ಬೀದಿಗೆ ನೂಕಿ

ಎದೆಯ ಗುಡಿಯೊಳಗೆ ಇಡಬೇಕಾದ
ತಾಯಿಯನು ಬೀದಿಗೆ ನೂಕಿ ನಲಿದರು
ಕರುಳಬಳ್ಳಿಯ ಸಿಹಿ ತಿಳಿಯದ ಕಟುಕರು!!

ಉಸಿರನಿತ್ತು ಹಾಲುಣಿಸಿ ಸಲುಹಿ
ಬೆಳೆಸಿದ ತಾಯಿಯ ದಯೆ ಇಲ್ಲದೆ
ನಡು ಬೀದಿಗೆ ಬಿಸಾಡಿ ಹೋದರು,
ತುತ್ತು ಕೊಟ್ಟ ಕೈಯಿಗೆ ದಾಸ್ಯದಿ ದನಿಕರ
ಕಾಲು ಹಿಡಿಸಿ ಮಕ್ಕಳು!!

ಖಚಿತವಾಯಿತು ತಂಗಳನ್ನ ಮನವ ಕಾಡಿತು
ಮುಂದಿನ ಜೀವನ, ತಂದು ಕೊಟ್ಟವರು ಯಾರು
ಈ ಪರಿಸ್ಥಿತಿಯನ್ನ ಸಾವಿರಾರು ಕನಸ ಹೊತ್ತು
ತಾ ಹಡೆದ ಮಕ್ಕಳೇನಾ!!

ಆಸ್ತಿಯನು ಹಂಚಿಕೊಂಡ ಮಕ್ಕಳು
ರಕ್ತ ಕಣಗಳ ಎಣಿಕೆ ಇಲ್ಲದೆ ಧಾರೆ ಎರೆದು
ರೂಪ ಕೊಟ್ಟ ತಪ್ಪಿಗೆ ತಕ್ಕ ಪಾಠ ಕಲಿಸಿದರು,
ಮೈ ಮೇಲಿನ ಆಭರಣಗಳನ್ನು ಕಳಚಿ ಶಾಶ್ವತವಾಗಿ
ತನ್ನವರಿದ್ದರೂ ಅನಾಥೇ ಎಂಬ ಬಿರುದನು ತೊಡಿಸಿ!!

ಬೀದಿಗಳ್ಳರೆಲ್ಲಿ ಇರುವರು ಮನೆಯ ಮಂದಿಯೇ
ಧನ- ಮಾನ ,ಪ್ರಾಣಗಳನ್ನು ಸೊಕ್ಕಿನಿಂದ ಕುಕ್ಕಿ
ತಿನ್ನುವ ಕಾಲದಲ್ಲಿ!!

ಸ್ವರ್ಗದ ಆಸೆ ಅವಳಿಗಿಲ್ಲ ತುತ್ತು ಅನ್ನ
ನಟನೆಯಿಲ್ಲದ ಪ್ರೀತಿ,
ಜೀವಮಾನದಲ್ಲಿ ದುಡಿದ ಜೀವವಿಮೆಯೇ ಬೇಕಿಲ್ಲ
ಉಸಿರಾಟಕೆ ಅಡ್ಡಿಯಾಗದ ಚಿಂತೆ
ಇಲ್ಲದ ಚಿತ್ತ ಒಂದಿದ್ದರೆ ಸಾಕಲ್ಲಾ!!

- ಚುಕ್ಕಿ

31 Jan 2018, 05:00 pm
Download App from Playstore: