Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದರಸಿಗೆ

ಮನದರಸಿಗೆ ಮನದೊಳಗೆ
ಮನೆ ಮಾಡಿ ಕಾಯುತಿಹೆನು
ಬಾ ಗೆಳತಿ ಮನದ ಈ ಅರಮನೆಗೆ........

- Subbu

21 Dec 2015, 06:56 pm

ಓ ನಲ್ಲೆ

ಕನಸೆಂಬ ಅರಮನೆಯಲ್ಲಿ
ಪ್ರೀತಿಯ ಉಯ್ಯಾಲೆಯ ಕಟ್ಟಿ
ಪ್ರೇಮಲೋಕದ ಕದ ತಟ್ಟಲು
ಒಂದೆಜ್ಜೆ ಮುಂದಟ್ಟೆ
ಓ ರತಿಯೆ ಓ ರತಿಯ....

- Irayya Mathad

21 Dec 2015, 03:55 pm

ಚುಕ್ಕಿಸಾಲು

ಬಾನ ತುಂಬ ಚುಕ್ಕಿಗಳ ಚಿತ್ತಾರ
ಗೆರೆ ಕೂಡಿಸಲು ನನ್ನವಳು ಕೈ ನೀಡಿ ನನ್ನ ಮುಖ ನೋಡಿದಳು
ನಾನು ಮುಗುಳ್ನಕ್ಕೆ
ಒಂದೆರಡು ಜೋಡಿಸಿ ಮೇಲೆ ನೋಡಿದಳು
ನನಗೆ ಕಂಡದ್ದು ಬರಿ ಚುಕ್ಕೆಗಳು ಮಾತ್ರ ನಡುವೆ ಚಂದ್ರಮನಿದ್ದ ಅವನು ಮೌನವಾಗಿದ್ದರೆ
ಅವಳಲ್ಲಿ ಏನಿತ್ತೋ ಮತ್ತೆ ನನ್ನ ಭುಜದ ಮೇಲೆ ತಲೆಯಿಟ್ಟು ನನ್ನ ಕೈ ಹಿಡಿದು ಆಕಾಶ ತೋರಿಸಿದಳು.
ಒಂದೆರಡು ಚುಕ್ಕೆಗೆ ಗೆರೆ ಎಳೆಸಿದಳು
ನಡುವೆ ಯಾರಿರಲಿಲ್ಲ ಎರಡು ಚುಕ್ಕೆಗಳು ಪಕ್ಕದಲ್ಲೆ ಇದ್ದವು..

ಕನ್ನಡಿಗ ರವಿಕುಮಾರ

- ರವಿಕುಮಾರ

21 Dec 2015, 01:55 am

ಮುತ್ತು ಮತ್ತು

ನಾನಿಟ್ಟ ಮುತ್ತ ಕೆನ್ನೆಯ ಮೇಲೆ ತಡಕಾಡಿದಳು ನಾಚುತ್ತ
ಕಣ್ಣುಗಳು ಮುಚ್ಚುತ್ತ ನನ್ನ ಬಟ್ಟೆ ಹಿಡಿದು ದೂರ ತಳ್ಳಿದಳು
ಒಂದೆರಡು ಕ್ಷಣ ಮೌನವೇ ಅವಳ ನಾಚಿಕೆಯ ಮೋಡಿಗೆ ಸಂಜೆ ರಂಗಾಗಿತ್ತು
ಪಕ್ಕದ ಮರ ತಬ್ಬಿಡಿದು ಪಶ್ಚಾತ್ತಾಪ ಪಟ್ಟಳು ಮತ್ತೆರಡು ಮುತ್ತುಗಳು ತಪ್ಪಿಹೋದವೆಂದು.

ಕನ್ನಡಿಗ ರವಿಕುಮಾರ

- ರವಿಕುಮಾರ

20 Dec 2015, 05:54 pm

ಇಲಿ ಹುಲಿ

ಒಂದು ಇಲಿ ಇನ್ನೊಂದು ಹುಲಿ
ನಮ್ಮ .........













ಪಕ್ಕದ ಮನೆ
ಫ್ಯಾಮಿಲಿ ......

- Ranganath D S

20 Dec 2015, 04:09 pm

Nakkalu ಮತ್ತು makkallu

"ಆಕಸ್ಮಿಕ ಕಂಡಳು
ನನ್ನ ನೋಡಿ ನಕ್ಕಳು
ನಮಗೀಗ ಇಬ್ಬರು ಮಕ್ಕಳು "

- Ranganath D S

20 Dec 2015, 04:07 pm

ನಾನು ಬಡವಾ ಕಾಡಿತು ನಿನ್

ನಾನು ಬಡವಾ ಕಾಡಿತು ನಿನ್ನ ನಗುವಾ....ಎ ಚಲುವೆ ನಿನ್ನ. ಚೆಲುವ ಹೇಗೆ ಬನ್ನಿ ಸಲಿ ಶಬ್ದ ಗಳೆ ಸಾಲುತ್ತಿರಲಿಲ್ಲ.

- jafar

20 Dec 2015, 06:27 am

ದೇವಕನ್ಯೆ

ತಾವರೆಗಳೆ ನಿನ್ನ ನಯನಗಳಾಗಿ
ಧೃವತಾರೆಯೆ ನಿನಗೆ ಸಿಂಧೂರವಾಗಿ
ಚಂದಿರನೆ ನಿನ್ನ ಅಂದವಾಗಿ
ಶ್ರೀಗಂಧದ ಗೊಂಬೆ ನೀನಾಗಿ
ನನ್ನ ಪ್ರೀತಿ ಪಯಣದಲ್ಲಿ
ಸಪ್ತಪದಿ ತುಳಿದು ನನ್ನ ಬಾಳ ಸ್ನೇಹಿತೆ ನೀನಾದೆ...

- Irayya Mathad

20 Dec 2015, 12:31 am

ಹೊಂಬೆಳಕು

ಕೊರಗು ನೀನೇಕೆ ಮೂಡಿಸಬಾರದು ನನ್ನ
ಬಾಳಿನಲ್ಲಿ ಹೊಂಬೆಳಕು
ಸದ್ದಿಲ್ಲದೇ ಮನದಲಿ ಬಂದು
ಕಳೆದುಹೋದ ನೆನಪುಗಳನ್ನು ಮತ್ತೆ ಕೆದಕಿ
ಕಾಲಹರಣ ಮಾಡದೇ ತೋರು ಭರವಸೆಯ ಬೆಳಕು
ಬೇಜಾರಿನ ಗಡಿ ದಾಟಿಸಿ ಸಂತೋಷದ ದಾರಿಯಲ್ಲಿ
ಮುನ್ನಡೆಸುತ್ತಾ
ನನ್ನ ಜೀವನದಲ್ಲಿ ತೋರು ಅಚ್ಚರಿಯ ಬೆರಗು!!!

- ಎ ಜಿ ಶರಣ್

19 Dec 2015, 07:44 am

ನೆನಪು ಮರಳಿ..

ನೆನಪು ಮರಳಿ ಸುಳಿಯುತಿದೆ,
ಸೋತ ಮನವ ಕೆಣಕುತಿದೆ,
ಸತ್ತ ಬಳ್ಳಿಯಲ್ಲಿ ಅರಳಿ
ಗತದ ಘಮವ ಸೂಸುತಿದೆ.

ಆಸರೆಗೆ ಅಂಗಲಾಚಿ,
ಹನಿ ಪ್ರೇಮಕೆ ಹೃದಯ ಚಾಚಿ,
ಕಾದು ಸೋತ ಭಾವದುರಿಯ
ಹೊತ್ತು ತರುತಿದೆ
ಮತ್ತೆ ಬರುತಿದೆ.

ಕಳೆದುದರ ಹೊಳಪನರಸಿ,
ಉಳಿದುದರ ಬೆಳಕ ಮರೆಸಿ,
ಸಿಗದ ಮೋಹ ತೀರದೆಡೆಗೆ
ಮನವ ನಡೆಸಿದೆ
ಅಲೆಸಿ ದಣಿಸಿದೆ.

ಯಾರ ಹೃದಯ ಯಾರ ನೆಲೆಯೋ,
ಯಾರ ಸೆಳೆವುದ್ಯಾವ ಸೆಲೆಯೋ,
ಬಯಕೆ ಬೂದಿಯಡಿಯ ಕಾವು
ಹೊತ್ತಿ ಉರಿದಿದೆ,
ಮತ್ತೆ ಸುಡುತಿದೆ

- ವಿನಾಯಕ ಭಟ್

19 Dec 2015, 02:49 am