ದಿನ ನಿತ್ಯದ ಜಂಜಾಟ
ನಿಂತಲ್ಲಿ-ಕುಂತಲ್ಲಿ ಚಿಂತೆ.!
ಹೋದಲ್ಲಿ-ಬಂದಲ್ಲಿ ಗಾಬರಿ.!!
ಎದ್ದಲ್ಲಿ-ಬಿದ್ದಲ್ಲಿ ಆಲಸ್ಯ.!!!
ಗೆದ್ದಲ್ಲಿ-ಕದ್ದಲ್ಲಿ ತೋರ್ಪಡಿಕೆ.!!!!
ಒಂದರಗಳಿಗೆಯ ಸಿಟ್ಟು.!
ಒಂಚೂರಿಲ್ಲದ ತಾಳ್ಮೆ.!!
ತಟಗಿಲ್ಲದ ಸಹನೆ.!!!
ತಡಬಡಿಕೆಯ ಮೌನ.!!!!
ಮುಗುಚಿದ ಮನಸ್ಸು.!
ತೇದಕಿದ ಬುದ್ಧಿ.!!
ಮಿದುಕಿನ ಹೃದಯ.!!!
ಕೆದಕುವ ವಿಚಾರ.!!!!
- ಆರ್ ಎಸ್ ಸುಗ್ಗಿ.
06 Feb 2018, 08:21 pm
Download App from Playstore: