Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಲೋಕದ ಎಲ್ಲವೂ

ಲೋಕದ ಎಲ್ಲವೂ
ನನ್ನ ಕಂಗೆಡಿಸಿವೆ ರೂಹೀ
ನಾನೀಗ ಕಾವ್ಯದ ಗರ್ಭ ಹೊಕ್ಕು
ಕವಿತೆಯಾಗಿ ಜೀವತಳೆಯಬೇಕು
ನನ್ನೆಲ್ಲಾ ಹಸಿ ಕನಸು
ಹುಸಿ-ಮುನಿಸಿಗೂ ನೀನೀಗಾ ತಾಯಾಗಬೇಕು

ಯಾ ರೂಹೀ
ನಾನೀಗ ನಿನ್ನೆದೆ ಕೂಸಾಗಬೇಕು
ಮತ್ತೆ ಮತ್ತೆ ರಚ್ಚೆ ಹಿಡಿದು ನಿನ್ನ ಕಾಡಬೇಕು

ಬಾ
ಅರೆಗಳಿಗೆ ಎದಿರುಗೊಳ್ಳು
ಕವಿತೆ ಕಾರುವ ನಿನ್ನ ಕಣ್ಣಿನಾಳದಿಂದ
ಕಾವ್ಯದ ಗರ್ಭ ಹೊಕ್ಕುತ್ತೇನೆ
ಲೋಕದ ಸೂತಕಗಳಾವು ತಾಗದಂತೆ
ನನ್ನ ಹಡೆದು ಆಡಿಸು

ಲೋಕದ ಕಾವು ತಾಗುವ ಮೊದಲೇ
ಕವಿತೆಯ ಗರ್ಭದೊಳಗೇ ನನಗೆ ಗೋರಿ ಕಟ್ಟಿಸು
ನಿನ್ನೆದೆಯ ಜಡವಾಗಿ ಉಸಿರಾಡಬಲ್ಲೆ ರೂಹೀ
ಕಾವ್ಯ ಕಾರುಣ್ಯದ ನಿನ್ನೆದೆಯಲ್ಲಿ
ನನ್ನ ಅಳಿವು-ಉಳಿವಿನ
ಸಹಿಯಾಗಬೇಕು..

- malappa

07 Oct 2015, 07:05 am

ಸುಖ???

ಎಲ್ಲಿದೆ ಸಖವು???
ಅಲ್ಲಿ? , ಇಲ್ಲಿ?
ಮತ್ತೆಲ್ಲಿ??

ಹುಡುಕಿದೆ ಹಣದಲಿ
ಅಲ್ಲೂ ಇಲ್ಲ,
ಜನರ ನಡುವಂತು
ಇಲ್ಲವೇ ಇಲ್ಲ.

ಕೆಣಕಿದೆ ಒಲವ
ಇಲ್ಲ,
ಸ್ನೇಹವ ತಡಕಿದೆ
ಇಲ್ಲ.

ಸುಖವೇಂಬುದು
ಇಲ್ಲದ ಸಂಗತಿಯೇ?.
ಹುಡುಕಲು ಸಿಕ್ಕಿತೇ?
ತಡಕಲು ದಕ್ಕಿತೇ?

ಹುಡುಕುವ ಗೋಜೆ
ದುಖಃಮಯ,
ಯಾಕೆ ಬೇಕು
ಸುಖ ಮಾಯಾ.

ಬೇಕಿದೆ ಸುಖ ದುಖಃಗಳ
ಹೊರತಾದ ಶೂನ್ಯ ಮನ,
ಮತ್ತೆ
ಆಶಯೇ ದುಖಃಕ್ಕೆ ಕಾರಣ ........


- ಪೀ. ಎಸ್. ಪೀ

06 Oct 2015, 06:50 pm

ಕೊನೆ ಗಿರಾಕಿ...

ಕೊನೆ ಗಿರಾಕಿ.....


ಬರವಣಿಗೆ ಎಂದು ಬರೆದ ಅನೇಕ ಪದ ಅಳಿಸಿವೆ.
ಬದುಕು ಎಂದು ಬರೆದ ಅನೇಕ ಪದ ಆಳಿವೆ.

ಬರೆಯುವಂತ ಲೇಖನಿಯ ಮುಳ್ಳು ಮುರಿದಿದೆ.
ಬರೆದ ಲೇಖನಿಯ ತುದಿ ಷಯಿಯಿಂದ ಚಿತ್ರಿಸಿವೆ.

ಬಿಳಿ ಕಾಗದದ ತುಂಬೆಲ್ಲ ಅನುಭವದ ಆಕಾರ.
ಪುಟ್ಟ ತಿರುಗಿಸಿ ನೋಡಿದಾಗಲೆ ಇನ್ನೇನೂ ಬೇಕೆನ್ನೂವ ಸಹಕಾರ.

ಬಿಳಿ ಕಾಗದ ನೋಟಾದಗ ಉಕ್ಕುವ ಖುಷಿ.
ನೋಟೇಲ್ಲ ಸುಣ್ಣವಾದಗ ಅದೇನೋ ಘಾಸಿ.

ಎಲ್ಲವುಗಳ ,ಎಲ್ಲದರ ಲೇಖನಿಯೇ..ಮನಸ್ಸು.
ಬರವಣಿಗೆಯೇ,ಬದುಕು.
ಕೊನೆ ಗಿರಾಕಿ ಅಕ್ಷರವೇ.....?.ಅನುಭವವೇ....?ಇಲ್ಲ ಕುರುವೇ...?

## ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

06 Oct 2015, 02:02 pm

ನಾನೇನು ಕಡಿಮೆಯಿಲ್ಲ

ನನಗಿಂತ ನೀ ಮೇಲೆಂದು
ಬೀಗಬೇಡ ಗೆಳೆಯ....
ನಿನಗಿಂತ ನಾನೇನು
ಕಡಿಮೆಯಿಲ್ಲ......

ನೀ ಮಾತಿನ ರಾಜ್ಯದ
ಸರದಾರನಾದರೆ,,
ನಾನು ಮೌನ ಸಾಮ್ರಾಜ್ಯವ
ಆಳುವ ಮಹಾರಾಣಿ.....

ನೀ ತಿಂಗಳಿಗೊಮ್ಮೆ
ಪ್ರಕಾಶಿಸುವ ಚಂದ್ರನಾದರೆ,,
ನಾನು ಪ್ರತಿದಿನ
ಮಿನುಗುವ ನಕ್ಷತ್ರ.....

ನೀನು ಮೈ ಪುಳಕಿಸುವ
ಬಿಸಿ ಅಪ್ಪುಗೆಯಾದರೆ,,
ನಾ ಎಲ್ಲರನ್ನೂ ಸೆಳೆವ
ನಿಷೆಯೇರಿಸುವ ಕಣ್ಣೋಟ....

- ನಿಶಾ ರೂಪ

06 Oct 2015, 02:25 am

ಪ್ರೀತಿ

ಗೆಳತಿ
ಮರೆಯಲಾರೆ ನಾ ನಿನ್ನ
ನನ್ನ ಕೊನೆಯ ಉಸಿರು ಇರುವರೆಗೂ,

ಅದು ಹೇಗೆ ಹೇಳಿ ಹೋದೆ ನೀ
ನಾ ನಿನಗೆ ಬೇಡವೆಂದು,

ಹೇಳಿ ಹೋಗು ಗೆಳತಿ
ಕಾರಣವ?.
















- mahesh

02 Oct 2015, 10:34 am

ಖಾಲಿ ಖಾಲಿ

ಖಾಲಿ ಖಾಲಿ
ನೀ ಇರದ
ನೀ ಬರದ
ಈ ನನ್ನ
ಹೃದಯ
ಖಾಲಿ ಖಾಲಿ...

- ಪ್ರತಾಪ್ ಕೆ ಎಸ್ ಪಿ ಉಪ್ಪಾರ್

30 Sep 2015, 01:28 pm

ತನ್ನ ನೋವಲಿ

ತನ್ನ ನೋವಲಿ
ತನುವು ಸೊರಗಿತು
ಮನವು ಕೊರಗಿತು
ಕಣ್ಣು ಕಂಬನಿ ಮಿಡಿಯಿತು
ಏನು ಸೌಹಾರ್ದವೋ?
ಇತರರ ಅದೇ ನೋವಲಿ
ಕಣ್ಣು ಕುರುಡಾಯಿತು
ತನುಮನವು ಮೌನಿಯಾಯಿತು
ಏನು ಅಕ್ರಮವೋ?

ಇಸ್ಹಾಕ್ ಕೌಸರಿ

- ishak

30 Sep 2015, 07:54 am

ಪರೋಪಕಾರಂ ಇಧಂ ಶರೀರಂ

ಮಾನವ ದೇಹ ಮಾಂಸದ ಕಣಜ
ತಿಳಿಯೊ ನೀನು ಮನುಜ..
ಜೀವನವೆಂಬ ಜಂಜಾಟದಲಿ
ದಯೆಯು ಇರಲಿ ಸಹಜ..||ಪ||

ಶ್ವಾಸ ನಿಂತಮೇಲೆ ಹ್ರದಯ ಕೊಟ್ಟರೆ ನಷ್ಟವೇನು ಮನುಜಾ..
ಇನ್ನೊಂದು ಜೀವಕೆ ಜೀವವಾಗುವೆ
ತೋರು ದಯೇ ಕರುಣಾ..

||ಪ||


ಪರರ ಮೊಗದಲಿ ನಯನವಾಗಲೀ ನಿನ್ನ ನೇತ್ರ ಮನುಜಾ ...
ಉಸಿರು ನಿಂತಮೇಲು ನೋಡಬಹುದು ನೀ ಈ ಪರಿಯಾ ಜಗವಾ...

||ಪ||

ನಿಸ್ವಾರ್ಥಥೆಯಲಿ ದಾನಮಾಡು ನೀ ಕಿಡ್ನಿಯೆಂಬ ಕಸುವಾ....
ಪರೊಪಕಾರಂ ಇಧಂ ಶರೀರಂ
ಎಂಬ ಮಂತ್ರ ಪಠಣ....

||ಪ||

- vikas ಅನುಭವಿ

27 Sep 2015, 07:40 am

ರೈತ

ಹನಿ ನೀರಿಗೆ ಒದ್ದಾಡುತ್ತಿರುವ ಓ ನನ್ನ ಆತ್ಮೀಯ,
ನೀ ಕೊಟ್ಟ ಭಿಕ್ಷೆ ಈ ರಾಜಕೀಯ,

ಸುಡದೆ ಬಿಡದು ಅವರನು ನೀನ್ನೊಡಲ ಕಿಚ್ಚು,
ಇನ್ನಾದರು ಬಿಡಿಸಿರಿ ಅಧಿಕಾರದ ಹುಚ್ಚು,

ಆರಿಸೋಣ ಇನ್ಮುಂದೆ ಕಾಯುವವನ,
ಪಕ್ಷಾತೀತ, ಜಾತ್ಯಾತೀತ ಆಗಿರುವವನ.


- ಪೀ. ಎಸ್. ಪೀ

26 Sep 2015, 06:49 pm

ನನ್ನವಳ ವಿನಂತಿ

ಸಾವಿರ ಮಾತುಗಳಾಚೆಯು....
ಕಳೆಯಬೇಕಿದೆ...
ಒಂದು ಮೌನದ ಸಂಜೆ ನಿನ್ನೊಂದಿಗೆ. ...
ಸಾವಿರ ಬಾರಿ ಅತ್ತಿದ್ದರು...
ಅಳುವನ್ನೂ ಸಂಭ್ರಮಿಸಬೇಕಿದೆ ನಿನ್ನೊಂದಿಗೆ...
ಹೇಳೂ ಗೆಳೆಯ..
ಇರುವೆಯ ನನ್ನ ಜೊತೆಗೆ ಕೂನೆವರೆಗೇ...

- sridevi.N

26 Sep 2015, 02:34 pm