ಏನೆಂದು ಬರೆಯಲಿ
ಏನೆಂದು ತಿಳಿಸಲಿ
ನೀ ನನ್ನೊಂದಿಗೆ ಇದ್ದ
ಮಧುರ ಕ್ಷಣಗಳನು ಬರೆಯಲಾ
ನೀ ಇಲ್ಲವೆಂಬ ವಿಷಾದವನು ಹೇಳಲಾ
ಈ ನನ್ನ ಅರ್ಥವಿಲ್ಲದ ಜೀವನಕೆ
ಜೀವ ತುಂಬಲು ಮರಳಿ ಬಾ ಎನ್ನಲಾ......
ಈ ನನ್ನ ಪ್ರಶ್ನೆಗಳಿಗೆ ಉತ್ತರಗಳನು ತಾ ಎಂದು ಅಪೇಕ್ಷಿಸಲಾ.....
ಬಾ ಮರಳಿ ಬಂದು ನನ್ನ ನೋಡು...
ಎಲ್ಲಿಯವರೆಗೂ ಈ ನಿನ್ನ ಮೌನ ಬೆಂಕಿಯಲ್ಲಿ ಬೆಂದು ಹೋಗುತ್ತಿದೆ ನನ್ನೀ ಮನ
ನೀಡಬಾರದೆ ಇನ್ನೊಮ್ಮೆ ಈ ಮನಸ್ಸಿಗೆ ಮರು ಜನನ
ಕಾಯುತ್ತಿರುವೆ ಗೆಳತಿ ನೀ ಬರುವ ದಾರಿಯನ್ನ
ಮರೆಯಬೇಡ ನೀ ನನ್ನ ಪ್ರೀತಿಯನ್ನ
ತಾಳಲಾರೇನು ನಾನು ಈ ನೋವನ್ನ
ಅರಿಯದೆ ಮಾಡಿದೆ ನಿನ್ನ ಪ್ರೀತಿಯನ್ನ ಮಾಡಬೇಡ ನನಗೆ ನೀ ಮೋಸವನ್ನ
ಆ ದೇವರು ಕೂಡಾ ಕ್ಷಮಿಸೊಲ್ಲ ನಿನ್ನ
ಅಮ್ಮಾ ಅಮ್ಮ ಎಂದೆಂದಿಗೂ ನೀ ನನ್ನ ಸ್ನೇಹದ ಸಮುದ್ರನೂ....
ನನ್ನ ಹೆತ್ತ ಅಮ್ಮ ನೀನು ನನ್ನ ಪ್ರಾಣನೂ....
ಪುಟ್ಟ ಇರುವಾಗ ನನ್ನ ಮುದ್ದಾಗಿ ಬೆಳೆಸಿದ ಅಮ್ಮಾ....
ನೋವುಗಳನ್ನು ಸಹಿಸಿದ ಪಾಪ ನನ್ನ ಅಮ್ಮಾ
ಅಮ್ಮ ಎಂದು ಒಮ್ಮೆ ಕರೆಯಲು ಯಾರಿಗಿಲ್ಲ ಆಸೆ,
ಈ ಜನ್ಮವು ನನಗುಂಟು ಅಮ್ಮನ ಸೇವೆ ಮಾಡಲೂ.........
ಅತ್ತು ಬಂದನೇನು ಈ ಜಗದೊಳಗೆ
ನಕ್ಕು ನಲಿದಳು ಜನ್ಮ ಕೊಟ್ಟವಳು
ಹುಟ್ಟಿ ಬೆಳದೇನು ಒಡಹುಟ್ಟಿದವರೊಂದಿಗೆ
ಕುಣಿದು ಕುಪ್ಪಳಿಸಿದೆ ಬಂಧು ಮಿತ್ರರ ಜೊತೆ
ಕಲಿತು ಬೆರತೆ ಈ ಸಮಾಜದಲ್ಲಿ
ಮರತೇನು ಕೆಲವೊಂದು
ತೂಗಿದೆ ಜೀವನದ ಜೋಕಾಲಿ
ದಾಟಿದೆನು ಯವ್ವನ ಮುಪ್ಪು
ಅತ್ತು ಬಂದೇನು ,ಬಿಟ್ಟು ಹೋಗುವಾಗ
ಅಳುವರು ನನ್ನವರು
ಕೆಟ್ಟವನಾದರೆ ಕೊಚ್ಚೆಯೆಂದು ಕಡೆಗಣಿಸುವರು
ಒಳ್ಳೆಯವನಾದರೆ ನೆನೆಯುತ್ತಾ
ಅಚ್ಚಳಿಯದೆ ಉಳಿಸುವರು ನಿನ್ನ ಹೆಸರು
ಏನಾದರೂ ಆಗಲಿ ಬದುಕಿರುವಾಗಲೇ
ಸಾಧಿಸು ಒಳ್ಳೆಯ ತನವ.
ಎ ಜಿ ಶರಣ್