Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾ ಮೊದಲು ಹುಟ್ಟಿದ್ದು ಭೂಮಿಯ ಮೇಲಲ್ಲ
ತಾಯಿಯ ಗರ್ಭದಲ್ಲಿ
ನಾ ಬಿದ್ದಾಗ ನೋವಾದಾಗ ಕೂಗಿದ್ದು
ಆ ದೇವರನ್ನಲ್ಲ ಅಮ್ಮ ಎಂದು
ದುಡ್ಡಿದ್ದ ಮಂದಿ ಸೇರಿಸುವರು ವೃಧ್ದಾಶ್ರಮ
ಬಡ ಮಂದಿ ಖುಷಿಯ ಕೊಡುವರು ಪಟ್ಟು ಶ್ರಮ
ತಾಯಿ ಕಣ್ಣೀರು ಹಾಕಿದರೆ ಬಾಳಿಗಿಲ್ಲ ಬೆಲೆ
ಜನನಿ ಇಲ್ಲದೇ ಹೋದರೆ ನಮಗಿಲ್ಲ ನೆಲೆ
- shiva
21 Oct 2015, 09:34 am
ಪ್ರೀತಿಯ ಹಾದಿಯಲಿ
ಮುಳ್ಳು ತುಳಿಸಿ,,
ಕೊಟ್ಟ ಮಾತನು ಮರೆತು,
ನಮ್ಮಿಬ್ಬರ ಪ್ರೀತಿಯನು
ಉಳಿಸಿಕೊಳ್ಳುವಂಥ ಮನಸೇ
ನಿನಗೆ ಇಲ್ಲದ ಮೇಲೆ,,,,
ಕಳೆದುಕೊಂಡೆನೆಂಬ ಹತಾಷೆಯಲಿ
ನಾ ನೊಂದು, ನೆನಪುಗಳನ್ನು
ಅಳಿಸಿಹಾಕುವಂತಹ ಮನಸಿನಲಿ
ನಾ ಬದುಕುತಲಿರಲು,,
ಮತ್ತೆ ನನ್ನನ್ನೇ ನಿಂದಿಸುವೆ
ನಿನದೆಂತಹ ಕಲ್ಲು ಹೃದಯ,,
- ನಿಶಾ ರೂಪ
21 Oct 2015, 03:48 am
ಕಾವ್ಯ ಪ್ರಯೋಗಕ್ಕೆ
ಎಂದು ಲಗಾಮು ಹಾಕಲಾಗದು
ರಮ್ಯ ಪ್ರಯಾಗದಲ್ಲಿ
ಮಿಂದೆದ್ದು
ಪಾವನವಾಗುವಂತೆ ಮಾಡುವ
ಖಾಲಿ ಹಾಳೆಯ ಮೇಲಿನ
ಲೇಖನಿಯ ನಿರಂತರ
ಯಾತ್ರೆ ಅದು
- ರವಿಕುಮಾರ್ ಎಂ ಜಿ
19 Oct 2015, 06:39 am
ನನ್ನ ಮನವು ಕನ್ನಡ
ನನ್ನ ತನವು ಕನ್ನಡ
ನಾ ಬಳಸುವ ಭಾಷೆ ಕನ್ನಡ
ಪೂರ್ಣವಾಗಿ ನನ ತಾಯಿ ಕನ್ನಡ
- shiva
18 Oct 2015, 05:36 pm
ಅಮ್ಮನ ಪ್ರೀತಿಯ ಮುಂದೆ
ನಿನ್ನ ಪ್ರೀತಿ ಬರಿ ಸೊನ್ನೆ
ಅದು ಹೇಗೆ ಹೇಳುವೆ ಕನ್ಯೆ
ಅಮ್ಮನ ಬಿಟ್ಟು ಬಾ ಎಂದು
ಕೊಡುವೆಯ ನೀ ನನಗೆ
ಅಮ್ಮನ ಅಕ್ಕರೆಯ ಕೈತುತ್ತನ್ನು
ಹಾಡುವೆಯ ನೀ ನನಗೆ
ಅಮ್ಮನ ಪ್ರೀತಿಯ ಜೋಗುಳವ
ಅದು ಹೇಗೆ ಮರೆಯಲಿ ಅಮ್ಮನ
ಹೇಳೇ ಓಹ್ ನನ್ನ ನಲ್ಲೆ.
- mahesh
18 Oct 2015, 03:47 pm
ಜೀವಕೆ ಜೀವ ನನ್ನ ತಾಯಿ
ನಾ ತಪ್ಪು ಮಾಡಿದರೆ ಕ್ಷಮಿಸಿ ತಿದ್ದುವ
ಮಹಾಮಯಿ
ಬಾಳಿಗೆ ಅವಳೆ ಮರದ ಬೇರು
ಅವಳಿಲ್ಲದೆ ಹೋದರೆ ಬಾಳೇ ಗೋಳು
- shiva
18 Oct 2015, 11:41 am
ಕೊನೆ ಗಿರಾಕಿ....
ನನ್ನ ತಲೆಯ ಬತ್ತಳಿಕೆಯಲ್ಲಿ
ಅನೇಕ ಬಾಣಗಳು ಇರಬಹುದು
ಯುದ್ಧದ ಸಂದರ್ಭದಲ್ಲಿ
ಪ್ರಯೋಗಿಸಿದರೆ ಗುರಿಯನ್ನು
ತಲುಪುವ ಭರವಸೆ ಇಮ್ಮಡಿಸುತ್ತದೆ.
ವಿದರ್ಭದಲ್ಲಿ ವಿನಿಯೋಗಿಸಿದರೆ
ಸಂದರ್ಭ ಕೇಡು ಮಾಡಬಹುದಾಲ್ಲವೆ
ಬತ್ತಳಿಕೆ ತುಂಬುವ ಕಾರ್ಯ ಸಾಗುತ್ತಿದೆ
ಪುಟಗಳ ಪುಸ್ತಕದಿಂದಲ್ಲ
ಪೃಥ್ವಿಯ ಅನೇಕ ಪುಟಗಳಿಂದ.
ಒಂದಾಂತು ಹೊಂದಿಕೆಯ ವಿಷಯ
ಕೇಡಂತು ನಮ್ಮಿಂದಾದರು
ಪೃಥ್ವಿಯಿಂದಲ್ಲ
ಹಾಸಿಗೆಯಲ್ಲೆ ಅರುಳುತ್ತಿದೆ
ಕೇಡಿನ ಗಂಟ್ಟು
ವಂಶವೆಂಬ ಗುಟ್ಟು
ಅದರೆ ಹೂ ಅರಳಿಸಿ ಸುವಾಸನೆ ಪಸರಿಸಿದರಾಗದೆ.
ಆಗಬಹುದೆನೊ ಪ್ರಯತ್ನಿಸಬೇಕಷ್ಟೆ
ನಾವೆಲ್ಲ ಮೊದಲ ಗಿರಾಕಿಯಾಗಿ......
# ಈಶ,ಎಂ,ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
18 Oct 2015, 10:46 am
ತನ್ನ ಜೀವವ ಸವೆಸಿ
ನನ್ನ ದೇಹವ ಬೆಳೆಸಿ
ಸಾಕಿ ಸಲುಹಿದವಳು ನನ್ನಮ್ಮ
ತಾನು ಹಸಿವನು ದಹಿಸಿ
ನನಗೆ ಅನ್ನವ ಉಣಿಸಿ
ಸಾಕಿ ಸಲುಹಿದಳು ನನ್ನಮ್ಮ
ಪೈಸೆಪೈಸೆಯನು ಕೂಡಿಟ್ಟು
ನನಗೆ ರೂಪಾಯಿನು ಕೊಟ್ಟು
ಸಾಕಿ ಸಲುಹಿದವಳು ನನ್ನಮ್ಮ
ತಾನು ಹರಕಲು ಸೀರೆಯನುಟ್ಟು
ನನಗೆ ಹೊಸ ಬಟ್ಟೆಯಕೊಟ್ಟು
ಸಾಕಿ ಸಲುಹಿದವಳು ನನ್ನಮ್ಮ
ತಾನು ನೋವನು ಸಹಿಸಿ
ನನಗೆ ನನಗೆ ನಗುವನು ತರಿಸಿ
ಸಾಕಿ ಸಲುಹಿದಳು ನನ್ನಮ್ಮ
ತನ್ನ ಆಸೆಗಳ ಒಣಗಿಸಿ
ನನ್ನ ಆಸೆಗಳ ಚಿಗುರಿಸಿ
ಸಾಕಿ ಸಲುಹಿದವಳು ನನ್ನಮ್ಮ
ತಾನು ಬದುಕಿರುವವರೆಗೂ
ತನ್ನ ಕಂದನ ಪ್ರೀತಿಸುವ
ಭೂಮಿಯ ಮೇಲೆ ವಾಸಿಸುವ
ಏಕೈಕ ಜೀವಿ ಎಂದರೆ "ಅಮ್ಮ"
"ತಾಯಿ ದೇವರ ಮುಂದೆ
ಎಲ್ಲಾ ದೇವರು ಹಿಂದೆ "
- ಚೇತನ್ ಬಿ ಸಿ
18 Oct 2015, 01:51 am
ನೆನಪಿದೆ,,,,,
ನೆನಪಿದೆ , ಹಣ್ಣೆಲೆ ಉದುರಿ
ಗಾಳಿಯಲ್ಲಿ ತವಳುತ್ತ
ಕೊನೆ ಉಸಿರೆಳೆದುಕೊಳ್ಳುವಾಗ
ಬೋಳಾದ ಮರಗಳ ದುಃಖವ .
ನೆನಪಿದೆ , ಮರ ಕೆತ್ತಿ ನೇಗಿಲ
ಮಾಡಿ ಕಲ್ಲು ಮಣ್ಣುಗಳ ಜೊತೆ
ಅಲಾಂಗಿಸಿ ಅಳುವಾಗ ಕಣ್ಣೀರು
ಮಳೆಯಂತೆ ಬಂದ ನಗು ಮುಖವ.
ನೆನಪಿದೆ, ಶ್ರಮದ ಬೆವರು
ನನ್ನೂರಿನ ಸುಗಂಧ ವಾಸನೆ.
ಗುಡಿಸಲಲ್ಲಿ ಇಣುಕುವ ಮಳೆ ಹನಿ
ಪಾತ್ರೆಯಲ್ಲಿ ಧುಮುಕಿ ಸಂಗೀತವಾಗಿದ್ದು.
ನೆನಪಿದೆ , ಕತ್ತಿ ಮಸೆವ ಕಲ್ಲು
ಗೆಯುವ ಕೈಗಳ ಯಜಮಾನ.
ಗೋಣಿಚೀಲದ ದವಸ
ದಿನ ನಿತ್ಯ ನಮಗೆ ಸಾಹುಕಾರ.
# ಈಶ,ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
17 Oct 2015, 08:54 pm
ನನ್ನ ಮನವು ಸಹಿಸಲಾರದು
ಕಷ್ಟದ ನೋವ
ಹೃದಯಕೆ ಮನಸೇ ಸರ್ವಸ್ವ
ಆದರೂ ಈ ಮನಕೆ ಬೇಕು
ಬಡಜೀವವ ಪ್ರೀತಿಸುವ ಜೀವ
- shiva
17 Oct 2015, 05:41 pm