳು ಹೊರ ಪ್ರಪಂಚಕ್ಕೆ
ಮಿಡಿಯುವಂತಾ ಮೆತ್ತನೆಯ
ಚೆಂಡುಕಗಳಾಗಬೇಕು.
*ಸ್ಪಂದನೆಯೇ ಇಲ್ಲದ ಕಲ್ಲಾಗಬಾರದು.*

*✒ಶಾಕೀರ್ ಅಕ್ಕರಂಗಡಿ*

- Shakir Akkarangadi

31 Oct 2016, 10:24 pm

ಉಸಿರಾಗಲಿ ಕನ್ನಡ; ಹಸಿರಾಗಲಿ

ಉಸಿರಾಗಲಿ ಕನ್ನಡ;
ಹಸಿರಾಗಲಿ ಕನ್ನಡ!

ಚಿನ್ನದ ಊರು ನಮ್ಮೂರು ,
ಕಲ್ಪತರ ನಾಡು ಕರುನಾಡು !
ಮಲೆನಾಡ ನೆಲೆವೀಡು.

ಸಕ್ಕರೆಯ ಸಿಹಿಯೂರು,
ಚೆನ್ನಪಟ್ಟಣದ ಗೊಂಬೆಯೂರು;
ಒಡೆಯರ ಕಲೆಯೂರು.

ರೇಷ್ಮೆಯ ನವಿಲೂರು,
ಮಾವಿನ ತವರೂರು:
ಮಾಸ್ತಿಯ ಮಾಲೂರು.

ಕವಿ ಪುಂಗವರ ಹುಲಿನಾಡು,
ಕೆಂಪೇಗೌಡರ ಬೆಂದಕಾಳೂರು;
ವಚನಕಾರರ ನಲ್ಮಮೆಯ ನೆಲೆವೀಡು.

ಕನ್ನಡ ಕಣ್ಮಣಿಗಳ ಈ ಊರು!
ಕನ್ನಡಿಗರ ಸ್ವಾಭಿಮಾನದ ಸಂಕೇತ ನಮ್ಮೂರು.

- ವೇಣು ಆರ್ ಚಿನ್ನದೂರು

31 Oct 2016, 09:09 pm

ಕಾಣಿಸದಿರುವ ದೇವರು

ಕಾಣಿಸದೆ ಇರುವುದನ್ನು ನಂಬಿ ಕುರುಡರಾದಿರೆನಯ್ಯಾ
ಕಾಣಿಸಿದ ದೇವರನ್ನು ಹೋರ ಹಾಕಿದರಲ್ಲಯ್ಯಾ
ಹುಡುಕಿ ಹುಡುಕಿ ದಣಿವಾಯಿತ್ತದಯ್ಯಾ
ಆದರೂ ನಿಮಗೆ ಸಿಗನು ಆ ದೇವರಯ್ಯಾ
ಕಾಣಿಸಿದ ದೇವರಿಗೆ ಕೈ ಮುಗಿರಯ್ಯಾ
ತಂದೆ-ತಾಯಿಯೇ ಆ ದೇವರಯ್ಯಾ
ಅವರ ಸೇವೆಯೆ ದೇವರ ಸೇವೆಯಯ್ಯಾ
ಇದನ್ನು ಅರಿಯದಿರುವ ನೀನು ಎಂತಾ ಮನುಜನಯ್ಯಾ

ಕೆಟಿ
ಹನೊಂದನೇ ತರಗತಿ
ವಿಜ್ಞಾನ ವಿಭಾಗ

- kt

31 Oct 2016, 11:29 am

ನನ್ನ ಬಾಳ ಬೆಳಕು

ನಾನ್ನಂದುಕೋಂಡಂತ್ತಿಲ್ಲಾ ನನ್ನ ಬದುಕು
ಯೆಂದಿಗೂ ಬರಲಿಲ್ಲ ಈ ಬಾಳಲ್ಲಿ ಹೊಸ ಬೆಳಕು
ಕಾದಿರುವೆ ಈಗಲೂ ನಾನು ಆ ಬೆಳಕಿಗೆ
ಎಂದು ಆ ಬೆಳಕು ಜಗಮಗಿಸುವುದೊ ಈ ಬಾಳಲ್ಲಿ

- kt

30 Oct 2016, 08:04 pm

ಓ ಒಲವೇ

ಓ ಒಲವೇ ನನ್ನ ಒಲವೇ ಎಲ್ಲಿರುವೆ ಹೆಗೀರುವೆ
ಈ ಹೃದಯ ಪ್ರತಿ ಕ್ಷಣವೂ ನೀನನ್ನ ನೆನೆಯುತ್ತಿದೆ
ಕತ್ತಲೆಯಾ ದಾರಿಯಲ್ಲಿ ನಾ ನಡೆಯುವಾಗ ನೀ ಬಾರೆ ಚಂದ್ರನಾಗಿ
ಬೀಸಿಲಲ್ಲಿ ನಾ ಇರುವಾಗ ನೀ ಬಾರೆ ನೆರಳಾಗಿ....
ಪ್ರತಿ ದಿನ ಪ್ರತಿ ಕ್ಷಣ ಈ ಮನವು ನೀ ಬರುವೆ ಎಂದು ಕಾಯುತ್ತಿದೆ....

- Rajbhumi.doddamani

30 Oct 2016, 11:32 am

"ಗುಂಡರಗೋವಿ" ಗುಂಡ

ಗುಂಡರಗೋವಿ ಗುಂಡ;
ಹುಡುಗಿಯ ಸೊಗಸು ಕಂಡ,
ಹಿಂದೆ ಬಿದ್ದು ವದ್ದಾಡಿಕೊಂಡ:

ಹುಡುಗಿ ಸ್ವಲ್ಪ ಮಂದ ಅನ್ಕೊಂಡ,
ಅದು ಮೇಕಪ್ಪು ಅಂತ ತಿಳ್ಕೊಂಡು!
ಮೈಯಲ್ಲಾ ಪರಚಿಕೊಂಡ?

ಮದುವೆಯಾಗಿ ತಲೆ ಚಚ್ಚಿಕೊಂಡು!
ಹೊಗೆ ಹಾಕಿಕೊಂಡ.

- ವೇಣು ಆರ್ ಚಿನ್ನದೂರು

30 Oct 2016, 12:26 am

ಓ ಸೈನಿಕ?

ಓ ಸೈನಿಕ ದೇಶ ಸೇವೆಯೆ ನಿನ್ನ ಕಾಯಕ,
ವೈರಿನಾಶಕ,ಪ್ರಜಾಪಾಲಕ ನೀನು ನಮ್ಮ ಸೈನಿಕ;
ನೀನು ಅಮರ ಜ್ಯೋತಕ ಧೈರ್ಯ ರ್ವದಕ.
ನಿನ್ನನ್ನು ನೆನೆದು ಗೌರವಿಸುವುದು ನಮಗೆ ಶುಭಸೂಚಕ.

- ವೇಣು ಆರ್ ಚಿನ್ನದೂರು

30 Oct 2016, 12:14 am

ವಿಧಿ ವಿಜ್ಞಾನ!

ಕುಣಿದಾಡಿದೆ ತನುಮನ :
ನಲಿದಾಡಿದೆ ಜೀವನ ,
ಕಾಣದ ದಾರಿಗೆ ಈ ಪಯಣ!

ತಾಯಿಯಿಂದ ಜನನ;
ಪಾಪ ಪುಣ್ಯಗಳ ಮನನ,
ನಿಗೂಡ ಸತ್ಯಗಳ ಯಾನ.

ಯಾರು ಬಲ್ಲರು ನಮ್ಮ ವಿಧಿ ವಿಜ್ಞಾನ .

- ವೇಣು ಆರ್ ಚಿನ್ನದೂರು

30 Oct 2016, 12:00 am