Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮಳೆಬಿಲ್ಲಿನ ಎರು ಕಡೆಯ ಅಂಚಲ್ಲು
ನೆನಪುಗಳು ಕನಸುಗಳು
ಬಣ್ಣಗಳನ್ನು ಒಟ್ಟುಗೂಡಿಸಿ ಬಿಳಿಯ ಬಣ್ಣವಾಗುಸಿದರು
ಅದೆ ಕನಸು ಅದೆ ನೆನಪು
ಒಮ್ಮೆ ಬಣ್ಣಗಳನ್ನ ಬೇರ್ಪಡಿಸಿ ಏಳು ಬಣ್ಣಗಳ
ಸುಂದರ ಬಿಲ್ಲಾಗಿಸಿದರು.
ಅದೆ ಕನಸು ಅದೇ ನೆನಪು
ನನ್ನನ್ನ ಹೇಗಾದರೂ ಬದಲಾಯಿಸು
ಖುಷಿಯಾದರು ಸರಿ ದುಃಖಿಯಾದರು ಸರಿ
ಅದೇ ಕನಸು ಅದೇ ನೆನಪು
ಕೆಲವು ಮೌನ ಕೆಲವು ಸ್ಪರ್ಶ
ಕೆಲವು ಮಾತು ಕೆಲವು ಪ್ರೀತಿ.
- ರವಿಕುಮಾರ
08 Feb 2016, 06:13 pm
ತುತ್ತು. ಮುತ್ತು
ಒಟ್ಟಿಗೆ ಕೊಟ್ಟಾಗ
ನಾನಾದೆ ನಿನ್ನ
ಸ್ವತ್ತು !
ಇದು ನಿನಗ್ಯಾರು
ಕಲಿಸಿದ
ಗತ್ತು !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 02:33 pm
ತಾಯಿ
ಕರಳು !
ಮಡದಿ
ನೆರಳು !!!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 02:24 pm
ಏಕ್ಯತೆಯ ವೃಕ್ಷದಿ
ಮಾನವೀಯ ಮೌಲ್ಯಗಳ
ಎಲೆಗಳುದುರಿ
ಬಿದ್ದಿವೆ !
ವಸಂತದ ಸೋಗಿನಲ್ಲಿ
ಹೊಸ ಚಿಗುರು ಎನ್ನುತಲಿ
ವಿಕಾರಗಳು ವಿಶ್ವದೆಲ್ಲೆಡೆ
ಪಸರಿವೆ !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 02:16 pm
ಪ್ರೇಯಸಿ
ಭಾವನೆಗಳ ನಡುವೆ
ಸೇತುವೆ ನಿರ್ಮಿಸಿದಾಗ
ಆದದ್ದು ನಮ್ಮ
ಅನುಬಂಧ !
ಆದರೆ
ಅರಿಯದಾಯಿತು
ನಮ್ಮ ನಡುವೆ
ಆವನೇಕೆ ಬಂದ!!!?
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 01:50 pm
ಇರುಳಿನಲಿ
ಬೆಳಗುವನು
ಅರ್ಧ
ಚಂದಿರ !
ಬೆಳಕು ಮಾತ್ರ
ತುಂಬಿಹುದು
ಬಾನ
ಹಂದರ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 01:43 pm
ಪುಣ್ಯ
ಮಣ್ಣು ಮುಕ್ಕಿಹುದು
ಪಾತಾಳದಲಿ !
ಪಾಪ
ರಣಹದ್ದು ದಿಟ
ಹಾರಾಡಲು
ಗಗನದಲಿ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 12:29 pm
ವಸುಂಧರೆ
ಮಹಾನ್
ರಂಗ ಮಂದಿರ !
ಜಿವಾತ್ಮರೆ
ಪಾತ್ರ ಹಸನಾಗಿಸಿಕೊಳ್ಳಿ
ಸುಂದರ !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 12:18 pm
ರಾಜಕಾರಣಿಗಳು
ಕಲಾವಿದರು !
ಮತದಾರರು
ಪ್ರೇಕ್ಷಕರು !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 12:13 pm
ನಾಡ
ವನಸುಮವು
ಬಿರಿಹುದು
ಪರಿಮಳ !
ಆದರೋಳು
ನಾವಾಗಬೇಕು
ಒಂದೊಂದು
(ಎಸಳು) ದಳ !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 12:09 pm