Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭವಿ(ಷ)ಷ್ಯ

ಇಂದು ನಿನ್ನಲಿ ನೋಡಿದೆ, ನಾಳೆಯ ನನ್ನನ್ನು
ನಿನ್ನೇ ನಿನ್ನಲಿ ನೋಡಿದ್ದೆ, ಇಂದಿನ ಏನೇನೋ!!!
ಇಂದು ನಿನ್ನೆಗಳ ವ್ಯವಕಲನದಿ ದಕ್ಕಿದ್ದು,
ಬರೀ....... ಸೊನ್ನೆ, ಬವಣೆ.

- ಪೀ. ಎಸ್. ಪೀ

23 Sep 2015, 07:36 am

ಒಂದೇ .....

ಒಂದೇ ......

ಸವಿಗಾನದ ರಾಗದಲಿ, ಸೂರ್ಯನ ನೋಟದಲಿ.
ಕಪ್ಪಿನಂತೆ ರಾತ್ರಿಯಲ್ಲಿ , ಪೃಥ್ವಿಯ ಕೂಸುನಲಿ.
ಅಮೃತದ ಗಾಳಿಯಲಿ , ಜೀವದನಿ ನೀರಿನಲಿ.
ಸರಿಸಮಾನ ಕಂಡ ಅಲ್ಲಾ,ಈಶ್ವರ, ಯೇಸು....

ಆಕಾರದ ಜೀವಿಗಳು ,ನೇಕಾರನ ಬಟ್ಟೆಗಳು.
ಮಕರಂದದ ಹನಿಗಳು, ಸಹಾಕಾರದ ಕೈಗಳು.
ಕಣ್ಣಿನ ಹನಿಗಳು ,ಕಾವ್ಯದ ಸಾಲುಗಳು.
ಸರಿಸಾಮನ ಕಂಡ ಅ, ಈ,ಯೇ...

ಶಬ್ದದ ಭಾವರ್ಥಗಳು , ಹಸುರಿನ ಬೆಳೆಗಳು.
ಬೇರಿನ ಮಣ್ಣುಗಳು , ಸಾವಿರಾರು ಕಣ್ಣುಗಳು.
ರುಚಿಸುವ ಹಣ್ಣುಗಳು ,ಹಡೆಯುವ ಹೆಣ್ಣುಗಳು.
ಸರಿಸಾಮನ ಕಂಡ ಅ,ಈ,ಯೇ...

ಧರ್ಮದ ಗ್ರಂಥಗಳು , ದಾಸರ ಧ್ವನಿಗಳು.
ವಾದ್ಯದ ಸ್ವರಗಳು ,ಹಾಡಿನ ಪದಗಳು.
ಸಂತರ ಧ್ಯಾನಗಳು,
ಭಕ್ತಿಯ ಭಾವನೆಗಳು, ಸಾಗುವ ದಾರಿಗಳು.
ಎಲ್ಲದರಲ್ಲೂ ಸರಿಸಾಮನ ಕಂಡ ಅ,ಈ,ಯೇ.

ಗೂಡಿನ ಮಾಡುಗಳು, ಗಾಡಿಯ ಚಕ್ರಗಳು.
ಬೆಂಕಿಯ ಜ್ವಾಲೆಗಳು, ಅಕ್ಕಿಯ ಆಗಳುಗಳು.
ಗಂಧದ ಸುವಾಸನೆಗಳು , ಚಂದದ ನವಿಲುಗಳು.
ಎಲ್ಲದರಲ್ಲೂ ಸರಿಸಮಾನ ಕಂಡ ಅ,ಈ,ಯೇ

ಅಲ್ಲಾ,ಈಶ್ವರ,ಯೇಸುಗೆ
ಇನ್ನಿಲ್ಲದ ನಯವಂಚನೆಗಳು,
ಸರಿದಾರಿ ಹರಿದಾರಿ ಒಂದೇ ಗೋಳ.
ಯಾಕೆ? ವರ್ಣಗಳ ಗೋಳು.
ಸರಿಸಿ ಏರಿಸಿ ಒಂದೆಂದು ಒಲವಿಗೆ.....

--- ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

13 Sep 2015, 03:54 am

ಮರೆಯಲಾಗುತಿಲ್ಲ

ಮತ್ತೆ ಮಗುವಾದರೆ....ನಿನ್ನೊಂದಿಗೆ ಆಡ ಬಯಸುವೆ......ನೀ ದೂರವಾದಗ...- ಒಂದು ಕ್ಷಣ ಬಿಕ್ಕಿ....ಸುಮ್ಮಗಾಗುವೆ...ಮರೆತು ಹೋಗುವೆ......

- sridevi.N

12 Sep 2015, 11:25 am

ಬೆರೆತಾಕ್ಷಣ

ಅವನ ಕಣ್ಣೊಳಗೆ ಬಿಂಬವಾಗಿ ಬೆರೆತೆ
ಅವನ ಉಸಿರೊಳಗೆ ಎದೆಯ ಬಡಿತವಾಗಿ ಬೆರೆತೆ
ವಿಶಾಲ ಮನಸ್ಸಿನ ಪುಟ್ಟ ಎದೆಗೆ ಒರಗಿ
ಬಿಸಿ ಮುತ್ತ ನೀಡಿ ಅವನೊಳಗೆ ಬೆರೆತು ಹೋದೆ
ಹಣೆಯ ಮೇಲೆ ಸಿಹಿಮುತ್ತ ನೀಡಿ ನಡು ಬಳಸಿ ಬರಸೆಳೆದು ಮಾಯದ ಕನಸೊಳಗೆ ಬಿಗಿದಪ್ಪಿ ಪ್ರೀತಿಯ ಬಲೆಯಲ್ಲಿ ಬಂಧಿಸಿ ಹೃದಯ ಬಡಿತದೋಳಗೆ ಬೆರೆಸಿದನು

- ರವಿಕುಮಾರ

11 Sep 2015, 06:01 pm

ಸೆರಗಂಚು

ಅವಳು ನಾಚುವ ಮೋಡಿಗೆ ನನ್ನ ಎದೆಯೊಳಗಿನ ಮನ ಚಿತ್ತಾರ ಬಿಡಿಸಿತ್ತು
ಕಣ್ಣಂಚಿನ ನಡುವೆ ಹಾರಡುತ್ತಿದ್ದ ಕೂದಲ ಹಿಂದೆ ಸರಿಸಿ ನಾಚುವ ತುಟಿಗಳ ತುಂಟ ನಗೆಗೆ
ನನ್ನ ತುಟಿಗಳಲ್ಲಿ ನಗೆಯ ಕಡಲು
ಸೆರೆಗ ಅಂಚ ಎಳೆದು ಹಿಂಡಿ ತಲೆ ಬಗ್ಗಿಸಿ ಸಣ್ಣ ಕಿರುಗಣ್ಣಿನಲಿ ಮೌನ ನಗೆ ಬೀರಿದರೆ
ತುಟಿಯಂಚಿನಲಿದ್ದ ಸಿಹಿಜೇನ ಹೀರಲು ಕಾತರ.

- ರವಿಕುಮಾರ

11 Sep 2015, 05:50 pm

ಏನೆಂದು ಬಣ್ಣಿಸಲಿ...

ಏನೆಂದು ಬಣ್ಣಿಸಲಿ....!

ಏನೆಂದು ಬಣ್ಣಿಸಲಿ...!
ಇದ್ದವುಗಳ.,
ಹೊಸದೊಂದು ಸೃಷ್ಟಿಸಲಾಗದಕ್ಕೆ,
ದೃಷ್ಟಿಯಲ್ಲಿ ಎಲ್ಲವೂ ಅದ್ಭುತ
ಗಮನಿಸಲು ದೃಷ್ಟಿದೋಷ.

ಏನೆಂದು ಬಣ್ಣಿಸಲಿ.....!
ನಿನ್ನ ರಂಗವನ್ನು.,
ನಿಮ್ಮ ನಿಮ್ಮ ರಂಗಕ್ಕೆ ಶ್ರೇಷ್ಟ ನೀವೆ,
ಗುಂಡಿ ತೋಡುವವರು ಬೇರೆಯವರೆ
ನಿನ್ನ ಎತ್ತರದಲ್ಲಿ ನೋಡಲಾಗದ ದೋಷ.

ಏನೆಂದು ಬಣ್ಣಿಸಲಿ ....!
ಭಕ್ತಿಯನ್ನು.,
ತನ್ನ ಹಿತಕ್ಕಾಗಿ ಬೇರೆಯವರ ಬೆವರಿಂದ
ಅಭಿಷೇಕ ಮಾಡಿ ತಾನು ಅರ್ಚಕನಾಗಿ
ನಾನೆ ಸರ್ವನೆಂಬ ಅಧಿಕಾರ ದೋಷ.

ಏನೆಂದು ಬಣ್ಣಿಸಲಿ....!
ಎಲ್ಲದಕ್ಕೂ ಬಾಗಿಲು ಬೀಗ.,
ತನ್ನದಲಾದಾಲ್ಲೆವು ತನ್ನದೆಂದು ಅಪ್ಪುವ
ತಾನು ಇಲ್ಲಿನವನಲ್ಲ ಎಂಬುದಾ ಮರೆತ
ಮಾಸಿದ ಕಣ್ಣು, ನಂಬಿಕೆ ದೋಷ.

ಏನೆಂದು ಬಣ್ಣಿಸಲಿ ...!
ಸೂರ್ಯನ ಕಿರಣ ದಿಕ್ಕು ಬದಲಿಸಿದರೆ.,
ಗುರತ್ವಾಕರ್ಷಣೆ ಬಲ ಬತ್ತಿದರೆ.,
ಭೂಗೋಳ ಇನ್ನಿಲ್ಲದೆ ಜಾರಿದರೆ.,
ನಾನ್ನಿಲ್ಲದ ನಾನು, ಭ್ರಮೆಯ ದೋಷ.

ಏನೆಂದು ಬಣ್ಣಿಸಲಿ.....!
ದುರ್ನಾತದ ಸವಿಯ ತನ್ನೋಡಲೋಳಗೆ
ಇಟ್ಟು .ಸವಿಗಾಳಿ ನೀಡಿ ಜೀವಿಗಳ ಬದುಕಿಗೆ.
ಬೇಕಾದನೆಲ್ಲ ಬದಿಗಿರಿಸಿ ಬೇಡದ್ದನೆಲ್ಲ ಬದುಕಿಸಿ ಬಂಡಾಗಿರುವ ನಾ, ಅತಿಯಾಸೆ ದೋಷ


-- ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

10 Sep 2015, 04:10 pm

ತಿಳಿ ಮನಸ್ಸು .....

ತಿಳಿ ಮನಸ್ಸು .....

ಎಲ್ಲದರೂಳಗು ಭಾವನೆ ಅಸ್ವಾದಿಸಿದಾಗ
ಭಕ್ತಿ ತನ್ನತಾನೆ ತೆರೆದು ಹೊಳಸೂತ್ರವ
ಮನ ಮಂತ್ರದ ದೇಹ ಹಾಗುರಾಗುವ ಈ
ತಿಳಿ ಮನಸ್ಸು....
ಅಕ್ಕಿಯೋಳಗೆ ಅನ್ನದ ಭಾವನೆ ಅಸ್ವಾದಿಸಿದಾಗ
ಶಕ್ತಿ ದೇಹದೊಳಗೆ ಸಂಚಾರಸೂತ್ರವ
ಅಭಿಧಮಿಸಿ ಅಲಾಂಕರದ
ತಿಳಿ ಮನಸ್ಸು...
ಗಾಳಿಯೊಳಗೆ ಜೀವದ ಭಾವನೆ ಅಸ್ವಾದಿಸಿದಾಗ
ಯುಕ್ತಿ ಕಣ್ಣೊಳಗೆ ಚಿತ್ರಸೂತ್ರವ
ಆಕಾರ ವಿನ್ಯಾಸ ಅರ್ಥೈಸುವ
ತಿಳಿ ಮನಸ್ಸು ....
ಬೆಳಕಿನೊಡನೆ ಬಣ್ಣದ ಭಾವನೆ ಅಸ್ವಾಧಿಸಿದಾಗ
ನವರಸದ ಚಲನೆ ಬದುಕಿನಸೂತ್ರವ
ಒಳ ಹೊರವು ಬಣ್ಣಿಸುವ
ತಿಳಿ ಮನಸ್ಸು .....

-- ಈಶ,ಎಂ.ಸಿ.ಹಳ್ಳಿ ..

- ಈಶ, ಎಂ.ಸಿ.ಹಳ್ಳಿ

09 Sep 2015, 07:02 pm

ಜ್ಯಾತ್ಯತಿತ

ಜಾತಿ ಗೀತಿ ಬಿಟ್ಟು ಒಂದಾಗಿರಿ
ಮಾನವ ಜಾತಿ ಒಂದೇ ಎಂದರು ಅಬ್ದುಲ್ ಕಲಾಂ !
ಆದರೂ ಯಾವುದೇ ಅರ್ಜಿ ಫಾರಂ
ನೋಡಿ ಅಲ್ಲಿದೆ ಜಾತಿ ಕಾಲಂ!!

- Satyasagar

06 Sep 2015, 07:22 am

ತ್ಯಾಗ

ನ್ಯಾಯ ನೀತಿ ಧರ್ಮಕಾಗಿ
ಎಲ್ಲಾ ತ್ಯಾಗ. ಮಾಡಿದ. ಅಪ್ಪ !!
ಇವೆಲ್ಲವನ್ನು ತ್ಯಾಗ ಮಾಡಿದ
ಖುರ್ಚಿಗಾಗಿ ಮಗ, !!.

- Satyasagar

06 Sep 2015, 07:12 am

ವ್ಯತ್ಯಾಸ

ನೀವಿಲ್ಲದಿದ್ದರೆ ಊಟನೆ ಮಾಡಲ್ಲ
ಅಂತಿದ್ಲು ನನ್ನ ಪ್ರೀತಿಯ ಪಿಚಲು ಅರ್ಧಾಂಗಿ!!
ನಾನೀಗ. ವರ್ಗವಾಗಿ ದೂರದಲ್ಲಿದ್ದೆ್ನೆ.
ನಾನಿಲ್ಲದೆ ಊಟ ಮಾಡಿ
ಆಗಿದ್ದಾಳೆ ಗಜಗಮನೆ!!.

- Satyasagar

06 Sep 2015, 07:03 am