Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮರೆಯೋದು ಮರೆಸೋದು ಮಾತುಗಳನ್ನು ಮಾತ್ರ, ಮರೆಯದೇ ಮನಸ್ಸಲ್ಲಿ ಮನೆ ಮಾಡೋದು ಮರೆಯಲಾಗದ ನೆನಪುಗಳನ್ನು
ಮಾತ್ರ.
- ಸುನಾಗ್
02 Mar 2015, 02:36 pm
ಸೌಭಾಗ್ಯದಿ
ಬಂದ ಹಾದಿಯ
ಅಧಿಕಾರದಿ
ಸ್ವಂತ ಜನರ
ಕಂಡವಳಿಗಾಗಿ
ಕಟ್ಟಿಕೊಂಡವಳ
ಯವ್ವನದಿ ಹೆತ್ತವ್ವಳ
ಕಷ್ಟದಿ ಕೈ ಹಿಡಿದವರ
ವಿದ್ಯೆ ಕಲಿಸಿದ ಗುರುವ
ಮರೆತರೆ
ನೀ ಹೇಗೆ ಮಾನವನಾಗುವಿ
ಎಂ.ಐ.ಕೆ
- ishak
02 Mar 2015, 05:20 am
ಮಾತೇ....
ಕತ್ತಲೆಯಲ್ಲಿದ್ದವರು
ಬೆಳಕ ಬೇಡಲು.
ಕಿರಣ ಬೀರಲು
ಕದವ ತೆರೆದಳು
ಕರುಣಮಾಯಿ ಅಮ್ಮ...
ಮಮತೆಯ ಮರೆತ
ಮನುಜನ ಕೊರೆತೆ
ಅಮೃತವೆಲ್ಲ ವಿಷವಾಗಿರಲು
ವಿಷಾದಾವೆಲ್ಲ ವಿದ್ಯೆಯಂತೆ
ಪ್ರೇಮವನ್ನಿತ್ತ ಅಮ್ಮ...
ಜಗದ ನಾಲಿಗೆ
ಕಹಿಯಾಗಿದೆ ಇಂದು
ರುಚಿಕಾಣದ ಮನಸ್ಸು
ರೋಚ್ಚಿನಲ್ಲಿದ್ದ ಕಣ್ಣುಗಳಿಗೆ
ಶಾಂತಿಸಿದಳೀ ಅಮ್ಮ...
ಬೇದಭಾವದ ಬದುಕಿನಲಿ
ಬೇಧಿಸಲಾಗದೀ ನಾಲಿಗೆಗೆ
ಬಂಧಿಯಾದ ಅತ್ಮಗಳಿಗೆ
ಭಾವೈಕತೆಯ ಸಮಸ್ಯೆಯನ್ನು
ಭಾವುಗಳಿಂದ ಬೇಸೆದಳೀ ಅಮ್ಮ...
ಲೋಕನಾಯಕಿ ಲೇಪದಲಿ
ಲೋಕಾಮೃತೆ ಪ್ರೀತಿಯಲಿ
ಗೋಮಾತೆ ತ್ಯಾಗದಲಿ
ಆನಂದಮಾಯಿ ಆರ್ದ್ರತೆಯಲಿ
ಅದೆಲ್ಲವು ಈ ಅಮ್ಮನಲಿ....
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
01 Mar 2015, 03:46 am
ಕಳ್ಳತನ ನಡೆದಿದೆ
ಆದರೆ ಜರುಗಿದ
ಒಂದು ಕುರುಹು
ಸಿಕ್ಕಿಲ್ಲ.
ಬೀಗ ಹೊಡೆದಿಲ್ಲ
ಗೋಡೆ ಕೆಡವಿಲ್ಲ
ಖೂನಿ ನಡೆದಿಲ್ಲ
ರಕ್ತದ ನಿಶಾನೆ ಇಲ್ಲ.
ಎದೆಯೊಳಗೆ ಹೃದಯದ
ವಿಳಾಸವೇ ಇಲ್ಲ.
ವಿಚಿತ್ರವೆಂದರೆ ಕಳೆದುಕೊಂಡ
ದುಃಖವಿಲ್ಲ.
ವಿ
- Vinod Kumar Y V
28 Feb 2015, 07:03 pm
ಕಾಲಿಗೆ ಅಂಟಿಕೊಂಡಿದ್ದ
ಚಪ್ಪಲಿಗಾಗಿ
ಕೈ, ಕಿಸೆಯಲ್ಲಿದ್ದ ವಸ್ತುವಿಗಾಗಿ
ಎಲ್ಲೆಲ್ಲಿ ಅಲೆದಾಡಿಸಿತು
ಎಂ.ಐ.ಕೆ
- ishak
28 Feb 2015, 04:40 pm
ಈ ಗೆಳೆತನ,ಪ್ರೀತಿ ಎಲ್ಲ
ನಮಗೆ ತಾನಾಗೆ ಒಲಿದದ್ದು.
ನಂತರದ ಎಲ್ಲಾ ಬಿರುಕುಗಳ
ನಾವಿಬ್ಬರೂ ಅರಿತು ಹೊಲೆದದ್ದು.
ಕೋಪ ಯಾರಿಗೇ ಬರಲಿ
ತೇಪೆ ಇಬ್ಬರದೂ ಇರಲಿ.
ವಿ.
- Vinod Kumar Y V
27 Feb 2015, 12:17 pm
ಏರುತ್ತಲೇ ಇರುವುದು
ಕೆಳಕ್ಕೆ ಇಳಿಯದೆ
ಮಗು,ತರುಣ,ವೃದ್ಧನೆಂದು
ಹೆಸರ ಬದಲಿಸುತ್ತಲಿರುವುದು
ತಿರುಗಿ ನೀಡದೆ
ಅಂದಚಂದದಲಿ ವ್ಯತ್ಯಾಸವ
ತರುವುದು ಬಯಸದೆ
ತನ್ನ ಕರ್ತವ್ಯವ ಮಾಡುವುದು
ಯಾರ ನೋಡದೆ
ಕೊನೆಗೆ ನಮ್ಮೊಂದಿಗೆ
ಮಡಿಯುವುದು ಕಾಯದೆ
ನಮ್ಮನ್ನು ಕೇಳದೆ
ಮುಹಮ್ಮದ್ ಇಸ್ಹಾಕ್ ಕೌಸರಿ
- ishak
26 Feb 2015, 01:58 am
ಕಾವ್ಯ ಗೀಚಲು, ಗಧ್ಯ ಗೀಚಲು
ನವ್ಯ ಪಧಗಳ ಎಲ್ಲಿ ಹುಡುಕಲು
ಯಾರ ಪಕ್ಕೆಗಳೂ, ಹಲ್ಲುಗಳು
ಕುಡಿದ ದವಖಾನೆಗಳ ಬಾಟಿಲು
ನಗುವ ಮುಗ್ಧ ಮುಖದಾಳಲು
ಶವದ ಸಾಂಗೀಕ ಆಕ್ರಂದನ
ಮುಗಿಲು ಮುಟ್ಟಿದ ಭದ್ರತೆ
ಮಲ್ಲಿಗೆ ಸಂಪಿಗೆ ಮತ್ತದೇ ಕವಿತೆ
- ಗುರು
25 Feb 2015, 11:57 am
ಯಾರು ಯಾರದು ಬದುಕಿರುವುದು
ಬಲ್ಲಿದವರು ಬಾಳಿದವರು ಬಲ್ಲದು
ದೂತ್ರ ಮೂತ್ರ ಮತ್ಯಾರು ಮೀಸೆ
ಶರಗಳ ಸವಾಲು ಆದ್ಯಾರು
ಸುತ್ತ ನೆರೆದವರು ,,
ಶವಗಳ.ಮೆರೆವಣಿಗೆ ಕುಮಾರ
ರಕ್ಷಣಿಗೆ ಶರಪಂಜರ ಅದೇ ಕಾಣಿಕೆ
ಕುಲದಲ್ಲಿ ಮೇಲು
ಅದೇ ಅಮಲು..
- ಗುರು
25 Feb 2015, 10:42 am
ಹೇಳಿರಲು....!!!
ಲಂಚವನ್ ಇಕ್ಕುವವ
ಲಂಚಕ್ಕಾಗಿ ದುಡಿವ
ಲೊಚಗುಡುವ ಹಲ್ಲಿಯಂತೆ
ನಲಿಗೆಯ ಚಾಚುವ
ಕೆಲ ಕುಳಗಳ ನರವ
ನೋಡೆಂದ ಜಗದೊಡೆಯ..
ಜ್ಯೋತಿಯನ್ನು ನಂಬವನು
ಜ್ಯೋತಿಷ್ಯ ನಂಬುವುದಿಲ್ಲ
ಜಾತಿಯನ್ನು ನಂಬದವ
ಗುಂಪಿನಲಿ ಪರರ ಬೈಯುವುದಿಲ್ಲ
ಕಿಳ ನಾಲಿಗೆಯ
ನೋಡೆಂದ ಜಗದೊಡೆಯ...
ಅಂಧಶ್ರದ್ಧೆಗೆ ಒಳಗಾದವ
ಸಂಸ್ಕಾರದೆಸರಿನಲ್ಲಿ ಸಂಸ್ಕ್ರಾತಿಕ ಮಾಡಿ
ಸಂಸಾರವ ಸೂರಿನಿಂದ ವರದೊಡಿ
ತನ್ನ ಸೂರ ಸೋಪನ ಜತನಗೈದು
ಶಿರಭಾಗಿ ಕೈಮುಗಿದವ
ನೋಡೆಂದ ಜಗದೊಡೆಯ....
ತಾನು ತನ್ನಿಂದ ತರವೆಲ್ಲ
ತನ್ನೊಳಗೇ ನೀಚ ತುರುಬೆಲ್ಲ
ನಿಂದಿಪಹನು ನಿಲ್ಲುವರ
ಕಣ್ಣಿನ ರೆಪ್ಪೆಯಲ್ಲಿ ವರದೊಡುವ
ಕೀಳು ನಾಯಕನ
ನೋಡೆಂದ ಜಗದೊಡೆಯ...
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
24 Feb 2015, 01:03 pm