ನಮ್ಮೂರ ವನ
ನಮ್ಮೂರ ವನ ಅದೆಲ್ಲಾ ಈಗ ಬನ ಬನ
ಕಾರಣ ಮಳೆರಾಯನ ಕಾಲಹರಣ
ಜನರ ಕಷ್ಟಗಳ ಕದನ
ಮುಟ್ಟುತಿದೆ ಗಗನ
ಮಳೆರಾಯ ಈ ನಿನ್ನ ತುಂಟತನ
ಹಾಳು ಮಾಡುತ್ತಿದೆ ಭಾರತಾಂಬೆಯ ಸೌಂದರ್ಯತನ
ಬಂದರೆ ನೀನು ಸಂತಸ ರೈತರ ಮನ
ಬರದಿದ್ದರೆ ಆಗುವುದು ನಿನ್ನೇ ನಂಬಿ ಕುಳಿತವರ ಮರಣ
ಈ ನಮ್ಮ ಕೂಗು ಮುಟ್ಟಲಿ ನಿನ್ನ ಮನ
ಮುಟ್ಟಿ ಹಸಿರಾಗಲಿ ನಮ್ಮ ವನ
ಕುಣಿದು ನಲಿದಾಡಲಿ ನಮ್ಮ ಜನ.
- ಪೃಥ್ವಿ( ಪಿ.ಕೆ)
10 Dec 2017, 02:14 pm
Download App from Playstore: