ನನ್ನದೊಂದು ಪುಟ್ಟ ಹೃದಯ
ಅದರೊಳಗೆ ದೊಡ್ಡ ದೊಡ್ಡ ಕನಸುಗಳು,
ಆ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿಸಿರುವೆ.
ನನ್ನ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವೆ.
ನನ್ನ ಇಷ್ಟ ಕಷ್ಟಗಳನ್ನು ನಿನ್ನಮೇಲೆ ಹೇರಿರುವೆ.
ವರ್ಷಗಳು ಉರುಳಿದಂತೆ ನಮ್ಮಿಬ್ಬರ ಬಂಧ
ಬಿಗಿಯಾಗುತ್ತಿರಲೆಂದು ಆಶಿಸುವೆ.........
ಸ್ನೇಹ ಎಂದರೆ ಯಾವಾಗಲೂ
ನಮ್ಮ ಕಾಲುಗಳಂತಿರಬೇಕು.
ಯಾವ ಕಾಲು ಮುಂದೆ ಹೋಗಲಿ,
ಅಥವಾ ಯಾವ ಕಾಲು ಹಿಂದೆ ಉಳಿಯಲಿ,
ಸಂಬಂಧದಲ್ಲಿ ಎಂದಿಗೂ
ಅಂತರ ಬರಬಾರದು, ಹೊಂದಾಣಿಕೆ
ಅಳಿಯದೆಯೇ ಉಳಿಯಬೇಕು...!!
ಜೊತೆಗೂಡಿ ಮುಂದೆ ಸಾಗುವ
ಗುರಿಯೊಂದೇ ಪ್ರಬಲವಾಗಿರಬೇಕು...!!
ಎಮ್.ಎಸ್.ಭೋವಿ...✍️
.
..
...
....
ಕೆಚ್ಚೆದೆಯ ವೀರರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ
ಕಂಬನಿಯ ಮಿಡಿದರು
ಜೋರು ಬೊಬ್ಬಿತ್ತರು
ಬಿಲ್ಲನ್ನು ಎತ್ತಿದರು
ಬಾಣವನ್ನು ಬಿಟ್ಟರು
ಬ್ರಿಟಿಷರ ವಿರುದ್ಧ ಹೋರಾಡಿದರು
ಸೆರೆಮನೆ ಅನುಭವಿಸಿದರು
ಬಂದೂಕ ಎತ್ತಿದರು
ಕ್ರಾಂತಿಕಾರಿ ಗಳಾದರು
ಪ್ರಾಣ ತ್ಯಾಗ ಮಾಡಿದರು
ನಮಗೆ ಸ್ವತಂತ್ರ ತಂದು ಕೊಟ್ಟರು
ಅವರನ್ನು ಮತ್ತೆ ಮಗು ನೀ ನೆನಪಿಗೆ ತರು
ಮರೆಯಬೇಡ ಅವರ ಚಿನ್ನ ವಜ್ರ ಕಿಂತಲೂ ಹೆಚ್ಚು ಅವರು
ಬೆಂಕಿ ತಾಗಿಸಿಕೊಂಡು ದೀಪ ಕಿಚ್ಚಿಗೆ ಅಂಜಿದೆಂದೆಂತಯ್ಯ
ಅಂತಾದರೆ ಊರ ಬೆಳಗುವವರಾರು?
ಶಾಖಕೆ ಅಂಜಿ ಸೂರ್ಯ ಅತ್ತರೆ
ಲೋಕ ಬೆಳಗುವವರಾರು.?
ಚಳಿ ತಾಳದೆ ಶಶಿಯೆ ಕಂಬನಿ ಮಿಡಿದು ಬಿಟ್ಟರೆ
ತಾರೆಗಳಿಗೆ ಜೊತೆಗಾರರು ಯಾರು
ನನ್ನ ತಪ್ಪಾ ಕಂಡು ನನ್ನ ನೀನು ಕೈ ಬಿಟ್ಟರೆ
ನನ್ನ ಮನವ ಬೇಳಗುವವರರು ದೇವ?
ಬುದ್ಧಿವಂತಿಕೆ ಯಲ್ಲಿ ಶಶಿಯಲ್ಲಿ ಪಾದವಿತ್ತು
ಸಮುದ್ರ ರಾಜನ ಭೇದಿಸಿ ಪಳೆಯುಳಿಕೆ ಪಡೆದ
ವಾಯುವನ್ನು ಬಂಧಿಸಿ ಅಡುಗೆ ಮಾಡಿದ
ವರುಣನ ಕಲುಷಿತ ಮಾಡಿದ
ಆಧುನಿಕ ಮಾನವ ಮತ್ತೆ ಏಕೆ ಎನಿಸುವೆ ಆ ಸತ್ಯಾಯುಗದಕತೆಯನ್ನ
ಇದ್ದರೆ ನೀನು ಅಲ್ಲಿ ನಿರ್ಮಿಸುತ್ತಿದೆ
ಮತ್ತೊಂದು ಕಲಿಯುಗವ ನ್ನು ನನ್ನಾತ್ಮಾ ಲಿಂಗ
ನೀನೊಂದು ಮಹಿಮೆ
ನಿನ್ನ ದಯೆ ನನ್ನ ಹಿರಿಮೆ
ಬಾಳು ನೀ ಕೊಟ್ಟ ಭಿಕ್ಷೆ
ನೀನೆ ನನಗೆ ರಕ್ಷೆ
ಕಾರ್ಯ ಕಾರಣಗಳು ಬೇಡ ನಿನ್ನ ನಂಬಲು
ನೀನೊಬ್ಬ ಸಾಕು ಈ ಜೀವನ ಸಂಪೂರ್ಣವಾಗಲು..
ಕಣ್ಣಂಚಲ್ಲಿ ನೀರು ತಂದವರು ಸಾವಿರ ಜನ
ಕಣ್ಣೊರೆಸಿದ ದೈವ ನೀನು ಮಾತ್ರ
ಧೈರ್ಯ ತುಂಬಿದ ಗುರುವು ನೀನು
ಬದುಕುವ ಛಲ ಹುಟ್ಟಿಸಿದ ತಂದೆ ನೀನು
ಆತ್ಮ ಸ್ಥೈರ್ಯವ ತುಂಬಿದವನು ನೀನು
ಆತ್ಮ ತೃಪ್ತಿಯಂತೆ ಬದುಕುತ್ತಿರುವವಳು ನಾನು..
ನನ್ನ ನೋವನ್ನು ಕಂಡು ಕಾಡದಂತೆ ನಡೆದವರೆ ಹೆಚ್ಚು
ಸ್ವಾರ್ಥ ಜನರ ಸಂತೆಯಲಿ ನನ್ನ ದೂರಿದವರು ಮತ್ತೊಂದಷ್ಟು
ಏನೇ ಆಗಲಿ ಸ್ವಾಭಿಮಾನವ ಬಿಡದ ಹೆಣ್ಣು ನಾನು
ನೀ ನನ್ನೊಂದಿಗಿರುವಾಗ ಮತ್ತಾರ ಹಂಗೇಕಿನ್ನು...