ಕೈಯಲ್ಲಿ ಎಣ್ಣೆ ಕ್ಯಾನ್ ಹಿಡಿದು
ಅಮ್ಮ ಇಟ್ಟ ದೀಪಗಳ ಕಡೆಗೆ ನಡೆದು
ಬತ್ತಿ ಸರಿಮಾಡಿ ಎಣ್ಣೆ ಸುರಿದು
ದೀಪ ಹಚ್ಚಿದ ನೆನಪು…
ಅಪ್ಪ ಮನೆಯ ಹೊರಗೆ
ಬಲ್ಬಿನ ದೀಪದ ಮಾಲೆಯ ಹಚ್ಚಿ
‘ನೋಡೋ ಹೆಂಗೆ‘ ಅಂದಾಕ್ಷಣ
‘ಎಲ್ಲ ಸೂಪರ್, ಆದರೆ ಇನ್ನೊಂದು
ಲೈನ್ ಹಾಕಬೇಕಿತ್ತು‘ ಅಂತಿದ್ದೆ
ಅಪ್ಪನ ಬಳಿ ಹತ್ತು ರೂಪಾಯಿ
ಅಮ್ಮನ ಹತ್ತಿರ ಐದು ರೂಪಾಯಿ
ಅತ್ತು ಕರೆದು ಪೀಕುತ್ತಿದ್ದೆ
ಎದ್ದು ಬಿದ್ದು ಅಂಗಡಿಗೆ
ಓಡಿದ ನೆನಪು
ಕೈಯಲ್ಲಿ ತರಚಿದ ಗಾಯದ ಕುರುಹು…
ಚಿನಕುರುಳಿ, ರಾಕೆಟ್ ಹಿಡಿದು ಆಡಿದ ನೆನಪು
ತಮ್ಮನ ರಾಕೆಟ್ ಎಗರಿಸಿ ಹಾರಿಸಿದ್ದು
ಅದು ಯಾರದೋ ಬೆನ್ನಿಗೆ ಗುದ್ದಿದ್ದು
ನಂತರ ಹೊಡೆದಾಟ…
ಇಂದು ತರಹೇವರಿ ಪಟಾಕಿಯುಂಟು
ಹಬ್ಬಕೆ ಹೋಗುವ ಆಸೆಯೂ ಉಂಟು
ಹಣಕ್ಕೆ ಅಪ್ಪನ ಕೇಳುವ ಹಾಗಿಲ್ಲ
ಬೇಡುತಲಿರುವೆನು ದೇವರ, ಕಂಪನಿ ನನಗೆ
ನಾಲ್ಕು ದಿನ ರಜೆ ನೀಡಲಿ ಎಂದು...
ನೀನಿಲ್ಲದಿದ್ದರೂ ನಿನ್ನ ಪ್ರೀತಿ ಜೊತೆಗೆ ಇರಬೇಕು ಎಂದು ಆಶಿಸುವೆ....
ನಾನು ಎಲ್ಲಿದ್ದರು ಹೇಗಿದ್ದರು ಎಂದಿಗೂ ನಿನ್ನ ಪ್ರೀತಿಯು ಜೊತೆಗಿರಬೆಕೆಂದು ಬಯಸುವೆ..
ಈ ಜನ್ಮದಲ್ಲಿ ನೀನು ಸಿಗದಿದ್ದರೂ ಆ ನಿನ್ನ ಸುಂದರ ನೆನಪುಗಳು ಪ್ರತಿ ಹೆಜ್ಜೆ ಹೆಜ್ಜೆಗೂ ಸವಿಯುವೆ..
ಈ ಲೋಕ ನಿನ್ನ ಕಳೆದುಕೊಂಡರು
ಈ ಲೋಕ ನಿನ್ನ ಮರೆತರೂ
ಈ ಲೋಕ ನಿನ್ನ ತೂರೆದರೂ
ನನ್ನ ಹೃದಯದಲ್ಲಿ ನೀನು ಇನ್ನೂ ಬದುಕಿರುವೆ.... ಇಂತೀ ನಿನ್ನ ಸದಾ ಪ್ರೀತ್ಸೋನು -ರಾಜ್.ಭೂಮಿ
ಹೇಳೇ ಹುಡುಗಿ ನೀ ಯಾರು?
ನಿನ್ನ ನಯನ ಕಂಡು ನಾನು ಮಾರು ಹೋದೆನು
ನಿನ್ನ ತುಂಟಾಟ ಕಂಡು ಮೌನಿ ಯಾದೆನು
ಎಂದೂ ಕಾಣದ ನಗೆಯ ಇಂದು ಕಂಡೆನು
ನಿನ್ನ ಹೃದಯ ಜೈಲಿನಲ್ಲಿ ಬಂದಿಯಾದೆನು
ಹೇಳೇ ಹುಡುಗಿ ನೀ ಯಾರು?
ಸೂರ್ಯನ ನಗುವಿನಲ್ಲಿ ನಿನ್ನ ನಾ ಕಂಡೆನು
ಚಂದ್ರನ ಬಿಂಬದಲ್ಲಿ ನಿನ್ನ ಕಂಡೆನು
ದೇವರ ತೆರಿನಲ್ಲೂ ನಿನ್ನ ನಾ ಕಂಡೆನು
ನೀರಿನ ಅಲೆಯಲ್ಲೂ ಕಂಡೆ ನಿನ್ನನು
ಹೇಳೇ ಹುಡುಗಿ ನೀ ಯಾರು?
ನವಿಲಿನ ನಾಟ್ಯದಲ್ಲಿ ನಿನ್ನ ನಾ ಕಂಡೆನು
ಹಂಸದ ನಡುಗೆಯಲ್ಲಿ ನಿನ್ನ ಕಂಡೆನು
ಜಿಂಕೆಯ ಓಟದಲ್ಲಿ ನಿನ್ನ ನಾ ಕಂಡೆನು
ಮೊಲದ ಮುಗ್ದತೆಯಲ್ಲಿ ನಿನ್ನ ಕಂಡೆನು
ಹೇಳೇ ಹುಡುಗಿ ನೀ ಯಾರು?
ಜೇನಿನ ಹನಿಯಂತಹ ಪ್ರೀತಿಯ ಮಾತಲ್ಲಿ;
ಚಂದಿರನ ಮುಖ ಕಾಂತಿಯ ನಗುವಲ್ಲಿ ,
ಕಮಲನಯನ ಕನ್ನಿಕೆಯ ಚೆಲುವಲ್ಲಿ !
ಕಾಡುತಿಹ ಮೋಹಿನಿಯ ಮಾಟದ ಸೆಳೆತದಲ್ಲಿ ,
ನೆನಪುಗಳು ಸಾಗುತಿವೆ ನಾಕಂಡ ಅಪರೂಪದ ಸೌಂದರ್ಯರಾಶಿಯ ನೆನಪಲ್ಲಿ,
ಈ ನಿಮ್ಮ ಪ್ರೀತಿಯ ವೇಣು ಆರ್ ಚಿನ್ನದೂರ ಕವನದಲ್ಲಿ.