Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅನುಮತಿಗಾಗಿ


ಮನವ ಕೇಳು ನನ್ನ ಕುರಿತು...
ಏನೂ ಹೇಳದು ಪ್ರೀತಿ ಹೊರತು ...
ಬೆರೆತು ಹೊಗುವೆ ಜಗವ ಮರೆತು
ನುಡಿಯುತಿರುವೆ ಅನುಮತಿಯ ಕುರಿತು
ಕೊಡುವೆಯೇನು ಅನುಭವಿಯ ಅರಿತು||

- vikas ಅನುಭವಿ

06 May 2015, 11:13 am

ಪ್ರೀತಿ ಭಾವನೆ

ಅಂತರಂಗದಲಿ ಅವಿತು
ಭಾವಾಂತರಂಗಗಳ ಬಡಿದೆಬ್ಬಿಸಿದೆ ಏಕೆ?

ಭಾವನೆಗಳೇ ಕಣ್ಣೀರಾಗಿ
ಮನಸ್ಸಾಗರದ ತೀರಕೆ
ಬಂದು ಮತ್ತೆ ಮತ್ತೆ ಹಿಂತಿರುಗುವಿರೇಕೆ?

ಪ್ರೀತಿ ಪ್ರತಿ ಅಲೆಯು
ನಿನ್ನ ಹುಡುಕಾಡಿ
ಅತ್ತಿತ್ತ ಅಲೆದಾಡಿ
ನೀ ಕಾಣದೆ ಸಪ್ಪಗೆ
ಸಾಗರದೊಳಗೆ ಸೇರಿದೆ

ನೀ ಬರುವ ದಾರಿ ಕಾಣಲು
ತೀರದ ತೆಂಗು ತಲೆ ಎತ್ತಿ ನೋಡಲು
ಸುಳಿವು ಸಿಗದೆ ಗರಿಗಳು ತಲೆ ತಗ್ಗಿಸಿದೆ

ಜಗಳವಾಡಿಲ್ಲ ಮುನಿಸಿಕೊಂಡಿಲ್ಲ
ಸುಮ್ಮನೆ ತವರಿಗೆ ಹೋದರೆ ಹೀಗೆ ನಾ ಸಹಿಸಲಿ ಹೇಗೆ

.....ಮಧುಗಿರಿ ಬದರಿ

- K.Badarinatha

03 May 2015, 02:06 am

ನೇಪಾಳ

ಭೂತಳದಿ ಬೇತಾಳ
ಕುಣಿದಿರಲು
ಪರ್ವತದ ನೇಪಾಳ
ಸೇರಿತು ಪಾತಾಳ

ಹಚ್ಚ ಹಸಿರಾಗಿ ಕಂಗೊಳಿಪ
ಭೂರಮೆಯೆ
ನೀ ಅತಿ ಸುಂದರ
ನಿನ್ನ ಅಂತರಾಳ
ಏಕಿಷ್ಟು ಭಯಂಕರ

ಸಾವು ನೋವು ಸಾಕಾಗಿ
ಬಾಳು ಬರಡಾಗಿದೆ
ಕಣ್ಣನಲಿ ಮಣ್ಣು ಸೇರಿ ಕಣ್ಣೀರೆ ಕಾಣದಾಗಿದೆ

ಕಂಡರೂ ಕಾಣದು
ಅಡಿಯಲ್ಲಿ ಅವಶೇಷ
ಕರೆದರೂ ಕೇಳದು
ಎಲ್ಲವೂ ನಾಮಾವಶೇಷ

ಕಂಪನಗಳ ನಿಲ್ಲಿಸು
ಕರುಣೆಯ ತೋರಿಸು
ಕಂದಮ್ಮಗಳ ರಕ್ಷಿಸು
ಹರಹರಾ ಮಧುಗಿರಿಯ
ಮಲ್ಲೇಶ್ವರಾ...

.........ಮಧುಗಿರಿ ಬದರಿ

- K.Badarinatha

30 Apr 2015, 01:32 pm

ಎಂದು ಬರುವೆ

ಕೂಗಿದೆ ಕೂಗಿದೆ ಕೂಗಿದೆ
ಅವಳು ಮಾತನಾಡಲಿಲ್ಲ
ತಿರುಗಿ ನೋಡಲಿಲ್ಲ
ನೆನ್ನೆ ತೋರಿದ ಪ್ರೀತಿಯ
ಇಂದು ಮರೆತಳಲ್ಲ
ನನ್ನ ಮೇಲಿನ ಮುನಿಸೋ
ನಡೆದದ್ದೆಲ್ಲಾ ಕನಸೋ
ಏನೆಂದು ತಿಳಿಯಲಿ
ಹೃದಯ ಒಡೆದಳಲ್ಲ
ಕನಸಿಗೆ ಕನಸನು ಸೇರಿಸಿ
ನನ್ನನು ಪ್ರೀತಿಸಿ
ಕನಸಿನರಮನೆಯಲಿ
ನನ್ನ ಕೂರಿಸಿ
ಬರುವೆನೆಂದು ಹೋದವಳು
ಇನ್ನೂ ಬರಲಿಲ್ಲವಲ್ಲ
ಎಷ್ಟು ಕೂಗಲೀ ನಾ
ಗಂಟಲು ಹರಿದಿದೆ
ಜೀವ ಬಳಲಿದೆ
ಉಸಿರು ಹೋಗುವ ಮುನ್ನ
ನೆನಪಾಗಿ ನನ್ನ
ಬಂದು ನೋಡುವೆಯಾ ಚಿನ್ನ

- ಚೇತನ್ ಬಿ ಸಿ

29 Apr 2015, 01:10 am

ಅರ್ಪಣೆ ನಿನಗೆ

ಮನಸು ನನ್ನದು
ಕನಸು ನಿನ್ನದು
ಕಣ್ಣು ನನ್ನದು
ನೋಟ ನಿನ್ನದು
ಮೂಗು ನನ್ನದು
ಸುವಾಸನೆ ನಿನ್ನದು
ನಾಲಗೆ ನನ್ನದು
ರುಚಿ ನಿನ್ನದು
ಹೃದಯ ನನ್ನದು
ಮಿಡಿತ ನಿನ್ನದು
ದೇಹ ನನ್ನದು
ಕಣಕಣವೂ ನಿನ್ನದು
ನನ್ನ ದೆನ್ನುವುದೆಲ್ಲವು ನಿನ್ನದೇ

- ಚೇತನ್ ಬಿ ಸಿ

29 Apr 2015, 12:55 am

ಧರ್ಮದ ಹಾದಿ ಭಾಗ.2

ಭವದಿ ಹುಟ್ಟಿ ಬರುವಾಗ ನೀನು ಬರಿಗೈಲಿ ಬಂದೆಯಲೋ
ಹೋಗಬೇಕು ಬರಿಮೈಲಿ ಎಂದು ತಿಳಿದುಕೊಳೋ ಮೊದಲು
ಬಂಧು ಬಳಗವು ಗಳಿಸಿದಾಸ್ತಿಯು ಜೊತೆಗೆ ಬರುವುದಿಲೋ
ಧರ್ಮ ಕರ್ಮದ ಪಾಪ ಪುಣ್ಯದ ಫಲವೇ ಸಿಗುವುದಿಲೋ ನೀನು ಮಾಡಿದ ಪಾಪವಂತು ನಿನ್ನ ಕಾಡದೇ ಬಿಡದಲ್ಲ
ವಿಧಿಯು ಮಾಡಿದ ನಿಯಮವೆಂದು ತಿಳಿ ಯಾರಿಗೂ ಬಿಟ್ಟಿಲ್ಲ
ಪುಣ್ಯ ಕರ್ಮಕ್ಕೆ ಯೋಗ್ಯ ಫಲವು ಸಿಗದಂತೆ ಹೋಗೊದಿಲ್ಲ
ಧರ್ಮವ ನಂಬಿ ನಡೆಯುವ ದಾರಿಯಲ್ಲಿ ಕಲ್ಲು ಮುಳ್ಳು ಇಲ್ಲ
ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ
ಮುಂದೆ ಸಮಯ ಸಿಗದಂತೆ ಓಡುತ್ತಿದೆ ಕಾಲವೆಂಬ ಕುದುರೆ

- ಮಂಜುನಾಥ ಡಿ.ಸಿ.ಪಲ್ಲಾಗಟ್ಟೆ

27 Apr 2015, 05:42 am

ಧರ್ಮದ ಹಾದಿ

ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ
ಮುಂದೆ ಸಮಯ ಸಿಗದೆಂದು ತಿಳಿಯೋ ಉರುಳುತ್ತಿದೆ ಕಾಲಚಕ್ರ
ಸತ್ಕಾರ್ಯಗಳಿಗೆ ಸವಣವಿಲ್ಲವೆಂದು ನೀ ಮಾಡಬೇಡೋ ನಿದ್ರೆ ನಿನ್ನ ಕೈಗೆ ಸಿಗದಂತೆ ಓಡುತ್ತಿದೆ ಕಾಲವೆಂಬ ಕುದುರೆ
ನೀ ಧರ್ಮ ಕರ್ಮದ ಅರಿವನು ಮರೆತು
ಮಾಡಬೇಡೋ ನಕಾರ
ಆಟ ನೋಟದಿ ವ್ಯರ್ಥ ಸಮಯವ ಕಳೆದುಕೊಂಡೆಯಲೋ ಮೋಜು ಮಜವನು ನಂಬಿ ದೇಹವ ವ್ಯರ್ಥ ಗಳಿಸಿದಲೋ
ಮುಪ್ಪು ಅಡಗಿತು ನಡೆಯಲಾಗದೆ ಕೋಲು ಹಿಡಿದೆಯಲೋ
ಕಾಲ ಯಮನ ಕರೆ ಬರುವ ಮುನ್ನ ಆ ಶಿವನನ್ನು ನೆನೆಯಲಿಲೋ
ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ ಮುಂದೆ ಸಮಯ ಸಿಗದೆಂದು ತಿಳಿಯೊ ಉರುಳುತ್ತಿದೆ ಕಾಲಚಕ್ರ
ಜ್ನಾನಿಯೋಡನೆ ಒಡನಾಡಿ ನೀನು ಸುಜ್ನಾನಿ ಆಗಲಿಲೋ ಮಾನವ ಕುಲದಲಿ ಹುಟ್ಟಿ ಬಂದು ಅದರರ್ಥ ತಿಳಿಯಲಿಲೋ ಜ್ನಾನದ ಜ್ಯೋತಿಯ. ಬೆಳಗಿಸದೆ ಆ ಶಿವನು ಕಾಣಲಾರ
ದೇವನೋಲಿದರೆ ಹತ್ತುವೆ ನೀನು ಕೀರ್ತಿ ಎನ್ನುವ ಶಿಖರ
ನೀ ಧರ್ಮ ಕರ್ಮದ ಅರಿವನು ಮರೆತು ಮಾಡಬೇಡೋ ನಕಾರ
ಮುಂದೆ ಸಮಯ ಸಿಗದೆಂದು ತಿಳಿಯೋ ಉರುಳುತ್ತಿದೆ ಕಾಲಚಕ್ರ

- ಮಂಜುನಾಥ ಡಿ.ಸಿ.ಪಲ್ಲಾಗಟ್ಟೆ

27 Apr 2015, 05:24 am

ನನ್ನ ಬಿಟ್ಟು ಹೋದೆಯಾ

ಮೂರು ವರುಷದ ಪ್ರೀತಿಯ
ಮೂರೆ ದಿನದಲಿ ಮರೆತು
ನನ್ನ ಬಿಟ್ಟು ಹೋದೆಯಾ

ಕಾಣದ ಕೈಗೆ ನಿನ್ನ ಕೈಯನಿತ್ತು
ಮರೆತು ನಾನು ಕೊಟ್ಟ ಮುತ್ತು
ನನ್ನ ಬಿಟ್ಟು ಹೋದೆಯಾ

ಮಾತಿನಲ್ಲೆ ಮನೆಯ ಕಟ್ಟಿ
ಎಣೆದು ಒಲವಿನ ಬುಟ್ಟಿ
ನನ್ನ ಬಿಟ್ಟು ಹೋದೆಯಾ

ಮದುವೆ ಯಾಗುವೆನೆಂದು ನಂಬಿಸಿ
ಕೊನೆಯವರೆಗೊ ಚುಂಬಿಸಿ
ನನ್ನ ಬಿಟ್ಟು ಹೋದೆಯಾ

ನೀನೆ ನನ್ನ ಬಾಳ ಜೀವ
ಎಂದು ಮುಡಿಸಿ ಹೂವ
ನನ್ನ ಬಿಟ್ಟು ಹೋದೆಯಾ




- ಚೇತನ್ ಬಿ ಸಿ

25 Apr 2015, 02:01 pm

ಪ್ರೀತಿಯ ಗಳತಿಯ ನೆನಪು

ಒಂದು ಹುಣ್ಣಿಮೆ ಚಂದ್ರನ ಊರಿನಲ್ಲಿ
ಕದ್ದು ನೋಡುವ ಇಂದ್ರನ ತೇರಿನಲ್ಲಿ
ಹೆಜ್ಜೆ ಹೆಜ್ಜೆಗೂ ಪ್ರೀತಿಗೆ ಹುಟ್ಟಿದ ಹಬ್ಬ
ಇಂತ ಪ್ರೀತಿಯ ಕಣ್ಣಲೆ ಬದುಕು ಆರಂಭ

ಒಂದು ಹುಣ್ಣಿಮೆ ಚಂದ್ರನ ಊರಿನಲ್ಲಿ
ಕದ್ದು ನೋಡುವ ಇಂದ್ರನ ತೇರಿನಲ್ಲಿ
ಆಸೆಗಳು ಹುಟ್ಟೋದು ಅಂಧದ ಕಣ್ಣಿಂದ
ಈ ಅಂಧಗಳು ಹುಟ್ಟೋದು ವಯಸ್ಸಿನ ಕಣ್ಣಿಂದ ಬಯಸೀ ಹುಟ್ಟೋದೆ ಎರಡು ಮನಸ್ಸಿನ ಕಣ್ಣಿನಿಂದ
ಮನಸ್ಸು ಹುಟ್ಟೋದೆ ಒಪ್ಪಿದ ಒಲವಿನ ಕಣ್ಣಿಂದ ಈ ಒಲವಿನ ಸುಂದರ ಹೂಗಳು 
ನಾವಿಲ್ಲಿ
ಒಂದು ಹುಣ್ಣಿಮೆ ಚಂದ್ರನ ಊರಿನಲ್ಲಿ
ಕದ್ದು ನೋಡುವ ಇಂದ್ರನ ತೇರಿನಲ್ಲಿ
ಸಂಬಂಧ ಹುಟ್ಟೋದು ಸ್ಪರ್ಶದ ಕಣ್ಣಿಂದ
ಸ್ಪರ್ಶಗಳು ಹುಟ್ಟೋದು ಬಯಕೆಯ ಕಣ್ಣಿಂದ ಬಯಕೆಯೇ ಹುಟ್ಟೋದೇ ಬಣ್ಣದ ಕನಸಿನ ಕಣ್ಣಿಂದ ಕನಸು ಹುಟ್ಟೋದೆ ನಾಳೆಯ ಭರವಸೆ ಕಣ್ಣಿಂದ
ಈ ಭರವಸೆ ಕಾಯುವೇ ಪ್ರೀತಿಯ ಕಣ್ಣಲ್ಲಿ
ಒಂದು ಹುಣ್ಣಿಮೆ ಚಂದ್ರನ ಊರಿನಲ್ಲಿ
ಕದ್ದು ನೋಡುವ ಇಂದ್ರನ ತೇರಿನಲ್ಲಿ

" ಶಕುಂತಲಾಮಂಜುನಾಥ್ " ಪಲ್ಲಾಗಟ್ಟೆ

- ಮಂಜುನಾಥ ಡಿ.ಸಿ.ಪಲ್ಲಾಗಟ್ಟೆ

25 Apr 2015, 06:00 am

ನನ್ನವಳು...

ನನ್ನವಳು ಒಮ್ಮೆ ಅಳುವಳು
ಮತ್ತೊಮ್ಮೆ ನಗುವವಳು
ಶ್ರೀಮಂತಿಕೆಯ ಸೊಗು ಹೊಂದದೆ
ಹೃದಯ ಶ್ರೀಮಂತಿಕೆ ಹೊದ್ದವಳು.

ದಿನವಿಡಿ ನನಗಾಗಿ ಕಾಯ್ದವಳು
ಮುಸುಕಿನಲ್ಲೂ ನನ್ನನ್ನು ಮರೆಯದವಳು
ಕಂಡಾಗ ನಾನು ಕೆನ್ನೆ ಕೆಂಪಾಗಿಸಿ
ನನ್ನ ಹೆಜ್ಜೆಯನ್ನೆ ಹಿಂಬಾಲಿಸಿದವಳು.

ಸೊಂಪಾದ ಕೂದಲನು ಚಂದಾದಿ ಹದಮಾಡಿ
ನನಗಾಗಿ ಹೊಸ ಜಡೆಯನು ಹಾಕಿದವಳು
ತಾನುಡುವ ಸೀರೆಯ ಬಣ್ಣವನು ನನಕೇಳಿ
ನನಗಾಗಿ ಹೊಸ ಸೀರೆಯಾ ತೊಟ್ಟವಳು.

ಕಷ್ಟಾದಿ ನನ್ನಿ ಮನ ಮರುಗಿದಾಗ
ಹದಮಾಡಿ,ನಿಜನುಡಿದು ತಿಳಿಹೆಳಿದವಳು
ಕರುಣೆ, ಕ್ಷಮತೆ ಹೊಂದಿದವಳು,ಶಾಂತಿಪ್ರಿಯಳು
ನನಗಾಗೆ ಕಾದವಳು ನನ್ನವಳು ಇವಳು ನನ್ನವಳು...
DS

- Dharmu.s.m

23 Apr 2015, 03:18 pm