Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೃದಯ ಗೀತೆ

ಎದೆಯ ತಾಣದಿ ಮಿಡಿದ ನಾದವು
ಹೃದಯ ಗೀತೆಯ ಹಾಡಿದೆ!!

ಉದಯ ರಾಗದ ರವಿಯ ಬೆಳಕಲಿ
ಒಲವು ಮೈ ಮನ ಮರೆತಿದೆ!!

ನೂರು ಕನಸನು ಹಾಡುತ
ನೂರು ನೆನಪದು ಮೂಡಿದೆ!!

ಒಲಿಯ ಬೇಕಿದೆ ಒಲವ ಹೂ ನಗೆ
ಕಂಡು ನನ್ನ ನಲಿಯುತ!!

ರಾಗದಲ್ಲಿ ತಾಳ‌ ಮೇಳ
ಶೃತಿಯ ನಾದವ ಹರಿಸುತ!!

ಬಂದು ನನ್ನ ಸೇರುತ
ಹೃದಯ ಗೀತೆಯ ಹಾಡುತ!!

- ಪಿ.ಜಿ.ಜ್ಯೋತಿ

21 Oct 2016, 01:38 pm

ಪ್ರೀತಿಯೆಂಬುದು ಕಾಯಿಲೆ?

ಪ್ರೀತಿಯೆಂಬುದು ಹುಡುಗರಿಗೆ ಕಾಯಿಲೆ,
ಕೆಲವರಿಗೆ ಅದು ದುರಾಹಂಕಾರದ ಛಾಯೆ!
ಹುಡುಗರ ಎದೆಯಲಿ ಗೋರಿ ಕಟ್ಟುವ ಮಾಯೆ;
ನಂಬಿ ಕೆಟ್ಟೆನಲ್ಲಾ ಎನ್ನುವ ಹುಡುಗರ ಕಣ್ಣೀರ ಸಾಲೆ..
ಈ ಪ್ರೀತಿ ಮಾತಿಗೆ ಮರುಳಾಗುತ್ತಾಳೆ ಈ ಕವನ ಓದುವ ಬಾಲೆ!

- ವೇಣು ಆರ್ ಚಿನ್ನದೂರು

20 Oct 2016, 11:16 pm

ಜೀವನ- !

ಒತ್ತಡವಿಲ್ಲದ ಉದ್ಯೋಗವಿಲ್ಲವಯ್ಯ,
ನಷ್ಟವಿಲ್ಲದ ವ್ಯಾಪಾರವಿಲ್ಲವಯ್ಯ,
ಕಷ್ಟವಿಲ್ಲದ ವ್ಯವಸಾಯವಿಲ್ಲವಯ್ಯ,
ನೋವಿಲ್ಲದ ಸಂಸಾರವಿಲ್ಲವಯ್ಯ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲವಯ್ಯ,
ಇವೆಲ್ಲವನ್ನು ಜಯಿಸಿದರೆನೇ
"ಜೀವನ".ಕಣಯ್ಯ!

- ವೇಣು ಆರ್ ಚಿನ್ನದೂರು

20 Oct 2016, 10:49 pm

ಕಣ್ಣಲ್ಲೇ ಬಿಡಿಸು..

ಕನಸಿನ ಕಂತೆ
ಮನಸಲ್ಲೇ ನಡೆಸು
ನೆನಪಿನ ಸಂತೆ..

ಈ ಜೀವಕ್ಕೀಗ
ಬರೀ ನಿನ್ನದೆ ಚಿಂತೆ
ನಿನ್ನಲ್ಲಿಯೂ ಈಗ
ಸವಿಭಾವ ಬಂತೆ.

ಅನುರಾಗ ಬಂದಿದೆ
ಅಲೆಮಾರಿ ಹೃದಯಕೆ
ಅನುವಾದ ಬೇಕಿದೆ
ಅನುಭಂಧದ ಅನುಭವಕೆ..

ನಗುವ ಹೂವಿಗೊಂದು
ನಿನ್ನ ಹೆಸರಿಡಬೇಕಿದೆ
ಕರೆವ ಕೊರಳಿಗೊಂದು
ನಿನ್ನ ಉಸಿರುಬೇಕಿದೆ..

- Halesh S

20 Oct 2016, 06:50 pm

ನಾ ಹೋಗುತಿದ್ದ ರಸ್ತೆಯಲ್ಲಿ ನ

ನಾ ಹೋಗುತಿದ್ದ ರಸ್ತೆಯಲ್ಲಿ ನೀನೇಕೆ ಬಂದೆ.....
**********************************

ನನ್ನ ಹಿಂದೆ ಮುಂದೆ ನಾ ಬೇಡವೆಂದರೂಬಂದೆ

ಅವಸರವಸರವಾಗಿದ್ದರುನೂ ನೀ ನನ್ನ ಬಿಡದೆ ಬಂದೆ

ಬರಬೇಡೆನ್ನ ಜೊತೆಗೂಡಿ ಎಂದರು ಓಡೋಡಿ ಬಂದೆ

ಉರಿಬಿಸಿಲ ತಾಳದೆ ನಾನೊಮ್ಮೆ ನಿನ್ನ ನೋಡಿದೆ.....


ಹೇಳಿದರು ಕೇಳದೆ ನೀ ಬಿಡಲಿಲ್ಲ ನನ್ನನು ಆ ಉರಿಬಿಸಿಲಲಿ

ರೂಪವಿಲ್ಲದ ನಿನ್ನ ರೂಪವನ್ನು ಹೇಗೆ ಗುರುತು ಹಿಡಿಯಲಿ

ರೂಪವಿಲ್ಲದ ನಿನ್ನ ನಾನು ನನ್ನ ನೆರಳೆಂದು ಹೇಗೆ ನಂಬಲಿ

ನಿನ್ನ ರೂಪವನ್ನು ತಿಳಿಯಲು ನಾನ್ಯಾವ ಕಾರ್ಯ ಮಾಡಲಿ......


ನೀ ಬಂದರೆ ಬೆಳಕಲ್ಲಿ ಕಪ್ಪಾಗಿ...

ನಂಬುವೆನುನ ಎನ್ನ ನೆರಳೆಂದು

ನೀ ಬಂದರೆ ಕತ್ತಲಲ್ಲಿ ಬಿಳುಪಾಗಿ..

ನಾ ಹೇಗೆ ನಂಬಲಿ ನೀ ಎನ್ನ ನೆರಳೆಂದು...

- Halesh S

20 Oct 2016, 06:17 pm

ಪರಾಗ ಸ್ಪರ್ಷ

ಹೂವೊಂದು ನುಡಿಸಿತು ವೀಣೆ
ಮಕರಂದ ಚಿಮ್ಮುತ ತಾನೆ
ಮೃದಂಗ ನುಡಿಸಿ ಪತಂಗ
ಮಧು ಹೀರಿ ನಲಿಯಿತು ಆಗ
ಆಗ ಪರಾಗ ಸ್ಪರ್ಷ ರಾಗ !!

ಚಿಗುರೊಡೆವ ಹೂವಿನ ಗಿಡಕೆ
ತಂದಂತೆ ಚಿಗುರ ವಸಂತ
ಸೂಸಿ ಎಲ್ಲೆಲ್ಲೂ ಹಸಿರ ನಗೆ
ಚೈತ್ರ ನವ ಚೈತ್ರ ವನಸಿರಿಗೆ
ಹಸಿರ ಈ ಬಸಿರ ವಲವ ನಗೆ !!

ರತಿ ದೇವಿ ಕಾದಿರುವಾಗ
ತಂದಂತ ಮನ್ಮತ ರಾಗ
ರಾಗ ಅನುರಾಗ ತನುಗೀಗ
ತನುವೆರಡು ಬೆಸೆದಿರಲು ನವರಾಗ
ನವಮಾಸ ಕಳೆದಾಗ ಶುಭಯೋಗ!!

- ಪಿ.ಜಿ.ಜ್ಯೋತಿ

20 Oct 2016, 04:13 pm

ಅವಳ ಕನಸು

ರಾತ್ರಿಯಾದರೆ ಅವಳು ಕನಸಲಿ
ಮೋಹಗೊಂಡೆನು ನಾನು ಇರುಳಲಿ!!
ಕಣ್ಣ ಬಿಟ್ಟರೆ ನನ್ನ ಎದುರಲಿ
ಬೆಳಕ ಚೆಲ್ಲುವ ಹಣತೆ ಕೈಯಲಿ!!

ಬೆಚ್ಚಿ ಕುಳಿತರೆ ಭ್ರಮೆಯು ನನ್ನಲಿ
ಮೆಚ್ಚಿದಾಕೆಯ ನೆನಪು ಮನದಲಿ!!
ರೆಪ್ಪೆ ಮುಚ್ಚಲು ಕಣ್ಣ ಒಳಗಡೆ
ಬಂದೆ ಬಿಟ್ಟಳು ಮತ್ತೆ ಕನಸಲಿ!!

ದೂರದಲ್ಲಿ ಯಾರೋ ನಿಂತು
ಕೈಯ ಬೀಸಿ ಕರೆದು ಸೊಗಸಲಿ!!
ಇರಿಸು ಮುರಿಸು ಮತ್ತೆ ಮನಸಲಿ
ಕಂಡೆ ಕನಸ ನಾನು ಹಗಲಲಿ !!

ಎದೆಯ ಒಳಗೆ ಮಿಡಿವ ಹೃದಯವು
ನೆಗೆದು ಹಾರಿದೆ ಹುಚ್ಚು ಕನಸಲಿ!!
ಸದ್ದು ಮಾಡದೆ ಎದ್ದು ಓಡಿದೆ
ಎತ್ತ ತಿಳಿಯದೆ ಮತ್ತೆ ಕನಸಲಿ!!

- ಪಿ.ಜಿ.ಜ್ಯೋತಿ

20 Oct 2016, 03:35 pm

ನಮ್ಮ ಜಗತ್ತು

ನಗರೀಕರಣದ ನೆಪದಲ್ಲಿ ಅರಣ್ಯನಾಶ
ಪ್ರಾಣಿ ಪಕ್ಷಿಗಳು ಆಗುತ್ತಿವೆ ಸರ್ವನಾಶ
ಜಾಗತೀಕರಣದ ನೆಪದಲ್ಲಿ ಲೋಕನಾಶ
ಪ್ರಮುಖ ಕಾರಣವೇ ಮಾನವನ ಸಂತೋಷ
ಇನ್ನೇನು ಉಳಿದೀತು ಈ ಪರಪಂಚ
ಎಲ್ಲವೂ ಸೇರುತಿವೆ ಅಳಿವಿನ ಅಂಚ
ಏರಲಾರೆವು ಉಳಿಗಾಲದ ಮಂಚ
ಏರುತಿವೆ ಸುನಾಮಿ,ಬೀಸುತಿವೆ ಚಂಡಮಾರುತ
ಕಾಡುತಿದೆ ಬರಗಾಲ, ನಮಗಿಲ್ಲ ಇನ್ನು ಉಳಿಗಾಲ
ಸಾಕು ಸಾಕು ಹೇಳಲಿ ಏನಂತ, ಇವು ಸಾರುತಿವೆ ಮನುಕುಲದ ಅಂತ್ಯ.
- ಮನ್ವಂತರಿ

- sarpa

20 Oct 2016, 12:13 pm

ಕಂಬನಿ

ಕಣ್ಣಿನಲ್ಲಿ ಜನಿಸಿ
ರೆಪ್ಪೆಯಿಂದ ಜಿನುಗಿ
ಕೆನ್ನೆ ಮೇಲೆ ಹರಿವ ಕಂಬನಿ
ಮರಳಿ ಕಣ್ಣ ಸೇರದು!!

ರೆಪ್ಪೆ ಮುಚ್ಚಿಕೊಂಡರೂನು
ಮನದ ನೋವ ಮರೆಯದು
ಕಣ್ಣಿನಿಂದ ಹರಿವುದು
ಮರಳಿ ಕಣ್ಣ ಸೇರದು!!

ಬಾರಿ ಬಾರಿ ಜಾರಿ ಜಾರಿ
ಸಾಲು ಸಾಲು ಹನಿಗಳು
ಉಸಿರುಗಟ್ಟ ಅತ್ತ ಮೇಲು
ತೀರದಂತಾ ಮಣಿಗಳು!!

ಕಣ್ಣ ಬಿಂದು ಜಾರಿ ಬಂದು
ಮೂಡಿದಂತ ಇಬ್ಬನಿ!!
ಕಣ್ಣ ಕೊಳದಲಿ ಉಕ್ಕಿ ಹರಿವ
ಭಾವಗಂಗೆ ಈ ಕಂಬನಿ!!

- ಪಿ.ಜಿ.ಜ್ಯೋತಿ

19 Oct 2016, 01:49 pm

ನಲ್ಲೆ

ಹೇಳದೇ ನೀನು ಹೋಗುವುದೆಲ್ಲಿ
ಕೇಳಿದ ಮೇಲೂ ಹೇಳಲು ಒಲ್ಲೆ!!
ಕಾಣದೇ ನೀನು ಹೋದರೆ ನಲ್ಲೆ
ಹುಡುಕಲು ನಾನು ಹೋಗುವುದೆಲ್ಲಿ!!

ಹೂವಿನ ಗಿಡಕೆ ಮುಳ್ಳಿನ ಬೇಲಿ
ಇಲ್ಲದೇ ಹೋದರೆ ವೈರಿಯ ದಾಳಿ!!
ಹೆಣ್ಣಿನ ಜನುಮಕೆ ಗಂಡಿನ ಆಸರೆ
ಇಲ್ಲದೇ ಹೋದರೆ ಬದುಕಲಿ ಗೇಲಿ!!

ಪ್ರೇಮದಿ ನಾನು ಕಾದಿರುವಾಗ
ಬಿಂಕದಿ ನೀನು ಸಾಗುವುದೇಕೆ!!
ಮನಸಿನ ಮಾತು ಹೇಳಿದ ಮೇಲು
ಮೌನದ ಉತ್ತರ ನೀಡುವುದೇಕೆ!!

ಕಂಡರು ಕಾಣದ ದೂರವು ಸಾಕು
ಬಂದರು ಬಾರದ ವಿರಹವು ಸಾಕು!!
ಬಳ್ಳಿಗೆ ಆಸರೆ ಮರವಾದಂತೆ
ನಿನ್ನೊಲವಿಗೆ ಆಸರೆ ನಾನಾಗಿರುವೆ!!

- ಪಿ.ಜಿ.ಜ್ಯೋತಿ

19 Oct 2016, 11:19 am