ನಿನ್ನ ಬೀಳ್ಕೊಡುವ ಮುನ್ನ (ಸಾಯುವ ಮುನ್ನ )
ಭುವಿಯ ಭಾಗ್ಯ ಜೀವಿಯೇ
ನಿನ್ನ ಬೀಳ್ಕೊಡುವ ಮುನ್ನ
ಆಗು ಈ ಜಗದ ಆಶಾಕಿರಣ..
ಜೊತೆ ಬರೋದಿಲ್ಲ ನೀ ಕೂಡಿಟ್ಟ ಆಸ್ತಿ ಹಣ
ಜೊತೆ ಬರೋದೊಂದೆ ನೀ ಮಾಡಿದ ಧರ್ಮ ದಾನ
ಜೀವನ ಜನನ ಮರಣ ನಡುವಿನ
ಒಂದು ರೋಚಕವಾದ ಕ್ರೀಡಾಂಗಣ..
ಎಲ್ಲರಲ್ಲಿ ಒಬ್ಬನಾಗಿ ನೀನು
ಆಟವಾಡಬೇಕು ಪ್ರತಿದಿನ..
ವಿನಯ ಎಂಬ ನಿಯಮ
ಪಾಲಿಸಬೇಕು ಪ್ರತಿಕ್ಷಣ..
ಅಹಂಕಾರ ಎಂಬ ಗೆರೆ
ತುಳಿಯಬಾರದು ನಿನ್ನ ತನುಮನ..
ಆತ್ಮವಿಶ್ವಾಸದಿಂದ ಸಂತಸದಿಂದ
ಸಾಗಬೇಕು ಆಟದ ಪಯಣ..
ಗೆದ್ದರೆ ನೀನು ಪಡೆಯುವೆ
ಬಹುದೊಡ್ಡ ಸ್ಥಾನಮಾನ..
ಸೋತರೆ ಬಿಟ್ಟು ಹೋಗಬೇಡ
ನೀನು ಗೆಲುವಿನ ನಿಲ್ದಾಣ..
ಕಲಿಯಬೇಕು ನೀನು ಆಟದಲ್ಲಿ
ಏಟುಗಳ ಚಪ್ಪಾಳೆಗಳ ನೀತಿಪಾಠವನ್ನ.." 1 "
ಅಪ್ಪ ಅಮ್ಮನ ಹೃದಯದಲ್ಲಿ
ಕಟ್ಟಬೇಕು ನೀನು ನಗುವಿನ ಗಗನ..
ಕಟ್ಟಬೇಕು ಈ ಭೂಮಿಯಲ್ಲಿ
ನೀನು ಪ್ರೀತಿ ಸ್ನೇಹದ ಬಣ..
ಮಾಡಬೇಡ ನೀನು ಯಾರಿಗೂ
ದ್ವೇಷ ಮೋಸದ ಕದನ..
ಉಣಿಸಬೇಕು ನೀನು ಎಲ್ಲರಿಗೂ
ಶಾಂತಿ ಸಹನೆಯ ಭೋಜನ..
ಮೆಚ್ಚಬೇಕು ಜಗವೆಲ್ಲಾ
ನಿನ್ನ ಜೀವನ ವಿಧಾನ..
ಸಾರಬೇಕು ಬಲ್ಲವರೆಲ್ಲಾ
ನಿನ್ನ ಸಾಧನೆಯ ಕಥನ....." 2"
- ಸುರೇಶ್ ಟಿ ವಿ
12 Feb 2018, 05:55 pm
Download App from Playstore: