ಅಮ್ಮಾ ಅಮ್ಮ ಎಂದೆಂದಿಗೂ ನೀ ನನ್ನ ಸ್ನೇಹದ ಸಮುದ್ರನೂ....
ನನ್ನ ಹೆತ್ತ ಅಮ್ಮ ನೀನು ನನ್ನ ಪ್ರಾಣನೂ....
ಪುಟ್ಟ ಇರುವಾಗ ನನ್ನ ಮುದ್ದಾಗಿ ಬೆಳೆಸಿದ ಅಮ್ಮಾ....
ನೋವುಗಳನ್ನು ಸಹಿಸಿದ ಪಾಪ ನನ್ನ ಅಮ್ಮಾ
ಅಮ್ಮ ಎಂದು ಒಮ್ಮೆ ಕರೆಯಲು ಯಾರಿಗಿಲ್ಲ ಆಸೆ,
ಈ ಜನ್ಮವು ನನಗುಂಟು ಅಮ್ಮನ ಸೇವೆ ಮಾಡಲೂ.........
ಅತ್ತು ಬಂದನೇನು ಈ ಜಗದೊಳಗೆ
ನಕ್ಕು ನಲಿದಳು ಜನ್ಮ ಕೊಟ್ಟವಳು
ಹುಟ್ಟಿ ಬೆಳದೇನು ಒಡಹುಟ್ಟಿದವರೊಂದಿಗೆ
ಕುಣಿದು ಕುಪ್ಪಳಿಸಿದೆ ಬಂಧು ಮಿತ್ರರ ಜೊತೆ
ಕಲಿತು ಬೆರತೆ ಈ ಸಮಾಜದಲ್ಲಿ
ಮರತೇನು ಕೆಲವೊಂದು
ತೂಗಿದೆ ಜೀವನದ ಜೋಕಾಲಿ
ದಾಟಿದೆನು ಯವ್ವನ ಮುಪ್ಪು
ಅತ್ತು ಬಂದೇನು ,ಬಿಟ್ಟು ಹೋಗುವಾಗ
ಅಳುವರು ನನ್ನವರು
ಕೆಟ್ಟವನಾದರೆ ಕೊಚ್ಚೆಯೆಂದು ಕಡೆಗಣಿಸುವರು
ಒಳ್ಳೆಯವನಾದರೆ ನೆನೆಯುತ್ತಾ
ಅಚ್ಚಳಿಯದೆ ಉಳಿಸುವರು ನಿನ್ನ ಹೆಸರು
ಏನಾದರೂ ಆಗಲಿ ಬದುಕಿರುವಾಗಲೇ
ಸಾಧಿಸು ಒಳ್ಳೆಯ ತನವ.
ಎ ಜಿ ಶರಣ್
ಜೀವನ ಮರಣಕ್ಕಿಂತ ಭೀಕರವಾಗಿತ್ತಲ್ಲವೋ...
ಜೀವನ ಮರಣಕ್ಕಿಂತ ಭಯಂಕರವಾಗಿತ್ತಲ್ಲವೋ...
ಜೀವನ ಮರಣಕ್ಕಿಂತ ಮನುಷ್ಯನ ಕಷ್ಟಪಡಿಸುತ್ತಲ್ಲವೋ...
ಮರಣವು ನನ್ನನ್ನು ನಷ್ಟದಲ್ಲಿಟ್ಟಿದ್ರೆ ನನಗೆ ಅರಿವು ಇರುತ್ತಿತ್ತು
ಆದರೆ ನನ್ನನ್ನು ನಷ್ಟದಲ್ಲಿಟ್ಟದ್ದು ಮರಣವೂ ಅಲ್ಲ ಜೀವನಾಗಿತ್ತು
ಮರಣಕ್ಕಿಂತ ಭಯಾನಕವಾಗಿದೆ ನನ್ನನ್ನು ನಷ್ಟದಲ್ಲಿಟ್ಟ ಜೀವನ.
ಹರಿಯುತಿದೆ ಜಲಧಾರೆಯಂತೆ ಕವಿತೆಗಳ ಸಾಲು ಮೆಲ್ಲ ಮೆಲ್ಲನೆ
ನೀಡಿದೆ ಪುಲಕವನಿಂದು ಸದ್ದಿಲ್ಲದೆ,
ಸಂಗಮದ ತವಕದಲಿ ತನ್ನ ಮೈಮರೆತು,
ಸಾಗುತಿದೆ ಪಯಣದ ಹಾದಿಯಲಿ ತನಗರಿಯದೆ,
ಒಡಲನು ಸೇರುವ ಆತುರದಿ,
ಮಿಡಿಸುತಿದೆ ಕವಿತೆಗಳ ಸಿಂಚನ,
ಮೂಡಿಸುತಿದೆ ಹೊಸ ಹೊಸ ಭಾವನೆಗಳ ಕಲ್ಪನ.