Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶರಣಾದೆ ಪ್ರೀತಿಗೆ

ಸ್ನೇಹದ ಪಣತೆಯಲ್ಲಿ ಪ್ರೇಮದ ಅಮೃತ ಹಾಕಿ ಪ್ರೀತಿಯ ಬೆಳಕು ಚೆಲ್ಲಿದೆ ನೀ
ಸೋಲನ್ನು ಅರಿಯದ ನಾನು ನಿನಗೆ ಸೋತೆನಿಂದು
ಪ್ರೀತಿಗೆ ಶರಣಾಗತನಾಗಿ ಮಾಡಿದೆ ನೀ

- Irayya Mathad

08 Nov 2015, 05:15 am

ಹದಿಹರೆಯದ ಹಗಲುಗನಸು

ಹದಿನೆಂಟು ದಾಟಿಯಾಯಿತು ಹಗಲಿನ್ನು ಮುಳಗದಾಯಿತು
ಅತೀಯಾಯಿತು ಕನವರಿಕೆ ಕನಸಲ್ಲಿ
ಪ್ರತಿಕ್ಷಣವು ಪ್ರತಿದಿನವು ಕಣ್ಮುಂದೆ ನೀ ಬರಲು
ನಾ ಬಯಸಿದೆ ನಿನ್ನನೆ ವರವಾಗಿ

- Irayya Mathad

07 Nov 2015, 05:27 pm

ಚೂರಾದ ಕನಸು..

ಕಂಡಿದ್ದೆ ಕನಸೊಂದ.....
ನನಸಾಗುವ ಮೊದಲೇ
ಒಡೆದು ಚೂರು ನೂರಾಯ್ತು.....

ಆದರೂ ಸೋಲೆನು ನಾನು...
ಒಂದು ಕನಸು ಒಡೆದರೇನಂತೆ...
ಬಿಡದೆ ಕನಸ ಕಾಣಿತಲಿರುವೆ
ನನಸಾಗುವವರೆಗೂ
ಅದುವೇ ಜೀವನದ
ನಿಜವಾದ ಅರ್ಥ.....

- ನಿಶಾ ರೂಪ

07 Nov 2015, 04:40 pm

ಭರತ ಭೂಮಿಯ ಮಣಿ ಮುಕುಟಗಳು

೧) ವಿಷವೆರೆದವರಿಗೆ ಹಾಲೆರೆಯುವ ಗುಣದವರು
೨) ನಿರಾಶ್ರಿತರಿಗೆ ಆಶ್ರಯದಾತರು
೩) ಪರಕೀಯರಿಗು ಪರಮಾನ್ನ ನೀಯುವವರು
೪) ತಾಯ್ನಾಡಿಗಾಗಿ ತಲೆ ನೀಡುವವರು
೫) ದಾನ ಧರ್ಮದಲ್ಲಿ ಕರ್ಣನನ್ನೆ ಮೀರಿಸುವವರು
೬) ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ, ಅಡಿಯಿಂದ ಮುಡಿಯವರೆಗೂ ಹಿಂದೂಸ್ತಾನದ ಹಿರಿಮೆಯನ್ನು ಮೆರೆದವರು
೭) ವಿಶ್ವದಾದ್ಯಂತ ವಿಶ್ವಮಾನವತೆಯ ಮೆರೆದವರು
೮) ವಿಶ್ವ ಭಾಷಾ ಸಾಹಿತ್ಯದ ಶಿಖರಕ್ಕೆ ಹೊನ್ನ ಕಳಸವ ನೀಡಿದವರು
೯) ವಿವಿಧತೆಯಲ್ಲಿ ಏಕತೆ ಮೆರೆದ ವಿಶ್ವ ಮಾನ್ಯರಿವರು
೧೦) ಸಂಗೀತ ಲೋಕಕ್ಕೆ ಸಾಮ್ರಾಟರನ್ನು ನೀಡಿದವರು
೧೧) ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನಕ್ಕೆ ಆದಿ ಮೂಲ ಇವರು
೧೨) ಸರ್ವ ಧರ್ಮಗಳಲ್ಲಿ ಸಮಾನತೆಯ ಮೆರೆದವರು
೧೩) "ದಯವೇ ಧರ್ಮದ ಮೂಲವಯ್ಯ " ಎಂಬ ವಚನದಂತೆ ಸಕಲ ಚರಾ ಚರ ಜೀವಿಗಳಿಗೆ ಜೀವಾಮೃತವ ನೀಡಿದವರು
೧೪) ಜ್ಞಾನಿಗಳಿಗೆ ಜ್ಞಾನಿಗಳಾಗಿ ಜ್ಞಾನಾಮೃತವ ಹರಡಿದವರು

ಇವರೇ ನನ್ನ ಭಾರತವೆಂಬ ಸ್ವರ್ಗಲೋಕದ ಶಿರೋಮಣಿಗಳು

- Irayya Mathad

06 Nov 2015, 10:35 am

ಯಾರು ಈ ಪ್ರೀತಿ ಗೆಲ್ಲುವವರು.

ಯಾರೋ ಯಾರೋ ಈ ಪ್ರೀತಿ ಗೆಲ್ಲುವವರು
ಮನದಾಳದಲ್ಲಿ ನಿಂತು ಕೂಗಿ ಬಂತು ಪ್ರೀತಿ

ಕಣ್ಣ ರೆಪ್ಪೆ ಮಿಟುಕಿ ಕಾಡಿತು ನನ್ನ ಪ್ರೀತಿ
ಹೃದಯ ಬಡಿತ ಮೀರಿ ಪ್ರೀತಿ ಮಿಡಿತ ಮೀಟಿ

ಅರಿಯದ ಮನಸ್ಸಿನಲ್ಲಿ ಮನೆಮಾಡಿ ನಿಂತ ಕಳ್ಳಿ
ಬಂಗಾರದೆಲೆಯ ಮೇಲೆ ಚಿತ್ತಾರ ಬಿಡಿಸಿದವಳೆ

ಹೊನ್ನಿನ ಕಿರಣ ಸೂಸಿ ಮನವೆಲ್ಲ ತಣಿಸಿ ನಿಂದೆ
ಕನಸಲ್ಲಿ ಕನ್ನ ಹಾಕಿ ಹೃದಯಕ್ಕೆ ಬಣ್ಣ ಹಚ್ಚಿ

ಮುತ್ತಿನ ಮಣಿಯಂತೆ ಪ್ರೀತಿಯ ಮುತ್ತ ತಂದೆ
ಸವಿಮಾತನಾಡಿ ನಿಂದೆ ನನ್ನುಸಿರಲಿ ಬೆರೆತು ಹೋದೆ

ಕರುನಾಡ ಮಣ್ಣಿನಲಿ ಕನ್ನಡದ ಹಿರಿಮೆ ತಂದೆ
ಗಂಧದ ಗುಡಿಯಲ್ಲಿ ಸೌಂದರ್ಯ ದೇವಿಯಾದೆ

- Irayya Mathad

04 Nov 2015, 01:34 am

ಕನ್ನಡದ "ಕೇಸರಿ"

ಮಿಂಚಿನ ಓಟದಂತೆ
ಸಿಡಿಲಿನ ಆರ್ಭಟದಂತೆ
ಸೂರ್ಯನ ಪ್ರಕಾಶದಂತೆ
ಸಮುದ್ರದ ಅಲೆಯಂತೆ
ಸಹ್ಯಾದ್ರಿ ಬೆಟ್ಟದ ದಿಟ್ಟತೆಯಂತೆ
ಗರ್ಜಿಸು ನೀನು ಕನ್ನಡದ 'ಕೇಸರಿ'ಯಂತೆ

- Irayya Mathad

03 Nov 2015, 12:25 am

ಕರುಣೆಯ ಕಡಲು ಕನ್ನಡ

ಕನ್ನಡ ಇದು ಕನ್ನಡ ನರನಾಡಿಯಲ್ಲೂ ಕನ್ನಡ ನನ್ನುಸಿರಿನಲ್ಲೂ ಕನ್ನಡ
ಬೆಳೆ ಸಿರಿಯಲ್ಲೂ ಕನ್ನಡ ನಡೆನುಡಿಯಲ್ಲೂ ಕನ್ನಡ

ವಿಷವನ್ನರಗಿಸಿ ಅಮೃತ ನೀಡೊ ಮಾತೆ ಮಧುರ ಕನ್ನಡ
ಜಾತಿ ಮತಗಳ ಮೀರಿ ನಡೆಯುವ ಪ್ರೀತಿ ಸ್ನೇಹದ ಕಂಕಣ ಬೆಸೆಯುವ ಒಂದೇ ಮತವು ಕನ್ನಡ

ಉಸಿರ ಉಸಿರಲಿ ನೀತಿ ಕಲಿಸುವ ನನ್ನ ನುಡಿಯೆ ಕನ್ನಡ
ಸುಮಧುರ ವಾಣಿಯ ಮುದವನು ನೀಡುವ ಸವಿನುಡಿಯೆ ಕನ್ನಡ

ಮೈಮನ ಮರೆಯಿಸಿ ಮನವನು ಪುಳಕಿಸಿ ನಾಕವ ತೋರಿಸೊ ಕನ್ನಡ
ಅಂದದ ನಾಡಿದು ಚೆಂದದ ಬೀಡಿದು ಗಂಧದ ಗುಡಿಯಿದು ಕನ್ನಡ

ಶಾಂತಿ ಸೌಹಾರ್ದ ಪ್ರೀತಿಗೆ ಮುನ್ನುಡಿ ಬರೆದಿಹ ಕನ್ನಡ
ಶರಣ ದಾಸರ ಹಿತವಚನಕ್ಕೆ ಮೇರು ನುಡಿಯೆ ಕನ್ನಡ

ಭೂದೇವಿಯ ಸೌಂದರ್ಯಕ್ಕೆ ಹೊನ್ನಿನ ಮುಕುಟವೆ ಕನ್ನಡ
ಅಲಂಕಾರದಿ ತ್ರಿಪದಿ ಷಟ್ಪದಿ ಪದಗಳ ರಾಶಿಯೇ ಕನ್ನಡ

ಅನ್ಯರೆನ್ನದೆ ಅಂಗುಲ ನೀಡಿ ತಲೆ ಕಾಯುವುದು ಕನ್ನಡ
ಸಿರಿತನವೆಂಬುದು ಮನದಿಂದರಿತು ಬೆರೆತು ಬಾಳುವ ಕನ್ನಡ

ಕಪ್ಪು ಮಣ್ಣಿನ ಕಬ್ಬಿನ ರಾಶಿಯ ಕರುಣೆಯ ಮೂರ್ತಿಯು ಕನ್ನಡ
ಸಾವಿನಲ್ಲಿಯೂ ನೋವಿನಲ್ಲಿಯೂ ಒಳಿತನು ಬಯಸುವ ಕನ್ನಡ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಜೈ ಕರ್ನಾಟಕ ಮಾತೆ








- Irayya Mathad

03 Nov 2015, 12:18 am

ನಿನ್ನ ನೆರಳು ನನ್ನ ಬಾಳು

ನೀ ಬಂದೆ ಕತ್ತಾಲಾದ ಜೀವನದಲ್ಲಿ
ಪ್ರೀತಿಯಾ ಬೆಳಕು ಚೆಲ್ಲಿ
ನಿನ್ನ ನಗೆಯ ಹೊಳಪು
ತಂದಿದೆ ನನ್ನಗೆ ಹೊರುಪು
ಸಾಧಿಸಲು ನಿರ್ಧರಿಸಿರುವೆ ನಾ
ಪ್ರೀತಿಯ ಬಾಳ್ವೆನಾ ನಡೆಸೋಣಾ
ಪ್ರೀತಿಯಿಂದ ಗೆಲ್ಲೂಣ ಜಗವ

- Shriram

01 Nov 2015, 06:38 am

ಪರಿಹಾರ

ಸಾಲ ಸೊಲ ಮಾಡಿ
ತಿರಿಸಲಾಗದೆ
ಆತ್ಮಹತ್ಯೆಗೆ ರೈತ ಶರಣಾದ!?
ಪರಿಹಾರ ಪಡೆಯಲು
ಆತನ ಕುಟುಂಬದವರು
ಅಲೆದು ಅಲೆದು
ಸುಸ್ತಾಗಿ ಹೈರಾಣದ್ರು!?.

- Satyasagar

30 Oct 2015, 04:38 pm

ಮಾತಿಲ್ಲದೆ

ಕವಿತೆಯ ಒಳಗೊಂದು ಕವಿತೆ
ಕನಸ ಒಳಗೊಂದು ಕನಸು
ಮೌನದೊಳಗೊಂದು ಮೌನ
ಏಕಾಂಗಿಯ ಬದುಕಲೊಂದು ಏಕಾಂಗಿಯ ಜೊತೆಗಾರ
ಕವಿತೆಗೆ ಸಾವಿರ ಪದಗಳ ಮಾಲೆ
ಕನಸಿಗೆ ಸುಂದರ ಕ್ಷಣಗಳ ಬಣ್ಣ
ಮೌನಕ್ಕೆ ಮಾತಿಲ್ಲದೆ ಸಾಗಿದೆ ಹೃದಯದೊಳಗಿನ ಹೃದಯ
ಮೌನ

- ರವಿಕುಮಾರ

30 Oct 2015, 11:07 am