"ಕಲ್ಲಿನಂತ್ತಿದ್ದ ನಾನು ಕರಗಿದ್ದು ನಿನ್ನಿಂದಲೇ..
ಕರಗಿರುವೆ ನಾ ಯಾರ ಕೈಗೆ ಸಿಗದಷ್ಟು ಈಗಾಗಲೇ..
ತುಸು ಕಡೆಗಣಿಸಿದರು ನಾ ಹೋಗಬಹುದು ಸಿಗದಲೇ..
ಸಂರಕ್ಷಿಸು ನೀ ನಿನ್ನ ಹೃದಯದ ಅಂಗಳದಲೇ."
ಕಲ್ಪನೆಯ ಕಲಾವಿದ....
"ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವ.. ನಾ ಹೇಗೆ ವರ್ಣಿಸಲಿ..
ನನ್ನೊಂದಿಗೆ ನೀ ಹಾಡಿದ ಪ್ರೀತಿಯ ಮಾತುಗಳ.. ನಾ ಹೇಗೆ ಮರೆಯಲಿ..
ನೊಂದಿರುವಾಗ ನೀನೊಂದು ಅಪ್ಪುಗೆಯು ತಂದ ಸಮಾಧಾನವ.. ನಾ ಹೇಗೆ ತಿಳಿಸಲಿ..
ನಿನ್ನಿಲ್ಲಿದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಇರುವುದು.. ನಾ ಹೇಗೆ ಜೀವಿಸಲಿ."
ಕಲ್ಪನೆಯ ಕಲಾವಿದ...
ತೇರಿನ ಬದಲು
ನಿಮ್ಮನ್ನೇ ನೋಡಬೇಕಂದರೆ
ನಿಮ್ಮ ತಯಾರಿ ಸೀರೆ ಆಗಿರಬೇಕು
ಕಾಡುವ " ಮಣಿ " ಬೇಕೆಂದರೆ
ಅವನ ಜಿಯೋ ನಂಬರಿಗೆ
ನೀವು ಜೀವ ತುಂಬಬೇಕು
ಹಿಂದೆ ಮುಂದೆ
ಸುಳಿವವನು ಬೇಕಂದರೆ
ನೀವು ಅರಿಶಿಣ ಮತ್ತು ಚಂದನದ
ಸಂತೂರ್ ಬಳಕೆದಾರರು ಆಗಿರಬೇಕು
ಅಂತವನು ಬೇಕು ಇಂತವನು ಅಂದು
ಅಂಕಲ್ಗಳ ಕೈ ಹಿಡಿದು ಸಿಂಗಲ್ಸ್ ಗಳ
ಬಾಯಿಂದ ಶಾಪ ಹಾಕಿಸಿಕೊಳ್ಳಬೇಕು
ಅಲ್ವಾ.............
ಎಮ್.ಎಸ್.ಭೋವಿ....✍️
ಹೃದರ ಪರದಾಡಿದೆ ಎಲ್ಲಾ ನಿನ್ನ ಸಹವಾಸ...
ಸನಿಹ ಇರದಿದ್ದರೆ ನೀನು.ಬದೆಕೇ ಉಪವಾಸ...
ನೀನೇ ಉಳಿಸು ನನ್ನ. ಬರೀ ನೋಟದಲ್ಲೇ ನೀ ನನ್ನ ಕೊಂದಾಗ...
ಕನ್ನಡಿ ಎದುರು ನೀ ನಿಂತು ನನ್ನ ನೆನದಾಗ.
ನಾಚಿಕೆಯಾಗಿ ಬರುವೆ ನಾ ಆಗ...
ಬದುಕಿನುದ್ದ ನಿನ್ನ ನೆಚ್ಚಿನ ಖುಷಿಯಾಗಿರುವೆ...
ಬೆನ್ನಿಂದೆ ನಿಂತು ಕೊಂದರೂ.ನಿನ್ನೇ ಪ್ರೀತಿಸುವೆ...
ಎಮ್.ಎಸ್.ಭೋವಿ.....✍️
ನವರಾತ್ರಿ ನಾಡಹಬ್ಬ,
ನವ ನವ ರಾತ್ರಿಯ ಸಂಭ್ರಮ ಹಬ್ಬ
ಕನ್ನಡಿಗರಿಗದು ಪವಿತ್ರ ಹಬ್ಬ,
ದುಷ್ಟರ ಮೇಲೆ ಶಿಷ್ಟರು,
ವಿಜಯ ಸಾಧಿಸಿದ ದಿನವದು,
ವಿಜಯದಶಮಿ,
ಹತ್ತನೆಯ ದಿನ ಆಚರಿಸುವ ಹಬ್ಬವಲ್ಲ,
ದೇಹದ ಹತ್ತು ಇಂದ್ರಿಯಗಳ ಮೇಲೆ,
ವಿಜಯ ಸಾಧಿಸುವ ಪ್ರಕ್ರಿಯೆ ,
ವಿಜಯದಶಮಿ,
ಕಾರ್ಯಪ್ರವವೃತ್ತರಾಗೋಣ ಬನ್ನಿ,
ಬನ್ನಿ ದೇವಮಾನವರಾಗೋಣ.
ಹೇ ಎಂತಾ ಹುಚ್ಚು ಮನಸ್ಸು ನೀನು ನಿನ್ನ ಹರಸಿ ಬಂದ ಹೃದಯಕ್ಕೆ ಸಮ್ಮತಿಸಿದೆ,
ನೀನೆ ತನ್ನ ಜೀವನವೆಂದು ಹೇಳಿದ ಹೃದಯವನ್ನು ತಿರಸ್ಕರಿಸಿದೆ,
ನೀನೆ ಬೇಕು ಎಂದು ಹಟ ಮಾಡಿದ ಹೃದಯವ ಲೆಕ್ಕಿಸಿದೆ,
ನಿನ್ನ ಒಂದು ಮಾತಿಗೆ ವರ್ಷ ಕಾಲ ಕಾಲದ ಹೃದಯಕ್ಕೆ ಉತ್ತರಿಸದೆ,
ನಿನ್ನ ಸಮ್ಮತಿ ಸಿಗುತ್ತೆ ಎಂದು ಭರವಸೆ ಇಂದ ಕಾಡ ಹೃದಯಕ್ಕೆ ಅವಮಾನಿಸಿದೆ,
ನಿನಗಾಗಿ ಕಾದು ಸಾಕಾಗಿ ತನ್ನ ಜೀವನ ರೂಪಿಸಿಕೊಂಡು ಹೋರಾಟ ಹೃದಯಕ್ಕೆ ಚಡಪಡಿಸುತ್ತಿರುವೆಯೇ?,
ಎಂಥಾ ಹುಚ್ಚು ಮನಸ್ಸು ನೀನು.......
--ಪೂಜಾ
ಭವ್ಯ ಭಾರತದ ಕನಸನ್ನು ಕಂಡ ಭಾರತದ ನಾಯಕ..
ಶಾಂತಿ ಸೌಹಾರ್ದತೆಯ ಉಣಪಡಿಸಿದ ಪ್ರತಿಪಾದಕ..
ಅಹಿಂಸಾತ್ಮಕ ಆಲದ ಮರವ ಬೆಳೆಸಿದ ನಾಡಿನ ರೈತ..
ಭಾರತ ರಾಷ್ಟ್ರಕ್ಕೆ ಸ್ವಾತಂತ್ರ್ಯ ನೀಡಿದ ಭಾಗ್ಯವಿಧಾತ ...
ಸತ್ಯಮೇವ ಜಯತೆ ಘೋಷಣೆಯ ಹರಿಬಿಟ್ಟರು..
ಚಿತ್ತದಾಸದಲ್ಲಿ ಮುಳುಗಿದ ಭಾರತೀಯರ ಮುಕ್ತಗೊಳಿಸಿದರು..
ಬ್ರಿಟಿಷ್ರ ವಿರುದ್ಧ ಹೋರಾಡಲು ಪ್ರಜೆಗಳನ್ನು ಒಗ್ಗೂಡಿಸಿದರು..
ಸರ್ವತೋಮುಖ ಗುರಿಯ ಸಾಧಿಸುವ ಛಲವಾ ಅರಿತಿದ್ದರು..
ಸ್ವಾತಂತ್ರ್ಯದ ಮೂಲದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ನಡೆಸಿದರು..
ಅಸಹಕಾರ ಚಳುವಳಿಯ ಮೂಲಕ ಪರದೇಶಿಯ ಸರಕುಗಳನ್ನು ತೇಜಿಸಿಸಿದರು..
ಮಾನವೀಯತೆ ತಾಳ್ಮೆ ಅಹಿಂಸಾ ಮಾರ್ಗದ ಸಭಿ ರುಚಿಯ ತಿಳಿಸಿದರು..
ಕಾಯಕವೇ ಕೈಲಾಸ ಎಂದು ಬಲವಾಗಿ ಅರ್ಥೈಸಿದರು..
ಸ್ವಾತಂತ್ರ್ಯ ಸಿಗದೇ ಅಂಬಲಿಸಿದ್ದ ಭಾರತೀಯರಿಗೆ ಮಾರ್ಗದರ್ಶಿಯಾದರು..
ಅಂಧಕಾರದ ಕತ್ತಲಿನಲ್ಲಿ ಬೆಳಕಿನ ಕಿರಣದಂತೆ ಆಗಮಿಸಿದರು..
ಆಡಂಬರದ ಜೀವನವ ತ್ಯಜಿಸಿ ಸರಳತೆಯ ಮೂರ್ತಿಯಾದರು..
ಸತ್ಯಾ ಶಾಂತಿ ಒಂದೇ ಮಂತ್ರವೆಂದು ಗಾಂಧಿ ಪ್ರತಿಪಾದಿಸಿದರು..
ಭಾರತ ರಾಷ್ಟ್ರ ಭಾರತೀಯರಿಂದ ಕಂಗೊಳಿಸಬೇಕು ಎಂದು ಹೇಳಿಕೆ ನೀಡಿದರು ..
ದೇಶದ ವಿಭಜನೆಯಲ್ಲಿ ಹಿಂದೂ ಮುಸ್ಲಿಮರನ್ನು ವಿಭಾಗಿಸಿದರು..
ಸ್ವಾತಂತ್ರ್ಯ ಧೀರನ ಸಮಾಜ ವಿಜ್ಞಾನಿ ಸುಧಾರಕ ರಾಗಿ ನಾಡ ಸಲುಹಿದರು..
ಆದರ್ಶಗಳ ಮೂಲಕ ಪ್ರಜೆಗಳ ಹೃದಯದ ಇಂದಿಗೂ ಅಮರ...
ಚಿದಾನಂದ.ಎನ್
ದ್ವಿತೀಯ ಪಿಯುಸಿ
ನಾರಾಯಣಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ..