Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನೆ ಮರೆತ ದಾರಿಗೆ.....

ಕನಸುಗಳ
ಬೆನ್ನೇರಿ
ನಿನ್ನ
ನಿರೀಕ್ಷೆಯಲಿ
ಜೀವಿಸುತ್ತಿರುವೆ
ಗೆಳತಿ..

ನೂರು
ನಿಟ್ಟುಸಿರಿಗಳಾಚೆ
ನಿನ್ನ
ಸನಿಹದ
ನಿರೀಕ್ಷೆಯಷ್ಟೆ

ವಿರಾಗಿಗೆ...

ರಾಧೆಯ
ವಿರಹಕೂ
ಮಿಗಿಲು
ನಿನ್ನ
ಸೇರುವ
ನನ್ನ
ಹಂಬಲ...


ಧಾವಿಸಿ
ಬರುವೆಯೆಂದು
ನನ್ನ
ಪ್ರೇಮದ
ಬೃಂದಾವನಕೆ
ನೀನೆ ಮರೆತ
ದಾರಿಗೆ....

- ಶಿಖರಸೂರ್ಯ

02 Sep 2016, 07:49 pm

ಪಾಟ ಶಾಲೆ

ಬೆಚ್ಚಗಿನ ಮನೆ
ಹಚ್ಚಗಿನ ಮಡದಿ
ಆರತಿ-ಕೀರುತಿ ಮಕ್ಕಳಿರಲು..
ವ್ಯಚ್ಚಕ್ಕೆ ಹಣ ಬರುತ್ತಿರುವಲ್ಲಿ..
ಶಾಲೆ...
ಮುಚ್ಚುವುದೇಕೆ ಗುರುವರ್ಯ..?

ಬೆಚ್ಚಗಿನ ಪಾಠ ಶಾಲೆ
ಹಚ್ಚಗಿನ ಸಸ್ಯ ವನ
ಆರತಿ-ಕೀರುತಿ ವಿಧ್ಯಾರ್ಥಿಗಳಿರಲು..
ಉಚ್ಚ ಫಲಿತಾಂಶ ಬರುತ್ತಿರುವಲ್ಲಿ..
ಕಾಲವೇ..
ಮೆಚ್ಚುವುದಲ್ಲವೇ ಗುರುವರ್ಯ..!!!

- ವೀರೇಶ್ ಶಿವರುದ್ರಪ್ಪ

01 Sep 2016, 11:18 pm

ಪ್ರೀತಿ ಬೆಸುಗೆ

ಸೂಕ್ಷ್ಮಮತಿ ದೈವದತ್ತ
ಅಧೃಷ್ಟ ನಮ್ಮ ಪ್ರಯತ್ನ
ಸ್ನೇಹ ಹಾದಿಯಲ್ಲಿ ಸಿಕ್ಕದ್ದು
ಪ್ರೀತಿ ಬೆಸುಗೆ ಮಾತ್ರ ಹೃದಯ ಸಂಬಂಧಿ

- ವೀರೇಶ್ ಶಿವರುದ್ರಪ್ಪ

01 Sep 2016, 11:09 pm

ಕನ್ನಡ ಬೆಳಕು..

ಹಸುವಿನ ಹಾಲು ಬಿಳಪು..
ಅಮ್ಮನ ಹಾಲೂ ಬಿಳಪು...!

ಬೆಳಕಿನ ಬಣ್ಣವು ಬಿಳಪು..
ಬೆಳ್ಳಿಯ ಬಣ್ಣವೂ ಬಿಳಪು...!

ಬಿಳಪಿನಿಂದ ಬೆಳಕಾಗಿ ಬೆಳಗಲಿ..
ಕನ್ನಡಮ್ಮನ ಬಿಗುಮಾನ.. ಕೀರ್ತಿ...!!

- ವೀರೇಶ್ ಶಿವರುದ್ರಪ್ಪ

01 Sep 2016, 10:49 pm

ಕವನಳಲ್ಲಾ..?

ಕವನ ಎಂದರೆ ಕವನಳಲ್ಲಾ..
ಕಾವ್ಯ ಎನಲು ಕಾರಣವಿಲ್ಲಾ..
ಕಾಣುವ ಕನಸು ಇದೆಯಲ್ಲಾ...!
ಕಂಡರೆ ಮನಸು ಹದವೆಲ್ಲಾ..
ಕಾವೇರಿ ಮಾತೆಯ ಮಕ್ಕಳೇ ಎಲ್ಲಾ..
ಕನ್ನಡ ಅಭಿಮಾನಿ ದೇವರುಗಳೇ ಎಲ್ಲಾ...!!

- ವೀರೇಶ್ ಶಿವರುದ್ರಪ್ಪ

01 Sep 2016, 10:38 pm

ನನ್ನ ಹಳೆಯ ವಾಹನ...!!

ನನ್ನ ಹೃದಯ ರಿಪೇರಿ
ಮಾಡಲಾಗದಷ್ಟು
ಹಳೆಯ ವಾಹನ..
ಇದಕ್ಕೆ ಕಾರಣ....
ನನ್ನ ಹೊಸ ಪ್ರಿಯತಮೇ
ಚ೦ದನಾ ಅವಳ ಮೋಸತನ..!

- ವಲ್ಲಭ..

01 Sep 2016, 09:14 pm

ಆಶಾಕಿರಣ

ಆರತಿಗೊಬ್ಬ ಮಗಳು...
ಕೀರತಿಗೊಬ್ಬ ಮಗನು.‌.....

ಸಮಯೋಚಿತ ನಿರ್ಧಾರ
ಸಮತೋಲನ ಸಂಸಾರ...

ಜೀವನ ಮಧುರಾ ಕಿರಣ..
ಮಕ್ಕಳೇ ಮುಂದೆ ಆಶಾಕಿರಣ.‌..

- ವೀರೇಶ್ ಶಿವರುದ್ರಪ್ಪ

31 Aug 2016, 10:18 pm

ಮೊದಲ ಹಸಿರು

ಚಿತ್ರ ವಿಚಿತ್ರ ಸಚಿತ್ರ ಜೀವನದಲ್ಲಿ
ಚೈತ್ರ ಮಾಸವೇ ಮೊದಲ ಹಸಿರು,

ಹಸಿರಿನಿಂದ ಹಸಿರಾಗಿ
ಪರಿಸರದ ಉಸಿರಾಗಿ
ಪ್ರಾಣವಾಯು ಪಾತ್ರವಾಗಿ
ಕಾಯಿಬಿಡುವ ಬಳ್ಳಿಯಾಗಿ
ಮುಂದೊಂದು ತಾಯಿಯಾಗಿ

ಚಿತ್ತಾರ ಬಿಡಿಸುವ
ಚೈತ್ರ ಕುಸುಮವೇ
ನಿನಗೆ ಶುಭಾಷಯಗಳು

- ವೀರೇಶ್ ಶಿವರುದ್ರಪ್ಪ

31 Aug 2016, 07:53 pm

ಏನ್ ಧಾಟಿ

ಏಯ್ ಘಾಟಿ..
ಬೀಸ್ ಬೇಡ ಛಾಟಿ..
ಸ್ನೇಹಿತರಿಗಿಲ್ಲ ಸಾಟಿ..
ಪ್ರವಾಸ ಇದ್ರೆ ಊಟಿ..
ಉಣ್ಣಲು ಸಿಕ್ಕರೆ ಬೊಟಿ..
ಧಾವಿಸಿ ಬರಲು ಏನ್ ಧಾಡಿ.!

- ವೀರೇಶ್ ಶಿವರುದ್ರಪ್ಪ

31 Aug 2016, 04:01 pm

ಹುಟ್ಟು ಹಬ್ಬದ ಮಜಾ

ಈದಿನ ಮಜಾ
ಕಾಲೇಜಿಗೆ ರಜಾ
ಹುಟ್ಟು ಹಬ್ಬವೇ ರಾಜಾ..!!

ಇಂತಾ ಸೊಬಗಿಗೆ
ಇಂದಿನಾ ಸೊಗಸಿಗೆ
ಪ್ರಿಯತಮೆ ಜನ್ಮವೇ ಕಾರಣ..!

ನಿನ್ನಾ ಮನಸಿಗೆ
ನಿನ್ನಾ ಕಾರ್ಯಕೆ
ನಾನೇ ಕಂಕಣಾ..!

ನನ್ನಾ ದೇವಿಯೇ
ವಿದ್ಯಾ ದಾತೆಯೇ
ಗೌರವ ಪ್ರಾಪ್ತಿಯೇ..!

ನಮ್ಮಾ ಕುಟುಂಬವೇ
ಎರಡೇ ಮಕ್ಕಳೇ
ತಂದೆತಾಯಿಯ ಆಶೀರ್ವಾದವೇ..!

ನಿನ್ನ ಹುಟ್ಟು ಹಬ್ಬಕೇ
ಹೃದಯವೇ ಕಾಣಿಕೆ
ನಂಬಿಕೆಯೇ ಉಡುಗೊರೆ..!!!!

ಈದಿನ ಮಜಾ
ಕಾಲೇಜಿಗೆ ರಜಾ
ಹುಟ್ಟು ಹಬ್ಬವೇ ರಾಜಾ..!!

- ವೀರೇಶ್ ಶಿವರುದ್ರಪ್ಪ

31 Aug 2016, 03:52 pm