Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪಿದೆ, ,,,

ನೆನಪಿದೆ,,,,,

ನೆನಪಿದೆ , ಹಣ್ಣೆಲೆ ಉದುರಿ
ಗಾಳಿಯಲ್ಲಿ ತವಳುತ್ತ
ಕೊನೆ ಉಸಿರೆಳೆದುಕೊಳ್ಳುವಾಗ
ಬೋಳಾದ ಮರಗಳ ದುಃಖವ .

ನೆನಪಿದೆ , ಮರ ಕೆತ್ತಿ ನೇಗಿಲ
ಮಾಡಿ ಕಲ್ಲು ಮಣ್ಣುಗಳ ಜೊತೆ
ಅಲಾಂಗಿಸಿ ಅಳುವಾಗ ಕಣ್ಣೀರು
ಮಳೆಯಂತೆ ಬಂದ ನಗು ಮುಖವ.

ನೆನಪಿದೆ, ಶ್ರಮದ ಬೆವರು
ನನ್ನೂರಿನ ಸುಗಂಧ ವಾಸನೆ.
ಗುಡಿಸಲಲ್ಲಿ ಇಣುಕುವ ಮಳೆ ಹನಿ
ಪಾತ್ರೆಯಲ್ಲಿ ಧುಮುಕಿ ಸಂಗೀತವಾಗಿದ್ದು.

ನೆನಪಿದೆ , ಕತ್ತಿ ಮಸೆವ ಕಲ್ಲು
ಗೆಯುವ ಕೈಗಳ ಯಜಮಾನ.
ಗೋಣಿಚೀಲದ ದವಸ
ದಿನ ನಿತ್ಯ ನಮಗೆ ಸಾಹುಕಾರ.

# ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

17 Oct 2015, 08:54 pm

ಜೀವ

ನನ್ನ ಮನವು ಸಹಿಸಲಾರದು
ಕಷ್ಟದ ನೋವ
ಹೃದಯಕೆ ಮನಸೇ ಸರ್ವಸ್ವ
ಆದರೂ ಈ ಮನಕೆ ಬೇಕು
ಬಡಜೀವವ ಪ್ರೀತಿಸುವ ಜೀವ

- shiva

17 Oct 2015, 05:41 pm

ಏಕೋ ಕೋಪ

ಅವಳಿಗೆ ಏಕೋ ಕೋಪ
ನಗುವಲ್ಲೆ ಕೊಲ್ಲುವಳು.
ಆ ಕಿರು ನಗೆಗೆ
ಮನಸ್ಸು ಓಡುವುದು
ದಿಕ್ಕು ಕಾಣದೆ.
ಅಂತ ಕೋಪಕ್ಕೆ
ನಾನೇನು ಮಾಡಿದೆ ?

- ರವಿಕುಮಾರ

14 Oct 2015, 07:39 am

ಕಲಿಯುಗ ಕಾಲ ಕೆಟ್ಟತಿ!

ಕಲಿಯುಗ ಕಾಲ ಕೆಟ್ಟತಿ
ಸಂಸ್ಕೃತಿಯೆಂಬುದು ಮರೇತೈತಿ
ಹೆಣ್ಣು ಹೋಗಿ ಗಂಡಾಗೈತಿ
ಗಂಡಿಗೆ ದಿಕ್ಕು ತಪ್ಪಿ ಹೋಗೈತಿ !

ತಲೆಮೇಲಿನ ಸೆರಗ ಹೋಗೈತಿ
ಕ್ಯಾಪು - ಚಸ್ಮಾ ಅಂತ ಬಂದೈತಿ !!

ಹಣಸಿಣ ಬೊಟ್ಟು ಹೋಗೈತಿ
ಬದಲಾಗಿ ಟ್ಯಾಟೂ ಬಂದೈತಿ !!!

ಕುಂಕುಮ ಬೊಟ್ಟು ಹೋಗೈತಿ
ಮಿಂಚಿನ ಟಿಕಳಿ ಕಾಣತೈತಿ !!!!

ಸೀರಿ - ಕುಬುಸವೆಲ್ಲ ಹೋಗೈತಿ
ಜೀನ್ಸುಪ್ಯಾಂಟುಗಳ ಕಾಲೈತಿ !!!!!

ಉದ್ದುದ್ದ ಸೆರಗ ಮರೇತೈತಿ
ಎಳೆಯುವ ಬ್ಯಾಗು ಬಂದೈತಿ !!!!!!

ಅರಿಸಿಣ-ಕುಂಕುಮ ಹೋಗೈತಿ
ಸ್ನೋ - ಪೌಡರ್ ಹೋಳಿತೈತಿ !!!!!!!

ಬಸ್ಸು ಹತ್ತುವುದು ಮರೇತೈತಿ
ಸ್ಕೂಟಿ ಹಿಡಿಯುದು ಕಾಣತೈತಿ !!!!!!!!

ಹಾಡು ಹೇಳುವುದು ಹೋಗೈತಿ
ಕಮೆಂಟ ಮಾಡುವುದು ಹೇಚೈತಿ !!!!!!!!!

ಕಥೆಹೇಳುವುದು ಮರೇತೈತಿ
ಚಾಟ್ - ಗೀಟ್ ಅಂತ ಬಂದೈತಿ !!!!!!!!!!

ಕನ್ನಡ ಮಾತಡೊದ ಹೋಗೈತಿ
ಟಸು - ಪುಸು ಇಂಗ್ಲೀಷ್ ಬಂದೈತಿ !!!!!!!!!!!

ಭಾರತ ಸಂಸ್ಕೃತಿ ಮರೇತೈತಿ
ಪಾರೆನ ಪ್ಯಾಶನ ಹೇಚೈತಿ !!!!!!!!!!!!

- BIRESH KOTI

13 Oct 2015, 04:30 pm

ಸಹಾಯ

ಒಬ್ಬರಿಗೆ ಸಹಾಯ ಮಾಡಿ
ನೀವು ಒಳ್ಳೆಯದು ಬಯಸಿದರು
ಅವರು ನಿಮಗೆ ಕೆಟ್ಟದ್ದು ಮಾಡಿದರೆ
ಬೇಸರ ಮಾಡಿಕೊಳ್ಳಬೆಡಿ!!
ಜನ ಯಾವತ್ತು ಕಲ್ಲು ಎಸೆಯುವದು
ಮಾವಿನ ಮರಕ್ಕೆ ಬೇವಿನ ಮರಕ್ಕಲ್ಲ!!!

- ಹೊಳಲೇಶ ವಾಲೇಕಾರ

12 Oct 2015, 02:26 pm

ಪ್ರೀತಿ

ಅಕ್ಕಿ ಸೊಸಿದರೆ ಕಲ್ಲು ಇರಬಾರದು
ದೀಪ ಹಚ್ಚಿದರೆ ಕತ್ತಲು ಇರಬಾರದು
ಪ್ರೀತಿ ಮಾಡಿದರೆ ಕೈ ಬಿಡಬಾರದು

ಜೀವನಕ್ಕಿಂತ ಜೀವ ಮುಖ್ಯ
ಪ್ರೀತಿಗಿಂತ ಪ್ರೀತಿಸುವರು ಮುಖ್ಯ
ಅದಕ್ಕೆ
ಪ್ರೀತಿಸುವವರಿಗೆ ಜೀವನ ಕೊಡಿ
ಪ್ರೀತಿಗೆ ಜೀವನ ಕೊಡಿ

- ಹೊಳಲೇಶ ವಾಲೇಕಾರ

12 Oct 2015, 02:11 pm

ನೊವು

ಮನಸ್ಸಿಗೆ ನೊವಾದರೆ
ಮನಸ್ಸಲ್ಲಿ ಇರುವವರಿಗೆ ಹೇಳಬಹುದು
ಆದರೆ ಮನಸ್ಸಲ್ಲಿ ಇರುವವರು ಮನಸ್ಸಿಗೆ ನೋವು ಮಾಡಿದರೆ
ಮನಸ್ಸಲ್ಲಿ ಇರುವ ನೋವನ್ನು ಯಾರಿಗೆ ಹೇಳುವುದು

- ಹೊಳಲೇಶ ವಾಲೇಕಾರ

12 Oct 2015, 02:03 pm

ಸ್ನೇಹ

ಮಂಜು ಕರಗಬಹುದು
ಮುತ್ತು ಒಡೆಯಬಹುದು
ನೀವು ನನ್ನನು ಕರೆಯಬಹುದು
ಆದರೆ ನಾನು ನಿಮ್ಮ ಸ್ನೇಹವನ್ನು ಮರೆಯುವದಿಲ್ಲಾ
ಇಂತಿ ನಿಮ್ಮ ಸ್ನೇಹ ಜೀವಿ
"ಹೊಳಲೇಶ"

- ಹೊಳಲೇಶ ವಾಲೇಕಾರ

12 Oct 2015, 01:58 pm

ಲಕ್ಷ್ಯಕೊಡಬಾರದೆ?

ಬೆಂಕಿ ಹತ್ತುತ್ತಿರಲು
ಕಾಡು ಉರಿಯುತ್ತಿರಲು
ವನ್ಯ ಮೃಗಗಳಿಕ್ಕಟ್ಟಿನಲ್ಲಿರಲು
ಸ್ವಲ್ಪ ಇತ್ತಕಡೆ ಲಕ್ಷ್ಯಕೊಡಬಾರದೆ?


ಹಸಿರು ನಾಶವಾಗುತ್ತಿರಲು
ಕಪ್ಪು ವಕ್ಕರಿಸುತ್ತಿರಲು
ಮೃಗಗಳಿಗೆ ದಿಕ್ಕು ತಪ್ಪಿರಲು
ಸ್ವಲ್ಪ ಅವುಗಳು ಶೋಕಕಥೆ ಆಲಿಸಬಾರದೆ?


ಕಪ್ಪು ನದಿಯು ಹರಿಯುತ್ತಿರಲು
ಪ್ಯಾಕ್ಟಿರಿಗಳು ರಸಾಯನಿಕಗಳ ವಿಸರ್ಜಿಸುತ್ತಿರಲು
ಜಲಚರಗಳು ಎದ್ದೆದ್ದು ಬೀಳುತ್ತಿರಲು
ಸ್ವಲ್ಪ ಈ ಬಗ್ಗೆ ಯೋಚಿಸಬಾರದೇ?

--ಕೋಟಿ ಬೀರೇಶ

- BIRESH KOTI

11 Oct 2015, 01:30 pm

ಕೊನೆ ಗಿರಾಕಿ...2

-- ಕೊನೆ ಗಿರಾಕಿ


ಸತ್ತವತಿಯ ಚರ್ಮದಲ್ಲಿ ಡಂಗುರ ಮಾಡಿ
ನಮ್ಮದೇ ರಾಗಕ್ಕೆ ಹೊಂದಿಸಿ ಹಾಡಿ
ಸತ್ತ ಚರ್ಮ ಮತ್ತೆ ಇಂಪಂತೆ ಹುಟ್ಟಿ
ಅರಿವಿಲ್ಲದೆಯೇ ಸಾಯುತ್ತದೆ
ಆದರೆ ಕಂಪನ ಕಂಪಿಸಿ.

ಇದಂತ್ತೆ ಇದ್ದು ಎದ್ದು ಹೋಗದ ಹೋಗಲೋಲ್ಲದ
ಋಣವಂತೆ ಕಣದಲು ಕಾಯುವುದರಲ್ಲು
ಗಣಗಳ ಗುಂಪು ದೊಡ್ಡದಾಗಿರಲು
ಕಾರ್ಮೋಡದ ಕಪ್ಪು ಕುತ್ತಿಗೆಯ ಸಂಮುಖದಲ್ಲಿ.

ಗಾಳಿಪಟನು ದಾರದಿಂದ ಹಾರಿ ದೂರಹೋದಂತೆ
ಪಟದ ಹುಟ್ಟಿಗೆ ಕಾರಣ ಕಡ್ಡಿಗಳಂತೆ
ದಾರವು ಕಡ್ಡಿಯೋ ತೋರಣದ ಆಟವಷ್ಟೆ
ನೋಟದ ಆಂತರಿಕ ಕಣ್ಣುಗಳ ಜೊತೆಯಲ್ಲಿ .

ಇವೆಲ್ಲವೂ ಮುಂದು ಇನ್ನು ಮುಂದು
ಎಂದು ಮುಂದೆ ಮುಖಮಾಡಿ ನಡೆದರೆ
ಕೊನೆಯ ದಾರಿ ಮುದುಡಿ ಮುಪ್ಪಾಗಿ ಹೋದರೆ
ಇರುವರೆಲ್ಲರಲು ಕೊನೆಗಿರಾಕಿ ಯಾರು . ?

## ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

10 Oct 2015, 07:45 pm