Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಇರುಳಲ್ಲಿ ಬಂದು
ಬೆಳಕನ್ನು ಚಲ್ಲೋ
ಬೆಳದಿಂಗಳಂತ ನಲ್ಲೇ!!
ಬೆಳಕಲ್ಲಿ ನಿನ್ನ
ಹುಡುಕಿದರೂ ಕಾಣೆ
ನೀನಿರುವೆ ನನ್ನಲ್ಲೇ!!
ಆ ಚುಕ್ಕಿ ಚಂದ್ರ
ನಸು ನಾಚಿ ನಿಂತ
ನನ್ನೊಳಗೆ ನಿನ್ನ ಕಂಡು!!
ಬೆಳದಿಂಗಳಾಟ
ಈ ತಂಪು ಗಾಳಿ
ಜೊತೆಯಲ್ಲಿ ನಿನ್ನ ನೆನಪು!!
ಇರುಳಲ್ಲಿ ನನ್ನ
ಹೊಂಗನಸಿನಲ್ಲಿ
ಎಂದೆಂದೂ ನಿನ್ನ ಧ್ಯಾನ!!
ಇರು ಹೀಗೆ ಎಂದೂ
ನನ್ನ ಮನಸಿನಲ್ಲಿ
ಅದು ನಮ್ಮ ಪ್ರೇಮ ತಾಣ!!
- ಪಿ.ಜಿ.ಜ್ಯೋತಿ
25 Aug 2016, 08:40 am
ತಂಪು ತಂಪು ತಂಪಾದ
ತಂಪಾದ ತಂಗಾಳಿ
ತಾನನಾನ ಹಾಡಿ
ತನ್ನೂರಿಗೆ ಸಾಗಿ !!
ಕೆಂಪು ಕೆಂಪು ಕೆಂಪಾದ
ಕೆಂಪಾದ ಆ ಕಿರಣ
ತೋರಿಸಿತು ಸೂರ್ಯನಿಗೆ
ನಮ್ಮೂರ ದಾರಿ !!
ಇಳೆಯ ಮೇಲೆ ಕಂಡ
ಮುತ್ತಿನ ಇಬ್ಬನಿಯು
ಇರಿಸಿದೆ ಇಳೆಯಲ್ಲಿ
ಸುಂದರ ರಂಗೋಲಿ!!
ಮೊಗ್ಗರಳಿ ಹೂವಾಗೋ
ಶುಭ ಮುಂಜಾವಿನಲಿ
ಕೇಳಿಸುತಲಿದೆ ಕಿವಿಗೆ
ಹಕ್ಕಿಗಳ ಚಿಲಿಪಿಲಿ !!
ಬೇಗ ಬೇಗನೆ ಎದ್ದು
ನೋಡಿದರೆ ಈ ಬೆಡಗು
ಬೆಳಗಿನ ಹೊತ್ತಲ್ಲಿ
ಮನ ತಣಿಸುವ ಸೊಬಗು!!
- ಪಿ.ಜಿ.ಜ್ಯೋತಿ
25 Aug 2016, 08:19 am
ಬಂತು ಬಂತು ಎಕ್ಸಾಮು
ತಲೆನೋವಿಗೆ ಬೇಕು ಮುಲಾಮು
ಹೊಡೆದೆ ತುಂಟಾಟಗಳಿಗೆ ಸಲಾಮು
ತಿನ್ನಲು ಶುರುವಿಟ್ಟೆನು ಬಾದಾಮು...
ಬಿತ್ತು ಹೆತ್ತವರಿಂದ ಪೆಟ್ಟು
Horlics,bornvita ಕೊಟ್ಟು
ಹೇಳಿದರು
ಓದ್ಬೇಕು ನಿದ್ದೆ ಬಿಟ್ಟು
ಬರಲೇ ಬೇಕು ಕ್ಲಾಸಿಗೆ ಫಷ್ಟು...
ಎಕ್ಸಾಮು ಹಾಲಿಗೆ ಹೋದಾಗ
ಮೇಲ್ವಿಚಾರಕರು ಬಂದಾಗ
ಪ್ರಶ್ನೆ ಪತ್ರಿಕೆ ಕೊಟ್ಟಾಗ
ಬರೆಯಲು ಬೆಲ್ಲು ಬಡಿದಾಗ...
ಛೇ,ಇದನ್ನು ಓದಿದ್ದೆ
ಅಯ್ಯೋ,ಅದನ್ನು ಬಿಟ್ಟಿದ್ದೆ
ಅಬ್ಬಾ, ಪರವಾಗಿಲ್ಲ ಬದುಕಿದೆ
ಯೋಚಿಸುತ್ತಿರಲು ಬಟ್ಟೆಯೆಲ್ಲ ಬೆವೆತು ಒದ್ದೆ...
ನೋಡಿದೆ ಬರೆಯಲು ಆಗುವುದೇ ಚರ್ಚಿಸಿ
ಮೇಲ್ವಿಚರಕರು ಬೈದರು ಘರ್ಜಿಸಿ
ಬರೆದೆ ಗೊತ್ತಿರುವುದು ಚಿಂತಿಸಿ
ಪುಟವನ್ನು ಆಚೆ-ಈಚೆ ತಿರಿಗಿಸಿ..
ಹುಟ್ಟಿದೆ ನನ್ನಲ್ಲಿ ಭಯ
ಕಣ್ಣುಗಳು ಆಗುತ್ತಿತ್ತು ಮಯಮಯ
ಆಗಾಗ ನೋಡುತ್ತಿದ್ದೆ ಸಮಯ
ಚೆನ್ನಾಗಿ ಓದುತ್ತಿದ್ದರೆ ಜೀವನ ಆಗುತ್ತಿತ್ತು ವೈವಿಧ್ಯಮಯ....
- AsiddeeqN
24 Aug 2016, 11:55 pm
ನೀ ಏನೇ ಅನ್ನೆ
ಮನದನ್ನೆ
ಹಿಡಿಯದಾಗಿದೆ
ಮನದ ಸನ್ನೆ
- ಸಾ.ರಾ.ಜ್ಞಾ
24 Aug 2016, 08:43 pm
ಕೊಳಲ ನಾದದಿ ಜಗವನು
ಕುಣಿಸಿದ ಬಾಲಲೋಲನು
ತೊದಲ ಮಾತನು ನುಡಿಯುತ
ತಣಿಸಿದ ಎಲ್ಲರ ಮನವನು
ದೇವಕಿನಂದ ಯಶೋಧ ಕಂದ
ಮುರಳಿ ಮಾಧವ ಮುರಳಿ ಮಾಧವ
ಬಾಲ್ಯದಲ್ಲಿ ಬಾಲಲೀಲೆ ತೊರಿದ ಬಾಲಕ
ಬಾಯಿಯಲ್ಲಿ ಬ್ರಹ್ಮಾಂಡವನೆ ತೊರಿದ ನಾಯಕ
ನಿನ್ನಯ ಜಪವೆ ತಪವಾಗಿ
ಕೊಳಲ ನಾದಕೆ ಮರುಳಾಗಿ
ನಿನ್ನನೆ ಅರಸಿ ಬಂದೆನು ನಾನು
ದೇವಕಿ ನಂದ ಯಶೋಧ ಕಂದ
ಮುರಳಿ ಮಾಧವ ಮುರಳಿ ಮಾಧವ
ಧರ್ಮದಿಂದ ನಡೆದವರ ರಕ್ಷಿಸಿದ ಪಾಲಕ
ಗರ್ವದಿಂದ ಮೆರೆದವರ ಶಿಕ್ಷಿಸಿದ ಶಿಕ್ಷಕ
ನಿನ್ನಯ ಕರುಣೆ ನಮಗಾಗಿ
ಸಿಗಲಿ ನಮಗೆ ವರವಾಗಿ
ಕರವ ಮುಗಿದು ಬೇಡುವೆ ನಾನು
ದೇವಕಿ ನಂದ ಯಶೋಧ ಕಂದ
ಮುರಳಿ ಮಾಧವ ಮುರಳಿ ಮಾಧವ
- ಆನಂದ್
24 Aug 2016, 08:21 pm
ನೀ ಇರಲೇಬೇಕು.
ಎಂದೇನಿಲ್ಲ ಈಗ ಎದುರಿಗೆ
ನೀ ಬರಲೇ ಬೇಕು ಎಂದೇನಿಲ್ಲ
ಈಗ ಕನಸಿಗೆ!
ಎಲ್ಲ ರೂಡಿ ಆಗಿದೆ
ಎಲ್ಲ ನೋಡಿ ಆಗಿದೆ.
ಸಾವಿರ ಸೋಲು,ಹತಾಶೆ ಅವಮಾನ
ಇನ್ನಷ್ಟು ಬರಲಿ
ನಾ ಹಿಂದೆ ಹೋಗಲಾರೆ
ನೀ ಬರದೆ
ನೀ ಸಿಗದೆ
ಸಾವಿರ ಜನ್ಮ ಕಳೆದರೂ.....!
- ಶಿಖರಸೂರ್ಯ
24 Aug 2016, 08:05 pm
ನೀ ಇದ್ದಾಗ
ನನ್ನೆದುರು....
ನಿನ್ನ ಪ್ರೀತಿಯ ಅರಿವಾಗಲೇ
ಇಲ್ಲ.
ನೀ ಈಗ ಇಲ್ಲ
ನೀ ಇಲ್ಲದೆಯೂ
ನನಗೆ ಬದುಕಿದೆ ಎಂಬ
ಮಿಥ್ಯ ,ನನಗೆ
ಅರಿವಾಗುತ್ತಲೇ ಇಲ್ಲ.....!
- ಶಿಖರಸೂರ್ಯ
24 Aug 2016, 03:33 pm
ಜಾತಿಯ ಹೆಸರಲ್ಲಿ
ತನ್ನ ಮೂರ್ತಿಯ ಕೆಳಗೆ
ಕೊಲೆಯೊಂದು ನಡೆದಾಗ
ಗಾಂದಿಯ ಕೈಯಲ್ಲಿದ್ದ
ಊರುಗೊಲು ನಕ್ಕಿತ್ತು
- karthik
24 Aug 2016, 12:09 pm
ಮನ್ಮತನ ಬಾಣ
ಗುರಿ ತಪ್ಪಿತ್ತು
ಅವಳು ಹೆಣವಾಗಿ
ಬಿದ್ದಿದ್ದಳು
- karthik
24 Aug 2016, 12:04 pm
ಜಗತ್ತು ಗೆಲ್ಲುವೆನೆಂದು
ಕತ್ತಿ ಗುರಣಿಯೊಂದಿಗೆ
ಸಿದ್ದನಾಗಿದ್ದ ಯುವಕ
...........
ಮದುವೆಯಾಗಿದ್ದ
- karthik
24 Aug 2016, 12:01 pm