Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಂಡಿದ್ದೆ ಕನಸೊಂದ.....
ನನಸಾಗುವ ಮೊದಲೇ
ಒಡೆದು ಚೂರು ನೂರಾಯ್ತು.....
ಆದರೂ ಸೋಲೆನು ನಾನು...
ಒಂದು ಕನಸು ಒಡೆದರೇನಂತೆ...
ಬಿಡದೆ ಕನಸ ಕಾಣಿತಲಿರುವೆ
ನನಸಾಗುವವರೆಗೂ
ಅದುವೇ ಜೀವನದ
ನಿಜವಾದ ಅರ್ಥ.....
- ನಿಶಾ ರೂಪ
07 Nov 2015, 04:40 pm
೧) ವಿಷವೆರೆದವರಿಗೆ ಹಾಲೆರೆಯುವ ಗುಣದವರು
೨) ನಿರಾಶ್ರಿತರಿಗೆ ಆಶ್ರಯದಾತರು
೩) ಪರಕೀಯರಿಗು ಪರಮಾನ್ನ ನೀಯುವವರು
೪) ತಾಯ್ನಾಡಿಗಾಗಿ ತಲೆ ನೀಡುವವರು
೫) ದಾನ ಧರ್ಮದಲ್ಲಿ ಕರ್ಣನನ್ನೆ ಮೀರಿಸುವವರು
೬) ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ, ಅಡಿಯಿಂದ ಮುಡಿಯವರೆಗೂ ಹಿಂದೂಸ್ತಾನದ ಹಿರಿಮೆಯನ್ನು ಮೆರೆದವರು
೭) ವಿಶ್ವದಾದ್ಯಂತ ವಿಶ್ವಮಾನವತೆಯ ಮೆರೆದವರು
೮) ವಿಶ್ವ ಭಾಷಾ ಸಾಹಿತ್ಯದ ಶಿಖರಕ್ಕೆ ಹೊನ್ನ ಕಳಸವ ನೀಡಿದವರು
೯) ವಿವಿಧತೆಯಲ್ಲಿ ಏಕತೆ ಮೆರೆದ ವಿಶ್ವ ಮಾನ್ಯರಿವರು
೧೦) ಸಂಗೀತ ಲೋಕಕ್ಕೆ ಸಾಮ್ರಾಟರನ್ನು ನೀಡಿದವರು
೧೧) ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನಕ್ಕೆ ಆದಿ ಮೂಲ ಇವರು
೧೨) ಸರ್ವ ಧರ್ಮಗಳಲ್ಲಿ ಸಮಾನತೆಯ ಮೆರೆದವರು
೧೩) "ದಯವೇ ಧರ್ಮದ ಮೂಲವಯ್ಯ " ಎಂಬ ವಚನದಂತೆ ಸಕಲ ಚರಾ ಚರ ಜೀವಿಗಳಿಗೆ ಜೀವಾಮೃತವ ನೀಡಿದವರು
೧೪) ಜ್ಞಾನಿಗಳಿಗೆ ಜ್ಞಾನಿಗಳಾಗಿ ಜ್ಞಾನಾಮೃತವ ಹರಡಿದವರು
ಇವರೇ ನನ್ನ ಭಾರತವೆಂಬ ಸ್ವರ್ಗಲೋಕದ ಶಿರೋಮಣಿಗಳು
- Irayya Mathad
06 Nov 2015, 10:35 am
ಯಾರೋ ಯಾರೋ ಈ ಪ್ರೀತಿ ಗೆಲ್ಲುವವರು
ಮನದಾಳದಲ್ಲಿ ನಿಂತು ಕೂಗಿ ಬಂತು ಪ್ರೀತಿ
ಕಣ್ಣ ರೆಪ್ಪೆ ಮಿಟುಕಿ ಕಾಡಿತು ನನ್ನ ಪ್ರೀತಿ
ಹೃದಯ ಬಡಿತ ಮೀರಿ ಪ್ರೀತಿ ಮಿಡಿತ ಮೀಟಿ
ಅರಿಯದ ಮನಸ್ಸಿನಲ್ಲಿ ಮನೆಮಾಡಿ ನಿಂತ ಕಳ್ಳಿ
ಬಂಗಾರದೆಲೆಯ ಮೇಲೆ ಚಿತ್ತಾರ ಬಿಡಿಸಿದವಳೆ
ಹೊನ್ನಿನ ಕಿರಣ ಸೂಸಿ ಮನವೆಲ್ಲ ತಣಿಸಿ ನಿಂದೆ
ಕನಸಲ್ಲಿ ಕನ್ನ ಹಾಕಿ ಹೃದಯಕ್ಕೆ ಬಣ್ಣ ಹಚ್ಚಿ
ಮುತ್ತಿನ ಮಣಿಯಂತೆ ಪ್ರೀತಿಯ ಮುತ್ತ ತಂದೆ
ಸವಿಮಾತನಾಡಿ ನಿಂದೆ ನನ್ನುಸಿರಲಿ ಬೆರೆತು ಹೋದೆ
ಕರುನಾಡ ಮಣ್ಣಿನಲಿ ಕನ್ನಡದ ಹಿರಿಮೆ ತಂದೆ
ಗಂಧದ ಗುಡಿಯಲ್ಲಿ ಸೌಂದರ್ಯ ದೇವಿಯಾದೆ
- Irayya Mathad
04 Nov 2015, 01:34 am
ಮಿಂಚಿನ ಓಟದಂತೆ
ಸಿಡಿಲಿನ ಆರ್ಭಟದಂತೆ
ಸೂರ್ಯನ ಪ್ರಕಾಶದಂತೆ
ಸಮುದ್ರದ ಅಲೆಯಂತೆ
ಸಹ್ಯಾದ್ರಿ ಬೆಟ್ಟದ ದಿಟ್ಟತೆಯಂತೆ
ಗರ್ಜಿಸು ನೀನು ಕನ್ನಡದ 'ಕೇಸರಿ'ಯಂತೆ
- Irayya Mathad
03 Nov 2015, 12:25 am
ಕನ್ನಡ ಇದು ಕನ್ನಡ ನರನಾಡಿಯಲ್ಲೂ ಕನ್ನಡ ನನ್ನುಸಿರಿನಲ್ಲೂ ಕನ್ನಡ
ಬೆಳೆ ಸಿರಿಯಲ್ಲೂ ಕನ್ನಡ ನಡೆನುಡಿಯಲ್ಲೂ ಕನ್ನಡ
ವಿಷವನ್ನರಗಿಸಿ ಅಮೃತ ನೀಡೊ ಮಾತೆ ಮಧುರ ಕನ್ನಡ
ಜಾತಿ ಮತಗಳ ಮೀರಿ ನಡೆಯುವ ಪ್ರೀತಿ ಸ್ನೇಹದ ಕಂಕಣ ಬೆಸೆಯುವ ಒಂದೇ ಮತವು ಕನ್ನಡ
ಉಸಿರ ಉಸಿರಲಿ ನೀತಿ ಕಲಿಸುವ ನನ್ನ ನುಡಿಯೆ ಕನ್ನಡ
ಸುಮಧುರ ವಾಣಿಯ ಮುದವನು ನೀಡುವ ಸವಿನುಡಿಯೆ ಕನ್ನಡ
ಮೈಮನ ಮರೆಯಿಸಿ ಮನವನು ಪುಳಕಿಸಿ ನಾಕವ ತೋರಿಸೊ ಕನ್ನಡ
ಅಂದದ ನಾಡಿದು ಚೆಂದದ ಬೀಡಿದು ಗಂಧದ ಗುಡಿಯಿದು ಕನ್ನಡ
ಶಾಂತಿ ಸೌಹಾರ್ದ ಪ್ರೀತಿಗೆ ಮುನ್ನುಡಿ ಬರೆದಿಹ ಕನ್ನಡ
ಶರಣ ದಾಸರ ಹಿತವಚನಕ್ಕೆ ಮೇರು ನುಡಿಯೆ ಕನ್ನಡ
ಭೂದೇವಿಯ ಸೌಂದರ್ಯಕ್ಕೆ ಹೊನ್ನಿನ ಮುಕುಟವೆ ಕನ್ನಡ
ಅಲಂಕಾರದಿ ತ್ರಿಪದಿ ಷಟ್ಪದಿ ಪದಗಳ ರಾಶಿಯೇ ಕನ್ನಡ
ಅನ್ಯರೆನ್ನದೆ ಅಂಗುಲ ನೀಡಿ ತಲೆ ಕಾಯುವುದು ಕನ್ನಡ
ಸಿರಿತನವೆಂಬುದು ಮನದಿಂದರಿತು ಬೆರೆತು ಬಾಳುವ ಕನ್ನಡ
ಕಪ್ಪು ಮಣ್ಣಿನ ಕಬ್ಬಿನ ರಾಶಿಯ ಕರುಣೆಯ ಮೂರ್ತಿಯು ಕನ್ನಡ
ಸಾವಿನಲ್ಲಿಯೂ ನೋವಿನಲ್ಲಿಯೂ ಒಳಿತನು ಬಯಸುವ ಕನ್ನಡ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಜೈ ಕರ್ನಾಟಕ ಮಾತೆ
- Irayya Mathad
03 Nov 2015, 12:18 am
ನೀ ಬಂದೆ ಕತ್ತಾಲಾದ ಜೀವನದಲ್ಲಿ
ಪ್ರೀತಿಯಾ ಬೆಳಕು ಚೆಲ್ಲಿ
ನಿನ್ನ ನಗೆಯ ಹೊಳಪು
ತಂದಿದೆ ನನ್ನಗೆ ಹೊರುಪು
ಸಾಧಿಸಲು ನಿರ್ಧರಿಸಿರುವೆ ನಾ
ಪ್ರೀತಿಯ ಬಾಳ್ವೆನಾ ನಡೆಸೋಣಾ
ಪ್ರೀತಿಯಿಂದ ಗೆಲ್ಲೂಣ ಜಗವ
- Shriram
01 Nov 2015, 06:38 am
ಸಾಲ ಸೊಲ ಮಾಡಿ
ತಿರಿಸಲಾಗದೆ
ಆತ್ಮಹತ್ಯೆಗೆ ರೈತ ಶರಣಾದ!?
ಪರಿಹಾರ ಪಡೆಯಲು
ಆತನ ಕುಟುಂಬದವರು
ಅಲೆದು ಅಲೆದು
ಸುಸ್ತಾಗಿ ಹೈರಾಣದ್ರು!?.
- Satyasagar
30 Oct 2015, 04:38 pm
ಕವಿತೆಯ ಒಳಗೊಂದು ಕವಿತೆ
ಕನಸ ಒಳಗೊಂದು ಕನಸು
ಮೌನದೊಳಗೊಂದು ಮೌನ
ಏಕಾಂಗಿಯ ಬದುಕಲೊಂದು ಏಕಾಂಗಿಯ ಜೊತೆಗಾರ
ಕವಿತೆಗೆ ಸಾವಿರ ಪದಗಳ ಮಾಲೆ
ಕನಸಿಗೆ ಸುಂದರ ಕ್ಷಣಗಳ ಬಣ್ಣ
ಮೌನಕ್ಕೆ ಮಾತಿಲ್ಲದೆ ಸಾಗಿದೆ ಹೃದಯದೊಳಗಿನ ಹೃದಯ
ಮೌನ
- ರವಿಕುಮಾರ
30 Oct 2015, 11:07 am
ಓ ತಳ್ಕಂಬಳ್ಕ ನೋಡೋ ಮಗಾ
ಹೇಳೊರಿಲ್ಲ ಕೇಳೊರಿಲ್ಲ ಮಾಡ್ತಾರಲ್ಲ ಮೋಡಿಯನ್ನ
ಅರೆಬರೆ ಚಡ್ಡಿ ಹಾಕ್ತಾರಲ್ಲ ಹಾಳಾಗೊಯ್ತು ಸಂಸ್ಕೃತಿಯಲ್ಲ ಯಾಕೋ ಮಗಾ ಕುರಿಯಂಗೆ ಮಾಡ್ಬಟ್ರಲ್ಲ
ಮೈತುಂಬ ಮೇಕಪ್ ಹಾಕಿ ನನ್ನೆ ನೋಡು ಅಂತಾರಲ್ಲ
ಕಣ್ಣಿನ ತುಂಬ ಕಾಡ್ಗೆ ಹಚ್ಚಿ ದೃಷ್ಟಿ ಬೊಟ್ಟು ಇಡ್ತಾರಲ್ಲ
ಹುಡುಗುರ ಮನಸ್ಸು ಸೆಳೆಯೊಕಿನ್ನು ಏನೇನೋ ಮಾಡ್ತಾರಲ್ಲ
ರಾತ್ರಿಯಾದ್ರು ಕಣ್ಮುಚ್ಚಲ್ಲ ಮೋಬೈಲ್ ಲೈಟು ಆಪಾಗೊಲ್ಲ
ಅಪ್ಪ ಅಮ್ಮಗೆ ಹೇಳ್ತಾರಲ್ಲ ಕಾಗೆ ಹಾರಿಸೊ ಮಾತುಗಳನ್ನ
ದಿನಾವೆಲ್ಲಾ ಕೊಲ್ತಾರಲ್ಲ ವಾಟ್ಸಪ್ ಅನ್ನೋ ಚಾಟ್ ಬೂತಿಂದ
ಗೆಜ್ಜೆ ಇಲ್ಲದ ಹೆಜ್ಜೆ ಇಟ್ಟು ಡೇಟಿಂಗ್ ಅಂತಾ ಹೋಗ್ತಾರಲ್ಲ
ಪಾಕೆಟ್ ಮನಿಗೆ ಕನ್ನ ಹಾಕಿ ಕೈಯಲ್ಲಿ ಚಂಬು ಇಡ್ತಾರಲ್ಲ
ಖಾಲಿಯಾದ ಪಾಕೆಟ್ ನೋಡಿ ಪಕ್ಕದ ಕುರಿಗೆ ಕಾಳಾಕ್ತಾರೆ
ಯಾಕೋ ಮಾಗಾ ಕುರಿಯಂಗೆ ಮಾಡ್ಬಿಟ್ರಲ್ಲ
- Irayya Mathad
29 Oct 2015, 06:32 am
ಮಿರಿ ಮಿರಿ ಮಿಂಚುತ ತಂಗಾಳಿ ಚಿಮ್ಮುತ
ನನ್ನೆದೆ ತೋಟಕೆ ನೀ ಬಂದೆ
ನೂರೊಂದು ಆಸೆ ಚಿಗುರುತಿದೆ ಈಗ
ತೋಳಲ್ಲಿ ನೀ ನನ್ನ ಸೋಕಿದಾಗ
ಮನಸುಗಳ ತುಡಿತ ಹೃದಯಗಳ ಬಡಿತ
ಒಂದಾಗಿ ಗೀಚಿದೆ ಹೊಸ ಕವಿತೆಯ
ಇರುಳಿನ ಇಬ್ಬನಿ ತಾಕುತ ಮನಕೆ
ಅರಳುತಿದೆ ತಾವರೆ ಮೊಗದಲ್ಲಿ ಕಾಣೆ
ಗಂಧದ ನಾಡಲ್ಲಿ ಗಿರಿ ಕನ್ಯೆ ನೀನಾಗಿ
ಮಲೆನಾಡ ಮುಡಿಗೆ ಮಲ್ಲಿಗೆ ಹೂವಾದೆ
ಚೆಲುವಿನ ಲೋಕಕೆ ಚಿನ್ನದ ಗೊಂಬೆಯಾಗಿ
ಲಗ್ಗೆ ಇಟ್ಟೆಯಾ ನನ್ನ ಬಾಳ ಸಂಗಾತಿ ನೀನಾಗಿ....
- Irayya Mathad
27 Oct 2015, 05:07 pm