ರೈತ ಈ ಮಣ್ಣಿನ ಮೊದಲ ಸುತ

ರೈತ ಈ ಮಣ್ಣಿನ ಮೊದಲ ಸುತ
ಜಗವೇ ಸಾಗದು ಇವನ ನಿಮಿತ್ತ.‌.
ಜೀವಕೋಟಿಗೆ ಇವನೇ ಅನ್ನದಾತ
ಮುಕ್ಕೋಟಿ ದೇವರಿಗಿಂತ ಹೆಸರಾಂತ.‌.
ಸ್ನೇಹಪ್ರೀತಿ ಉಸಿರಾಗಿಸಿಕೊಂಡ ಸಿರಿವಂತ
ದೇಶದ ಶಕ್ತಿ ಎನಿಸಿಕೊಂಡ ಮಹಾಸಂತ .‌. "ಪ"

ಈ ಭೂಮಿಯ ಹಸಿರ ಸಾಗರ ಮಾಡಿದ
ಮನೆಮನೆಯಲಿ ಹರುಷದ ಬಂಗಾರ ಬೆಳಗಿದ..
ಈ ರೈತ ಹುಟ್ಟಿ ಬಂದ ನಮಗಂತ
ಈ ರೈತ ಬಾಳಲಿ ನಗುನಗುತ..

ದುಡಿಮೆಯಲಿ ಸುರಿಯುವ ರೈತನ ಬೆವರು
ಮುಗಿಲೇತ್ತರ ಕುಣಿಯುವ ಹಸಿರಿನ ಪೈರು
ನಮ್ಮ ಬದುಕಿನ ಪ್ರಗತಿಯ ತೇರು..
ಅಸೂರ್ಯನ ಶಕ್ತಿ, ಈ ಭೂತಾಯಿಯ ಪ್ರೀತಿ ತುಂಬುವ ಈ ರೈತನೇ ನಮ್ಮ ನಿಜ ದೇವರು
ನಮಿಸಿರಿ ಈ ದೇವನಿಗೆ ಎಲ್ಲರು..

ಸ್ವರ್ಗಲೋಕ ನಿಜವಾಗಲೂ ಈ ರೈತ ನಡೆದಾಡುವ ಜಾಗ..
ರಾಜವೈಭೋಗ ಎಲ್ಲೆಲ್ಲೂ ಈ ರೈತ ದುಡಿಯಲು ನಿಂತಾಗ..
ಈ ವಿಜ್ಞಾನಿಯ ಯಾಗಕೆ ಆ ರವಿ ಕೂಡ ಸೋಜಿಗ
ತಂತ್ರಜ್ಞಾನದ ಓಟದಲಿ ಬೇಸಾಯ ಬಿಟ್ಟರೆ ಈ
ರೈತ
ಅವಸಾನ ಹತ್ತಿರದಲಿ ಈ ಜಗಕೆ ಖಂಡಿತ..

- ಸುರೇಶ್ ಟಿ ವಿ

27 Jan 2018, 06:21 pm
Download App from Playstore: