ಎಲ್ಲರೂ ಕಾಲ್ಎಳೆಯವ್ರೆ

ಎಲ್ಲರೂ ಕಾಲ್ಎಳೆಯವ್ರೆ
ಒಳ್ಳೆವ್ರು ಯಾರವ್ರೆ
ಈ ಮನ್ಷ ಯಾವುದಕ್ಕೂ ಸಹಿಸೋಲ್ಲ
ಎಲ್ಲದಕ್ಕೂ ತಲೆ ಹಾಕೋದು ಬಿಡೋಲ್ಲ

ಕೆಟ್ಹೋದ್ರೆ ಥೂ ಅಂತ ಉಗಿತಾರೆ ನೀತಿ ಪಾಠ ಹೇಳ್ತಾರೆ
ನೆಟ್ಗಿದ್ರೆ ಇವ್ನೇನ್ ಮಹಾ ಅಂತಾರೆ
ಸ್ವಲ್ಪ ಮೆತ್ಗಿದ್ರೆ ಬಂದ ಸತ್ಯಹರಿಶ್ಚಂದ್ರನ ತುಂಡು ಅಂತಾರೆ
ಸ್ವಲ್ಪ ಜೋರಾಗಿದ್ರೆ ಏನ್ ಧೀಮಾಕು ಏನ್ ಜಂಭ ಅಂತಾರೆ
ಈ ಮನ್ಷ ಬದ್ಕೋದು ಇಲ್ಲ
ಬದ್ಕೋಕು ಬಿಡೋಲ್ಲ

ಗೊತ್ತಿಲ್ಲ ಅಂದ್ರೆ ಏನ್ ಸಾಚಾ ಇವ್ನು ಅಂತಾರೆ
ಗೊತ್ತಿದೆ ಅಂದ್ರೆ ಏನ್ ನೀಚಾ ಇವ್ನು ಅಂತಾರೆ
ಸೋತಾಗ ಅಂಗಂತೆ ಹಿಂಗಂತೆ ನಮ್ಗ್ಯಾಕೆ ನಮ್ಗ್ಯಾಕೆ ಅಂತಾರೆ
ಗೆದ್ದಾಗ ಹೌದ ಹೌದ ಅವನು ನಮ್ಮವ್ನು ಅವನು ನಮ್ಮವ್ನು ಅಂತಾರೆ
ಬದುಕಿದ್ರೆ ಸತ್ತಾದ್ರು ಸಾಯಾಬಾರ್ದ ಅಂತಾರೆ
ಸತ್ತರೆ ಪಾಪ ಒಳ್ಳೆ ಮನ್ಷ ಹೋಗ್ಬಿಟ್ಟ ಅಂತಾರೆ

- ಸುರೇಶ್ ಟಿ ವಿ

20 Jan 2018, 07:32 am
Download App from Playstore: