Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರಿಯತಮೆ

ಒಂದಿಷ್ಟು ಬೆಲೆಯಿಲ್ಲವೆ
ನಿನ್ನ ಹ್ರದಯದಲಿ
ಈ ಬಡಪಾಯಿಯ
ಪ್ರೀತಿಗೆ
ಕ್ಷಮೆ ಕೊಡು ನಿನ್ನ ವರಿಸಲು
ಹಣಕ್ಕಾಗಿ ವಿಮಾನ ಹತ್ತಿದ
ಪ್ರವಾಸಿಗೆ

ಯಾವ ಹಣದಾಸೆಯು ನಿನ್ನ
ಕರೆದೊಯ್ಯುತ್ತಿದೆ ಇನ್ನೊಂದು
ಗೂಡಿಗೆ
ಮೋಸವ ಮಾಡುತ್ತಿರುವೆ
ನಾ ಕೊಟ್ಟ ಸಮುದ್ರದಷ್ಟು
ಪ್ರೀತಿಗೆ

ಕೋಪದೊಳು ಸುಡುತ್ತಿದ್ದ ದೇಹಕ್ಕೆ
ನಯನಗಳು ಕಣ್ಣೀರ ಹರಿಸಿ
ತಂಪೆರಗಿವೆ
ನಿನ್ನ ಪ್ರೀತಿಯ ಬರೆಯುತ್ತಿದ್ದ
ಲೇಖನಿಯು ಶಾಯಿಯ ಚೆಲ್ಲಿ
ಮೌನವಾಗಿವೆ

ದೂರಿಟ್ಟಿರುವೆನು ಚಂದಾಮಾಮನಲಿ
ಮೋಸ ಮಾಡಿರುವೆ ನೀ ಪ್ರೀತಿಯಲಿ
ನ್ಯಾಯ ಕೊಡಲು ಚಂದಮಾಮನು
ಕೇಳುವನು ಸಾಕ್ಷಿಯಲಿ
ಅಸೂಯೆ ಆ ಕರಿಮೋಡಗಳಿಗೆ
ಅಡ್ಡ ನಿಂತಿವೆ ನಕ್ಷತ್ರಗಳಿಗೆ
ಬಾನಿನಲಿ

ಮ.ಅಲಿ

- ma.ali

09 May 2015, 09:44 pm

ಜೀವನ

ಜೀವನವೆಂಬ ಉಯ್ಯಾಲೆಯ ಮೇಲೆ ಕೂತು ತೂಗುತ್ತೀರುವ ಆಸೆಗಳಿಗೆನು ಗೊತ್ತು, ಮನದಲ್ಲಿ ಉಲ್ಬಣಿಸುತ್ತಿರುವ ಕಷ್ಟಗಳ ಸ್ವರಮಾಲೆ..
.......

- ಸುನಾಗ್

09 May 2015, 08:55 am

ಬೊಂಬಾಟ್ ಸುಂದ್ರಿ

ಬೊಂಬಾಟ್ ಸುಂದರಿ ಬೀದೀಲ್ ಬಂದ್ಳು
ಬಾಯ್ ಬಾಯ್ ಬಿಟ್ರು ಪಡ್ಡೆ ಹೈಕಳ್ಳು

ತಲೆ ಬಾಚ್ಕೊಂಡ್ ಕಾಲರ್ ಎತ್ಕೊಂಡು ಸುಂದ್ರ ಒಬ್ಬ ಹತ್ರ ಬಂದ
ಮೀಸೆಮ್ಯಾಲೆ ಕೈಯನ್ನಿಟ್ಟು
ಸುಂದ್ರಿ ಸೊಂಟ ನೋಡ್ತಾ ನಿಂತ

ಮೂಗು ಮೂತಿ ತಿರ್ಗುಸ್ಕೊಂಡು
ಠಸ್ಸು ಪುಸ್ಸು ಮಾತಾಡ್ಕೊಂಡು
ಮಾವನ್ ಮನೆಯ ದಾರಿ ಕೇಳಿ ಮಾವನ್ ಮಗನ ತೋರ್ಸಿ ಅಂದ್ಳು

ದೇವರ್ಪಾದ ಸೇರ್ಕೊಂಡ್ಮಾವ ಮೂರ್ತಿಂಗ್ಳ್ಹಿಂದೆ ಮಾಯ್ವಾಗೋದ
ಮಾವನ್ಮಗ ನಾನೆ ಈವ್ನಿ ಪ್ರಾಣ ಬೇಕಾರ್ಕೊಡ್ತೀನ್ನಿಂಗೆ ಏನ್ಬೇಕ್ಹೇಳು ಕೊಡ್ತೀನೆಂದ

ಲಕ್ಷ ಲಕ್ಷ ಸಾಲ ತಗೊಂಡ್ ಮುಂಡಾಮೋಚ್ಕೊಂಡ್ ಮಾಯ್ವಾಗವ್ನೆ
ಮುಂದಿನ್ತಿಂಗ್ಳು ಮದ್ವೆ ನನ್ದು ನನ್ದುಡ್ಡ್ ನನ್ಗೆ ವಾಪಸ್ಕೊಡು

ಬೆಪ್ ನನ್ಮಗ್ನಂಗ್ ಸಪ್ಗಾಗಾಗ್ಬಿಟ್ಟ ಸುಂದ್ರಿ ಮುಂದೆ ಮಾತ್ಬರ್ದಂಗೆ ತಬ್ಬಿಬ್ಬಾಗಿ ಕಣ್ ಕಣ್ ಬಿಟ್ಟ

..........ಮಧುಗಿರಿ ಬದರಿ

- K.Badarinatha

07 May 2015, 07:45 am

ಹೆಣ್ಣೋಂದು ಹೂವು

ಒಂದು ಹೂವನ್ನು ನೋಡಬೇಡಿ
ನೋಡಿದರು ಮುಟ್ಟಬೇಡಿ
ಮುಟ್ಟಿದರೂ ಕೀಳಬೇಡಿ
ಕಿತ್ತರೂ ಎಸಿಯಾಬೇಡಿ
ಎಸೆದರೂ ಆ ಹೂವನ್ನು ಮರೆಯಬೇಡಿ

ಇಂತಿ
ಶ್ರೀಸಾಗರ್

- srinivassagar

07 May 2015, 06:38 am

ಅನುಮತಿಗಾಗಿ


ಮನವ ಕೇಳು ನನ್ನ ಕುರಿತು...
ಏನೂ ಹೇಳದು ಪ್ರೀತಿ ಹೊರತು ...
ಬೆರೆತು ಹೊಗುವೆ ಜಗವ ಮರೆತು
ನುಡಿಯುತಿರುವೆ ಅನುಮತಿಯ ಕುರಿತು
ಕೊಡುವೆಯೇನು ಅನುಭವಿಯ ಅರಿತು||

- vikas ಅನುಭವಿ

06 May 2015, 11:13 am

ಪ್ರೀತಿ ಭಾವನೆ

ಅಂತರಂಗದಲಿ ಅವಿತು
ಭಾವಾಂತರಂಗಗಳ ಬಡಿದೆಬ್ಬಿಸಿದೆ ಏಕೆ?

ಭಾವನೆಗಳೇ ಕಣ್ಣೀರಾಗಿ
ಮನಸ್ಸಾಗರದ ತೀರಕೆ
ಬಂದು ಮತ್ತೆ ಮತ್ತೆ ಹಿಂತಿರುಗುವಿರೇಕೆ?

ಪ್ರೀತಿ ಪ್ರತಿ ಅಲೆಯು
ನಿನ್ನ ಹುಡುಕಾಡಿ
ಅತ್ತಿತ್ತ ಅಲೆದಾಡಿ
ನೀ ಕಾಣದೆ ಸಪ್ಪಗೆ
ಸಾಗರದೊಳಗೆ ಸೇರಿದೆ

ನೀ ಬರುವ ದಾರಿ ಕಾಣಲು
ತೀರದ ತೆಂಗು ತಲೆ ಎತ್ತಿ ನೋಡಲು
ಸುಳಿವು ಸಿಗದೆ ಗರಿಗಳು ತಲೆ ತಗ್ಗಿಸಿದೆ

ಜಗಳವಾಡಿಲ್ಲ ಮುನಿಸಿಕೊಂಡಿಲ್ಲ
ಸುಮ್ಮನೆ ತವರಿಗೆ ಹೋದರೆ ಹೀಗೆ ನಾ ಸಹಿಸಲಿ ಹೇಗೆ

.....ಮಧುಗಿರಿ ಬದರಿ

- K.Badarinatha

03 May 2015, 02:06 am

ನೇಪಾಳ

ಭೂತಳದಿ ಬೇತಾಳ
ಕುಣಿದಿರಲು
ಪರ್ವತದ ನೇಪಾಳ
ಸೇರಿತು ಪಾತಾಳ

ಹಚ್ಚ ಹಸಿರಾಗಿ ಕಂಗೊಳಿಪ
ಭೂರಮೆಯೆ
ನೀ ಅತಿ ಸುಂದರ
ನಿನ್ನ ಅಂತರಾಳ
ಏಕಿಷ್ಟು ಭಯಂಕರ

ಸಾವು ನೋವು ಸಾಕಾಗಿ
ಬಾಳು ಬರಡಾಗಿದೆ
ಕಣ್ಣನಲಿ ಮಣ್ಣು ಸೇರಿ ಕಣ್ಣೀರೆ ಕಾಣದಾಗಿದೆ

ಕಂಡರೂ ಕಾಣದು
ಅಡಿಯಲ್ಲಿ ಅವಶೇಷ
ಕರೆದರೂ ಕೇಳದು
ಎಲ್ಲವೂ ನಾಮಾವಶೇಷ

ಕಂಪನಗಳ ನಿಲ್ಲಿಸು
ಕರುಣೆಯ ತೋರಿಸು
ಕಂದಮ್ಮಗಳ ರಕ್ಷಿಸು
ಹರಹರಾ ಮಧುಗಿರಿಯ
ಮಲ್ಲೇಶ್ವರಾ...

.........ಮಧುಗಿರಿ ಬದರಿ

- K.Badarinatha

30 Apr 2015, 01:32 pm

ಎಂದು ಬರುವೆ

ಕೂಗಿದೆ ಕೂಗಿದೆ ಕೂಗಿದೆ
ಅವಳು ಮಾತನಾಡಲಿಲ್ಲ
ತಿರುಗಿ ನೋಡಲಿಲ್ಲ
ನೆನ್ನೆ ತೋರಿದ ಪ್ರೀತಿಯ
ಇಂದು ಮರೆತಳಲ್ಲ
ನನ್ನ ಮೇಲಿನ ಮುನಿಸೋ
ನಡೆದದ್ದೆಲ್ಲಾ ಕನಸೋ
ಏನೆಂದು ತಿಳಿಯಲಿ
ಹೃದಯ ಒಡೆದಳಲ್ಲ
ಕನಸಿಗೆ ಕನಸನು ಸೇರಿಸಿ
ನನ್ನನು ಪ್ರೀತಿಸಿ
ಕನಸಿನರಮನೆಯಲಿ
ನನ್ನ ಕೂರಿಸಿ
ಬರುವೆನೆಂದು ಹೋದವಳು
ಇನ್ನೂ ಬರಲಿಲ್ಲವಲ್ಲ
ಎಷ್ಟು ಕೂಗಲೀ ನಾ
ಗಂಟಲು ಹರಿದಿದೆ
ಜೀವ ಬಳಲಿದೆ
ಉಸಿರು ಹೋಗುವ ಮುನ್ನ
ನೆನಪಾಗಿ ನನ್ನ
ಬಂದು ನೋಡುವೆಯಾ ಚಿನ್ನ

- ಚೇತನ್ ಬಿ ಸಿ

29 Apr 2015, 01:10 am

ಅರ್ಪಣೆ ನಿನಗೆ

ಮನಸು ನನ್ನದು
ಕನಸು ನಿನ್ನದು
ಕಣ್ಣು ನನ್ನದು
ನೋಟ ನಿನ್ನದು
ಮೂಗು ನನ್ನದು
ಸುವಾಸನೆ ನಿನ್ನದು
ನಾಲಗೆ ನನ್ನದು
ರುಚಿ ನಿನ್ನದು
ಹೃದಯ ನನ್ನದು
ಮಿಡಿತ ನಿನ್ನದು
ದೇಹ ನನ್ನದು
ಕಣಕಣವೂ ನಿನ್ನದು
ನನ್ನ ದೆನ್ನುವುದೆಲ್ಲವು ನಿನ್ನದೇ

- ಚೇತನ್ ಬಿ ಸಿ

29 Apr 2015, 12:55 am

ಧರ್ಮದ ಹಾದಿ ಭಾಗ.2

ಭವದಿ ಹುಟ್ಟಿ ಬರುವಾಗ ನೀನು ಬರಿಗೈಲಿ ಬಂದೆಯಲೋ
ಹೋಗಬೇಕು ಬರಿಮೈಲಿ ಎಂದು ತಿಳಿದುಕೊಳೋ ಮೊದಲು
ಬಂಧು ಬಳಗವು ಗಳಿಸಿದಾಸ್ತಿಯು ಜೊತೆಗೆ ಬರುವುದಿಲೋ
ಧರ್ಮ ಕರ್ಮದ ಪಾಪ ಪುಣ್ಯದ ಫಲವೇ ಸಿಗುವುದಿಲೋ ನೀನು ಮಾಡಿದ ಪಾಪವಂತು ನಿನ್ನ ಕಾಡದೇ ಬಿಡದಲ್ಲ
ವಿಧಿಯು ಮಾಡಿದ ನಿಯಮವೆಂದು ತಿಳಿ ಯಾರಿಗೂ ಬಿಟ್ಟಿಲ್ಲ
ಪುಣ್ಯ ಕರ್ಮಕ್ಕೆ ಯೋಗ್ಯ ಫಲವು ಸಿಗದಂತೆ ಹೋಗೊದಿಲ್ಲ
ಧರ್ಮವ ನಂಬಿ ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳು ಇಲ್ಲ
ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ
ಮುಂದೆ ಸಮಯ ಸಿಗದಂತೆ ಓಡುತ್ತಿದೆ ಕಾಲವೆಂಬ ಕುದುರೆ

- ಮಂಜುನಾಥ ಡಿ.ಸಿ.ಪಲ್ಲಾಗಟ್ಟೆ

27 Apr 2015, 05:42 am