Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದುಡ್ಡಿನಲಿ

ಅಂದು
ಕುಡಿದೆ
ಕೇಳಿದರೆ,
ಅದು ನನ್ನ ಸ್ವಂತ ದುಡ್ಡಿನಲಿ

ಇಂದು
ಕುಡಿದೆ
ಔಷಧಿಯ
ಅವರಿವರ ದುಡ್ಡಿನಲಿ

- ishak

18 Mar 2015, 03:09 am

ವಿಶ್ವಾಸ

ಯಾರಿಗೆ ಯಾರಲ್ಲಿ ವಿಶ್ವಾಸ
ತಂದೆಗೆ ಮಗನಲ್ಲಿ
ಪತಿಗೆ ಪತ್ನಿಯಲ್ಲಿ
ಶಿಷ್ಯನಿಗೆ ಗುರುವಲ್ಲಿ
ಇದರ ವಿರುದ್ದವೂ.........
ಕೊನೆಗೆ ನಮಗೆ ನಮ್ಮಲ್ಲಿ
ಎನ್ನುವಲ್ಲಿಗೆ.....!!!!
ಬಂದು ಬಿಟ್ಟಿದೆ

- ishak

17 Mar 2015, 06:47 am

ಮರ

ಬಳಲಿ ಬಂದವರ
ಆಸರೆಯಾಗುವುದು

ನೋವ ಕೊಟ್ಟರೂ
ಫಲವ ಕೊಡುವುದು

ಹಸಿದು ಬಂದವರ
ಹೊಟ್ಟೆ ತುಂಬುವುದು

ಸತ್ತು ಬಿದ್ದರೂ
ಉಪಕಾರಕ್ಕೆ ಬರುವುದು

ಮಾನವರಾಗಿ ನಿನ್ನ
ಉರುಳಿಸಿದ್ದಲ್ಲದೆ ಗಿಡ ಒಂದ
ನೆಟ್ಟು ಬೆಳೆಸಲಾಗಲಿಲ್ಲ

ಎಂ.ಐ.ಕೆ

- ishak

16 Mar 2015, 05:57 am

ನಮ್ಮವನು

ನೇಸರಿನ ಬೆಳಕಿನ ಬೆಳಕಿಗಿಲ್ಲ ಕಪಟ
ನಿತ್ಯದಿನ ನಿಡಿ ಬೆಳಕು ಹರಸುತಿಹನು
ಹೆಮ್ಮರವು ಸೂಸುವ ಗಾಳಿಗಿಲ್ಲ ಯಾವ ಮೊನಚು
ಉಸಿರ ನಿಡಿ,ಹಸಿರ ಹೊದೊಸಿ ಸುಕವ ನಿಡುವನು.

ಹರಿವ ತೊರೆಗೆ, ಬಿದ್ದ ಮಳೆಗೆ ಇಲ್ಲ ಅಹಃ
ಪ್ರಾಣ ದಾಹವ ತೀರಿ ಜೀವ ಉಳಿಸಿತು.
ಅರಳು ಪುಷ್ಪವು ಸೂಸಿ ಸುಗಂಧವ
ಬೆಡದದು ಎಂದು ತಕ್ಕ ಪ್ರತಿಪಲವನು.

ಕೊಟ್ಟ ಮಾತಿಗೆ, ಇಟ್ಟನಂಬಿಕೆಗೆ
ಎಲ್ಲಿಹುದು ಇಲ್ಲಿ ವಿಶ್ವಾಸ
ಮಂಕು ಬೂದಿಯ ಎರಚಿ,
ಸುಳ್ಳು ರಾಶಿಯನು ಗೆಡವಿ,
ತನ್ನ ಮನದ ಸಂತೃಪ್ತಿಗೆ
ಕರುಣೆ, ಕ್ಷಮತೆ ಹೊಂದದೆ,
ಪರರ ಮನವ ನೊಯಿಸಿ,
ಭವ್ಯ ಭಾವನೆಗಳನು ಗೂಡಿಸಿ,
ಕಾಲಚಕ್ರದಡಿಯಲಿ,ನೆಮ್ಮದಿ ಇರದ ಮಡುವಲಿ,
ಬದುಗ ಬಂಡಿ ಎಳೆವನು,
ಪರರರೆಂದು ನೊಡನು
ನಮ್ಮವನು, ಇವನು ಮಾನವನು.
ಇವನು ಮಾನವನು.

DS...

- Dharmu.s.m

16 Mar 2015, 02:44 am

ಜೀವನ

ಜೀವನ ಅನ್ನೋ ಅಂಧವಾದ ಭೋಗಿಯಲ್ಲಿ ಚಿತ್ರ ವಿಚಿತ್ರ ಪಾತ್ರಧಾರಿಗಳನ್ನ
ಅನುಗಾಲವು ನೋಡುತ್ತಿರುತ್ತೇವೆ
ಪ್ರತಿಯೊಂದು ಪಾತ್ರಕ್ಕು
ನಾವೇ ಎನ್ನುವ ಭ್ರಮೆಯಲ್ಲಿ ಬದುಕುತ್ತಿರುತ್ತೇವೆ
ಅದು ಭ್ರಮೆಯು
ಅಥವಾ ನಿಜವೂ
ತಿಳಿಯೋದಕ್ಕೆ ಮಾತ್ರ
ನೂರಾರು ಪುರಾವೆಗಳುಆದರೂ ಬರೆಯಲೇಬೇಕೆಂಬಉಮೇದು
ನಾವು ನಮ್ಮತನವನ್ನೆ ಬದಿಗಿಟ್ಟು ನೋಡುದಾದ್ರೇ ನಮ್ಮಲ್ಲೆ ಇಷ್ಟೇ ಉಳಿದಿರೋದು ಅದಕ್ಕೊಂದು ಕೊನೆಯಿಲ್ಲ ಮೊದಲು ಇಲ್ಲ ಆದರೂ ತಿಳಿಯುತ್ತಿದ್ದಂತೆಲ್ಲಾ ನಮ್ಮಯ ಕನಸುಗಳನ್ನೆ ಹೆಕ್ಕಿ ಹೆಕ್ಕಿ ಮುಜುಗರ ಉಂಟಾಗುವುದು ನಮ್ಮಯ ಮುಜುಗರ ಕೆಲವರಿಗೆ ಅಸಹ್ಯ ತರಿಸುವುದು

- ಗುರು

14 Mar 2015, 12:46 pm

ರಜ

ಕನಸಿನ ಲೋಕಕ್ಕೆ
ಭಾನುವಾರವೇ
ತೆಗೆದು ಅಗೆದ ಕಾರಣ,
ತಿಳಿದಿದ್ದರು ತಾನೇ
ಕೊನೆಯಿಲ್ಲದ ಗಡಿಯಾರ
ತಿಳಸಲಿಲ್ಲ ಮಂಡಿಸಿದ ಕವನ.
ಅದೇ ಇರಬೇಕು ಆಹಾರ
ಬದುಕು ಲೇ ಥೂ ಛೆ
ಇವತ್ತು ರಜೆ.,..೮55ಯ್

- ಗುರು

14 Mar 2015, 12:38 pm

ಒಂದಿಂಚು ಸಾಲು...

ಎಷ್ಟೋ ಭರವಸೆಗಳು
ಬಾಳುತ್ತಿರುವಾಗ
ಅನೇಕ ನಿರಾಶೆಗಳು
ಮುದುಡಿಕೊಂಡಿವೆ
ಹಿಂದಿನ ಸಾಲಿನಲ್ಲಿ

ಎಷ್ಟೋ ನಿರಾಶೆಗಳು
ಬಾಳುತ್ತಿರುವಾಗ
ಅನೇಕ ಭರವಸೆಗಳು
ಅಂತ್ಯಕಾಣಲೇತ್ನಿಸುತ್ತಿದೆ
ಸ್ಮಶಾಣದ ಬಾಗಿಲಲ್ಲಿ

ಎಷ್ಟೋ ಭರವಸೆಗಳು
ದೋಣಿಯಲ್ಲಿ ಸಾಗಿ
ಮಕರಂದ ಹೀರಿ
ತಣ್ಣನೆ ಗಾಳಿಯಲ್ಲಿ ತೇಲಿ
ಹಸಿರಿನ ಮೇಲೆ ಹೆಸರಾಗುತ್ತ,,,

ಎಷ್ಟೋ ನಿರಾಶೆಗಳು
ನೀರಲ್ಲಿ ಈಜುತ ಸಾಗಿ
ಹಗ್ಗದ ತುದಿಗೆ ಮುತ್ತನಿಕ್ಕಿ
ಗಾಳಿಯನ್ನು ಘಮಿಸದೆ
ಹಸಿರಿನ ಕೆಳಗೆ ಕರಗುತ್ತ,,,,

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

13 Mar 2015, 05:41 pm

ನಂಬಿದವರೇ ದ್ರೋಹ ಮಾಡಿದಾಗ

ಮನ ಕದಡಿತು 
ಮಾತು ಬತ್ತಿತು
ಮಾಡಿದ ಉಪಕಾರವ
ಬಿಡದೆ ಚಿತ್ರಿಸಿತು ಕಣ್ಣೀರ
ಒಂದೊಂದೇ ಹನಿಯು

ಮನ ಹುಡುಕಿತು
ನಿನ್ನ ಯಾವ ತಪ್ಪಿಗೆ
ಅವನ, ಅವಳ ಯಾವ ಸ್ವಾರ್ಥಕ್ಕೆ

ಛೇ....... ಬೇಡವಾಗಿತ್ತು
ಹೀಗೆ ಮಾಡಬಾರದಿತ್ತು

- ishak

12 Mar 2015, 05:51 pm

ಮನಸ್ಸು

ಸಾವಿರ ಭಾವದ ಮನಸ್ಸು
ನಾ ತಿಳಿಯಲೊಲೆ
ಛಿತ್ರ-ವಿಚಿತ್ರ ........
ಮನಸ್ಸಿನ ಮುಲೆಯ ಕೊಳಕು
ನಾ ತಿಳಿಯಬಲ್ಲೆ......
ಇದೆ ಸಚಿತ್ರ.......

- ರವಿ ನಾಯ್ಕ

11 Mar 2015, 05:02 pm

ಪ್ರೀತಿಸು

ರಂಗು ರಂಗಿನಲ್ಲಿ ನಲಿದು
ಎಲ್ಲರು ರಂಗಿನ ಹೊಳಿ ಹುಣ್ಣುವೆ
ಆಚರಿಸೊಣ
ಬಣ್ಣ ಬಣ್ಣದಲ್ಲಿ ಮಿಂದು
ಎಲ್ಲರು ಸಂತಸ ಹಂಚೊಣ

- ಅಜೀತ ಅರಬೊಳೆ ಜುಗುಳ

10 Mar 2015, 12:31 pm