Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಜೊತೆ ಇರುವೆಯಾ ಗೆಳತಿ.

ಕಷ್ಟಕಷ್ಟಗಳ ಕಾರ್ಮೋಡ ಹರಿದಾವ
ಸುಖಗಳು ಆ ಮೋಡದಲಿ ಮುಚ್ಚ್ಯಾವ
ಭಾವನೆಗಳಿಗೆ ತೆರೆಎಳೆದಾವ
ಆಸೆಗಳು ಕಮರಿ ಹೊಗ್ಯಾವ ಬದುಕುವ ಆಸೆಗಳು ಕೈ ಬಿಟ್ಟಾವ
ನಿನಾದರು ನನ್ನ ಜೊತೆ ಇರುವೆಯಾ ಗೆಳತಿ. ?

- ಅನಂತನಾಗ ಚಿತ್ತಾಪೂರ ಕಲಬುರಗಿ

14 Aug 2016, 11:31 pm

ನನ್ನ ನಿಂಗಿಗೇ......

ಕಾಮದ ರಸ ಹಿಂಗಿ ಮೋಹದ ಸದ್ದಡಗಿ
ಇನ್ನೂ ನಿನಗೆ ನಾ ಬೇಕೆಂದರೆ ಅದುವೇ
ಪ್ರೇಮ ಕಣೇ ನಿಂಗಿ!!!

- ಕೊಟ್ರೇಶ T A M

14 Aug 2016, 08:52 pm

ವೃದ್ಧಾಶ್ರಮ

ಮಗುವನು 'ಡೇ-ಕೇರ್' ವಶಕ್ಕೊಪ್ಪಿಸಿ
ಹೆತ್ತವರು ಪಡೆದರು ಆರಾಮ।
ಸೀಟು ಕಾದಿರಿಸಿ ಎದುರು ನೋಡುತಿದೆ
ಇವರಿಗಾಗಿ " ವೃದ್ಧಾಶ್ರಮ"।।

- ಮಲ್ಲಿಭಾಗವತ್ ಗುಡಿಬಂಡೆ

14 Aug 2016, 08:06 pm

"ಜೀವನ"

"ಜೀವನ"

ಅಮ್ಮನಿಂದ ಶುರುವಾದ-ಬದುಕಿನಾಟ
ಗೆಳೆಯರೊಂದಿಗೆ-ಆಟ/ತುಂಟಾಟ
ಮೇಷ್ಟ್ರುಗಳಿಂದ-ಪಾಠ
ಬೇಕು/ಬೇಡದವುಗಳ - ಚಟ
ವೃತ್ತಿ/ಪ್ರವೃತ್ತಿಗಳ - ಹುಡುಕಾಟ
ಸಾಂಸಾರಿಕ ಲೋಕದ - ಜಂಜಾಟ
ಹುಟ್ಟೋ ಮಕ್ಕಳ ಬದುಕಿಗೆ - ಪರದಾಟ
ಮಾನಸಿಕ ಭಾವನೆಗಳ -ಸಂಕಟ
ವೃದ್ಧಾಪ್ಯ ಜೀವನದ - ಹೋರಾಟ
ಕೊನೆಯ ಪಯಣಕೆ ಸಿದ್ಧವಾದ - ಚಟ್ಟ

- ಸಾಗರ್ ಸಿದ್ದು

14 Aug 2016, 06:10 pm

ಕೊಲೆಯಾದೇ ನಾ...!

ಓ ಚೆಲುವೇ
ನಿನ್ನನ್ನು ನೋಡಿ
ನಾನು ಮಾಡಿದೇ ಪ್ರೀತಿ ವಿಹಾರ
ಕೆಲವು ದಿನಗಳ ನ೦ತರ
ನಾನಾದೇ ಸಜೀವ ಸ೦ಹಾರ
ಇದಕ್ಕೆಲ ಕಾರಣ
ಆ ಚೆಲುವೇಯ ಅಣ್ಣ ಕೊಲೆಗಾರ..!

- ವಲ್ಲಭ..

14 Aug 2016, 04:04 pm

ವ್ಯಾಮೋಹವು ಸರಿಯಲ್ಲ.....

ಪ್ರೀತಿ ವಿಶ್ವಾಸಕೆ ಕೊನೆಯಿಲ್ಲ ಆಸೆ ನಂಬಿಕೆಗಳಿಗೆ ಸಾವಿಲ್ಲ......
ತಿಪ್ಪೆ ಗುಂಡಿಗಳ ವಾಸನೆಯು ಸುವಾಸನೆಯಲ್ಲ....
ತಿಪ್ಪೆಯ ಮೇಲಿರುವ ಕಾಳುಗಳನ್ನು ಹೇಕ್ಕಿ ತಿನ್ನುವ ಕೋಳಿಯ ಮೇಲಿರುವ .....
ವ್ಯಾಮೋಹವು ಸರಿಯಲ್ಲ
ಹಾಗೆನಾದರು ವ್ಯಾಮೋಹ ವಿದ್ದರು ಕೋಳಿ ಜ್ವರದ ಭಯವು ತಪ್ಪಿದಲ್ಲ.....

- ಅನಂತನಾಗ ಚಿತ್ತಾಪೂರ ಕಲಬುರಗಿ

14 Aug 2016, 12:05 am

ಕನ್ನಡ

ಹುಣ್ಣಿಮೆಯ ರಾತ್ರಿ ತಂಪು
ಕೋಗಿಲೆಯ ಧ್ವನಿ ತುಂಬಾ ಇಂಪು
ಹರಡಲಿ ಕನ್ನಡದ ಕಂಪು
ಹಚ್ಚು ನೀ ಹಣೆಗೆ ಹಳದಿ ಕೆಂಪು

- Manjunath Sangai

13 Aug 2016, 11:28 pm

ಸ್ವಾತಂತ್ರ್ಯ ದಿನ...

ಶಾಂತಿದಾತ ಗಾಂಧಿತಾತ ಜನಿಸಿದ ಪುಣ್ಯ ಭೂಮಿಯವರು ನಾವು ಭಾರತೀಯರು
ಕ್ರಾಂತಿ ವೀರ ಭಗತಸಿಂಹ ಚಂದ್ರಶೇಖರರ ತವರಿನ ಸಿರಿವಂತರು ನಾವು

ಹಿಂದು ಮುಸ್ಲಿಮ ಕ್ರೈಸ್ತರೆಲ್ಲರನು ಸಮ್ಮತಿಯಿಂದ ಕಾಣುವ ಸಹಿಶ್ನು ಭಾರತೀಯರು
ಸಹಾಯ ಹಸ್ತದಿಂದ ಬಂದ ಎಲ್ಲರನೂ ಸಂತೈಸಿದ ವಿಶಾಲ ಹ್ರುದಯದವರು ನಾವು

ಕಾರ್ಗಿಲ್ ಎಂಬ ರಣರಂಗವ ಭೇದಿಸಿ ವಿಜಯ ಪತಾಕೆ ಹಾರಿಸಿರುವ ಭಾರತೀಯರು
ಇಬ್ಬರು ನರೇಂದ್ರರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಭಾರತಾಂಬೆಯ ಪಾದದಲ್ಲಿರುವೆವು ನಾವು

ವಿಶ್ವಶಾಂತಿಯ ಮಂತ್ರ ಸಾರಿ ಶತ್ರುಗಳನ್ನು ಮಿತ್ರರಂತೆ ಪ್ರೀತಿಸುವ ಮನಸವರು ಭಾರತೀಯರು
ಜಗತ್ತಿನ ಹಿರಿಯಣ್ಣನ್ನೇ ನಮ್ಮ ಸ್ನೇಹ ಬೆಳೆಸುವಂತೆ ಬೆಳೆದು ನಿಂತಿಹೆವು ನಾವು

ಚೈನಾ ದೇಶವು ಹೆದರಿ ಭಯದಿಂದ ಜೀವಿಸುತ್ತಿರುವ ಸ್ಥಿತಿ ತಂದಿರುವ ಸೇನೆಯವರು ನಾವು ಭಾರತೀಯ ರು
ಭೂ ಜಲ ವಾಯು ಸೇನೆಯಲ್ಲಿ ಬಲಿಷ್ಟ ಶಕ್ತಿಯನ್ನು ಹೊಂದಿರುವ ಹೆಮ್ಮೆಯ ಪುತ್ರರು ನಾವು

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇರು ಸಾಧನೆಯನ್ನು ಮಾಡಿ ವಿಶ್ವಕ್ಕೆ ಮಾದರಿಯಾದ ಭಾರತೀಯರು
ಒಂದಲ್ಲ ಎರಡಲ್ಲ ಬಹುಜನ್ಮದ ಪುಣ್ಯ ಇಲ್ಲಿ ಜನಿಸಲು ನಾವು

ತುಂಬಾ ಧೈರ್ಯದಿಂದ ಕೆಚ್ಚೆದೆಯಿಂದ ಸಿಡಿಗುಂಡಿಗೆಯ ಧೈರ್ಯದಿಂದ ಹೇಳುವೆವು ನಾವು ಭಾರತೀಯರು.
ಜೈ ಹಿಂದ್

- Rahul marali

13 Aug 2016, 07:26 pm

ರೈಲೊಂದು ಓಡುತ್ತಿದೆ

ರೈಲೊಂದು ಓಡುತ್ತಿದೆ
ಹಳಿಯ ಮೇಲೆಯೇ ಅದು ಓಡುತ್ತಿದೆ ಅಂತ
ಅದರೊಳಗಿದ್ದವರು ಅಂದುಕೊಂಡಿದ್ದಾರೆ.
ಯಾಕೆಂದರೆ..
ಎಸಿ ಬೋಗಿಯಲಿ ಕುಂತವರಿಗೆ
ಕುಲುಕಾಟದ ಅರಿವಿಲ್ಲ,
ಎರಡನೇ ದರ್ಜೆಯಲಿ ಕುಂತವರಿಗೆ
ಕುಲುಕಾಟ ಹೊಸದಲ್ಲ!

ಎಸಿ ಬೋಗಿಯವರಿಗೆ
ಏನುಂಟು ಏನಿಲ್ಲ ?
ಬೇಕಾದ್ದು, ಬೇಡದ್ದು
ತಿಂದು ತೇಗಿದರೂ ತೀರದ್ದು
ಮಕ್ಕಳು ಮರಿಗೂ
ಮೊಮ್ಮಕ್ಕಳ ಸಂತಾನಕ್ಕೂ ಕರಗದ್ದು !

ಎರಡನೇ ದರ್ಜೆಯವರಿಗೆ
ಒಂದುಂಟು ಒಂದಿಲ್ಲ,
ಕಾಲಿಗೆಳೆದರೆ ತಲೆಗಿಲ್ಲ,
ತಲೆಗೆಳೆದರೆ ಕಾಲಿಗಿಲ್ಲ,
ಕೆಲವರಿಗಂತೂ ಕಾಲು
ಚಾಚಲು ಚಾಪೆಯೇ ಇಲ್ಲ
"ಚಾಪೆ ಇದ್ದಷ್ಟೇ ಕಾಲು ಚಾಚು"
ಎಂಬ ಎಸಿ ಬೋಗಿಯವರ ಉಪನ್ಯಾಸ ನಿಂತಿಲ್ಲ.

ಎಸಿ ಬೋಗಿಯವರಿಗೆ,
ಹೊರ ಗಾಳಿಯ ಹಂಗಿಲ್ಲ
ಬಿಸಿಲ್ಗಾಳಿಯ ಸುಳಿವಿಲ್ಲ
ತಂಗಾಳಿಯ ಅರಿವಿಲ್ಲ
ಒಬ್ಬರ ಉಸಿರ ವಿಷ ಮತ್ತೊಬ್ಬರು ಕುಡಿಯುತ್ತ
ವಿಷಜಂತುಗಳಂತೆ ಬದುಕುತ್ತಿಹರೆಲ್ಲ..

ಎರಡನೇ ದರ್ಜೆಯವರಿಗೆ,
ಸುಡುವ ಬಿಸಿಲುಂಟು,
ತೊಯ್ಸುವ ಮಳೆಯುಂಟು
ಆದರೂ ಬಡತನಕೂ ಇವರಿಗೂ ಬಾರೀ ನಂಟು

ಎಸಿ ಬೋಗಿಯೊಳಗೆ
ಎರಡನೇ ದರ್ಜೇಯವರಿಗೆ ಅವಕಾಶವಿಲ್ಲ
ತಲೆ ಹೊಡೆದು ಮೇಲೆ ಬಂದ ಎಸಿ ಜನರೂ
ಹೇಳುತ್ತಿದ್ದಾರೆ.. "ಕಷ್ಟ ಪಟ್ಟು ಮೇಲೆ ಬನ್ನಿ"
ಕಷ್ಟ ಪಟ್ಟು ಮೇಲೆ ಬಂದ ಒಂದಿಬ್ಬರಿಗೆ
ಎರಡನೇ ದರ್ಜೆಯ ನೆನಪಿಲ್ಲ,
ಏಕೆಂದರೆ ಎಸಿ ಗಾಳಿ
ಮರೆಸುವುದು ಹಳೆಯದನೆಲ್ಲ.

"ಕಷ್ಟ ಪಟ್ಟರೆ ಕೈಲಾಸ"
ಇದು ಎಸಿ ಬೋಗಿಯವರ ಉವಾಚ
ನಿಲ್ಲಲೂ ಕಷ್ಟವಿರುವ
ಎರಡನೇ ದರ್ಜೆಯಲಿ
ಕಷ್ಟಗಳಿಗಿಲ್ಲ ಕಿಂಚಿತ್ತೂ ಸಂಕೋಚ !

- ಶ್ರೀಗೋ.

13 Aug 2016, 10:31 am

ಮೋಹ

ಅವಳು ನೋಡದಿದ್ದರೆ,
ನಾನು ಮೋಹಿತನಾಗುತಿರಲಿಲ್ಲ
ಅವಳು ನಗದಿದ್ದರೆ
ನಾನು ಹುಚ್ಚ ಪ್ರೇಮಿ ಆಗುತಿರಲಿಲ್ಲ
ಅವಳು ನಾ ನಿನ್ನ ಪ್ರೀತಿಸುವೆ ಎನ್ನದಿದ್ದರೆ
ನಾನು ನಿನ್ನ ಬಿಡಲಾರೆ ಎನ್ನುತಿರಲಿಲ್ಲ
ಅವಳು ಈ ಹೃದಯ ನಿನಗಾಗಿಯೇ ಎನ್ನದಿದ್ದರೆ
ನಾನು ನಿನ್ನ ಮರೆಯಲಾರೆ ಎನ್ನುತಿದ್ದೆ
ಆದರೀಗ ನನಗೂ ಅವಳಿಗೂ ನಾನೊಂದು ತೀರಾ
ನೀನೊಂದು ತೀರವಾಗಿ ಬಾಡದ ಹೂವಾಗಿದೆ

- gtr

12 Aug 2016, 11:52 am