Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಳ್ಳಿಲ್ಲದ ಗುಲಾಬಿ...

ಬುದ್ಧಿಗೆ ನೂರು ದಾರಿ
ಹೃದಯಕ್ಕೆ ಒಂದೇ ದಾರಿ
ಅದವೇ ಪ್ರೀತಿ
ಮುಳ್ಳಿಲ್ಲದೆ ಗುಲಾಬಿ
ಬೆಳೆದವರು ಇಲ್ಲ
ನೋವಿಲ್ಲದೆ
ಸಾಧಿಸಿದವನು ಇಲ್ಲ...
ಸಾಧನೆಗಳನ್ನು ಓದುವುಕ್ಕಿಂತ
ಸಾಧಿಸುವವನು ನೀನಾಗು
ಆಗ ಕೀತಿ೯ ಎನ್ನುವುದು
ನಿನ್ನನ್ನು ಹುಡುಕಿಕೊಂಡು
ಬರುತ್ತದೆ....

- ಶಿವಾ ಬಳಿಚಕ್ರ

12 Sep 2016, 10:50 am

ದೀಪ

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,
ಪುಷ್ಪ ಬಾಡದಿರಲಿ.....!!!

- Arun S. S.

12 Sep 2016, 10:38 am

ಚಿನ್ನ

ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ

- Arun S. S.

12 Sep 2016, 10:36 am

ವಣಿ೯ಸಲೇ ನಿನ್ನಾ!!!

ನನ್ನವಳ ಅಂದ ಆ
ಮಯೂರಕ್ಕಿಂತ ಚಂದ
ಕವಿಗಳ ಕಲ್ಪನೆಗೆ
ಎಟುಕದ ಕವಿತೆ ನೀ
ಕವನಗಳ ರಚನೆಗೆ
ಸಿಗದ ಪದ ನೀ...
ಹೇಗೆ ವಣಿ೯ಸಲಿ ನಿನ್ನಾ?...

- ಶಿವಾ ಬಳಿಚಕ್ರ

12 Sep 2016, 08:43 am

ಅವಕಾಶ ಮಾಡಿಕೊಡುವೆಯಾ?

ನೀ ಬಳುಕಿದರೆ
ನವಿಲಿನ ನಡಿಗೆ
ನೀ ಹಾಡಿದರೆ
ಕೋಗಿಲೆಯ ಕಂಠ
ನಿನ್ಮಾ ಮನ ಕಂಪಾದರೆ
ಜ್ವಾಲಾಮುಖಿ
ನೀ ನಕ್ಕರೆ
ಆ ಬ್ರಹ್ಮ ಸಹ ಸೋಲುವ
ಅದಕ್ಕಾಗಿ
ನಿನ್ನಲ್ಲಿ ಜೊತೆಯಾಗಿ
ನನ್ನಲ್ಲಿ ನೀ ಬೆರೆತು
ಬಾಳೋಣ ಒಂದಾಗಿ.....????

- ಶಿವಾ ಬಳಿಚಕ್ರ

11 Sep 2016, 11:12 pm

ಹಣ್ಣಾಗುತ್ತಿದೆ ಒಡಲು

ಹಣ್ಣಾಗುತ್ತಿದೆ ಒಡಲು
ನಿನ್ನಾ ಮಿಲನದ
ಆಶ್ರಯ ಯಾವಾಗ ಕೊಡುತ್ತಿಯಾ?
ನನ್ನ ಉಸಿರು ನಿಲ್ಲುವ
ಮೊದಲು ಬಂದು
ಈ ಹುಚ್ಚು ಮನದ
ಬಯಕೆ ತೀರಿಸುವೆಯಾ?
ಸಮಾದಿಯ ಮೇಲೆ
ಹೂಗಳನ್ನಿಡುತ್ತಿರುವೆ
ಕಣ್ಣೀರು ಸುರಿಸುತ್ತಿರುವೆ
ಓ ದೇವಾ ಜೀವಾ
ನೀಡು ಒಂದಿಷ್ಟು
ಎದ್ದು ಬರಲಿ ಜೊತೆ
ಕರೆದೊಯ್ಯುವೆ
ನಾ ಪ್ರೇಮದ ಅರಮನೆಗೆ
ಓ ದೇವಾ ನಿನಗೂ ಬೇಸರವಾಯಿತೇ
ನನ್ನ ಈ ಬಯಕೆ....

- ಶಿವಾ ಬಳಿಚಕ್ರ

11 Sep 2016, 10:56 pm

ಮೌನಿಯಾದೆ

ಏ ಮೌನ
ನೀ ಕಾಣಬೇಡ
ಏ ಮೌನ ನೀ ಕಾಡಬೇಡ
ಮಾತನಾಡುವ ಮುನ್ನಾ
ನೋಯಿಸಿದೆಯಾ ಎನ್ನಾ
ಮೌನಿಯಾದೆ ನಾ
ನಿನಗೆಂದು ನಾ ಹುಡುಕಾಡಿದೆ
ಅದು ಹರಿಯೋ ನದಿಯಾಗಿ
ಬೀಸೋ ಗಾಳಿಯಾಗಿ
"" ಓ ಮೌನ "" ನೀ ಕನಸಿನ
ಬೀದಿಯಲಿ ನಗುತಾ
ನಲಿದಾಡುವೆಯಾ
ಮೌನ....

- ಶಿವಾ ಬಳಿಚಕ್ರ

11 Sep 2016, 09:44 pm

"ಮಾತು"

ಬಲ್ಲವರು ಹೇಳುವರು
ನನ್ನನು ಜ್ಯೋತಿಯೆಂದು
ನಾ ಉರಿಯದಿದ್ದರೆ
ಜಗವೆಲ್ಲ ಕತ್ತಲಮಯವೆಂದು

'ನಾ' ಯೆಂದು
ಹೇಳಿ ಕೊಳ್ಳಲಾರೆ ನನ್ನಯ ಗೆಲುವನು
ಬಲ್ಲವರು ಬಲ್ಲರು ನನ್ನ ಸೊಲ್ಲರಿಮೆಯನು

ಹರಿದು ನಾ ತೀರಿಸುವೆನು ಸರ್ವ ಜಹ್ವಾಚಾಪಲ್ಯನು
ಬಿದ್ದವರು
ಗೆದ್ದವರು
ಲೆಕ್ಕವಿರಿಸಿಲ್ಲ ನಾ

ಹೇಗೆಂದು ಬಿತ್ತರಿಸಿಲಿ ನನ್ನ ಬತ್ತಳಿಕೆಯ ಬಾಹುಳ್ಯ ಕುಟ್ಟಿಸುವೆ ,
ಸದನದಲಿ ಮೇಜನು ತಟ್ಟಿಸುವೆ
ಸಭೆಯಲಿ ಚಪ್ಪಾಳೆಯನು

ಮುತ್ತಿನ ಮಣಿ ನಾಗನ ಫಣಿ ನಾ
ಕಟ್ಟಬಲ್ಲೆ ! ಸಜ್ಜನ ಪಟ್ಟ
ಕೆಡಹು ಬಲ್ಲೆ!ಹಗೆತನದಟ್ಟ

ಎಲ್ಲಾ ಇಹುದು ನನ್ನೊಳಗೆ ಆಗುವೆ
ನಾ
ಅರಿತವರ ಬಾಳಿನಹೋಳಿಗೆ
ನನ್ನೊಲುಮೆಯ ಭಾಗ್ಯವನರಿಯದ ಆರಿಗೂ ಜಯವಿಲ್ಲ!
"ಪ್ರೇಯಸಿ"

- "ಪ್ರೇಯಸಿ"

11 Sep 2016, 08:16 pm

ಕುಡುಕರ ಹಾಡು

ಏನ್ ಚಂದ ಕಾಣಿಸ್ತಾಳೆ ನಮ್ಮ ಕೋಡೇಸ್ ರಮ್ಮವ್ವ
ನೀನು ನಾನು ಸೇರಿದರೆ ಎಂಥ ಮಜವವ್ವ

ಎಷ್ಟೇ ದೂರದಾಗ ಇದ್ರೂ ನಿನ್ನ ಹುಡಿಕ್ಕೊಂಡು ಬರ್ತಿವಲ್ಲ !
ಅಷ್ಟೆ ಚಂದಾಗಿ ಇರೊ ನಿನ್ನ ಕಾಪಾಡಿಕೊಂಡು ಹೋಗ್ತಿವಲ್ಲ !
ನೀನೆ ಅಂದ ನೀನೆ ಚಂದ ಕೋಡೇಸ್ ರಮ್ಮವ್ವ !
ನಿನ್ನ ಸರಿಸಮ ನಮ್ಮ ಮಂದಿ ಇಲ್ಲವ್ವ !!

ಕಷ್ಟದಾಯಕವಾಗಿರುತ್ತದೆ ಇದ್ರು ಕುಣಿಸ್ತಿಯಾ ಕತ್ತಲಲ್ಲಾದ್ರು ಕಾಣಿಸ್ತೀಯಾ!
ಕೊಚ್ಚೆ ಮೋರಿಲಿ ನೂಕಿ ನನ್ನ ನೋಡ್ದೋರನ್ನೆಲ್ಲ ನಗಿಸ್ತೀಯಾ !
ನೂಕದೆ ಅಂಥ ಕೋಪ ಇಲ್ಲ ಕೋಡೇಸ್ ರಮ್ಮವ್ವ. !
ನಿನ್ನ ನಂಬಿ ಮುಂದೆ ನಡೆವೆ ದಾರಿ ತೋರವ್ವ !!

ನನ್ನ ಹೆಂಡ್ತಿ ಬಂಗಾರ ಸರ ಮುಡುಪಾಗಿಡ್ತಿನಿ ನಿನಗೋಸ್ಕರ!
ಹೊಲ ಗದ್ದೆ ಮನೆಯೆಲ್ಲ ಮಾರೋದ್ರಲ್ಲೆ ನಿನಗೋಸ್ಕರ !
ಯಾರನ್ ಬಿಟ್ರು ಬಿಡತಿನ್ ಕಣೆ ಕೋಡೇಸ್ ರಮ್ಮವ್ವ !
ಸಾಯೋತನಕ ನಿನ್ನ ಬಿಡಕ್ಕಿಲ್ಲ ಸ್ವರ್ಗ ತೋರವ್ವ !!

- babu kaddoni

11 Sep 2016, 02:02 pm

*ಸಂತೆ ದಿನ*

*ಭಾನುವಾರ ಸಂತೆ ದಿನ*

ನಮಗೆ ರಜಾವಿಲ್ಲದ ದಿನ..
ವ್ಯಾಪಾರಕ್ಕೆ ಬಿಡುವಿಲ್ಲದ ದಿನ..
ಸ್ವಂತ ಕೆಲಸಗಳಿಗೆ ರಜಾ ದಿನ..
ಹಳ್ಳಿಯಿಂದ ಬರುವರಿಗೆ ಮುಖ್ಯದಿನ...
ವೈದ್ಯ ಭೇಟಿ, ಆಹಾರ ಧಾನ್ಯ,
ತರಕಾರಿ ಕೊಳ್ಳಲು ಮೀಸಲು ದಿನ.
ನೌಕರರಿಗೆ ರಜಾ,
ವ್ಯಾಪಾರಿ ಮಿತ್ರರಿಗೆ ಸಜಾ..
ಔಷಧಿ ವರ್ತಕರಿಗೆ ಬಂದ್ ದಿನವೂ
ಬಾಗಿಲು ಹಾಕಿಸುದಿಲ್ಲಾ..!?
----------------------------------------------
ಕೈತುಂಬಾ ದುಡಿಮೆ,
ತಿರುಗಾಟ ಕಡಿಮೆ,
ಅಧಿಕಾರಿಗಳ ಕಾಟವಿಲ್ಲ,
ಮನೆ ಮಡದಿ ಮಕ್ಕಳಿಗೆ
ಉಪಚಾರದ ಖರ್ಚಿಲ್ಲ..!!
----------------------------------------------
ಆದರೂ ಮನಸ್ಸು ತುಡಿಯುತ್ತಿದೆ
ವಾರಕ್ಕೊಮ್ಮೆಯಾದರೂ ವಿಶ್ರಾಂತಿ ಬೇಕು.. ?

ಆದರೆ ಭಾನುವಾರ ಸಂತೆ.
ಬಾಯಿ ಮುಚ್ಚುಕೊಂಡು ನಿಂತೆ.
ಎಲ್ಲಿಲ್ಲದ ನಮ್ಮ ಚಳ್ಳಕೆರೆ ಸಂತೆ.!

- ವೀರೇಶ್ ಶಿವರುದ್ರಪ್ಪ

11 Sep 2016, 11:51 am