ನಾಡೆಂದರೆ ನಾಡು ನನ್ನ ಕನ್ನಡ ನಾಡು
ನಾಡೆಂದರೆ ನಾಡು ನನ್ನ ಕನ್ನಡ ನಾಡು
ನುಡಿಯೆಂದರೆ ನುಡಿ ನನ್ನ ಕನ್ನಡ ನುಡಿ..
ಕರ ಮುಗಿದು ಬಾರೋ
ನನ್ನ ಕನ್ನಡ ದೇಗುಲದ ಒಳಗೆ..
ಅಭಿಮಾನ ಸುರಿದು ಪ್ರಾರ್ಥಿಸೋ
ತಾಯಿ ಭುವನೇಶ್ವರಿಯ ಪ್ರೀತಿಗೆ.." ಪ "
ಕುಡಿಯೋ ನೀ ತುಂಗಾ ಕಾವೇರಿ ನೀರನ್ನ
ಆಗುವುದು ನಿನ್ನ ಜನುಮ ಪಾವನ..
ನೋಡೋ ಮಲೆನಾಡ ಸೊಬಗು ಕಣ್ಣಾರ
ಕುಣಿಯುವುದು ನಿನ್ನ ಮನ ಮುಗಿಲೇತ್ತರ..
ಸುತ್ತೋ ಬೇಲೂರು ಬನವಾಸಿ ಬೆಳಗೊಳ
ತಿಳಿಯೋ ನಮ್ಮೂರು ಹೆಸರುವಾಸಿ ಜಗದಗಲ..
ಓದೋ ಕದಂಬ ಚಾಲುಕ್ಯ ಹೊಯ್ಸಳ ರಾಜವಂಶ
ಹರಿಯುವುದು ನಿನ್ನೆದೆಯಲಿ ಕನ್ನಡ ಕಲಿಗಳ ಧೈರ್ಯ ಸಾಹಸ..
ಹಾಡೋ ಬಸವಣ್ಣ ಪೊನ್ನರ ವಚನ ಕವನ
ಝೇಂಕರಿಸುವುದು ನಿನ್ನ ತನುಮನ ಕನ್ನಡ ಅಭಿಮಾನ..
ಇಲ್ಲಿ ನೀ ಬದುಕಿನ ಬಂಡಿ ನಡೆಸಿ ನೋಡು
ಸಾರುವೆ ನೀ ಜಗಕೆ ಇದು ಕರುಣೆಯ ಗುಡಿ ಎಂದು
ಎಳೆಯೋ ನೀ ಕನ್ನಡ ನುಡಿಯ ತೇರು
ಆಗುವುದು ನಿನ್ನ ಬದುಕು ಅಚ್ಚಹಸಿರು..
ಕಾಯೋ ನೀ ಕನ್ನಡಾಂಬೆಯ ಊರು
ಉಳಿಯುವುದು ಚಿರಕಾಲ ನಿನ್ನ ಹೆಸರು..
- ಸುರೇಶ್ ಟಿ ವಿ
15 Feb 2018, 08:35 am
Download App from Playstore: