Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಾನಿನಲ್ಲಿ ಮೂಡಿದ ಚಂದಿರ

ಬಾನಿನಲ್ಲಿ ಮೂಡಿದ ಚಂದಿರ
ನೋಡಲು ತುಂಬಾ ಸುಂದರ
ಆಗ ಆಕಾಶ ಒಂದು ದೊಡ್ಡ ಚಪ್ಪರ
ನಕ್ಷತ್ರಗಳು ಕಾಣುವವು ಒಂದಲ್ಲ ನೂರಾರು ಸಾವಿರ
ಆದರೆ ಇದು ಇರುವುದಿಲ್ಲ ನಿರಂತರ
ಇದು ದಿನನಿತ್ಯದ ಸಂಚಾರ
ನಮಗ ಯಾಕೆ ಬೇಸರ.......

- Swati S

30 Oct 2022, 07:08 pm

ಕನ್ನಡ ಕವನ

ಪ್ರೀತ್ಸೋರು ಹೇಗಿರಬೇಕು ಅಂದ್ರೆ ..?
ಇದ್ರೆ ಕನ್ನಡಿ ಥರ ಇರ್ಬೇಕು ..
ಇಲ್ಲಾಂದ್ರೆ ನೆರಳಿನ ಥರ ಇರ್ಬೇಕು ..
ಯಾಕೆಂದ್ರೆ ..?
ಕನ್ನಡಿ ಯಾವತ್ತು ಸುಳ್ಳು ಹೇಳೊಲ್ಲ ..
ನೆರಳು ಯಾವತ್ತೂ ನಮ್ಮನ್ನ ಬಿಟ್ಟು ಹೋಗೋಲ್ಲ..
ನಮ್ಮ ಜೊತೆನೇ ಇರುತ್ತೆ
ಹಾಗೆ ಪ್ರೀತ್ಸೋರು ಇದ್ರೆ ಎಷ್ಟು ಚೆಂದ ಅಲ್ವ ..!!
ಶುಭ ದಿನ

- yallaling haralayya

30 Oct 2022, 06:53 pm

ಗೆಳೆತನ

ಪ್ರತಿ ಜೀವದಲ್ಲೂ ಮರೆಯಲಾಗದ ಸಂಬಂಧ;
ಇದು
ಹಲವು ಜೀವಕ್ಕೆ ಜೀವವೇ ಇದು;
ಇನ್ನು ಕೆಲ ಜೀವಗಳಿಗೆ ಸಂತೋಷ
ಮರೆಸಿದ್ದು ಇದು;
ಹಲವು ಕೆಲವು ಜೋಡಿ ಕೊನೆಗೆ
ಉಳಿವುದು ಇದೇ ......
ಏಕೆಂದರೆ...
ಪ್ರಪಂಚದ ಅತಿ ದೊಡ್ಡ ಶಕ್ತಿ
ಅಂದ್ರೆ ಇದೇ
ಅದರಲ್ಲಿ ನಾನು ಒಬ್ಬಳು
ನಾನು ಪಡೆದಿದ್ದು ಮಗು ಮನಸಿನ
ಮನುಜರು ಅವರೇ..
ಇವರೂ
ನನ್ನ ಗೆಳೆಯರು

- Laxmi Dabbanavar

29 Oct 2022, 07:36 pm

ಪುನೀತ್ ರಾಜಕುಮಾರ್

ಇದ್ದರೆ ಪುನೀತನಂತೆ ಇರಬೇಕು...
ನಡೆದರೆ ದೇವರು ಮೆಚ್ಚುವಂತೆ ನಡೆದುಕೊಳ್ಳಬೇಕು...

ದುಡ್ಡು ಇದೆ ಎಂದು ಅಹಂಕರವನ್ನು ತೋರಲಿಲ್ಲ...
ದೊಡ್ಡ ವ್ಯಕ್ತಿಯೆಂದು ಸೊಕ್ಕಿನಿಂದ ಮೆರೆಯಲಿಲ್ಲ...
ತನ್ನ ಮಾತಿನಿಂದ ಯಾರ ಮನಸ್ಸಿಗೂ ನೋಯಿಸಲಿಲ್ಲ...
ದೊಡ್ಡ ಹೆಸರಿದೆಯೆಂದು ತೋರಿಸಿಕೊಳ್ಳಲಿಲ್ಲ...
ಈ ನಮ್ಮ ಪುನೀತಾ...
ಇದ್ದದ್ದನ್ನು ಇದ್ದ ಹಾಗೆಯೇ ದಾನ ಮಾಡಿದ...
ಮತ್ತೊಬ್ಬರ ನೋವಿಗೆ ಸ್ಪಂದಿಸಿದ...
ಇನ್ನೊಬ್ಬರ ಜೀವನವು ಸುಖದಿಂದ ಇರಲಿ ಎಂದು ಹಾರೈಸಿದ...
ನಮ್ಮ ನೆಚ್ಚಿನ ಅದ್ಭುತವಾದ ವ್ಯಕ್ತಿ ಅಗಿ...
ದೇವರ ಸರಿಸಮವಾಗಿ ಹೊರಟೆ ಹೋದ...
ಈ ನಮ್ಮ ಪುನೀತಾ...

ಮತ್ತೆ ಹುಟ್ಟಿ ಬಾ ಎಂದು ಹೇಳುವ ಬದಲು...
ನೀನಂತೆ ಬದುಕುವೆವು...
ನೀನಂತೆ ನಡೆಯುವೆವು...
ನೀನಂತೆಯೇ ಇರುವೆವು...
ಮತ್ತೊಬ್ಬರ ಕಷ್ಟಕ್ಕೆ ನೆರವಾಗುವೆವು ಎಂದು ಮನ ಹೇಳಲು ಬಯಸುವುದು...

_Aksh_Akshita_

- Akshita Paragi

29 Oct 2022, 03:45 pm

ನಗುವಿನ ಸರದಾರ

ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ,
ಮನಗಳಲ್ಲಿ ನಂಬಿಕೆ ಭಾವ ಮೂಡಿಸಿ,
ನಮ್ಮೆಲ್ಲರ ಏಳಿಗೆಯತ್ತ ಕೈ ಮಾಡಿ ಕಳಿಸಿ,
ನೋವಲ್ಲಿದ್ದವರನ್ನ ನಗುಮುಖದಿಂದ
ಸಮಾಧಾನಿಸಿ,
ನಗು ಮುಖದ ರಾಜಕುಮಾರ ಯೇನಿಸಿ,
ಕೊನೆವರೆಗೂ ಶತ್ರುವಿಗೂ ಒಳ್ಳೆಯದೇ ಬಯಸಿ,
ತನ್ನ ಜೀವನ ಪ್ರಯಾಣ ಮುಗಿಸಿ,
ಈ ಕ್ಷಣ ಎಲ್ಲರಿಂದಲೂ ಅಳಿಸಿ,
ಮನುಕುಲದ ಮನಗಳಲ್ಲಿ ನೆಲೆಸಿ,
ನೆನಪಿಸಿಕೊಳ್ಳುತ್ತಾ ಒಂದು ವರ್ಷ ಸಾಗಿಸಿ,
ಹೋದ ಆ (ದೈವ) ಜೀವ ಮರಳಿ ಬರಲೆಂದು ಆ ದೇವರಲ್ಲಿ ನಮಿಸಿ,
*.... ಅಪ್ಪು.....*

- Laxmi Dabbanavar

29 Oct 2022, 09:24 am

ಬೆಳಕಿನ ಹಬ್ಬ


ನಾವು.....
ಕಷ್ಟ ಅನುಭವಿಸಿದ್ದೇವೆ ಈ ಹಿಂದೆ
ಅದೊಂದು ರೀತಿಯ ಹುಳಿ;
ಕಷ್ಟ ದಾಟಿ ಮುಂದೆ ಸಾಗಿ
ಸಮಾಧಾನದಿಂದ ತಾಳಿ;
ಎಲ್ಲರಿಗೂ ಸಂತೋಷ ಬಯಸಿ
ಅಂತೆಯೇ ಬಾಳಿ;

ಬೆಳಕಿಗೆ...
ನನ್ನಲ್ಲಿ ಅಡಗಿದ ನೀಚ
ಗುಣ ತುಳಿ;
ಮೋಸದ ಪ್ರಪಂಚಕ್ಕೆ ಬರಲಿ
ಬಿರುಗಾಳಿ;
ಮನುಷ್ಯರಿಂದ ಮನುಷ್ಯ ಹಾಗೇ,
ದೀಪದಿಂದ ದೀಪಕ್ಕೆ ಮಾನವನೇ ನಾಂದಿ
ಆಗುವ ಆವಳಿ;
ಇದೇ ಹರುಷದಿಂದ ಹೊತ್ತಿದ ಪಣತಿ
ಶಾಂತವಾಗದೀರಲಿ ;
ಭಾವ ತುಂಬಿ ಮನಸಾರೆ ಆಚರಿಸೋಣ
ಈ ಬೆಳಕಿನ ಹಬ್ಬ ದೀಪಾವಳಿಯ.....*

ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು

- Laxmi Dabbanavar

26 Oct 2022, 03:52 pm

ದೀಪಾವಳಿ

ಮಿನುಗುತ್ತಾ ಬರಲಿ ದೀಪಾವಳಿ
ಮಾಸಿದ ಬದುಕಿಗೆ ತರಲಿ ತಂಗಾಳಿ
ಮರೆಯಾಗಲಿ ಹಣದುಬ್ಬರದ ಬಿರುಗಾಳಿ
ಲಕ್ಷ್ಮೀದೇವಿಯೇ ನೀ ಮಾಡದಿರು ಚಳುವಳಿ
ಹರಸು ನೀ ನೀಡುತ್ತಾ ಸಂತಸದ ಬಳುವಳಿ
ದೂರವಾಗಿಸು ಬಡತನದ ಪಾತಳಿ
ಮುದುಡಲಿ ಅಂಧಕಾರದ ಹಾವಳಿ
ದಿವಾಳಿಯಾಗದಿರಲಿ ದೀಪಾವಳಿ
ಅರಳಲಿ ಬಾಳಲ್ಲಿ ನಗೆಯ ಓಕಳಿ....

ದೀಪಾವಳಿ ಹಬ್ಬದ ಶುಭಾಶಯಗಳು.....

- Swati S

26 Oct 2022, 09:39 am

ನನ್ನನ್ನೇ ನಾ.. ಹೊಸದಾಗಿ ಕಂಡುಕೊಳ್ಳುತ!!...

"ಕಾಣದೆ ಹೋದರೇನು !
ದೂರಕೆ ಸರಿದರೇನು !
ಮರೆಯಾಗಲಾರೆ ಎಂದಿಗೂ ನನ್ನಲ್ಲಿ..
ಕನಸಲು.. ಬರುವೆ ಇನ್ನು !
ಮಾತವು... ನಿನದೆ ಇನ್ನು !
ಜೊತೆ_ಇಲ್ಲ ನೀ.. ಅಂದುಕೊಳ್ಳದೆ !
ನೀ_ಕೊಟ್ಟ ನೆನಪನು.. ಅಳಿಸದೆ !
ಸಾಗುತಿರುವೆ.. ನಿನ್ನ ಕುರಿತೆ ಗೀಚುತ !
ನನ್ನನ್ನೇ ನಾ.. ಹೊಸದಾಗಿ ಕಂಡುಕೊಳ್ಳುತ !!"
ಎಮ್.ಎಸ್.ಭೋವಿ....✍️

- mani_s_bhovi

25 Oct 2022, 03:02 pm

ಹಣತೆ

ಬಾನಿನಲ್ಲಿ ಸೂರ್ಯನಿದ್ದರೂ
ಕತ್ತಲ ಕೋಣೆಯಲ್ಲಿ
ಹಣತೆಯೇ ಸೂರ್ಯ!

ಕತ್ತಲ ಓಡಿಸೋ
ಒಂಟಿನಾವಿಕ ಹಣತೆಯ
ಬದುಕು ತಾತ್ಕಾಲಿಕ

ಆಯಸ್ಸು ಇದ್ದಷ್ಟು ದಿನ ಬದಕು
ಎಣ್ಣೆಯಿದಷ್ಟು ಹೊತ್ತು
ಉರಿಯೋದು ಹಣತೆ!

ಹಣತೆಗೆ ಇಲ್ಲ ಜಾತಿಭೇದ
ಹೆಣ್ಣು ಗಂಡು ಎಂಬ ನಿರ್ಬಂಧ
ಯಾರು ಹಚ್ಚಿಟರು ಬೆಳಗುತ್ತದೆ

ಸಂಸಾರವೇ ಒಂದು ಹಣತೆ
ಪರಸ್ಪರ ಪ್ರೀತಿಸಿ
ಹಣತೆಯೋಳಗಿನ ಎಣ್ಣೆ ಬತ್ತೀಯಂತೆ!

- Swati S

24 Oct 2022, 01:15 pm

ಒಲವು

ಬರಡು ಬಾಳು ಕೊರಡು ಭಾವ
ಕಾಡ ದಾರಿ ನೀರ ಸುಳಿವು
ಬದುಕ ಹಾದಿ ಸವಿದಿದೆ

ಉಲಿಯುತ್ತಿದ್ದ ಮಧುರ ಗೀತೆ ತಾನೇ ಮುಕವಾಗಿದೆ

ಮಣ್ಣ ವೀಣೆ - ಮಣ್ಣ ತಂತಿ
ಚಿಗುರು ಬೆರಳು ನಾದ ಮೀಟೇ
ರಾಗದೊರೆತ ಹುಟ್ಟದು

ಹಳೆಯ ಮೆಲಕು ಮುಂದೆ ಮುಸಕು
ಒಳವದೇಕೋ ದಕ್ಕದ್ದು

ಇದರ ನಡುವೆ
ಮೇಲನ್ನೆಲ್ಲೋ ಕೇಳಿ ಬಂದ ನಿನ್ನ ಕರೆಗೆ
ಮರೆತ ಮಾತು ಇರದ ಭಾವ ಮತ್ತೆ ತೆಲಿಬಂದಿದೆ
ಗಾಳಿ ತೀಡಿದಂತಿದೆ!❣️

- Swati S

22 Oct 2022, 11:47 am