ಬಾಳೊಂದು ಸುಂದರ ಪಯಣ..
ಪ್ರೀತಿಸುವ ಹೃದಯ ಜೊತೆಗಿದ್ದರೆ ಬಾಳೆಷ್ಟು ಸುಂದರ ಅಲ್ವಾ...
ನನ್ನ ಕವಿತೆಗಳನ್ನು ನೀ ಓದಲೇಬೇಕೆಂದಲ್ಲ..
ಹೃದಯಕ್ಕೆ ತಟ್ಟದ್ದು ಮನಸ್ಸಿಗೆ ನಾಟಿತೇ...
ಬದುಕಿಗೊಂದು ಆಸರೆಬೇಕು,ಆ ಆಸರೆ ನೀನಾಗಿರಬೇಕು ಅಷ್ಟೇ ...
ಪದಗಳು ಹಾಡಯಿತು ಆದರೆ ಹಾಡು ಮನಸ್ಸಿಗೆ ನಾಟಲೇ ಇಲ್ಲ ..
ತಪ್ಪು ನನ್ನದಲ್ಲ....ಕ್ಷಮಿಸುವಂತ ವಿಶಾಲ ಹೃದಯ ನಿನಗಿಲ್ಲವಷ್ಟೆ...
ಹಕ್ಕಿಯಂತೆ ಹಾರಾಡುತ್ತಿದ್ದೆ.. ಆದರೆ ನೀ ರೆಕ್ಕೆಯನ್ನೇ ಮುರಿದುಬಿಟ್ಟೆ...
ಬೆಳ್ಳಿಯ ಕಾಲ್ಗೆಜ್ಜೆ,ಬಣ್ಣದ ಸೀರೆ....
ಉದ್ದನೆಯ ಜೆಡೆ ,ಕಿವಿಗೊಂದು ಓಲೆ.....
ಆಕೆ ನಡೆದರೆ ಸಾಕು....ದಾರಿಯುದ್ದಕ್ಕೂ ಹೂವಿನ ಮಳೆ ...
ಆಕೆ ನಕ್ಕರೆ ಸಾಕು ...ಚಂದ್ರನೂ ನಾಚಿ ನೀರಾಗುವನು....
ಕಣ್ಣಿಲ್ಲೇ ಎಲ್ಲರ ಹೃದಯ ಕದಿಯುವಳು...
ಏನೆಂದು ಬರೆಯಲಿ ಈ ಖಾಲಿ ಹಾಳೆಯಲಿ..
ಪದಗಳ ಪೋಣಿಸಿ ಬರೆಯೋಕೆ ನನಗೆ ಗೊತ್ತಿಲ್ಲ ...
ಬರೆಯಬೇಕೆಂದು ಹೊರಟಾಗ ನೆನಪಾಗುವುದು ನೀನು ಮಾತ್ರ ...
ನಾ ಏನೇ ಬರೆದರೂ ಅದು ನಿನಗೆ ಮಾತ್ರ ಅರ್ಥವಾಗಲ್ಲ...
ಮೋಡದ ಮರೆಯಲಿ ಚಂದ್ರ ಅಡಗಿದ ಹಾಗೆ ....
ಕಾಣದ ಈ ಪದಗಳ ಹಿಂದೆ ನನ್ನ ನೋವಿದೆ..
-ಇಂತಿ ನಿನ್ನ ಪ್ರೀತಿಯ
ಕಟ್ಲು ಮೇಲೆ ಕುಂತು ಕಾಫಿ ಕುಡಿವ ಅಪ್ಪ
ಕುಡುಗೋಲು ಹಿಡಿದು ಹಸಿಹುಲ್ಲು ಕೊಯ್ವ ಅವ್ವ
ಜಾರುವ ಪೇರಳೆ ಮರ ಹತ್ತಿ ಹಣ್ಣು ಕಿತ್ತು
ತಮ್ಮಗೆ ಕೊಡುವ ಅಣ್ಣ
ಎಲ್ಲಾ ನೆನಪು ಮಾತ್ರ ||
ಸುರಿವ ಮಳೆಯಲಿ ಹೂಟೀ ಹೊಡೆವ ಅಪ್ಪ
ಕಳಲೆ ಹೆಚ್ಚಿ ಸಾರು, ಪಲ್ಯ ಮಾಡುವ ಅವ್ವ
ಹೊಳೆ ಗೋರಿ ಹತ್ ಮೀನ್ ಹಿಡಿದು
ಹೊತ್ತು ತರೊ ಅಣ್ಣ
ಎಲ್ಲಾ ನೆನಪು ಮಾತ್ರ ||
ಉತ್ತು ಬಿತ್ತು ಕಣಜ ಕಟ್ಟಿ ತುತ್ತು ಕೊಡೋ ಅಪ್ಪ
ಹೊತ್ತು ಗೊತ್ತಿಲ್ಲದೆ ಹೊಗೆಯಲಿ ಸತ್ತು ಪ್ರೀತಿಯ ಕೂಳು ಬಡಿಸೊ ಅವ್ವ
ಎತ್ತಿಕೊಂಡು, ಹೊತ್ತುಕೊಂಡು ಪೇಟೆ ಸುತ್ತಿಸಿ
ಐಸ್ ಕ್ಯಾಂಡಿ ಚಾಕ್ಲೆಟ್ ಕೊಡಿಸಿ ನಗಿಸಿದ ಅಣ್ಣ
ಎಲ್ಲಾ ನೆನಪು ಮಾತ್ರ ||
ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....!!!