Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಾಂತ್ರಿಕ

ಹೊರಟಿದ್ದೆ ಆಯುಧಗಳ ಜೊತೆ ಕೆಲಸಕ್ಕಂದು
ಕೆಟ್ಟು ಹೋಗಿತ್ತು ಶೀತಲೀಕರಣದ ಯಂತ್ರವೊಂದು
ಹುಡುಕುತ್ತಿದ್ದೆ ಸ್ತಭ್ದಗೊಲ್ಲಳು ಕಾರಣವೇನೆನೆಂದು
ನಿಯಂತ್ರಣದ ವಯರೊಂದ ಕಚ್ಚಿ ನ್ರತ್ಯ ಮಾಡುತ್ತಿತ್ತು ಇಲಿಯೊಂದು.

- ma.ali

09 May 2015, 09:58 pm

ಕೂಲಿ ಕಾರ್ಮಿಕ

ಕಷ್ಟದಿ ಸಾಗಿಸುವನು
ಜೀವನ ಬಂಡಿಯನ್ನು
ದಿನಕೂಲಿ ಕಾರ್ಮಿಕನು
ದೇಹದ ಬೆವರಿಳಿಸಿರುವನು
ರೂಪಿಸಲು ಭವಿಷ್ಯವನು
ಧನಿಕನೇ ಸತಾಯಿಸದಿರು
ನೀಡು ನೀ ಸಮಯಕ್ಕೆ ಕೂಲಿಯನು
ಯಾಕಂದರೆ ನಮ್ಮನ್ನು ನೋಡುತ್ತಿರುವನು
ಭೂಮಿಯ ಸ್ರಿಷ್ಟಿಕರ್ತನು


ಮ.ಅಲಿ

- ma.ali

09 May 2015, 09:56 pm

ಮೈಸೂರಿನ ಹುಲಿ

ದೇಶಕ್ಕಾಗಿ ರಣರಂಗದಲ್ಲೆ ಅಂತ್ಯಗೊಂಡ
ಟಿಪ್ಪುಸುಲ್ತಾನ್ ಶಹೀದಾದ ದಿನವಿಂದು
ಬ್ರಿಟೀಷರ ಜೊತೆ ಕೆಳ ದೇಶದ್ರೋಹಿಗಳು
ಕೇಕೆ ಹಾಕಿದ ದಿನವಿಂದು
ದೇಶಕ್ಕಾಗಿ ರಾಜರೊಬ್ಬರು ಆರ್ಭಟಿಸಿದ
ದಿನವಿಂದು
ಮರೆತು ಬಿಟ್ಟೆವು ನಾವೆಲ್ಲ ನೆನಪಿಸಬೇಕು
ಈ ದಿನವನ್ನು.

ಅಷ್ಟದಿಕ್ಕುಗಳಲ್ಲೂ ಬಿಳಿಯನ ಬಂದೂಕಿನ
ಘರ್ಜನೆ
ಇತ್ತ ದೇಶವ ಕಾಪಾಡಲು ಹುಲಿಯೊಂದರ
ಘರ್ಜನೆ
ಶರಣಾದರು ಕೆಲವು ಅರಸರು
ಆಸೆಯಿತ್ತು ಬದುಬೇಕು
ಐಷಾರಾಮಿ
ಎದೆ ಗುಂದಲಿಲ್ಲ ಮೈಸೂರಿನ ಹುಲಿ
ಹೋರಾಟದ ಹಾದಿ ಹಿಡಿದ
ದೇಶಪ್ರೇಮಿ

ಕಾಪಾಡಬೇಕಿತ್ತು ಬಿಳಿಯನಿಂದ ತನ್ನ
ದೇಶವನ್ನು
ಅದಕ್ಕಾಗಿ ತ್ಯಾಗ ಮಾಡಿದ್ದು ತನ್ನ
ಮಕ್ಕಳನ್ನು
ಬ್ರಿಟೀಷ್ ಸಾಮ್ರಾಜ್ಯವೆ ಟಿಪ್ಪುವಿನಿಂದ
ನಿದ್ದೆಗೆಟ್ಟಿತ್ತು
ಮೈಸೂರಿನ ಕತೆಯನ್ನು ಬಿಳಿಯನಿಗೆ
ಮುಗಿಸಬೇಕಿತ್ತು
ಅದಾಕ್ಕಾಗಿ ಕೆಲವು ದೇಶ ದ್ರೋಹಿಗಳು
ಸಿದ್ದವಿತ್ತು

ಅದೊಂದು ಯುದ್ದದ ರಣಕಹಳೆ
ಊದಲ್ಪಟ್ಟಿತು
ಎತ್ತನೋಡಿದರತ್ತ ಬ್ರೀಟೀಷ್ ಸೇನೆಗಳೆ
ಕಾಣುತ್ತಿತ್ತು
ಎದೆಗುಂದದೆ ಮೈಸೂರಿನ ಸೇನೆ
ಹೋರಾಟಕ್ಕಿಳಿಯಿತು

ಶಸ್ತ್ರ ಸಜ್ಜಿತ ಬ್ರೀಟೀಷರ ಎದೆಯೂ
ನಡುಗಲಾರಂಬಿಸಿತು
ಯಾಕಂದರೆ ಹುಲಿಯೊಂದು ರಣರಂಗದಲಿ
ಘರ್ಜಿಸುತ್ತಿತ್ತು
ಕ್ಷಣಮಾತ್ರದಲ್ಲಿ ರಣರಂಗ ರಕ್ತದ
ಹೊಳೆಯಾಯಿತು
ಬಿಳಿಯನ ಮೋಸದ ಬಾಣವೊಂದು
ಹುಲಿಯ ದೇಶ ಪ್ರೇಮದ ಘರ್ಜನೆಗೆ
ನಾಂದಿ ಹಾಡಿತು.

ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್(ರ.ಅ) ಮರಣವು ದೇಶಪ್ರೇಮಕ್ಕೆ ಸಾಕ್ಷಿಯಾಯಿತು.


ಮ.ಅಲಿ

- ma.ali

09 May 2015, 09:54 pm

ಮೋಡದ ಅಸೂಯೆ

ಹುಣ್ಣಿಮೆಯ ಚಂದಿರನ ಚಂದವ
ಕಂಡು ಮುತ್ತಿಡಲು ಕಾಯುತ್ತಿದ್ದೆ
ಕಾಣಿಸದ ಕಡು ಕತ್ತಲೆ
ಛಾವಣಿಯಲ್ಲಿ
ಹುಡುಕಿಬಿಟ್ಟವು ಮೋಡಗಳು
ಅಸೂಯೆ ಅವುಗಳಿಗೂ ನನ್ನಲ್ಲಿ
ಮರೆಮಾಚಿತು ಚಂದಿರನ
ಆ ನೀಲಿ ಬಾನಿನಲಿ

ಮ.ಅಲಿ

- ma.ali

09 May 2015, 09:52 pm

ನ್ಯಾಯ ವಂಚಿತ ಸಹೋದರಿ

ಕ್ಷಮಿಸಿ ಸಹೋದರಿಯರೆ

ಹೇಳವ್ವ ತಂಗಿ ಸೌಜನ್ಯ
ಅದೆಷ್ಟು ನೋವ ಸಹಿಸಿರುವೆ
ಆ ಕ್ರೂರಿ ಪಾಪಿಗಳಿಂದ.
ಸ್ವಲ್ಪ ಗೋರಿಯ ಮೇಲೆದ್ದು
ನೋಡುವೆಯ ತಂಗಿ
ಸುತ್ತುತ್ತಿರುವರು ರಾಜ ಬೀದಿಯಲಿ
ನಿನ್ನ ಕೊಂದ ಪಾಪಿಗಳು
ನಾನೇನು ಮಾಡಲಿ ತಂಗಿ
ನ್ಯಾಯಲಯವನ್ನು ಗುತ್ತಿಗೆ
ಕೊಟ್ಟಿದೆ ನಮ್ಮ ಸರಕಾರಗಳು

ನಿನ್ನ ಕಥೆಯ ಹ್ಯಾಗ್ ಹೇಳಲಿ
ತಂಗಿ ನಿರ್ಭಯ
ನಿನ್ನ ಹಿಂಷಿಸಿದವನಿಗೆ ಇಲ್ಲವೆ ಇಲ್ಲ
ಒಂಚೂರು ಭಯ
ಕೋಪಿಸಬೇಡ ನಾನು ಹಿಡಿದಿರುವೆನು
ಪಲಕಗಳ ನ್ಯಾಯ ಬೇಕೆಂದು ತಂಗಿ
ನಿರ್ಭಯ
ನ್ಯಾಯವ ಪಡೆದಿರುವರು ನೀಡಿ ಕೇವಲ
ಹಣವ
ನಾನೇನು ಮಾಡಲಿ ಹಣವಿಲ್ಲ ನಾನೊಬ್ಬ
ಬಡವ
ಬಿಡಲಾರೆನು ಎಬ್ಬಿಸಿವೆನು ಎಲ್ಲರನು
ಅಕ್ಷರಗಳಲ್ಲಿ ನಿಮಗಾಗಿ
ಈ ತಲೆಯು ಪದಗಳ ಮರೆಯುವವರೆಗು
ಬರೆಯುವೆನು ನಿಮಗಾಗಿ


ಮ.ಅಲಿ

- ma.ali

09 May 2015, 09:50 pm

ಪ್ರವಾಸಿ

ಮನೆಯಲ್ಲಿ ತಂಗಿಯ ಮದುವೆ
ಮಾತು ಸುರುವಾಯಿತು..
ವರದಕ್ಷಿಣೆಯ ಬೇಡಿಕೆಯು
ಅದರಲ್ಲಿತ್ತು
ಅದಾಗಲೆ ಬಡಜೀವವು
ವಿಮಾನವೇರಿತ್ತು
ಕಣ್ಣೀರು ತುಳುಕುತ್ತಿತ್ತು
ಹೆತ್ತವ್ವಳ ನೆನಪಾಗುತ್ತಿತ್ತು..

ಮರುಭೂಮಿಯ ನಡುವೆ
ವಿಮಾನವು ಇಳಿಯುತ್ತಿತ್ತು
ಪಟ್ಟಣವೊಂದು ಶ್ರಂಗಾರಗೊಂಡು
ನ್ರತ್ಯವಾಡುತ್ತಿತ್ತು
ಇದು ಕಂಡ ಮನವು ಸ್ವಲ್ಪ
ಸಮಾದಾನಗೊಂಡಿತು

ಮರುಭೂಮಿಯು ಚಳಿಯಿಂದ
ನಡುಗುತ್ತಿತ್ತು
ಸುಡು ಬಿಸಿಲು ಬೆವರ ನದಿಯಾಗಿ
ಪರಿವರ್ತಿಸಿತು
ಇದೆಲ್ಲವು ಕಷ್ಟವಲ್ಲವೆಂದು
ನನಗನಿಸುತ್ತಿತ್ತು
ಯಾಕಂದರೆ ಹೆತ್ತವ್ವ ಹಣೆಗಿಟ್ಟ
ಮುತ್ತಲ್ಲಿ ಪ್ರಾರ್ಥನೆಯಿತ್ತು.

ಮ.ಅಲಿ

- ma.ali

09 May 2015, 09:48 pm

ಪ್ರಿಯತಮೆ

ಒಂದಿಷ್ಟು ಬೆಲೆಯಿಲ್ಲವೆ
ನಿನ್ನ ಹ್ರದಯದಲಿ
ಈ ಬಡಪಾಯಿಯ
ಪ್ರೀತಿಗೆ
ಕ್ಷಮೆ ಕೊಡು ನಿನ್ನ ವರಿಸಲು
ಹಣಕ್ಕಾಗಿ ವಿಮಾನ ಹತ್ತಿದ
ಪ್ರವಾಸಿಗೆ

ಯಾವ ಹಣದಾಸೆಯು ನಿನ್ನ
ಕರೆದೊಯ್ಯುತ್ತಿದೆ ಇನ್ನೊಂದು
ಗೂಡಿಗೆ
ಮೋಸವ ಮಾಡುತ್ತಿರುವೆ
ನಾ ಕೊಟ್ಟ ಸಮುದ್ರದಷ್ಟು
ಪ್ರೀತಿಗೆ

ಕೋಪದೊಳು ಸುಡುತ್ತಿದ್ದ ದೇಹಕ್ಕೆ
ನಯನಗಳು ಕಣ್ಣೀರ ಹರಿಸಿ
ತಂಪೆರಗಿವೆ
ನಿನ್ನ ಪ್ರೀತಿಯ ಬರೆಯುತ್ತಿದ್ದ
ಲೇಖನಿಯು ಶಾಯಿಯ ಚೆಲ್ಲಿ
ಮೌನವಾಗಿವೆ

ದೂರಿಟ್ಟಿರುವೆನು ಚಂದಾಮಾಮನಲಿ
ಮೋಸ ಮಾಡಿರುವೆ ನೀ ಪ್ರೀತಿಯಲಿ
ನ್ಯಾಯ ಕೊಡಲು ಚಂದಮಾಮನು
ಕೇಳುವನು ಸಾಕ್ಷಿಯಲಿ
ಅಸೂಯೆ ಆ ಕರಿಮೋಡಗಳಿಗೆ
ಅಡ್ಡ ನಿಂತಿವೆ ನಕ್ಷತ್ರಗಳಿಗೆ
ಬಾನಿನಲಿ

ಮ.ಅಲಿ

- ma.ali

09 May 2015, 09:44 pm

ಜೀವನ

ಜೀವನವೆಂಬ ಉಯ್ಯಾಲೆಯ ಮೇಲೆ ಕೂತು ತೂಗುತ್ತೀರುವ ಆಸೆಗಳಿಗೆನು ಗೊತ್ತು, ಮನದಲ್ಲಿ ಉಲ್ಬಣಿಸುತ್ತಿರುವ ಕಷ್ಟಗಳ ಸ್ವರಮಾಲೆ..
.......

- ಸುನಾಗ್

09 May 2015, 08:55 am

ಬೊಂಬಾಟ್ ಸುಂದ್ರಿ

ಬೊಂಬಾಟ್ ಸುಂದರಿ ಬೀದೀಲ್ ಬಂದ್ಳು
ಬಾಯ್ ಬಾಯ್ ಬಿಟ್ರು ಪಡ್ಡೆ ಹೈಕಳ್ಳು

ತಲೆ ಬಾಚ್ಕೊಂಡ್ ಕಾಲರ್ ಎತ್ಕೊಂಡು ಸುಂದ್ರ ಒಬ್ಬ ಹತ್ರ ಬಂದ
ಮೀಸೆಮ್ಯಾಲೆ ಕೈಯನ್ನಿಟ್ಟು
ಸುಂದ್ರಿ ಸೊಂಟ ನೋಡ್ತಾ ನಿಂತ

ಮೂಗು ಮೂತಿ ತಿರ್ಗುಸ್ಕೊಂಡು
ಠಸ್ಸು ಪುಸ್ಸು ಮಾತಾಡ್ಕೊಂಡು
ಮಾವನ್ ಮನೆಯ ದಾರಿ ಕೇಳಿ ಮಾವನ್ ಮಗನ ತೋರ್ಸಿ ಅಂದ್ಳು

ದೇವರ್ಪಾದ ಸೇರ್ಕೊಂಡ್ಮಾವ ಮೂರ್ತಿಂಗ್ಳ್ಹಿಂದೆ ಮಾಯ್ವಾಗೋದ
ಮಾವನ್ಮಗ ನಾನೆ ಈವ್ನಿ ಪ್ರಾಣ ಬೇಕಾರ್ಕೊಡ್ತೀನ್ನಿಂಗೆ ಏನ್ಬೇಕ್ಹೇಳು ಕೊಡ್ತೀನೆಂದ

ಲಕ್ಷ ಲಕ್ಷ ಸಾಲ ತಗೊಂಡ್ ಮುಂಡಾಮೋಚ್ಕೊಂಡ್ ಮಾಯ್ವಾಗವ್ನೆ
ಮುಂದಿನ್ತಿಂಗ್ಳು ಮದ್ವೆ ನನ್ದು ನನ್ದುಡ್ಡ್ ನನ್ಗೆ ವಾಪಸ್ಕೊಡು

ಬೆಪ್ ನನ್ಮಗ್ನಂಗ್ ಸಪ್ಗಾಗಾಗ್ಬಿಟ್ಟ ಸುಂದ್ರಿ ಮುಂದೆ ಮಾತ್ಬರ್ದಂಗೆ ತಬ್ಬಿಬ್ಬಾಗಿ ಕಣ್ ಕಣ್ ಬಿಟ್ಟ

..........ಮಧುಗಿರಿ ಬದರಿ

- K.Badarinatha

07 May 2015, 07:45 am

ಹೆಣ್ಣೋಂದು ಹೂವು

ಒಂದು ಹೂವನ್ನು ನೋಡಬೇಡಿ
ನೋಡಿದರು ಮುಟ್ಟಬೇಡಿ
ಮುಟ್ಟಿದರೂ ಕೀಳಬೇಡಿ
ಕಿತ್ತರೂ ಎಸಿಯಾಬೇಡಿ
ಎಸೆದರೂ ಆ ಹೂವನ್ನು ಮರೆಯಬೇಡಿ

ಇಂತಿ
ಶ್ರೀಸಾಗರ್

- srinivassagar

07 May 2015, 06:38 am