ಕನ್ನಡ...
"ಕನ್ನಡ!!!"
ಬರೀ ಮೂರು ಅಕ್ಷರಗಳ ಪದವಾಗಿರಬಹುದು
ಆದರೆ ಎಲ್ಲ ಕನ್ನಡಿಗರ ಉಸಿರಾಗಿರುವುದು.
ಕರ್ನಾಟಕದ ಮಾತೃ ಭಾಷೆ ಇದು
ಕೆಂಪು-ಹಳದಿ ಬಣ್ಣದ ಉಡುಪು ತೊಟ್ಟು ನಿಂತಿರುವುದು.
ಪಂಪ , ರನ್ನರಿಂದ ಹಿಡಿದು ಕುವೆಂಪು, ಬೇಂದ್ರೆಯರ ವರೆಗೆ
ಕವಿತೆ, ಕಾವ್ಯ, ಸಾಹಿತ್ಯದ ಭಂಡಾರ ತಂದಿರುವರು ಇಲ್ಲಿಯವರೆಗೆ.
ವಚನಗಳಿಗೆ ಜನ್ಮ ಕೊಟ್ಟಂತಹ ಭಾಷೆ ಇದು
ಎಂಟು ಬಾರಿ ಜ್ಞಾನಪೀಠ ಪಡೆದ ಸಾಧನೆ ಇದರದ್ದು .
ಈಗ ಕನ್ನಡವು ಎಲ್ಲೂ ಮರೆಯಾಗಿ ಕೂತಿದೆ
ಎಲ್ಲೂ ಒಂದು ಮೂಲೆಯಲಿ ಕಂಬಳಿ ಹೊದ್ದು ಮಲಗಿದೆ .
ಮಲಗಿರುವ ಕನ್ನಡವನ್ನು ಸ್ವಯಂಪೂರಕವಾಗಿ ಎಬ್ಬಿಸುವುದು ಅನ್ವಯ
ಕನ್ನಡ ಎಂಬ ಭಾಷೆ "" ಇತ್ತು ..."" ಎಂದು ಹೇಳುವ ಸಂದರ್ಭ ಬಾರದ ಹಾಗೆ ನೋಡಿಕೊಳ್ಳುವುದು ನಮ್ಮ ಕಾರ್ಯ .
ಇಲ್ಲಿರುವ ಇತರ ಜನರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡೋಣ
" ಕನ್ನಡ್..." ಅಲ್ಲ " ಕನ್ನಡ ..." ಎಂದು ತಿಳಿಸೋಣ .
ಎಲ್ಲರು ಕೂಡಿ ನಮ್ಮ ನಾಡಿನ ಧ್ವಜವ ಹಾರಿಸೋಣ
ನಾವು ಕನ್ನಡಿಗರು ಎಂದು ಹೆಮ್ಮೆ ಇಂದ ಹೇಳೋಣ.
- Priyanka H.S
06 Jan 2018, 09:59 pm
Download App from Playstore: