ರೈತನೇ ನಮ್ಮ ದೇವರು

( ರೈತ ನಮ್ಮ ದೇವರು )

ರೈತನೇ ನಮಗೆಲ್ಲ ಅನ್ನದಾತ.
ನಾ ಹೇಳುತ್ತಿರುವೆ ನಿಮಗೆ ಪ್ರೀತಿ ಮಾತ.
ನಾವು ತಿನ್ನುವ ಆಹಾರದಲ್ಲಿ ಇಲ್ಲ
ಅವನ ಹೆಸರು.
ಅವನು ಬೆಳೆದಂತಹ ಪೈರಲಿತ್ತು .ಅವನ ಉಸಿರು.
ಬಡವನಿಗೆ ಗಂಜಿಗೆ ಗತಿ ಇಲ್ಲದಿದ್ದರೂ.
ನಮಗೆ ತಿನ್ನಲು ಅಹಾರ ಓದಗಿಸುವವನೆ ರೈತ. ಅವನೇ ನಮಗೆಲ್ಲ ಜೀವದಾತ.

ಕಾಲ ಕಾಲಕ್ಕೆ ಮಳೆ ಇಲ್ಲದಿದ್ದರೆ. ಬರುತ್ತಿತ್ತು
ಅವನ ಕಣ್ಣಲ್ಲಿ ನೆತ್ತರು.
ಬರಗಾಲದಲ್ಲಿ ಆಗುತ್ತಿತ್ತು ಭೂಮಿಯೆಲ್ಲ ಭಂಜರು .
ಅವನು ನೆತ್ತರು ಸುರಿಸಿ‌. ದಾನ್ಯವನ್ನು ಬೆಳೆಸಿ
ಅನ್ನ ನೀಡುವವನೇ ರೈತ.

ತನ್ನ ಕಣ್ಣಿರನ್ನು ಮರೆತು.
ನಮಗಾಗಿ ಮೈಯೆಲ್ಲ ಬೆವತು .
ಆಹಾರವನ್ನು ಬೆಳೆದ ರೈತನೇ ನಮಗೆಲ್ಲ ದೇವರು. ರೈತನನ್ನು ಗೌರವಿಸಿ.

ರಚನೆ = ( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

06 Jan 2018, 07:05 pm
Download App from Playstore: