Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅವಳಿಗೆ ಏಕೋ ಕೋಪ
ನಗುವಲ್ಲೆ ಕೊಲ್ಲುವಳು.
ಆ ಕಿರು ನಗೆಗೆ
ಮನಸ್ಸು ಓಡುವುದು
ದಿಕ್ಕು ಕಾಣದೆ.
ಅಂತ ಕೋಪಕ್ಕೆ
ನಾನೇನು ಮಾಡಿದೆ ?
- ರವಿಕುಮಾರ
14 Oct 2015, 07:39 am
ಕಲಿಯುಗ ಕಾಲ ಕೆಟ್ಟತಿ
ಸಂಸ್ಕೃತಿಯೆಂಬುದು ಮರೇತೈತಿ
ಹೆಣ್ಣು ಹೋಗಿ ಗಂಡಾಗೈತಿ
ಗಂಡಿಗೆ ದಿಕ್ಕು ತಪ್ಪಿ ಹೋಗೈತಿ !
ತಲೆಮೇಲಿನ ಸೆರಗ ಹೋಗೈತಿ
ಕ್ಯಾಪು - ಚಸ್ಮಾ ಅಂತ ಬಂದೈತಿ !!
ಹಣಸಿಣ ಬೊಟ್ಟು ಹೋಗೈತಿ
ಬದಲಾಗಿ ಟ್ಯಾಟೂ ಬಂದೈತಿ !!!
ಕುಂಕುಮ ಬೊಟ್ಟು ಹೋಗೈತಿ
ಮಿಂಚಿನ ಟಿಕಳಿ ಕಾಣತೈತಿ !!!!
ಸೀರಿ - ಕುಬುಸವೆಲ್ಲ ಹೋಗೈತಿ
ಜೀನ್ಸುಪ್ಯಾಂಟುಗಳ ಕಾಲೈತಿ !!!!!
ಉದ್ದುದ್ದ ಸೆರಗ ಮರೇತೈತಿ
ಎಳೆಯುವ ಬ್ಯಾಗು ಬಂದೈತಿ !!!!!!
ಅರಿಸಿಣ-ಕುಂಕುಮ ಹೋಗೈತಿ
ಸ್ನೋ - ಪೌಡರ್ ಹೋಳಿತೈತಿ !!!!!!!
ಬಸ್ಸು ಹತ್ತುವುದು ಮರೇತೈತಿ
ಸ್ಕೂಟಿ ಹಿಡಿಯುದು ಕಾಣತೈತಿ !!!!!!!!
ಹಾಡು ಹೇಳುವುದು ಹೋಗೈತಿ
ಕಮೆಂಟ ಮಾಡುವುದು ಹೇಚೈತಿ !!!!!!!!!
ಕಥೆಹೇಳುವುದು ಮರೇತೈತಿ
ಚಾಟ್ - ಗೀಟ್ ಅಂತ ಬಂದೈತಿ !!!!!!!!!!
ಕನ್ನಡ ಮಾತಡೊದ ಹೋಗೈತಿ
ಟಸು - ಪುಸು ಇಂಗ್ಲೀಷ್ ಬಂದೈತಿ !!!!!!!!!!!
ಭಾರತ ಸಂಸ್ಕೃತಿ ಮರೇತೈತಿ
ಪಾರೆನ ಪ್ಯಾಶನ ಹೇಚೈತಿ !!!!!!!!!!!!
- BIRESH KOTI
13 Oct 2015, 04:30 pm
ಒಬ್ಬರಿಗೆ ಸಹಾಯ ಮಾಡಿ
ನೀವು ಒಳ್ಳೆಯದು ಬಯಸಿದರು
ಅವರು ನಿಮಗೆ ಕೆಟ್ಟದ್ದು ಮಾಡಿದರೆ
ಬೇಸರ ಮಾಡಿಕೊಳ್ಳಬೆಡಿ!!
ಜನ ಯಾವತ್ತು ಕಲ್ಲು ಎಸೆಯುವದು
ಮಾವಿನ ಮರಕ್ಕೆ ಬೇವಿನ ಮರಕ್ಕಲ್ಲ!!!
- ಹೊಳಲೇಶ ವಾಲೇಕಾರ
12 Oct 2015, 02:26 pm
ಅಕ್ಕಿ ಸೊಸಿದರೆ ಕಲ್ಲು ಇರಬಾರದು
ದೀಪ ಹಚ್ಚಿದರೆ ಕತ್ತಲು ಇರಬಾರದು
ಪ್ರೀತಿ ಮಾಡಿದರೆ ಕೈ ಬಿಡಬಾರದು
ಜೀವನಕ್ಕಿಂತ ಜೀವ ಮುಖ್ಯ
ಪ್ರೀತಿಗಿಂತ ಪ್ರೀತಿಸುವರು ಮುಖ್ಯ
ಅದಕ್ಕೆ
ಪ್ರೀತಿಸುವವರಿಗೆ ಜೀವನ ಕೊಡಿ
ಪ್ರೀತಿಗೆ ಜೀವನ ಕೊಡಿ
- ಹೊಳಲೇಶ ವಾಲೇಕಾರ
12 Oct 2015, 02:11 pm
ಮನಸ್ಸಿಗೆ ನೊವಾದರೆ
ಮನಸ್ಸಲ್ಲಿ ಇರುವವರಿಗೆ ಹೇಳಬಹುದು
ಆದರೆ ಮನಸ್ಸಲ್ಲಿ ಇರುವವರು ಮನಸ್ಸಿಗೆ ನೋವು ಮಾಡಿದರೆ
ಮನಸ್ಸಲ್ಲಿ ಇರುವ ನೋವನ್ನು ಯಾರಿಗೆ ಹೇಳುವುದು
- ಹೊಳಲೇಶ ವಾಲೇಕಾರ
12 Oct 2015, 02:03 pm
ಮಂಜು ಕರಗಬಹುದು
ಮುತ್ತು ಒಡೆಯಬಹುದು
ನೀವು ನನ್ನನು ಕರೆಯಬಹುದು
ಆದರೆ ನಾನು ನಿಮ್ಮ ಸ್ನೇಹವನ್ನು ಮರೆಯುವದಿಲ್ಲಾ
ಇಂತಿ ನಿಮ್ಮ ಸ್ನೇಹ ಜೀವಿ
"ಹೊಳಲೇಶ"
- ಹೊಳಲೇಶ ವಾಲೇಕಾರ
12 Oct 2015, 01:58 pm
ಬೆಂಕಿ ಹತ್ತುತ್ತಿರಲು
ಕಾಡು ಉರಿಯುತ್ತಿರಲು
ವನ್ಯ ಮೃಗಗಳಿಕ್ಕಟ್ಟಿನಲ್ಲಿರಲು
ಸ್ವಲ್ಪ ಇತ್ತಕಡೆ ಲಕ್ಷ್ಯಕೊಡಬಾರದೆ?
ಹಸಿರು ನಾಶವಾಗುತ್ತಿರಲು
ಕಪ್ಪು ವಕ್ಕರಿಸುತ್ತಿರಲು
ಮೃಗಗಳಿಗೆ ದಿಕ್ಕು ತಪ್ಪಿರಲು
ಸ್ವಲ್ಪ ಅವುಗಳು ಶೋಕಕಥೆ ಆಲಿಸಬಾರದೆ?
ಕಪ್ಪು ನದಿಯು ಹರಿಯುತ್ತಿರಲು
ಪ್ಯಾಕ್ಟಿರಿಗಳು ರಸಾಯನಿಕಗಳ ವಿಸರ್ಜಿಸುತ್ತಿರಲು
ಜಲಚರಗಳು ಎದ್ದೆದ್ದು ಬೀಳುತ್ತಿರಲು
ಸ್ವಲ್ಪ ಈ ಬಗ್ಗೆ ಯೋಚಿಸಬಾರದೇ?
--ಕೋಟಿ ಬೀರೇಶ
- BIRESH KOTI
11 Oct 2015, 01:30 pm
-- ಕೊನೆ ಗಿರಾಕಿ
ಸತ್ತವತಿಯ ಚರ್ಮದಲ್ಲಿ ಡಂಗುರ ಮಾಡಿ
ನಮ್ಮದೇ ರಾಗಕ್ಕೆ ಹೊಂದಿಸಿ ಹಾಡಿ
ಸತ್ತ ಚರ್ಮ ಮತ್ತೆ ಇಂಪಂತೆ ಹುಟ್ಟಿ
ಅರಿವಿಲ್ಲದೆಯೇ ಸಾಯುತ್ತದೆ
ಆದರೆ ಕಂಪನ ಕಂಪಿಸಿ.
ಇದಂತ್ತೆ ಇದ್ದು ಎದ್ದು ಹೋಗದ ಹೋಗಲೋಲ್ಲದ
ಋಣವಂತೆ ಕಣದಲು ಕಾಯುವುದರಲ್ಲು
ಗಣಗಳ ಗುಂಪು ದೊಡ್ಡದಾಗಿರಲು
ಕಾರ್ಮೋಡದ ಕಪ್ಪು ಕುತ್ತಿಗೆಯ ಸಂಮುಖದಲ್ಲಿ.
ಗಾಳಿಪಟನು ದಾರದಿಂದ ಹಾರಿ ದೂರಹೋದಂತೆ
ಪಟದ ಹುಟ್ಟಿಗೆ ಕಾರಣ ಕಡ್ಡಿಗಳಂತೆ
ದಾರವು ಕಡ್ಡಿಯೋ ತೋರಣದ ಆಟವಷ್ಟೆ
ನೋಟದ ಆಂತರಿಕ ಕಣ್ಣುಗಳ ಜೊತೆಯಲ್ಲಿ .
ಇವೆಲ್ಲವೂ ಮುಂದು ಇನ್ನು ಮುಂದು
ಎಂದು ಮುಂದೆ ಮುಖಮಾಡಿ ನಡೆದರೆ
ಕೊನೆಯ ದಾರಿ ಮುದುಡಿ ಮುಪ್ಪಾಗಿ ಹೋದರೆ
ಇರುವರೆಲ್ಲರಲು ಕೊನೆಗಿರಾಕಿ ಯಾರು . ?
## ಈಶ,ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
10 Oct 2015, 07:45 pm
ಲೋಕದ ಎಲ್ಲವೂ
ನನ್ನ ಕಂಗೆಡಿಸಿವೆ ರೂಹೀ
ನಾನೀಗ ಕಾವ್ಯದ ಗರ್ಭ ಹೊಕ್ಕು
ಕವಿತೆಯಾಗಿ ಜೀವತಳೆಯಬೇಕು
ನನ್ನೆಲ್ಲಾ ಹಸಿ ಕನಸು
ಹುಸಿ-ಮುನಿಸಿಗೂ ನೀನೀಗಾ ತಾಯಾಗಬೇಕು
ಯಾ ರೂಹೀ
ನಾನೀಗ ನಿನ್ನೆದೆ ಕೂಸಾಗಬೇಕು
ಮತ್ತೆ ಮತ್ತೆ ರಚ್ಚೆ ಹಿಡಿದು ನಿನ್ನ ಕಾಡಬೇಕು
ಬಾ
ಅರೆಗಳಿಗೆ ಎದಿರುಗೊಳ್ಳು
ಕವಿತೆ ಕಾರುವ ನಿನ್ನ ಕಣ್ಣಿನಾಳದಿಂದ
ಕಾವ್ಯದ ಗರ್ಭ ಹೊಕ್ಕುತ್ತೇನೆ
ಲೋಕದ ಸೂತಕಗಳಾವು ತಾಗದಂತೆ
ನನ್ನ ಹಡೆದು ಆಡಿಸು
ಲೋಕದ ಕಾವು ತಾಗುವ ಮೊದಲೇ
ಕವಿತೆಯ ಗರ್ಭದೊಳಗೇ ನನಗೆ ಗೋರಿ ಕಟ್ಟಿಸು
ನಿನ್ನೆದೆಯ ಜಡವಾಗಿ ಉಸಿರಾಡಬಲ್ಲೆ ರೂಹೀ
ಕಾವ್ಯ ಕಾರುಣ್ಯದ ನಿನ್ನೆದೆಯಲ್ಲಿ
ನನ್ನ ಅಳಿವು-ಉಳಿವಿನ
ಸಹಿಯಾಗಬೇಕು..
- malappa
07 Oct 2015, 07:05 am
ಎಲ್ಲಿದೆ ಸಖವು???
ಅಲ್ಲಿ? , ಇಲ್ಲಿ?
ಮತ್ತೆಲ್ಲಿ??
ಹುಡುಕಿದೆ ಹಣದಲಿ
ಅಲ್ಲೂ ಇಲ್ಲ,
ಜನರ ನಡುವಂತು
ಇಲ್ಲವೇ ಇಲ್ಲ.
ಕೆಣಕಿದೆ ಒಲವ
ಇಲ್ಲ,
ಸ್ನೇಹವ ತಡಕಿದೆ
ಇಲ್ಲ.
ಸುಖವೇಂಬುದು
ಇಲ್ಲದ ಸಂಗತಿಯೇ?.
ಹುಡುಕಲು ಸಿಕ್ಕಿತೇ?
ತಡಕಲು ದಕ್ಕಿತೇ?
ಹುಡುಕುವ ಗೋಜೆ
ದುಖಃಮಯ,
ಯಾಕೆ ಬೇಕು
ಸುಖ ಮಾಯಾ.
ಬೇಕಿದೆ ಸುಖ ದುಖಃಗಳ
ಹೊರತಾದ ಶೂನ್ಯ ಮನ,
ಮತ್ತೆ
ಆಶಯೇ ದುಖಃಕ್ಕೆ ಕಾರಣ ........
- ಪೀ. ಎಸ್. ಪೀ
06 Oct 2015, 06:50 pm