ಹುಡುಕಾಟ

ನೇಸರನು ಪಡುವಣದಿ
ಚಿತ್ತಾರ ಬಿಡಿಸುತ ಲೋಕವ
ನೂಕಿದನು ಕತ್ತಲೆಯ ಕಾರಾಗಾರಕೆ
ಮಹಾತೃಣರು ಹಂತಕರ
ಹುಡುಕುತ ಶಶಿಯಿಂದ ರವಿ
ಬೆಳೆಗೆರೆಯ ನೂಕಿದರು ಪರಪ್ಪನಗ್ರಹಾರಕೆ

ದಾರಿ ತೋರಬೇಕಾದವರೆ,
ದಾರಿ ತಪ್ಪಿದಾಗ ಬೆಳಕಿಂಡಿ ಗೋಚರಿಪುದೆಲ್ಲಿ?
ಕೈಪಿಡಿದು ನಡೆಸುವವರೆ,
ಅಂಧರಾದಾಗ ಅಂಧರ ಬಾಳಿಗೆ ಪಥವದೆಲ್ಲಿ?
ಪ್ರಶ್ನಿಸುವವರೆ ಎಮಗೆ
ಪ್ರಶ್ನೆಯಾದಾಗ ಉತ್ತರವದೆಲ್ಲಿ ಹುಡುಕಲಿ?

ಹುಡುಕಲು ಗೌರಿ ಹಂತಕರ ಜಾಡು
ತೋರಿತೆ ರವಿ ಸಾಮ್ರಾಜ್ಯದ ಗೂಡು
ಕೋಗಿಲೆಯು ಮಾಮರವ ಹುಡಕುತ
ಬರುವಂತೆ ,ಎಲ್ಲಿಂದೆಲ್ಲಿಗೆ ಸಂಬಂಧ?



ಶಾರಧ

- ಶಕುಂತಲಾ

12 Dec 2017, 01:49 pm
Download App from Playstore: