Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಇನ್ನೂ ಒಂದು ಜನ್ಮ
-ವಿರುವುದಾದರೆ
ಹಗಲಿರುಳೆನ್ನದೆ
ನಿನ್ನ ಕೆನ್ನೆಯ ಚುಂಬಿಸೋ
ಮುಂಗುರಳಾಗಿ
ಹುಟ್ಟಬೇಕೆಂಬ ಆಸೆ ಕಣೇ..!
- ವಿಠ್ಠಲ ಪಾಟೀಲ
01 Jan 2016, 11:03 pm
ಕಂಡೆ ಕನಸೊಂದ....
ಮನಸಲ್ಲಿ ಮೂಲೆಯ
ಒಳಗಿಂದ .....
ಮನಸು ಮಾಗಿತು
- Aghosh
01 Jan 2016, 05:31 pm
ಎನ್ನ ಎಡ ಬಲದೊಳಗೆ ವೈರಿಗಳಿರ್ದರೇನು
ಹರಿತವಾದ ಆಯುಧದಾರಿಯು ಅವರಾದರೇನು
ಕಡುವೈರಿಯ ಹಗೆತನವು ನಿನ್ನ ಮುಂದೆ ನಿಲ್ಲಲಾದೀತೆ? ಶ್ರೀ ಹರಿಯೆ ನಿನ್ನ ಅಭಯ ಹಸ್ತವಿರ್ದೊಡೆ ಹಾಲಾಹಲವು ಅಮೃತದ ಕಳಶವಾದೀತು...
ಎಲ್ಲ ಮಿತ್ರರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು
- Irayya Mathad
01 Jan 2016, 02:54 pm
ಭಾವನೆ ಎಂಬ ಹಕ್ಕಿಗಳ ಹಾರಾಟಕ್ಕೆ
ಮೈ ಮನ ಮರೆಯಿತಲ್ಲಿಗೆ
ತಿಳಿಯಿತಾದಿನ ಕೊನೆಯೆತಕೆ..........
- Subbu
30 Dec 2015, 11:28 am
ಪ್ರೀತಿ ಸಿಹಿಯಾದರೆ
ಮುಖದಲ್ಲಿ ನಗುವಿನ ಅಬ್ಬರ ಅಬ್ಬರ
ಕಹಿಯಾದರೆ
ಮುಖದಲ್ಲಿ ಬರಿ ಗೊಬ್ಬರ
- Irayya Mathad
28 Dec 2015, 11:50 pm
ನೀನು ನೋಡಿದ ಕ್ಷಣ
ಜರಿತ್ತು ನನ್ನ ಮನ
ನೋವಿಸದಿರು ನನ್ನ ಹೃದಯನ
ಒಪ್ಪಿಕೊ ನನ್ನ ಪ್ರೀತಿನ
ಇದೇ ಒಳ್ಳೆಯ ದಿನ
- Loki
28 Dec 2015, 01:23 pm
ಏತಕೋ ಮರುಳ ತಮ್ಮ ಯಾಕಿಂಗಾಡ್ತಿಯೊ ತಮ್ಮ
ಅಡವತ್ನ್ಯಾಗ ಐಸಿರಿ ಬಂದ ಹಂಗ ||ಪ ||
ಉಪ್ಪು ನೀರು ಕುಡಿದ ದೇಹ ಮುಪ್ಪ ಕಾಣುವುದೋ
ಮುಪ್ಪ ಬಂದ ವಯಸ್ಸಿಗೆ ಹಬ್ಬ ಏತಕೋ ನಿನಗೆ
ಗಾಣದೆತ್ತಿನಂಗೆ ದುಡಿಯಲೊಲ್ಲೇಯೆಂದೆ ಕುಂತಲ್ಲೆ
ಬಂತಲ್ಲೋ ನೂರಾರು ಬ್ಯಾನಿ ನಿಂಗೆ
ಸಾಸಿವೆಯಂಗೆ ಸವಿಸಿದ ಜೀವಕ್ಕೆ ಸಾವಿಲ್ಲೋ
ತಮ್ಮ ಸಾವಿಲ್ಲೋ
ಗುಂಪುಗೂಡಿ ಇಟ್ಟ ಸಂಪತ್ತೆಲ್ಲ ನಿನ್ನ ಬೆನ್ನಟ್ಟಿ ಬರುವುದೇನೊ ತಮ್ಮ. ಬರುವುದೇನೊ ತಮ್ಮ
ಮಂದ್ಯಾಗ ಬರಲಿಲ್ಲ ಮಂದಿ ಮಕ್ಳು ಅನ್ನಲಿಲ್ಲ
ವಿರಸದಿ ಮಾತಾಡಿ ವಿಷ ತುಂಬಿಕೊಂಡಿಯಲ್ಲೊ
ಎಣಿಸಿ ಬಂದ ಹಾದಿ ನಶಿಸಿ ಹೋಯಿತಲ್ಲೊ
ಹರವ್ಯಾಣ ಅನ್ನದ ಋಣ ತೀರಿತಲ್ಲೊ
ಸಾವಿನ ಗಂಟಿ ಬಡಿದು ಹೊಂಟೆಲ್ಲೊ ನೀ ಇಂದು
ಹೊರಲಾಕ ಸಿಗಲಿಲ್ಲ ನಾಲ್ಕಾರು ಮಂದಿ ನಿಂಗ
ಸುಡುವ ಬೆಂಕಿಯು ಸುಡಲಿಲ್ಲ ನಿನ್ನ ದೇಹ
ಪಾಪ ತೊಳೆಯುವ ಗಂಗೆ ನೂಕಿದಳಲ್ಲೊ ನಿನ್ನ
ಗುರುವಿನ ಗುಲಾಮನಾಗಿ ಹಿರಿಯರಿಗೆ ಹಣ್ಣಾಗಿ
ಎಲ್ಲರಿಗೂ ಬೇಕಾಗಿ ಗುರುವಿನ ಪಾದಕ್ಕೆ ಶರಣೆನ್ನೋ
ಮುಕುತಿಯ ಸನಿಹ ಬರುವೆಯಲ್ಲೋ ನೀ..
- Irayya Mathad
27 Dec 2015, 07:15 am
ಮೋಸವೇ ತುಂಬಿದ
ಈ ಲೋಕ ದಲ್ಲಿ
ಪ್ರೀತಿಯ ಹುಡುಕುವ
ಪ್ರೇಮಿಯೂ ನಾನಿಲ್ಲಿ ........
- ಅಯ್ಯುಬ್ ಅಲಿ ಕಾನ್
25 Dec 2015, 11:57 pm
ಮಾತು ಮಾತಿಗೆ ಜಗಳ ವಾಡಿ
ಮರು ಕ್ಷಣದಲ್ಲಿ ಹೆಗಲ ಮೇಲೆ ಕೈ ಹಾಕಿ ಹೋಗೋರು ಗೆಳೆಯರು
- ಅಯ್ಯುಬ್ ಅಲಿ ಕಾನ್
25 Dec 2015, 11:11 pm
ಪ್ರೀತಿಯ ಪಯಣದಲಿ
ಪರಿವಿಲ್ಲದೆ ನಡೆದ ಹಾದಿ
ಹಿಂದೆ ನೋಡಿದರೆ
ಕಷ್ಟಗಳ ಪರಿವಿಡಿ
ಮುಂದೆ ಸಾಗಲಾರದೆ
ನೋಂದಿದೆ ಈ ಪ್ರೀತಿ........
- Subbu
21 Dec 2015, 07:08 pm