ಮನಸ್ಸಿಗೆ ತುಂಬಾ ನೋವಾದಾಗ ಹೇಳಿಕಳ್ಳುವುದಕ್ಕೆ ಒಂದೊಳ್ಳೇ ಸ್ನೇಹಿತರಿರಬೇಕು ಆಗ ಸಾಯುವಂತ ನೋವಿದ್ದರೂ ಅದು ನೋವು ಎನಿಸುವುದಿಲ್ಲ
ನಾವು ಒಂಟಿ ಇದ್ದಾಗ ನಮ್ಮ ದುಖಃವನ್ನು ಯಾರು ನಮ್ಮ ನೋವನ್ನು ಹಂಚಿಕೊಳ್ಳದೇ ಇದ್ದಾಗ ಆಗುವ ನೋವು ದುಖಃ ಸಂಕಟ ಸಾವಿನ ಮನೆ ಬಾಗಿಲು ತಟ್ಟಿಸುತ್ತದೆ.
(ಮನುಷ್ಯನಿಗೆ ತುಂಬಾ ಮನಸಿಗೆ ನೋವು.ದುಖಃ.ಸಂಕಟ. ಆದಾಗ ಜೀವನವೇ ನಶ್ವರ ಎಂಬುದು ನೆನಪಾಗುವುದು).
ಜಗತ್ತು ವಿಶಾಲವಾಗಿದೆ. ಹೃದಯವನ್ನೂ
ವಿಶಾಲವಾಗಿಸಿಕೊಂಡರೆ, ಇಡೀ
ಜಗತ್ತನ್ನೇ ಹೃದಯದಲ್ಲಿ ತುಂಬಿಕೊಳ್ಳಬಹುದು.
*ನಾ ಒಲ್ಲೆ!* ಎಂದರೆ ಏನು ಮಾಡುವುದು?
ನಮ್ಮ ಹೃದಯಗಳು ಹೊರ ಪ್ರಪಂಚಕ್ಕೆ
ಮಿಡಿಯುವಂತಾ ಮೆತ್ತನೆಯ
ಚೆಂಡುಕಗಳಾಗಬೇಕು.
*ಸ್ಪಂದನೆಯೇ ಇಲ್ಲದ ಕಲ್ಲಾಗಬಾರದು.*
ಕಾಣಿಸದೆ ಇರುವುದನ್ನು ನಂಬಿ ಕುರುಡರಾದಿರೆನಯ್ಯಾ
ಕಾಣಿಸಿದ ದೇವರನ್ನು ಹೋರ ಹಾಕಿದರಲ್ಲಯ್ಯಾ
ಹುಡುಕಿ ಹುಡುಕಿ ದಣಿವಾಯಿತ್ತದಯ್ಯಾ
ಆದರೂ ನಿಮಗೆ ಸಿಗನು ಆ ದೇವರಯ್ಯಾ
ಕಾಣಿಸಿದ ದೇವರಿಗೆ ಕೈ ಮುಗಿರಯ್ಯಾ
ತಂದೆ-ತಾಯಿಯೇ ಆ ದೇವರಯ್ಯಾ
ಅವರ ಸೇವೆಯೆ ದೇವರ ಸೇವೆಯಯ್ಯಾ
ಇದನ್ನು ಅರಿಯದಿರುವ ನೀನು ಎಂತಾ ಮನುಜನಯ್ಯಾ
ಓ ಒಲವೇ ನನ್ನ ಒಲವೇ ಎಲ್ಲಿರುವೆ ಹೆಗೀರುವೆ
ಈ ಹೃದಯ ಪ್ರತಿ ಕ್ಷಣವೂ ನೀನನ್ನ ನೆನೆಯುತ್ತಿದೆ
ಕತ್ತಲೆಯಾ ದಾರಿಯಲ್ಲಿ ನಾ ನಡೆಯುವಾಗ ನೀ ಬಾರೆ ಚಂದ್ರನಾಗಿ
ಬೀಸಿಲಲ್ಲಿ ನಾ ಇರುವಾಗ ನೀ ಬಾರೆ ನೆರಳಾಗಿ....
ಪ್ರತಿ ದಿನ ಪ್ರತಿ ಕ್ಷಣ ಈ ಮನವು ನೀ ಬರುವೆ ಎಂದು ಕಾಯುತ್ತಿದೆ....