ಭಗೀರಥ ತಂದ ಗಂಗೆ

ಆಕಾಶ ಗಂಗೆಯನ್ನು
ಶಿವನ ಮುಡಿಗೆ ಬರುವಂತೆ ಮಾಡಿ
ಶಿವನ ಜಡೆಯಿಂದ ಭುವಿಗೆ ಬರಮಾಡಿ
ತನ್ನ ಬಂಧು ಭಾಂಧವರನ್ನುಳಿಸಿಕೊಂಡ ಭಗೀರಥ ತನ್ನ ಪರಿಶ್ರಮದ ಫಲವಾಗಿ
ಗಂಗೆಯ ಪಾವಿತ್ರ್ಯತೆಯ ಸಲುವಾಗಿ

ಆದರೆ ಅದೇ ಗಂಗೆ ಹರಿಯುತ್ತಿರುವಳು
ಕಲ್ಮಷ ತುಂಬಿದ ನೀರಿನ ಸೆಲೆಯಾಗಿ ಇಂದು
ರೋಗ ರುಜುನೆಗಳ ಹೋತ್ತು ತಂದು
ಸತ್ತ ಶವಗಳ ಸಂಸ್ಕಾರಕ್ಕೆಂದು ಬಂದು
ಜನಗಳೆಲ್ಲಾ ನಿತ್ಯ ಬಂದು ಮಿಂದು
ಗಂಗೆಯ ಕಲುಷಿತ ಮಾಡುವ ಜನಗಳ ಕಂಡು
ಮರುಗುತಿದೆ ಭಾರತಾಂಬೆಯ ಮನ
ಗಂಗೆಯ ವಾಸ್ತವ ಸ್ಥಿತಿಯ ಮನಗಂಡು

ಗಂಗೆಯ ಪಾವಿತ್ರ್ಯವನ್ನೂಳಿಸಲು ಶ್ರಮಿಸಬೇಕಿದೆ
ಮತ್ತೆ ಭಗೀರಥರಂತೆ ಪ್ರಯತ್ನಿಸಬೇಕಿದೆ
ಭಾರತ ಮಾತೆಯ ಮಕ್ಕಳಾಗಿ
ಸ್ವಚ್ಛತೆಯೋಂದಿಗೆ ಹೆಜ್ಜೆಯ ಹಾಕಬೇಕಿದೆ
ಗಂಗೆ ಪರಿಶುದ್ದವಾಗಿ ಹರಿಯುವಂತಹ
ಕೆಲಸಗಳ ಮಾಡಬೇಕಿದೆ
ಒಟ್ಟಾಗಿ ದೃಢ ವಿಶ್ವಾಸದಿ ದುಡಿಯಬೇಕಿದೆ
ಮತ್ತೋಮ್ಮೆ ದೇವಗಂಗೆಯ ಉಳಿಸಬೇಕಿದೆ

- Bhagya Girish

19 Jan 2018, 11:40 am
Download App from Playstore: