Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆಳದಿಂಗಳ ನಲ್ಲೆ

ಬೆಳದಿಂಗಳ ರಾತ್ರಿಯಲಿ
ನನ್ನ ತೋಳ ತಕ್ಕೆಯಲಿ
ನಲಿದಳು ಎನ್ನಾಕೆ
ಬೆಳದಿಂಗಳ ನಲ್ಲೆಯ೦ತೆ
ಅವಳ ಕ೦ಗಳು ತು೦ಬಿತು
ಮದದ ಮತ್ತಲ್ಲಿ
ಅವಳ ಕೆನ್ನೆ ನಲಿಯುತಿತ್ತು
ಮುಗುಳ್ನಗೆಯ ಹ೦ಚಿನಲಿ
ಅವಳ ಮೂಗು ಅರಳಿತು
ಸ೦ಪಿಗೆಯ ಎಸಳ೦ತೆ
ಅವಳ ತುಟಿಗಳು ಅದರತಿತ್ತು
ಮೊದಲ ಚುಂಬನದಲ್ಲಿ
ಅವಳ ನಡು ಬಳುಕಿತು
ಕಾಮನ ಬಿಲ್ಲಿನ೦ತೆ
ಅವಳ ಮನ ಅರಳಿತು
ನಗುವ ಹೂವು ಮಲ್ಲಿಗೆಯ೦ತೆ...

ರಚನೆ:ತಾ೦ಡವ

- ತಾ೦ಡವ.

08 Oct 2016, 01:33 pm

ಮನಸ್ಸು

ಅಪ್ಪಾ ಅಮ್ಮಾ ಹೇಳ್ತಾರೆ
ಮನಸ್ಸು ಕೊಟ್ಟು ಓದು ಅಂತಾ.
ಆದ್ರೆ ಅವ್ರಿಗೇನ್ ಗೊತ್ತು
ಮನ್ಸ ಕೊಟ್ ಮೇಲೆ ಓದೋಕಾಗೋಲ್ಲ ಅಂತ....

- laxmi

07 Oct 2016, 09:26 pm

ಮನಸ್ಸು

ಮನಸ್ಸು ಸೂರ್ಯಕಾಂತಿ ಹೂ ಇದ್ದಂಗ
ಸಂತೋಷ ಸೂರ್ಯ ಇದ್ದಂಗ.

ಸಂತೋಷ ಇದ್ದಾಗ ಮನಸ್ಸು ಅರಳಿದ,
ಸೂರ್ಯಕಾಂತಿ ಹೂವಾಗ್ತದ !
ದುಃಖ ಇದ್ದಾಗ ಸೂರ್ಯನ ಕಾಣದೆ
ಬಳಲಿದ ಕಾಂತಿ ಹೂವಾಗ್ತದ. !






ಲಕ್ಷ್ಮೀ.ಆರ್. ಆರ್.











‌‌‌‌‌

- laxmi

07 Oct 2016, 09:20 pm

ಪ್ರೀತಿಯ ದೇವತೆ

ಪ್ರೀತಿಯ
ಮನ ಮಂದಿರದಲ್ಲಿ
ನಿರತ ಆರಾಧಿಸೋ
ಪ್ರೀತಿಯ ದೇವತೆ ನೀನು.

- ಸಾ.ರಾ.ಜ್ಞಾ

07 Oct 2016, 04:16 pm

ಹುಣ್ಣಿಮೆಯ ತಣ್ಣನೆಯ ಗಾಳಿ

ಹುಣ್ಣಿಮೆಯ ತಣ್ಣನೆಯ ಗಾಳಿಯಲಿ ನಾ ವಿಹರಿಸುತಿರಲು;
ಅಮಾವಾಸ್ಯ ಎಂಬ ಕತ್ತಲೆಯ ನೆನಪು ನನ್ನನು ಕಾಡುತಿರಲು,
ಸೂರ್ಯರೆಂಬ ಕಿರಣಗಳ ಕಾಂತಿಯು ನನ್ನ ಜೀವನದ ದಿವ್ಯ ಜ್ಯೋತಿಯನ್ನು ಬೆಳಗಿತ್ತು.

- ವೇಣು ಆರ್ ಚಿನ್ನದೂರು

07 Oct 2016, 03:10 am

ಪ್ರೀತಿ ಕವಿತೆಯ ಸಾಲು

ನಾ ಬರೆದೆ ಪ್ರೀತಿ ಕವಿತೆಯ ಸಾಲು :
ನಿನ್ನ ಪ್ರೀತಿ‌ಯ ವರ್ಣಿಸಲು,
ಆ ಕವಿತೆಯ ಸಾಲು ಸಾಲದಾಯ್ತು !
ಪ್ರೀತಿಯೆಂಬ ಆಗಸದಲ್ಲಿ ಪ್ರೇಮದ ಹಕ್ಕಿಗಳಾಗಿ‌ ಹಾರಾಡಲು;
ನನ್ನ ಪ್ರೀತಿ ಪಕ್ಷಿಯನ್ನು ಪ್ರಣಯ ‌‌‌ಪಕ್ಷಿಯಾಗಿಸಲು,
ನಾ ಕಾದಿಹೆನು ನಿನ್ನ ಪ್ರೀತಿಯ ಆರಾದಿಸಲು.

- ವೇಣು ಆರ್ ಚಿನ್ನದೂರು

07 Oct 2016, 02:51 am

ಕಣ್ಣು

ನಿನ್ನ ಕಣ್ಣ ಒಳಗೆ
ನನ್ನ ನಾ ಕಂಡೆ
ನಿನ್ನ ಕಣ್ಣ ಹನಿಯಲ್ಲಿ
ನಾ ಕರಗಿ ಹೋದೆ





ಲಕ್ಷ್ಮೀ.ಆರ್.ಆರ್.

- laxmi

06 Oct 2016, 09:23 am

ಬಣ್ಣದ ಮನಸ್ಸು

ಓ ,ಬಣ್ಣ ಬಣ್ಣದ ಮನಸೆ !
ನಿನಗೆ ಪ್ರೀತಿ ಮಾಡುವ ಆಸೆ,
ಓ ಹೃದಯವೇ ನಿನಗೆ ಪ್ರೀತಿಪಾತ್ರರ ಹುಡುಕುವ ಆಸೆ;
ಹೃದಯ ಮಿಡಿದಾಗ ಸುಮಧುರ ನೆನಪುಗಳ ಆಸೆ ,
ಮನಸ್ಸು ಒಡೆದಾಗ ದೂರಾಗುವ ಆಸೆ :
ಈ ಬಣ್ಣದ ಪ್ರೀತಿಯ ಮನಸ್ಸೆ ಹೀಗೆ.

- ವೇಣು ಆರ್ ಚಿನ್ನದೂರು

05 Oct 2016, 02:25 am

ಎದ್ದೇಳು ಕನ್ನಡಿಗ!

ಎದ್ದೇಳು ಕನ್ನಡಿಗ,
ನೀ ಸಿಡಿದೇಳು ಕನ್ನಡಿಗ;
ನೆಲ,ಜಲ,ಭಾಷೆಗಾಗಿ ಹೋರಾಡುವ ಸಿಡಿಗುಂಡಾಗು ಕನ್ನಡಿಗ!
ಅನ್ಯರು ನಮ್ಮನು ತುಳಿವ ಮುನ್ನ ನೀ ಜಾಣನಾಗು ಕನ್ನಡಿಗ,
ಕನ್ನಡ ನಾಡು ,ನುಡಿಯನು ನೀ ಗೌರವಿಸು ಕನ್ನಡಿಗ:
ನನಗೇಕೆ ,ನಿನಗೇಕೆ ಎನ್ನದಿರು ಕನ್ನಡಿಗ,
ಎದ್ದೇಳು ಕನ್ನಡಿಗ!
ನೀ ಎಚ್ಚರವಾಗು ಕನ್ನಡಿಗ.

- ವೇಣು ಆರ್ ಚಿನ್ನದೂರು

04 Oct 2016, 10:26 pm

ಒಂದು ಎರಡು..

ಒಂದು ಎರಡು
ಕೊರ್ಟಿಗೆ ಹೊರಡು..
ಮೂರು ನಾಲ್ಕು
ಅರ್ಜಿ ಹಾಕು...
ಐದು ಆರು
ಕೆಳು ನೀರು..
ಏಳು ಎಂಟು
ವಕೀಲರು ಉಂಟು...
ಒಂಬತ್ತು ಹತ್ತು
ಕ್ರೆಸ್ಟ್ ಗೆಟ್ ಎತ್ತು..
ಒಂದರಿಂದ ಹತ್ತು
ಆಟವು ಮುಗಿದಿತ್ತು
ತಮಿಳುನಾಡಿಗೆ ನೀರು
ಹರಿದಿತ್ತು...!!!!!!!!!!!!!!!

- ಸ್ನೇಹ ನಿರಂತರ....

04 Oct 2016, 09:38 pm