ನಿನ್ನ ಕಣ್ಣಿನ ಒಂದು
ವಾರೆನೋಟವೇ....!!
ಸಾಕು ಗೆಳತಿ...!!
ನನ್ನ ಮನದ ಪ್ರೀತಿಯ
ಕಾರಂಜಿ ಚಿಮ್ಮಿ-ಹೊಮ್ಮಿ..!!
ಹೊರಬರಲು....!!
ನೀನು ಮುಂಗುರುಳ
ಸರಿಸಿ ನೋಡುವ...!!
ಆ...ಕಳ್ಳನೋಟ...!!
ನನ್ನ. ಕೆಣಕಿ-ಕೆಣಕಿ....!
ಕಾಡುತ್ತಿದೆ....!!
ಕನಸಿನೂರಲ್ಲೂ ಬಂದು
ನಿದ್ದೆ..ಕದ್ದಿರುವೆಯಲ್ಲೆ..!!
ಮುತ್ತಿನೂರಲ್ಲಿ ಮಿಂದು
ಮತ್ತೇರಿಸುವೆಯಲ್ಲೆ...!!
ನಿನ್ನ ಮರೆಯಲಾಗದೆ
ನಾ ಪರಿತಪಿಸುತ್ತಿರುವೆ...!!
ಬಂದುಬಿಡು ಗೆಳತಿ..!!
ನನ್ನ ಪ್ರೀತಿಯ ಪಲ್ಲಕ್ಕಿಗೆ..!!
ಮೆರೆಸಿ ಮೋಹಿಸುವೆ..!!
ಜೇನು ಕಡಲಲ್ಲಿ....!!!
ಹೇ ನಿನಗಾಗಿಯೇ,
ನನ್ನ ಜಪವು ನಿನಗಾಗಿಯೇ
ನನ್ನ ಧ್ಯಾನ ಮೌನವು ನಿನಗಾಗಿಯೇ
ನನ್ನ ಉಸಿರೇ ನೀನಾಗಿರುವೆ.
ಹೇ ನಿನಗಾಗಿಯೇ,
ನಿನ್ನ ಗುಂಗಿನಲ್ಲಿಯೇ ಕಳೆದಿರುವೆ ನಾ ದಿನವೆಲ್ಲವ
ಬಳಿಬಾರದೆ ಕೃಪೆತೋರದೆ ಏಕೆ ಹೀಗೆ ಕಾಡಿರುವೇ
ಹೇ ನನ್ನಾಣೆ ನೀ ನನಗಾಗಿಯೇ.
ಹೇ ನಿನಗಾಗಿಯೇ,
ನಾ ಕಾಯುತ್ತಾ ಆಗಿರುವೆ ನಿರುದ್ಯೋಗಿ, ನಿನ್ನ ನೆನಪಲ್ಲಿಯೇ ಮರೆತಿರುವೆ ನಾ ನನ್ನ ಜವಾಬ್ದಾರಿ
ಬಿಟ್ಟು ಹೋಗಿರುವವರು ನನ್ನೆಲ್ಲ ಒಡನಾಡಿಗಳು
ನಿನ್ನ ಹಂಬಲವೇ ಆಗಿಹುದು ನನ್ನ ದಿನಚರಿ
ತುಳಿಯುವೆನು ನಾ ನನ್ನ ಹುಟ್ಟೂರಿನ
ಹಾದಿ ನಿನ್ನ ಜೊತೆಗೂಡಿ .
ಹೇ ನಿನಗಾಗಿಯೇ ,
ನಾ ಕೈಚೆಲ್ಲಿಹೆ ಬಯಸದೆ ಬಂದ ಅವಕಾಶಗಳ
ಪ್ರೀತಿಸಿರುವೆ ನಾ ನಿನ್ನ ಪ್ರೇಮಯಾಗಿ
ಕಠಿಣವಾಗಿಹುದು ನನ್ನ ಮುಂದಿನ ಹಾದಿ
ಕಾಯುತ್ತಾಇರುವೆ ನಾ ನಿನಗಾಗಿ
ನೀನೆಂದು ನನಗಾಗಿಯೇ, ಇದು ನಿಜವೇ.
ಹೇ ನೀ ನನಗಾಗಿಯೇ,
ನನ್ನ ಬಾಳಿನಬಂಡಿ ಸುಂದರವಾಗಿ ಸಾಗಲು
ಇನ್ನಾದರೂ ಮುನಿಸು ಬಿಟ್ಟು ಬಾ ನನ್ನ ಕೈ ಹಿಡಿದು
ನನ್ನ ಆಲಂಗಿಸು ಓ ನನ್ನ ನೆಚ್ಚಿನ
ಸರ್ಕಾರಿ ಕೆಲಸವೇ, ನಾನೆ ನಿನ್ನೊಲವಿನ ಆಕಾಂಕ್ಷಿ .
ಮನಸ್ಸೆಂಬ ಹೂತೋಟಕೆ
ಹಾರಿ ಬಂತೊಂದು ಚಿಟ್ಟೆ... !!
ಹಿಡಿಯಲೇ.. ಬೇಡವೇ..
ಎಂಬಂತೆ ನಾ ನಿಂತು ಬಿಟ್ಟೆ... !!
ಅದರಂದವ ನೋಡುತ್ತಾ
ನೋಡುತ್ತಾ ನಾ ಪೂರ್ತಿ ಕೆಟ್ಟೆ..!!
ಮನಸಿನ ಕಚಗುಳಿ
ತಡೆಯಲಾಗದೆ
ಪ್ರೇಮ ಪತ್ರವ ಕೊಟ್ಟೆ..!!
ಅಷ್ಟರಲ್ಲಿ ಒಡೆಯಿತು
ಅವಳ ಕೋಪದ ಕಟ್ಟೆ..!!ಹು
ಹಿಡಿದಳವಳು ನನ್ನ ರಟ್ಟೆ..!!
ಹರಿದು ಚಿಂದಿ ಚಿಂದಿಯಾಯ್ತು
ನಾ ತೊಟ್ಟ ಬಟ್ಟೆ..!!
ಏಕೆ ಈ ಸಾವು,ಏಕೆ ಈ ಸಾವು
ಅರೆ ಪಾವು ಆಸೆಯನು ಇರಿಸದೇ...
ಅನುಚಿತ ಔಚಿತ್ಯವಲ್ಲದ ನೋವು
ಕಾಡಿದೆ ಸಾವಾಗಿ, ಬೇಡವಾಗಿಸಿದೆ ಬದುಕನೇ...
ದೇವರೆದುರಿಗೆ ಬಂಡಾಯವೆದ್ದಿದೆ ಮನಸು
ತಾಳಲಾರದಾಗಿದೆ ನೋವು ಮನದೊಳಗೆ.
ಯಾರ ಸಮಾಧಾನ ಅಸಮಧಾನ ಕೇಳಿಸದಾಗಿದೆ
ಉಳಿದಿಹುದೇನು ಜೀವನದಲಿ ಅನುರಾಗವೇ ಕರಗಿದಮೇಲೆ
ಬದುಕು ಬರುಡಾಗಿ ಬಂಡಾಯವೆದ್ದಿದೆ
ಕಣ್ಣೆದುರಗಿನ ಸತ್ಯವನರಗಿಸಿಕೊಳ್ಳಲಾಗದೆ ಚಡಪಡಿಸಿದೆ
ಮನಸು ಕುದಿಯುತಿದೆ ಕಾರುಣ್ಯವಿಲ್ಲದಿರುವ ದೈವ ಚಿತ್ತಕೆ.
ಧಿಕ್ಕಾರವೆಂದಿದೆ ದೈವ ಸಂಕಲ್ಪಕೆ,
ಧಿಕ್ಕಾರವೆಂದಿದೆ ಹಣೆಬರಹಕೆ,
ಧಿಕ್ಕಾರವೆಂದಿದೆ ಬದುಕಿನ ನಿಯಮಕೆ,
ಧಿಕ್ಕಾರವಿರಲಿ ನಮ್ಮ ಮಗಳಿಲ್ಲದೀ ಬದುಕಿನ ದಾರಿಗೆ.
ಇದ್ದ ಆಸೆ ಆಕಾಂಕ್ಷೆಗಳು ಮಣ್ಣು ಪಲಾದವು,
ಪ್ರೀತಿ ಮಮಕಾರ ವಾತ್ಸಲ್ಯ ಅರ್ಥಕಳೆದುಕೊಂಡು,
ಅವಳೊಂದಿಗೆ ಮಣ್ಣೊಳಗೆ ಕರಗಿ ಹೋದವು.
ಬದುಕು ಭಾರವಾಗಿ ಬೇಸರ ಬೇಗುದಿಯಾಗಿದೆ,
ತೀರದ ನೋವು ಝರಿ ತೊರೆಯಂತಾಗಿದೆ,
ನಮ್ಮೀಬದುಕು ಮುಗಿವವರೆಗೂ ಹೆಪ್ಪುಗಟ್ಟಿದ ಹರಳಾಗಿ ಕಾಡುವುದೀಸಾವು
ಇ ಮನದ ಕಲೆಯಲ್ಲಿ
ನಿಂತಿರುವ ನಿನ್ನ ನೆನಪಲ್ಲಿ
ಮರೆತಿರುವ ಹೊಸತನದಲ್ಲಿ
ಮಾತೆಲ್ಲ ಮಾಯವಾಗಿತಿಲ್ಲಿ
ಮೌನವೇ ಆವರಿಸಿದೆ ನಿನ್ನ ಪ್ರೀತಿಯಲ್ಲಿ
ಬಿತ್ತಿದ ಕನಸುಗಳ ದಾರಿಯಲ್ಲಿ
ಕೈ ಜಾರಿದೆ ಮನಸು ನಿನ್ನಲ್ಲಿ.....ಗೆಳತಿ
ನನ್ನವಳು ನಾನು ಕಡಲ ತೀರದಲಿ
ಕೇಳಿದಳು ನನ್ನಾಕೆ ಎಷ್ಟು ಪ್ರೀತಿಸುವೆ ಎಂದು
ಸಾಗರದಗಲ ಆಕಾಶದೆತ್ತರ ಎಂದೇಳಲಿಲ್ಲ ನಾನು
ಅಕ್ಕಿಯಷ್ಟೆಂದೆ ಜೋಳದ ಕಾಳಷ್ಟಂದೆ
ಅದಿಲ್ಲದೆ ಬದುಕಿಲ್ಲ ಬದುಕಲು ಸಾಧ್ಯವಿಲ್ಲ
ನಲ್ಲೆ ಬರುವಳೆಂದು
ಕಾಯುತ್ತಲಿರುವೆ||೨||
ಅಂಬ ಗಾಲೂರಿ
ಇಳಿ ವಯಸ್ಸು
ವಯಸ್ಸು ದಾಟಿದರೂ
ನಲ್ಲೆ ಬರಲಿಲ್ಲ
ನಲ್ಲೆ ಬಾರದ ಈ ಜೀವ
ಬೇಸರಗೊಂಡಿದೆ...
ಸಂತೈಸದಿರು ಗೆಳೆಯ
ಇನ್ನು ಮುಂದೆ ನೀ ನನ್ನ
ಬಾ ಗೆಳತಿ ಬೇಗ ನೀ ಇಲ್ಲದ
ಈ ಬಾಳು ಒಣಗಿದ
ಮರದಂತಾಗಿದೆ... ನೀ ಬಂದು
ಹೋಗು ಗೆಳತಿ ಬೇಗ....
ಕಾಯುತ್ತಿರುವೆ ಕಾಣದ ನಲ್ಲೆಗಾಗಿ