ಕನ್ನಡ ಕೇಸರಿ
ಕನ್ನಡ ನನ್ನುಸಿರು
ಕನ್ನಡಿಗ ನನ್ನೆಸರು
ಕರುನಾಡ ಕೇಸರಿಗಳು ನಾವು
ನೆನಪಿಡಿ ನೀವು ಇಂದು
ನೆಲ ಜಲ ಭಾಷಾ ಉಳಿವಿಗೆ
ಕಟಿ ಬದ್ದರು ನಾವು
ಅದು ನಿಮಗೂ ಗೊತ್ತು
ನಮ್ಮ ನಿಲುವಿನಲಿ
ನಮಗಿದೆ ನಿಯತ್ತು
ಗರ್ವದಿಂದ ನಡೆವೆವು
ಕನ್ನಡಾಂಬೆಯನು ಹೊತ್ತು
ನಮ್ಮೊಂದಿಗೆ ನೀವಿರೆ
ಹೆಚ್ಚುವುದು ನಮ್ಮ ತಾಕತ್ತು
ಕನ್ನಡತನವೇ ನಮಗೆ
ಗತ್ತು ಗೈರತ್ತು
ಓ!! ಹೊರಗಿನವರೇ
ತೋರದಿರಿ ನಮ್ಮೆದುರು
ನಿಮ್ಮ ದೌಲತ್ತು
ಯಾರೇ ಎದುರಾಗಿ ಬಂದರು
ಸೋಲಲಾರೆವು ನಾವು ಯಾವತ್ತೂ.
- Manjunath C
12 Jan 2018, 02:55 pm
Download App from Playstore: