ಒಮ್ಮೆ ಬೆರಳ್ ತುದಿ ಸುಟ್ಟಾಗ ನೆಪವಾದೆ
ಕಣ್ಣ್ ಹಾಯಿಸಲ್ ಹಾಗೆ ಮರೆಯಾದೆ
ನೋವಿನ ಮೂಟೆಯಾಗಿ ನೀ ಹೃದಯ ಸೇರಿದೆ
ಮರೆತರು ಮರೆಯದಾಗೆ ಆ ಚಂದಿರನ ಬೆಳಕಂತೆ ಕತ್ತಲೆಯ ಲೋಕಕೆ ಮಾತ್ರ ಸೀಮಿತವಾದೆ....
ಇಂದು ನೀ ನನ್ನ ಅಗಲಿ ಹೋದರು
ನಿನ್ನ ನೆನಪುಗಳಿಂದ ಮಾಸೀ ಹೋದರು
ಎಂದಾದರು ನಾ ನಿನ್ನ
ನೆನಪುಗಳಲ್ಲಿ ಮೂಡಿದರೆ ಹುಡಕದಿರು ಮೆತ್ತೆಲ್ಲಿಯೂ
ನಾ ನಿನ್ನ ಕಣ್ಣಲ್ಲೆ ಇರುವೆ ಒಂದು ಹನಿ ಕಣ್ಣಿರಾಗಿ.....
ಅವನ ಕಣ್ಣೊಳಗೆ ಬಿಂಬವಾಗಿ ಬೆರೆತೆ
ಅವನ ಉಸಿರೊಳಗೆ ಎದೆಯ ಬಡಿತವಾಗಿ ಬೆರೆತೆ
ವಿಶಾಲ ಮನಸ್ಸಿನ ಪುಟ್ಟ ಎದೆಗೆ ಒರಗಿ
ಬಿಸಿ ಮುತ್ತ ನೀಡಿ ಅವನೊಳಗೆ ಬೆರೆತು ಹೋದೆ
ಹಣೆಯ ಮೇಲೆ ಸಿಹಿಮುತ್ತ ನೀಡಿ ನಡು ಬಳಸಿ ಬರಸೆಳೆದು ಮಾಯದ ಕನಸೊಳಗೆ ಬಿಗಿದಪ್ಪಿ ಪ್ರೀತಿಯ ಬಲೆಯಲ್ಲಿ ಬಂಧಿಸಿ ಹೃದಯ ಬಡಿತದೋಳಗೆ ಬೆರೆಸಿದನು
ಎಲ್ಲದರೂಳಗು ಭಾವನೆ ಅಸ್ವಾದಿಸಿದಾಗ
ಭಕ್ತಿ ತನ್ನತಾನೆ ತೆರೆದು ಹೊಳಸೂತ್ರವ
ಮನ ಮಂತ್ರದ ದೇಹ ಹಾಗುರಾಗುವ ಈ
ತಿಳಿ ಮನಸ್ಸು....
ಅಕ್ಕಿಯೋಳಗೆ ಅನ್ನದ ಭಾವನೆ ಅಸ್ವಾದಿಸಿದಾಗ
ಶಕ್ತಿ ದೇಹದೊಳಗೆ ಸಂಚಾರಸೂತ್ರವ
ಅಭಿಧಮಿಸಿ ಅಲಾಂಕರದ
ತಿಳಿ ಮನಸ್ಸು...
ಗಾಳಿಯೊಳಗೆ ಜೀವದ ಭಾವನೆ ಅಸ್ವಾದಿಸಿದಾಗ
ಯುಕ್ತಿ ಕಣ್ಣೊಳಗೆ ಚಿತ್ರಸೂತ್ರವ
ಆಕಾರ ವಿನ್ಯಾಸ ಅರ್ಥೈಸುವ
ತಿಳಿ ಮನಸ್ಸು ....
ಬೆಳಕಿನೊಡನೆ ಬಣ್ಣದ ಭಾವನೆ ಅಸ್ವಾಧಿಸಿದಾಗ
ನವರಸದ ಚಲನೆ ಬದುಕಿನಸೂತ್ರವ
ಒಳ ಹೊರವು ಬಣ್ಣಿಸುವ
ತಿಳಿ ಮನಸ್ಸು .....