ಕಾಪಾಡಬೇಕಿರುವವರೆ
ಅಪ್ಪನ ಸಿಹಿ ಮುತ್ತು
ಗುರುವಿನ ಗೌರವದ ಗತ್ತು
ಮಣ್ಣ ಸೇರಿ ಹೋಗಿವೆ ಸತ್ತು
ಯಾರ ನಂಬುವುದೆಂದು ತಿಳಿಯದಾಗದ ಹೊತ್ತು
ಸಿಲುಕಿದರೆ ಕಾಯುವ ಕೈಯೆ ಕಾಮದ ಮಾಯೆಗೆ
ಯಾವ ಸ್ಪರ್ಶವೂ ಹಿತವಿರದು ಮೈಯಿಗೆ
ಏನು ಅರಿಯದ ಎಳೆ ಕಂದನ ಬಿಡರು
ಅರಳುವ ಮುನ್ನವೆ ಕತ್ತಲಿಗೆ ನೂಕುತಿರುವರು
ಕಾಪಾಡ ಬೇಕಿರುವಣ್ಣನೆ ಕಾಡುವ
ದೇಹದಾಸೆಗೆ ಗೆಳೆಯನೆ ಸೋತುಬಿಡುವ
ಗುರಿ ತೋರಿ ಬುದ್ಧಿ ಕಲಿಸ ಬೇಕಿರುವವ
ಕೂಸೆಂದು ನೋಡದೆ ಕಾಮಣ್ಣನಾಗುತಿರುವ
ಎತ್ತಪ್ಪನ ಕಂಡರೆ ಎದುರುವ ಸ್ಥಿತಿ
ಮುದ್ದು ಮಾಡುವಣ್ಣನೆಂದರೆ ಭೀತಿ
ಗೆಳೆಯನಿಗೂ ತೋರಲಾಗದೆ ಪ್ರೀತಿ
ಅವಳ ಮನದೊಳಗುಟ್ಟುವ ನೋವ ಹೇಳುವುದಾವ ರೀತಿ
ಎಳೆಯ ಕಂದನಲೂ ಕಾಣುವುದಾದರೆ ಕಾಮ
ಅವನಾಗಲಾರ ಕಾಡು ಪ್ರಾಣಿಗೂ ಸಮ
ಕರುಳ ಕುಡಿ, ಬಗಲಿಗೆ ಬಿದ್ದವಳೆಂದು ತಿಳಿಯಲಾಗದ ಮೇಲೆ
ಅವನಿಗಿರಬಾರದು ಈ ಭೂಮಿಯ ಮೇಲೆಯೆ ನೆಲೆ
ಅಂತವರ ಚಿತ್ರಹಿಂಸೆ ಕೊಟ್ಟು ಕೊಂದರು ಬರದು ಪಾಪ
ನರಕ ಯಾತನೆ ತೋರಿದರೆ ಎಚ್ಚರಿಸಿಕೊಳ್ಳುವರೇನೊ ಸ್ವಲ್ಪ
ಆ ಹೆಣ್ಣೆ ಈ ಜಗದ ಜನನಕೆ ನೋವನುಂಗಾದಳು ಆದಿ
ಈಗ ಅವಳ ಮಾಡಬೇಡಿ ಈ ಜಗದಂತ್ಯಕಾಡುವಂತೆ ನಾಂದಿ
- ಶ್ರೀಕಾವ್ಯ
08 Dec 2017, 11:25 pm
Download App from Playstore: