ನೀನ್ಯಾರು?ನೀನೆಲ್ಲಿರುವೆ

ಬಾನಿನಲ್ಲಿ ಅವಿತ ಚುಕ್ಕಿಯಂತೆ,
ಹೂವಿನಲ್ಲಿ ಅವಿತ ಪರಿಮಳದಂತೆ,
ಕಣ್ಣಿನ ರೆಪ್ಪೆಯ ಹಿಂದೆ ಅವಿತು,
ಯಾರು ಇರದ ಸಮಯ ಬರುವೆ.

ರಸ್ತೆಯಲ್ಲಿ ನಾ ಓಡುವಾಗ,
ಕಲ್ಲು ತಗುಲಿ ಎಡವಿದಾಗ,
ಇರಲಿಲ್ಲ ಯಾರು ನನ್ನ ಜೊತೆ,
ಕ್ಷಣಮಾತ್ರದಲ್ಲಿ ಬಂದೆ ಮುತ್ತಿನ ಹನಿಯಂತೆ.

ಹಸಿವಿನಿಂದ ಕರು ದೂರವಾದಂತೆ,
ಹತ್ತಿರದವರು ದೂರವಾದಗ,
ಮೇಲಿನಿಂದ ಆಲಿಕಲ್ಲು ಉದುರುವಂತೆ,
ಮನಸ್ಸು ಚುಚ್ಚವಂತೆ ಬರುವೆ.

ಬಡಿಯುವ ಹೃದಯವ ನೋಡಿದೆ,
ಅದರ ಬಡಿತವನ್ನು ಕೇಳಿದೆ,
ಮಿಟಕ್ಕಿಸುವ ಕಣ್ಣರೆಪ್ಪೆಯನ್ನು ನೋಡಿದೆ,
ದುಃಖಪಟ್ಟೆ ನೀ ಕಾಣದೆ.

ಹೊಸ ಲೋಕ ನೋಡಲು ಬಂದಾಗ,
ನನ್ನ ಬಳಿಯಿರುವೆ,
ಸ್ವರ್ಗ ಲೋಕಕ್ಕೆ ಹೋದಾಗ,
ಬೇರೆಯವರ ಬಳಿಯಿರುವೆ.

ರೈತನ ಒಣಗಿದ ಭೂಮಿಯಲ್ಲಿ,
ಬರುವ ಮಳೆ ಹನಿಯಂತೆ,
ನನ್ನ ಮನಸ್ಸು ಬತ್ತಿ ಹೋದಾಗ,
ಎಲ್ಲಿಂದಲೊ ನೀ ಬರುವೆ.

ದೇವರು ಸೃಷ್ಟಿಸಿದ ನಿನ್ನನ್ನು,
ನೋವು-ನಲಿವು ಪ್ರತಿಬಿಂಬದಂತೆ,
ಕೊನೆಯಾಗಿ ತಿಳಿಯಿತು ನಿನ್ನ ಹೆಸರು,
ನಿನ್ನನ್ನು ಕರೆಯುತ್ತಾರೆ ಕಣ್ಣಿರು............

- manu

01 Jan 2018, 12:47 pm
Download App from Playstore: